Keep in touch...

ನಿಮ್ಮ ಅಭಿಪ್ರಾಯ ಹಂಚಿಕೊಳ್ಳಿ - ನನ್ನ ಇ-ಮೇಲ್ : gshattigoudar@gmail.com ಮೊಬೈಲ್: +9199454 79292 (only SMS / WhatsApp)

Saturday 26 November 2016

ಮೂಳೆಶಾಸ್ತ್ರ

ªÀÄƼɱÁ¸ÀÛç
OSTEOLOGY
ªÀÄƼÉUÀ¼À PÀÄjvÀÄ CzsÀåAiÀÄ£À ªÀiÁqÀĪÀÅzÀ£ÀÄß ªÀÄƼɱÁ¸ÀÛç J£ÀÄߪÀgÀÄ.
ªÀAiÀĸÀÌ ªÀiÁ£ÀªÀ£À°è PÀAqÀħgÀĪÀ ªÀÄƼÉUÀ¼ÀÄ 206
aPÀÌ ªÀÄUÀÄ«£À°è PÀAqÀħgÀĪÀ ªÀÄƼÉUÀ¼À ¸ÀASÉå 300
ªÀÄƼÉUÀ¼À£ÀÄß 2 ¨sÁUÀUÀ¼À£ÁßV «AUÀr¸À¯ÁVzÉ.
1.   CPÉì¯ï C¹Ü¥ÀAdgÀ (Axial skeleton)
2.   C£ÀħAzsÀ C¹Ü¥ÀAdgÀ (Appendicular skeleton)

1.   DPÉìöʯï C¹Ü (Axial skeleton):- EzÀgÀ°è PÀAqÀħgÀĪÀ MlÄÖ ªÀÄƼÉUÀ¼À ¸ÀASÉå 80. CPÉìöʯï C¹Ü, vÀ¯É§ÄgÀÄqÉAiÀÄ ªÀÄƼÉUÀ¼À£ÀÄß, PÀ±ÉÃgÀÄPÀ ¸ÀÛA¨sÀzÀ ªÀÄƼÉUÀ¼À£ÀÄß ªÀÄvÀÄÛ JzÉAiÀÄ UÀÆr£À ªÀÄƼÉUÀ¼À£ÀÄß M¼ÀUÉÆArzÉ.
* vÀ¯É§ÄgÀÄqÉ (Skull)
     EzÀÄ ªÀÄÄRzÀ ªÀÄƼÉUÀ¼À£ÀÄß vÀ¯ÉUÀÆrãÀ ªÀÄƼÉUÀ¼À£ÀÄß, JgÀqÀÆ PÉ«AiÀÄ ªÀÄƼÉUÀ¼À£ÀÄß ªÀÄvÀÄÛ £Á°UÉ PɼÀUÉ EgÀĪÀ hyoid’ ªÀÄƼÉUÀ¼À£ÀÄß M¼ÀUÉÆArzÉ. (29)
1.   ªÀÄÄR (face) :- ªÀÄÄRzÀ°è 14 ªÀÄƼÉUÀ¼ÀÄ PÀAqÀħgÀÄvÀÛªÉ. CªÀÅ F PɼÀV£ÀAwªÉ.
1.   UÀ®èzÀ ªÀÄƼÉUÀ¼ÀÄ (zygomatic bones) (2)
2.   PÀtÄÚUÀÄqÉØAiÀÄ ªÀÄƼÉUÀ¼ÀÄ (Lacrimal bones) (2)
3.   ªÉÄîݪÀqÉAiÀÄ ªÀÄƼÉUÀ¼ÀÄ (Maxilla bones) (2)
4.  ¨Á¬ÄAiÀÄ CAUÀ¼ÀzÀ ªÀÄƼÉUÀ¼ÀÄ (Palatine bones) (2)
5.   ªÀÄÆV£À ªÉÄð£À ªÀÄƼÉUÀ¼ÀÄ (Superior nasal bones) (2)
6.   ªÀÄÆV£À PɼÀ ªÀÄƼÉUÀ¼ÀÄ (Inferior bones) (2)
7.    Vomer bone (in between nasal cavity) - ªÀÄÆV£À JgÀqÀÄ PÀĺÀgÀUÀ¼À ªÀÄzsÉå PÀAqÀħgÀÄvÀÛzÉ. (1)
8.  Mandible bone - ¨Á¬ÄAiÀÄ PɼÀzÀªÀqÉAiÀÄ ªÀÄƼÉ. EzÀÄ ZÀ°¸ÀĪÀ ªÀÄƼÉ. (1)

2.   vÀ¯ÉUÀÆqÀÄ (Cranium):- vÀ¯ÉAiÀÄUÀÆr£À°è 8 ªÀÄƼÉUÀ¼ÀÄ PÀAqÀħgÀÄvÀÛªÉ. CªÀÅ F PɼÀV£ÀAwªÉ.
1.   ºÀuÉAiÀÄ ªÀÄÆ¼É (frontal bone) (1)  
2.   vÀ¯ÉAiÀÄ UÀÆr£À »A¨sÁUÀzÀ ªÀÄÆ¼É (occipital bone) (1)
3.   ¥Á±ÀðézÀ ªÀÄƼÉUÀ¼ÀÄ (Parietal bones) (2)
4.  ªÉÄ®ÄQ£À ªÀÄƼÉUÀ¼ÀÄ (Temporal bones) (2)
5.   vÀ¯ÉAiÀÄ UÀÆr£À PɼÀ¨sÁUÀzÀ°è PÀAqÀħgÀÄvÀÛzÉ. (Sphenoid bone) (1)
6.   EzÀÄ PÀÆqÀ vÀ¯ÉAiÀÄUÀÆr£À PɼÀ¨sÁUÀzÀ°è PÀAqÀħgÀÄvÀÛzÉ. (Ethmoid bone) (1)
3.   Q«AiÀÄ ªÀÄƼÉUÀ¼ÀÄ :- MAzÀÄ Q«AiÀÄ°è 3 ªÀÄƼÉUÀ¼ÀÄ PÀAqÀÄ §gÀÄvÀÛªÉ.
1.   ¸ÀÄwÛUÉ DPÁgÀzÀ ªÀÄÆ¼É (maleus)
2.   (Incus)
3.   jPÁj£À DPÁgÀzÀ ªÀÄÆ¼É (stapes)
JgÀqÀÆ Q«AiÀÄ°è 6 ªÀÄƼÉUÀ¼ÀÄ PÀAqÀħgÀÄvÀÛªÉ.

4. ºÀAiÉÆÃqï ªÀÄÆ¼É (Hyoid bone):-
    EzÀÄ £Á°UÉ PɼÀUÉ PÀAqÀħgÀÄvÀÛzÉ. ªÀÄvÀÄÛ AiÀiÁªÀ ªÀÄƼÉUÀÆ ¸ÀA¥ÀPÀð ºÉÆA¢gÀĪÀÅ¢®è.

5.  PÀ±ÉÃgÀÄPÀ ¸ÀÛA¨sÀ (Vertabra column):-
     PÀ±ÉÃgÀÄPÀ ¸ÀÛA¨sÀzÀ°è ªÀAiÀĸÀÌgÀ°è 26 PÀ±ÉÃgÀÄPÀ ªÀÄtÂUÀ¼ÀÄ CxÀªÁ ªÀÄƼÉUÀ¼ÀÄ PÀAqÀħgÀÄvÀÛªÉ. ªÀÄvÀÄÛ aPÀÌ ªÀÄPÀ̼À°è 33 PÀ±ÉÃgÀÄPÀ ªÀÄtÂUÀ¼ÀÄ PÀAqÀħgÀÄvÀÛªÉ.
7 PÀ±ÉÃgÀÄPÀ ªÀÄtÂUÀ¼ÀÄ PÀÄwÛUÉ ¨sÁUÀzÀ°è PÀAqÀħgÀÄvÀÛªÉ. EªÀÅUÀ¼À°è Atlas JA§ PÀ±ÉÃgÀÄPÀ ªÀÄt vÀ¯É§ÄgÀÄqÉUÉ ¸ÀA§AzsÀ ºÉÆA¢gÀÄvÀÛzÉ.

* 2£Éà PÀ±ÉÃgÀÄPÀ ªÀÄt ºÉ¸ÀgÀÄ Axis DVzÉ.
* 12 PÀ±ÉÃgÀÄPÀ ªÀÄtÂUÀ¼ÀÄ JzÉAiÀÄUÀÆr£À°è PÀAqÀħgÀÄvÀÛªÉ. F 12 PÀ±ÉÃgÀÄPÀ ªÀÄtÂUÀ½AzÀ JgÀqÀÆ PÀqɬÄAzÀ 12 eÉÆvÉ ¥ÀPÉÌ®§ÄUÀ¼ÀÄ ºÉÆgÀqÀÄvÀÛªÉ.
* 5 PÀ±ÉÃgÀÄPÀUÀ¼À ªÀÄtÂUÀ¼ÀÄ GzÀgÀ ¨sÁUÀzÀ°è PÀAqÀħgÀÄvÀÛªÉ.
* dWÀ£ÀzÀ PÀAPÀt (ZÀ¥ÉàAiÀÄ ªÀÄƼÉ) M¼ÀUÉ 5 PÀ±ÉÃgÀÄPÀ ªÀÄtÂUÀ¼ÀÄ MAzÀPÉÆÌAzÀÄ ¨É¸ÀÄUÉAiÀiÁV PÀÆrPÉÆAqÀÄ MAzÀÄ ªÀÄƼÉAiÀiÁV gÀZÀ£ÉAiÀiÁVgÀÄvÀÛzÉ. (1)
* PÀ±ÉÃgÀÄPÀ ¸ÀÛA¨sÀzÀ PÉÆ£ÉUÉ EgÀĪÀ 4 PÀ±ÉÃgÀÄPÀ ªÀÄtÂUÀ¼ÀÄ MAzÀPÉÆÌAzÀÄ PÀÆr ¨É¸ÀÄUÉAiÀiÁV MAzÀÄ coccynx ªÀÄÆ¼É gÀZÀ£ÉAiÀiÁVgÀÄvÀÛzÉ.

6.  JzÉAiÀÄUÀÆqÀÄ (Thorax) :-
·      ªÀiÁ£ÀªÀ£À JzÉAiÀÄUÀÆqÀÄ 25 ªÀÄƼÉUÀ½AzÀ gÀZÀ£ÉAiÀiÁVzÉ.
·      EªÀÅUÀ¼À°è sternum or Breast bone ¸ÀÛ£À ªÀÄƼÉ. EzÀÄ JgÀqÀÆ ¸ÀÛ£ÀUÀ¼À ªÀÄzsÉå £ÉÃgÀªÁV PÀAqÀħgÀÄvÀÛzÉ.
·      7 eÉÆvÉ ¥ÀPÉÌ®§ÄUÀ¼ÀÄ ¨É¤ß£À ¨sÁUÀzÀ°ègÀĪÀ PÀ±ÉÃgÀÄPÀ ªÀÄtÂUÀ½AzÀ ºÉÆgÀlÄ ªÀÄÄAzÉ §AzÀÄ sternum UÉ £ÉÃgÀªÁV ¸ÀA¥ÀPÀð ºÉÆA¢gÀÄvÀÛzÉ. EªÀÅUÀ¼À£ÀÄß Truth rib-bones JAzÀÄ PÀgÉAiÀÄÄvÁÛgÉ. (¸ÀvÀå ¥ÀPÉ̮ħÄUÀ¼ÀÄ)
·      3 eÉÆvÉ ¥ÀPÉ̮ħÄUÀ¼ÀÄ sternumUÉ »A¢¤AzÀ MAzÀÄ C¥ÀævÀåPÀëªÁV ¸ÀA¥ÀPÀð ºÉÆA¢gÀÄvÀÛzÉ. EªÀÅUÀ½UÉ false rib-bones JAzÀÄ PÀgÉAiÀÄÄvÁÛgÉ.
·      2 eÉÆvÉ ¥ÀPÉÌ®§ÄUÀ¼ÀÄ »A¢¤AzÀ §AzÀÄ ªÀÄÄAzÉ sternumUÉ ¸ÀA¥ÀPÀð ºÉÆA¢®è. EªÀÅUÀ½UÉ floating rib-bones JAzÀÄ PÀgÉAiÀÄÄvÁÛgÉ. (vÉïÁqÀĪÀ ¨ÉÆãÀÄUÀ¼ÀÄ)

C£ÀħAzsÀ C¹Ü Appendicular skeleton :-
EzÀÄ JgÀqÀÆ PÉÊAiÀÄ°ègÀĪÀ ªÀÄƼÉUÀ¼À£ÀÄß, JgÀqÀÆ PÁ®°ègÀĪÀ ªÀÄƼÉUÀ¼À£ÀÄß, JgÀqÀÆ PÉÆgÀ½£À ªÀÄƼÉUÀ¼À£ÀÄß, JgÀqÀÆ ºÉUÀ°£À ªÀÄƼÉUÀ¼À£ÀÆß ªÀÄvÀÄÛ 2 ZÀ¥ÉàAiÀÄ ªÀÄƼÉUÀ¼À£ÀÄß Hip bones M¼ÀUÉÆArzÉ.
1.  PÉÊ (Hand)AiÀÄ°ègÀĪÀ ªÀÄƼÉUÀ¼ÀÄ:-
·      PÉÊgÀmÉÖAiÀÄ°ègÀĪÀ ªÀÄƼÉUÀ¼À£ÀÄß Humerus JAzÀÄ PÀgÉAiÀÄÄvÁÛgÉ. (gÀmÉÖAiÀÄ ªÀÄƼÉ) (1)
·      PÉÊ ªÀÄÄAUÉÊAiÀÄ°è PÀAqÀħgÀĪÀ ªÀÄƼÉUÀ¼À£ÀÄß Radius & ulna  J£ÀÄߪÀgÀÄ. RadiusªÀÅ ulnaQÌAvÀ zÉÆqÀØzÁVgÀÄvÀÛzÉ. ªÀÄvÀÄÛ ºÉ§âgÀ½£À PÀqÉUÉ PÀAqÀħgÀÄvÀÛzÉ. (2)
·      PÉÊ ªÀÄtÂPÀnÖ£À £ÀqÀÄªÉ PÀAqÀħgÀĪÀ ªÀÄƼÉUÀ¼À£ÀÄß Carpal bones JAzÀÄ PÀgÉAiÀÄÄvÁÛgÉ. (8)
·      PÉÊ CAUÉÊAiÀÄ°è PÀAqÀħgÀĪÀ ªÀÄƼÉUÀ¼À£ÀÄß meta carpal bones   JAzÀÄ PÀgÉAiÀÄĪÀgÀÄ. (5)
·      PÉÊ ¨ÉgÀ¼ÀÄUÀ¼À°ègÀĪÀ EgÀĪÀ ªÀÄƼÉUÀ¼À£ÀÄß phalanges  J£ÀÄߪÀgÀÄ. EªÀÅUÀ¼À ¸ÀASÉå 14
·      MAzÀÄ PÉÊAiÀÄ°è PÀAqÀħgÀĪÀ MlÄÖ ªÀÄƼÉUÀ¼À ¸ÀASÉå 30
·      JgÀqÀÆ PÉÊUÀ¼À°è PÀAqÀħgÀĪÀ ªÀÄƼÉUÀ¼À ¸ÀASÉå 60

2) P稀:-
·      PÁ°£À vÉÆqÉAiÀÄ ¨sÁUÀzÀ°ègÀĪÀ ªÀÄƼÉAiÀÄ£ÀÄß femur JAzÀÄ PÀgÉAiÀÄÄvÁÛgÉ. EzÀÄ zÉúÀzÀ°ègÀĪÀ CvÀåAvÀ §°µÀ× ªÀÄvÀÄÛ zÉÆqÀØzÁzÀ ªÀÄƼÉAiÀiÁVzÉ.
·      ªÉƼÀPÁ®Ä ªÀÄAqÉAiÀÄ°ègÀĪÀ UÉÆïÁPÁgÀ ªÀÄvÀÄÛ ZÀ¥ÀàmÉAiÀiÁzÀ ªÀÄƼÉAiÀÄ£ÀÄß knee cap JAzÀÄ PÀgÉAiÀÄÄvÁÛgÉ. (1)
·      PÁ°£À ªÀÄÄAUÁ°£À°ègÀĪÀ ªÀÄƼÉUÀ¼À£ÀÄß Tibia & fibula JAzÀÄ PÀgÉAiÀÄÄvÁÛgÉ. (2)
·      PÁ°£À ¥ÁzÀzÀ »ªÀÄärAiÀÄ°ègÀĪÀ ªÀÄƼÉUÀ¼À£ÀÄß tarsal bones JAzÀÄ PÀgÉAiÀÄÄvÁÛgÉ. (7)
·      PÁ°£À ¥ÁzÀzÀ CAUÁ°£À°ègÀĪÀ ªÀÄƼÉUÀ¼À£ÀÄß meta darsal JAzÀÄ PÀgÉAiÀÄÄvÁÛgÉ. (5)
·      PÁ°£À ¥ÁzÀzÀ ¨ÉgÀ¼ÀÄUÀ¼À°ègÀĪÀ ªÀÄƼÉUÀ¼À£ÀÄß phalanges J£ÀÄߪÀgÀÄ. (14)
·      MAzÀÄ PÁ°£À°è PÀAqÀÄ §gÀĪÀ MlÄÖ ªÀÄƼÉUÀ¼À ¸ÀASÉå 30
·      JgÀqÀÆ PÁ°£À°è PÀAqÀħgÀĪÀ MlÄÖ ªÀÄƼÉUÀ¼À ¸ÀASÉå 60
·      PÉÆgÀ½£À ¨sÁUÀzÀ°è EgÀĪÀ 2 ªÀÄƼÉUÀ¼À£ÀÄß clavicle bones or collar bones JAzÀÄ PÀgÉAiÀÄÄvÁÛgÉ.
·      JzÉAiÀÄ UÀÆr£À »A¨sÁUÀzÀ°è CAzÀgÉ ¨É¤ß£À ¨sÁUÀzÀ°è PÀAqÀħgÀĪÀ 2 ªÀÄƼÉUÀ¼À£ÀÄß ¸ÀÌAzÁ¹Ü (¨sÀÄd) JAzÀÄ PÀgÉAiÀÄĪÀgÀÄ. CxÀªÁ ºÉUÀ°£À ªÀÄƼÉUÀ¼ÀÄ scapula bones (2) JAzÀÄ PÀgÉAiÀÄĪÀgÀÄ. EªÀÅ ZÀ¥ÀàmÉAiÀiÁV ªÀÄvÀÄÛ wæPÉÆãÁPÁgÀzÀ°è EgÀÄvÀÛªÉ.
·      ZÀ¥ÀàmÉAiÀÄ ¨sÁUÀzÀ°ègÀĪÀ 2 ªÀÄƼÉUÀ¼À£ÀÄß ZÀ¥ÀàmÉAiÀÄ ªÀÄƼÉUÀ¼ÀÄ CxÀªÁ dWÀ£ÀzÀ PÀAPÀtUÀ¼ÀÄ CxÀªÁ Hip-bones or pelvic girdle JAzÀÄ PÀgÉAiÀÄÄvÁÛgÉ.


Friday 11 November 2016

ಆಂಟೋನಿಯ ಕಥೆ - ನಮ್ಮ ಕಥೆ


    ರೋಮ್ ಇತಿಹಾಸದ ಪುಟಗಳಲ್ಲಿ ಕಾಣುವ ಈ ಕಥೆ ಒಂದು ಬಹುದೊಡ್ಡ ಆಧ್ಯಾತ್ಮಿಕ ಸತ್ಯವನ್ನು ಸಾರುತ್ತದೆ.
   ರೋಮ್ ಸಾಮ್ರಾಜ್ಯದ ಸರ್ವಾಧಿಕಾರಿಯಾಗಿದ್ದ ಜೂಲಿಯಸ್ ಸೀಜರ್ ತನ್ನ ವಿಶ್ವಾಸಿಕನಾದ, ನಂಬಿಕೆಗೆ ಅರ್ಹವಾಗಿದ್ದ ಮಾರ್ಕ್ ಅಂಟೋನಿಯನ್ನು ಕರೆಸಿ ಈಜಿಪ್ಟ್ ದೇಶವನ್ನು ಗೆದ್ದು ಬರುವುದಕ್ಕೆ ಕಳುಹಿಸುತ್ತಾನೆ. ಅತ್ಯಂತ ಕಡಿಮೆಯ ಅವಧಿಯಲ್ಲಿ ಧೀರ ಮಾರ್ಕ್ ಆಂಟೋನಿ ಈಜಿಪ್ಟನ್ನು ಗೆದ್ದು ಅಲ್ಲಿಯ ಅಪಾರ ಸಂಪತ್ತನು ಹೊತ್ತು ತರುತ್ತಾನೆಂಬ ನಂಬಿಕೆ ಸೀಜರ್‌ನಿಗೆ. ಹಾಗೆ ಸಾಧಿಸಿಯೇ ತೀರುತ್ತೇನೆಂದು ಪಣತೊಟ್ಟ ಆಂಟೋನಿ ಸರ್ವಾಧಿಕಾರಿಗೆ ಮಾತು ಕೊಟ್ಟು ಹೊರಡುತ್ತಾನೆ.

     ಆಗ ಈಜಿಪ್ಟ್ ದೇಶದ ರಾಣಿ ಕ್ಲಿಯೋಪಾತ್ರಾ ಅದು ಮಾದಕ ಸೌಂದರ್ಯಕ್ಕೆ ಮತ್ತೊಂದು ಹೆಸರು. ಆಂಟೋನಿ ತನ್ನ ದೇಶವನ್ನು ಗೆಲ್ಲಲು ಬರುತ್ತಿದ್ದಾನೆಂಬ ವಿಷಯ ಆಕೆಗೆ ತಿಳಿಯುತ್ತದೆ. ಆಕೆ ಸುಂದರಿ ಮಾತ್ರವಲ್ಲ ಕಾರ್ಯ ಸಾಧನೆಯಲ್ಲಿ ಮಹಾ ಚತುರೆ. ಬರಲಿ, ಈ ಸೇನಾ ನಾಯಕ. ನಮ್ಮನ್ನು ಗೆಲ್ಲ ಬಂದವನನ್ನು ನಾನೇ ಗೆದ್ದು ಬಿಡುತ್ತೇನೆ ಎಂದು ತೀರ್ಮಾನ ಮಾಡಿ ಒಂದು ಯೋಜನೆಯನ್ನು ತಯಾರು ಮಾಡುತ್ತಾಳೆ. ತನ್ನ ಮಂತ್ರಿಗಳನ್ನು ಕರೆದು ಬರುತ್ತಿರುವ ರೋಮನ್ ಸೇನಾ ನಾಯಕನಿಗೆ ಅಭೂತಪೂರ್ವ ಸ್ವಾಗತವನ್ನು ಏರ್ಪಡಿಸಲು ಆಜ್ಞೆ ಮಾಡುತ್ತಾಳೆ. ಈಜಿಪ್ಟ್ ದೇಶದ ಸಕಲ ಸಂಪತ್ತು, ಸಂಭ್ರಮಗಳನ್ನು ಬೆರೆಸಿ ಆಂಟೋನಿ ಬೆರಗುಗೊಳ್ಳುವಂತೆ ಕಾರ್ಯಕ್ರಮವನ್ನು ರೂಪಿಸಿರುತ್ತಾಳೆ.

     ತನ್ನ ಜೊತೆಗಿದ್ದ ಅತ್ಯಂತ ಸುಂದರಿಯರಾದ ಸೇವಕಿಯರಿಗೆ ವಿವಿಧ ವೇಷ ಭೂಷಣಗಳನ್ನು ಸಿದ್ಧಪಡಿಸಿ ಅವರು ತಮ್ಮ ಸೌಂದರ್ಯದ ಹತ್ತುಪಟ್ಟು ಹೆಚ್ಚಾಗಿ ಕಾಣುವಂತೆ ಮಾಡಿಸುತ್ತಾಳೆ. ಅದ್ಭುತವಾಗಿ ಅಲಂಕೃತ ನಾವೆಗಳಲ್ಲಿ ಆ ಹುಡುಗಿಯರು ತಮ್ಮ ಮೈಮಾಟಗಳನ್ನು ಪ್ರದರ್ಶಿಸುತ್ತಾ ಆಂಟೋನಿಯ ಗಮನ ಸೆಳೆಯಬೇಕೆಂದು ಅವರ ಕರ್ತವ್ಯ. ಕ್ಲಿಯೋಪಾತ್ರಾ ತಾನೇ ಸ್ವತಃ ತನ್ನ ಮೈ ಮುಚ್ಚುವಷ್ಟು ಬಂಗಾರದ ಆಭರಣಗಳನ್ನು ಧರಿಸಿ ಮೊದಲೇ ಸುಂದರಳಾಗಿದ್ದ ತಾನು ಇಡೀ ಕಾರ್ಯಕ್ರಮದ ಕೇಂದ್ರಬಿಂದುವಾಗುವಂತೆ ಮತ್ತೊಂದು ವಿಶೇಷ ನಾವೆಯಲ್ಲಿ ಕುಳಿತುಕೊಂಡು ಮುಂದೆ ಬರುತ್ತಾಳೆ. ಆಕೆಯ ನಿರ್ಧಾರ ಖಚಿತವಾಗಿತ್ತು. ತಾನು ರೋಮ್ ದೇಶದ ಸೇನಾಧಿಪತಿಯನ್ನು ಖಡ್ಗದಿಂದ ಗೆಲ್ಲದೇ, ಒಂದು ಹನಿ ರಕ್ತವನ್ನು ಕಳೆಯದೇ, ಕೇವಲ ತನ್ನ ಕಣ್ಣಂಚಿನ ಕುಡಿ ನೋಟದಿಂದ, ವೈಯಾರದಿಂದ ದೇಹದಿಂದ ಗೆಲ್ಲಬೇಕು.

     ಆಂಟೋನಿ ಈಜಿಪ್ಟ್ ದೇಶದ ತೀರದಲ್ಲಿ ಇಳಿದೊಡನೆ ಅವನಿಗೆ ಆಶ್ಚರ್ಯವಾಗುತ್ತದೆ. ಸನ್ನದ್ಧ ಸೈನ್ಯದೊಡನೆ ಹೋರಾಟ ಮಾಡುವ ಸ್ಥಿತಿಯಲ್ಲಿದ್ದ ಆಂಟೋನಿ ಈ ಅಸಾಧಾರಣ ಸಂಭ್ರಮದ ಸ್ವಾಗತವನ್ನು ಕಂಡು ಬೆರಗಾಗುತ್ತಾನೆ. ಕಂಡಲ್ಲಿ ಹೊಳೆಯುವ ಸಂಪತ್ತು, ಸೌಂದರ್ಯ ಮತ್ತು ಮದ್ಯಗಳಲಿ ಕರಗಿ ಹೋಗುತ್ತಾನೆ. ಅವನನ್ನು ಸ್ವಾಗತಿಸುವ ಕಾರ್ಯಕ್ರಮ ಹಲವಾರು ದಿನಗಳವರೆಗೆ ನಡೆಯುತ್ತದೆ. ಪ್ರತಿದಿನವೂ ವಿಧವಿಧವಾದ ಅಲಂಕಾರ ಮಾಡಿಕೊಂಡ, ಮಾದಕ ಸೌಂದರ್ಯದ ಕ್ಲಿಯೋಪಾತ್ರಾಳ ಭೆಟ್ಟಿಯಾಗುತ್ತಲೆ ಇರುತ್ತದೆ. ಅವಳ ಮಾತಿನ ಮೋಡಿಯಲ್ಲಿ, ಸಾಂಗತ್ಯದಲ್ಲಿ ಆಂಟೋನಿ ತಾನು ಬಂದಿರುವ ಕೆಲಸವನ್ನೆಲ್ಲ ಮರೆತು ಬಿಡುತ್ತಾನೆ. ದಿನಗಳು ಕಳೆದಂತೆ ಆಂಟೋನಿ ಕ್ಲಿಯೋಪಾತ್ರಳ ದಾಸನಂತಾಗಿ ನೈತಿಕವಾಗಿ ಕುಸಿಯುತ್ತ, ಕುಸಿಯುತ್ತ ಆಕೆಯ ಕೈಗೊಂಬೆಯಗುತ್ತಾನೆ.

      ಇತ್ತ ತನ್ನ ನೆಚ್ಚಿನ ಸ್ನೇಹಿತ ಆಂಟೋನಿ ಯಾಕೆ ಮರಳಿ ಬರಲಿಲ್ಲ ಮತ್ತು ಯಾವ ವಿಷಯವನ್ನು ತಿಳಿಸಲಿಲ್ಲ ಎಂದು ಸೀಜರ್ ಕಳವಳಕ್ಕೊಳಗಾಗಿ ತನ್ನ ದೂತರನ್ನು ಕಳುಹಿಸುತ್ತಾನೆ. ಅವರು ಈಜಿಪ್ಟಿಗೆ ಬಂದು ಪರಿಪರಿಯಾಗಿ ಆಂಟೋನಿಗೆ ಹೇಳುತ್ತಾರೆ. ನೀನು ನಮ್ಮ ದೇಶದ ಧೀರನಾಯಕ. ದೇಶ ನಿನ್ನನ್ನು ಕರೆಯುತ್ತಿದೆ. ಟೈಬರ್ ನದಿಯ ರಣಕಹಳೆ ನಿನಗೆ ಕೇಳದೇ? ಬೇಗ ದೇಶವನ್ನು ಗೆದ್ದು ನಡೆ. ಕ್ಲಿಯೋಪಾತ್ರಾಳ ಬಲೆಗೆ ಪೂರ್ತಿಯಾಗಿ ಬಿದ್ದಿದ್ದ ಆಂಟೋನಿ ನಿರ್ವೀರ್ಯನಾಗಿ ಕುಡಿದ ಅಮಲಿನಲ್ಲಿ ಹೇಳುತ್ತಾನೆ. "ರೋಮ್ ಸಾಮ್ರಾಜ್ಯ ಟೈಬಲ್ ನದಿಯಲ್ಲಿ ಕರಗಿ ಹೋಗಲಿ. ಸಾಮ್ರಾಜ್ಯದ ಮಹಾಸೌಧ ಕುಸಿದು ಹೋಗಲಿ. ನನಗೆ ಕ್ಲಿಯೋಪಾತ್ರಳ ಪಾದವೇ ನಿಜಸ್ಥಾನ."

           ಧೀರ ಆಂಟೋನಿಯ ನೈತಿಕತೆಯ ಶಿಥಿಲತೆ ಮನಸ್ಸನ್ನು ತಟ್ಟುತ್ತದೆ. ಆಧ್ಯಾತ್ಮಿಕತೆಯ ದೃಷ್ಟಿಯಿಂದ ನೋಡಿದರೆ, ಅದು ನಮ್ಮೆಲ್ಲರ ಕಥೆಯೂ ಹೌದು. ಏನನ್ನೋ ಮಹತ್ತಾದುದನ್ನು ಸಾಧಿಸಲೆಂದು ಭೂಮಿಗೆ ಮನುಷ್ಯ ದೇಹದಲ್ಲಿ ಬಂದ ನಾವು ಸಣ್ಣ ಸಣ್ಣ ಆಕರ್ಷಣೆಗಳಿಗೆ ನಮ್ಮನ್ನು ತೆತ್ತುಕೊಂಡು ಅದೇ ಮಹತ್ತಾದುದು ಎಂದು ಭ್ರಮೆಪಟ್ಟು ಮೂಲ ಆಶಯ ಮರೆತಾಗ ಆಂಟೋನಿಯ ಕಥೆ ತುಂಬ ಪ್ರಸ್ತುತವೆನಿಸುತ್ತದೆ.

ಕೃಪೆ: ಡಾ|| ಗುರುರಾಜ್ ಕರಜಗಿ

Thursday 22 September 2016

ಪಿ.ಎಸ್.ಐ. ಪರೀಕ್ಷೆಯಲ್ಲಿ ಪ್ರಬಂಧ ಬರೆಯುವುದು ಹೇಗೆ?

PSI essay writing information

      ಪ್ರಬಂಧ ಎಂದರೆ 'ಚೆನ್ನಾಗಿ ಕಟ್ಟುವುದು' ಎಂದರ್ಥ. ಪ್ರಸ್ತುತ ಪಿ.ಎಸ್.ಐ. ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆ ಆರಂಭಿಸಲಾಗಿದೆ. ಪಿ.ಎಸ್.ಐ. ಪರೀಕ್ಷೆಯಲ್ಲಿ 20 ಅಂಕಗಳಿಗೆ ಪ್ರಬಂಧ ಬರೆಯಬೇಕಿದ್ದು ಒಟ್ಟು 600 ಪದಗಳ ಮಿತಿಯನ್ನು ನಿಗದಿಗೊಳಿಸಲಾಗಿದೆ. ಕೆ.ಎ.ಎಸ್. ಪರೀಕ್ಷೆಗೆ 1000 ಪದಗಳು ಹಾಗೂ ಐ.ಎ.ಎಸ್. ಪರೀಕ್ಷೆಗೆ 1200 ಪದಗಳಲ್ಲಿ ಪ್ರಬಂಧ ಬರೆಯಬೇಕಿರುತ್ತದೆ.

 ಪಿ.ಎಸ್.ಐ. ಪರೀಕ್ಷೆ ಬರೆಯುವವರಲ್ಲಿ ಬಹಳಷ್ಟು ಜನ ಓದಿದ್ದನ್ನು ನೆನಪಿನಲ್ಲಿಟ್ಟುಕೊಂಡು ಅದನ್ನೇ ಪರೀಕ್ಷೆಯಲ್ಲಿ ಬರೆಯುತ್ತಾರೆ. ಇದು ಅಷ್ಟೇನೂ ಸೂಕ್ತವಲ್ಲ. ಯಾವುದೇ ರೀತಿಯ ಅಧ್ಯಯನವನ್ನು ನಡೆಸಿದಾಗ ವಿಷಯದ `ಥೀಮ್' ಏನು ಎಂಬುದನ್ನು ಅರ್ಥ ಮಾಡಿಕೊಂಡು ಆ ಥೀಮ್^ನ್ನು ಆಧಾರವಾಗಿಟ್ಟುಕೊಂಡು ನಮ್ಮದೇ ಆದ ಸ್ವಂತ ಆಲೋಚನಾ ಕ್ರಮದಲ್ಲಿ ಬರೆಯುವುದೇ ಸೂಕ್ತ. ಈ ರೀತಿ ಬರೆಯುವವರೇ ಪರೀಕ್ಷೆಯಲ್ಲಿ ಗೆಲ್ಲುತ್ತಿದ್ದಾರೆ.

* ಮಾದರಿ ಪ್ರಬಂಧಗಳನ್ನು ಹೆಚ್ಚು ಹೆಚ್ಚಾಗಿ ಅಧ್ಯಯನ ಮಾಡಿ. ಇವು ನಮ್ಮಲ್ಲಿ ಆಲೋಚನಾ ಕ್ರಮವನ್ನು ಹುಟ್ಟು ಹಾಕಿ ವಿಮರ್ಶಾತ್ಮಕವಾಗಿ ಬರೆಯುವ ಸಾಮರ್ಥ್ಯ ಬೆಳೆಸುತ್ತವೆ. ವಿಮರ್ಶೆ ಎಂಬುದು ವಿರೋಧವಲ್ಲ. ಕೊಟ್ಟಂತಹ ವಿಷಯಕ್ಕೆ ಸಂಬಂಧಪಟ್ಟ ವಿಷಯಗಳನ್ನು ವಿಮರ್ಶಿಸಬೇಕು.

* ಸಿ.ಇ.ಟಿ. ಅಭ್ಯರ್ಥಿಗಳು ಯವುದೇ ಪಕ್ಷ, ವ್ಯಕ್ತಿ ಬಗ್ಗೆ ನಿರ್ಲಕ್ಷ್ಯ, ಉಡಾಫೆ ಅಥವಾ ಪೂರ್ವಗ್ರಹ ಇಟ್ಟುಕೊಳ್ಳಬಾರದು. ಹಾಗೇನಾದರೂ ಇಟ್ಟುಕೊಂಡರೆ, ವಿಮರ್ಶೆಗೆ ವೈಚಾರಿಕ ಸಮರ್ಥನೆ ಇಲ್ಲದಂತಾಗುತ್ತದೆ. ಭಾವನಾತ್ಮಕ ಉದ್ವೇಗದಿಂದ ಪ್ರಬಂಧ ಬರೆಯುವಂತಾಗುತ್ತದೆ.

ಉದಾ: ಟಿಪ್ಪುವಿನ ಸಾಧನೆಗಳು.  ಪರ ವಿರೋಧವನ್ನು ಸಮಾನದೃಷ್ಟಿಯಿಂದ ನೋಡಿ ವಿಚಾರ ಕೇಂದ್ರಿತವಾಗಿ ವಿಷಯ ನಿರೂಪಿಸಬೇಕು.

* ಮಾದರಿ ಪ್ರಬಂಧಗಳನ್ನು ಓದುವಾಗ ಯಾವುದಾದರೂ ಪರಿಕಲ್ಪನೆ ಅರ್ಥವಾಗದಿದ್ದರೆ, ಅದನ್ನು ಬಿಟ್ಟು ಮುಂದಕ್ಕೆ ಹೋಗಬಾರದು, ಅರ್ಥ ಮಾಡಿಕೊಂಡೇ ಮುಂದಕ್ಕೆ ಹೋಗಬೇಕು. ಒಂದು ವೇಳೆ ಆಗದಿದ್ದರೆ, ಅದರ ಹಿಂದಿನ ಮತ್ತು ಮುಂದಿನ ವಿಷಯಗಳ ತನಕ ಓದಬೇಕು.

* ಅಂಕಿ-ಅಂಶಗಳ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳಬಾರದು. ಅವು ಸೂಚಿಸುವ ಅರ್ಥ ಏನು ಎಂದು ತಿಳಿದುಕೊಂಡರೆ ಸಾಕು.
ಉದಾ: ಈ ಹಿಂದೆ ಜನಸಂಖ್ಯೆ 100 ಕೋಟಿ ಇತ್ತು. 2011 ರ ಪ್ರಕಾರ 120ಕೋಟಿ ಆಗಿದೆ ಎಂದು ಅರ್ಥೈಸಿಕೊಂಡರೆ ಸಾಕು. ಅದನ್ನು ಬಿಟ್ಟು 120,84,63,700 ಅಂತ ಚಿಂತಿಸುತ್ತಾ ಸಮಯ ಹಾಳುಮಾಡಬಾರದು.

* ಪ್ರಬಂಧಗಳನ್ನು ಅಧ್ಯಯನ ಮಾಡುವಾಗ ಒಂದು ಪ್ಯಾರಾದಿಂದ ಮತ್ತೊಂದು ಪ್ಯಾರಾಗೆ ಹೇಗೆ ಸಂಬಂಧ ಕಲ್ಪಿಸಲಾಗಿದೆ ಎಂಬುದನ್ನು ಗಮನಿಸಬೇಕು.

* ಶಾಲಾ-ಕಾಲೇಜುಗಳಲ್ಲಿ ಬರೆದ ಹಾಗೆ ಪ್ರಬಂಧ ಬರೆಯಬಾರದು. ಶಾಲೆಯಲ್ಲಿನ ಪ್ರಬಂಧಗಳು ವಿವರಣಾತ್ಮಕ ರೀತಿಯದ್ದಾಗಿರುತ್ತವೆ. ಆದರೆ ನಾವು ಬರೆಯುವ ಪ್ರಬಂಧಗಳು ವಿಷಯ/ವಿಚಾರದ ಬಗ್ಗೆ ನಮ್ಮ ಧೋರಣೆ ಏನು ಎಂಬುದನ್ನು ನಿರೀಕ್ಷಿಸುತ್ತವೆ. ಆದ್ದರಿಂದ ಪದಗಳು ವಿಮರ್ಶಾತ್ಮಕ ರೀತಿಯಲ್ಲಿ ಇರಬೇಕಾಗುತ್ತದೆ.

* ವಿಷಯವೊಂದರ ಕುರಿತಾಗಿ ಎಲ್ಲರೂ ಯೋಚಿಸುವಂತೆ ಯೋಚಿಸಿ ಬರೆಯುವುದು ಜಾಣತನವಲ್ಲ. ಬದಲಾಗಿ ವಿಷಯವೊಂದನ್ನು ವಿಭಿನ್ನವಾಗಿ, ಬಹುಮುಖವಾಗಿ ಚಿಂತಿಸಿ ಬರೆಯುವುದು ಸೂಕ್ತ.
  ಉದಾ: `ಪ್ರತಿಭಾ ಪಲಾಯನ'ದ ಬಗ್ಗೆ ಬರೆಯುವಾಗ ಅದಕ್ಕೆ ಸಮರ್ಥನೀಯ ಕಾರಣಗಳನ್ನು ನೀಡಲು ಪ್ರಯತ್ನಿಸಬೇಕು ಆದರೆ ಸಂಪೂರ್ಣವಾಗಿ ಪೋಷಿಸಿ ಬರೆಯಬಾರದು.

* ಪ್ರಬಂಧವು ವ್ಯಕ್ತಿನಿಷ್ಠವಾಗಿರಬಾರದು, ವಸ್ತುನಿಷ್ಠವಾಗಿರಬೇಕು.

* ವಿಶ್ಲೇಷಣೆ ಒಳಗೊಂಡಿರಬೇಕು. ಅಂದರೆ ಒಂದು ವಿಚಾರವನ್ನು ವಿಮರ್ಶಿಸುವಾಗ ಲಭ್ಯವಾಗುವ ಸಣ್ಣಪುಟ್ಟ ವಿವರಗಳನ್ನು ಬಿಡಿಸಿ ಅರ್ಥೈಸಬೇಕು.

* ವಿಷಯವನ್ನು ಸಂಕುಚಿತ ಮತ್ತು ಸ್ವಾರ್ಥ ಮನೋಭಾವದಿಂದ ಮಂಡಿಸದೇ ವ್ಯಾಪಕ ಪರಿಣಾಮಗಳ ಹಿನ್ನೆಲೆಯಲ್ಲಿ ಮಂಡಿಸಬೇಕು.

* ಪ್ರಬಂಧದಲ್ಲಿ ಬರೆಯುವ ಪೀಠಿಕೆಯು ಶೀರ್ಷಿಕೆಯ ಹಿನ್ನೆಲೆಯನ್ನು ಬಳಸಿ, ಶೀರ್ಷಿಕೆಯ ಬಗ್ಗೆ ಏನು, ಹೇಗೆ ಎಂಬ ಪ್ರಶ್ನೆಗೆ ಉತ್ತರ ಕಂಡುಕೊಳ್ಳುವಂತಿರಬೇಕು.

* ಪ್ರಬಂಧ ನಿರೂಪಿಸುವಾಗ ಕೊಡುವ ಹೇಳಿಕೆಗಳು ವೈಚಾರಿಕ ಸ್ಪಷ್ಟತೆಯಿಂದ ಕೂಡಿರಬೇಕು ಮತ್ತು ಸರಿಯಾದ ಆಧಾರಗಳನ್ನು ಹೊಂದಿರಬೇಕು.
ಉದಾ: ದೇಶದಲ್ಲಿ ವರದಕ್ಷಿಣೆ ಸಮಸ್ಯೆ ಇದೆ ಎಂಬುದು ಎಲ್ಲರ ಅನುಭವಕ್ಕೆ ಬಂದಿರುವಂಥದ್ದು. ಆದರೆ ನಿರ್ದಿಷ್ಟ ವ್ಯಕ್ತಿ/ಸಮುದಾಯದ ಬಗ್ಗೆ ಹೇಳುವಾಗ ಆಧಾರವಿರಲೇಬೇಕು.

* ಸಾಮಾನ್ಯವಾಗಿ ಎಲ್ಲರಿಗೂ ಗೊತ್ತಿರುವ ಗಾದೆಮಾತು, ನಾಣ್ಣುಡಿ, ಹೇಳಿಕೆಗಳನ್ನು ಬರೆಯುವುದು ಅಷ್ಟೇನೂ ಪರಿಣಾಮಕಾರಿಯಲ್ಲ. ಒಂದು ವೇಳೆ ಬರೆಯಬೇಕಿದ್ದರೆ ಏನಾದರೂ ವಿಶೇಷ ಅರ್ಥ ನಿರೂಪಿಸಬೇಕು. ಸಾಧ್ಯವಾದಷ್ಟು ಗಮನ ಸೆಳೆಯುವ, ವಿಭಿನ್ನ ಹಾಗೂ ಸಾಕಷ್ಟು ಪ್ರಚಾರದಲ್ಲಿ ಇಲ್ಲದ ಗಾದೆ ಮಾತು, ನಾಣ್ಣುಡಿಗಳನ್ನು ಬರೆಯುವುದೊಳಿತು.

* ಒಂದು ಪ್ಯಾರಾ ಆದ ಮೇಲೆ ಮತ್ತೊಂದು ಪ್ಯಾರಾ ಆರಂಭಿಸುವಾಗ ಅಲ್ಲಲ್ಲಿ ಉಪಶೀರ್ಷಿಕೆಗಳನ್ನು ಬರೆಯಬೇಕು.

* ಪ್ರಬಂಧದಲ್ಲಿ ಮುಖ್ಯಾಂಶಗಳಿಗೆ ಅಂಡರ್^^ಲೈನ್ ಅಥವಾ ಬೋಲ್ಡ್ ಮಾಡಬಹುದು. ಆದರೆ ಅಂಡರ್^^ಲೈನ್ ಮಾಡಲು ಬೇರೆ ಯಾವುದೇ ಪೆನ್ ಅಥವಾ ಹೈಲೈಟರ್ ಬಳಸಬಾರದು.

* ಬರವಣಿಗೆ ಸ್ಪಷ್ಟವಾಗಿರಬೇಕು, ಲೇಖನ ಚಿಹ್ನೆಗಳನ್ನು ಬಳಸಬೇಕು.

* ವಾಕ್ಯರಚನೆ ಉತ್ತಮವಾಗಿರಬೇಕು ಹಾಗೂ ಜೋಡಣೆ ಕ್ರಮವಾಗಿರಬೇಕು.

* ಪ್ರಬಂಧ ವಿಷಯದ ಎಲ್ಲೆಯನ್ನು ಮೀರಬಾರದು, ಅನಾವಶ್ಯಕವಾಗಿ ಅಪ್ರಸ್ತುತ ವಾಕ್ಯಗಳನ್ನು ಪ್ರಬಂಧಕ್ಕೆ ಎಳೆದು ತರಬಾರದು.

* ವಾಕ್ಯಗಳು ಮತ್ತು ಅಂಶಗಳು ಪುನರಾವರ್ತನೆಯಾಗದಂತೆ ಎಚ್ಚರವಹಿಸಬೇಕು.

* ನಿಗದಿತ ವೇಳೆಯೊಳಗೆ ಪ್ರಬಂಧ ಬರೆದು ಮುಗಿಸುವ ಕೌಶಲ್ಯವನ್ನು ಬೆಳೆಸಿಕೊಳ್ಳಿ.

ಪ್ರಬಂಧ ಬರೆಯುವ ಹಂತಗಳು:
     ಪ್ರಬಂಧ ಬರೆಯುವ ಕಲೆ ಒಂದೇ ದಿನದಲ್ಲಿ ಸಿದ್ಧಿಸುವಂತಹದಲ್ಲ. ಅದಕ್ಕಾಗಿ ದಿನನಿತ್ಯದ ಅಭ್ಯಾಸ ಅಗತ್ಯ.
1) ಪ್ರಬಂಧದ ವಿಷಯ ಆಯ್ಕೆ ಮಾಡಿಕೊಳ್ಳಿ.
2) ಆಯ್ಕೆ ಮಾಡಿಕೊಂಡ ವಿಷಯದ ಬಗ್ಗೆ ಏನೆಲ್ಲ ಬರೆಯಬಹುದು ಎಂಬುದನ್ನು ಚಿಂತಿಸಿ.
3) ವಿಷಯಕ್ಕೆ ಸಂಬಂಧಪಟ್ಟ ಮಾಹಿತಿ ಮತ್ತು ವಿವರವನ್ನು ಸಂಗ್ರಹಿಸಿ.
4) ಪ್ರಬಂಧ ಬರೆಯುವ ನಿಯಮಗಳನ್ನು ಅನುಸರಿಸಿ, ವಿಷಯವನ್ನು ನಿರೂಪಿಸಿ, ವಿಶ್ಲೇಷಿಸಿ, ವಿಮರ್ಶಿಸಿ ವ್ಯವಸ್ಥಿತವಾಗಿ ಬರೆಯಿರಿ.
5) ಪ್ರಬಂಧ ಬರೆದು ಮುಗಿಸಿದ ಮೇಲೆ ಕೆಲಹೊತ್ತು ಬಿಟ್ಟು ಮತ್ತೆ ಅದನ್ನು ಆಮೂಲಾಗ್ರವಾಗಿ ಪರಿಶೀಲಿಸಬೇಕು. ಯಾವುದಾದರೂ ವಾಕ್ಯಗಳು, ಶಬ್ದಗಳು ಇಲ್ಲದಿದ್ದರೂ ಪ್ರಬಂಧದ ಅರ್ಥಕ್ಕೆ ಅಥವಾ ತೂಕಕ್ಕೆ ತೊಂದರೆಯಾಗುವುದಿಲ್ಲ ಎನಿಸಿದರೆ ತೆಗೆದು ಹಾಕಿ. ಬಳಸಿದ ಶಬ್ದ/ವಾಕ್ಯಕ್ಕೆ ಬದಲಾಗಿ ಮತ್ತೆ ಯಾವ ಶಬ್ದ/ವಾಕ್ಯ ಬಳಸಿದರೆ, ಇನ್ನೂ ಹೆಚ್ಚು ಪರಿಣಾಮಕಾರಿಯಾಗುತ್ತದೆ ಎಂಬುದನ್ನು ಚಿಂತಿಸಿ ಸೇರ್ಪಡೆಗೊಳಿಸಿ. ಹೀಗೆ ಒಂದು ಪ್ರಬಂಧವನ್ನು 2-3 ಬಾರಿ ಮತ್ತೆ ಮತ್ತೆ ಬರೆಯಿರಿ.
6) ಪ್ರಬಂಧದಲ್ಲಿ ಬಳಸುವ ಭಾಷೆಗ ಬಹಳ ಪ್ರಾಮುಖ್ಯತೆ ಇದೆ. ಕೆಳಮಟ್ಟದ ಪದಗಳು, ಅಶ್ಲೀಲ ಪದಗಳು, ದ್ವಂದಾರ್ಥ ಪದಗಳು, ಅಸಾಂವಿಧಾನಿಕ ಪದಗಳನ್ನು ಬಳಸುವಂತಿಲ್ಲ. ಭಾವತೀವ್ರತೆಯಿಂದ ಬರೆಯಬಾರದು. ಟೀಕೆ ಮಾಡುವುದಾದರೆ ಮೃದುವಾಗಿ ಮಾಡಬೇಕು.

       ಮಾದರಿ ಪ್ರಬಂಧಗಳ ಅಧ್ಯಯನಕ್ಕಾಗಿ ಗುಣಮಟ್ಟದ ಪುಸ್ತಕಗಳನ್ನು ಓದಿ. ಉದಾ: ಚಾಣಕ್ಯ ಪ್ರಕಾಶನದ ಅರವಿಂದ ಚೊಕ್ಕಾಡಿಯವರ ಪಿ.ಎಸ್.ಐ. ಪ್ರಬಂಧಗಳು, ಕ್ಲಾಸಿಕ್ ಸ್ಟಡಿ ಸರ್ಕಲ್^ನ ಪ್ರಬಂಧಗಳ ಪುಸ್ತಕ, ಸ್ಪರ್ಧಾ ವಿಜೇತ, ಸ್ಪರ್ಧಾ ಚೈತ್ರ ಹಾಗೂ ಇನ್ನಿತರ ಸಂಸ್ಥೆಗಳ ಪುಸ್ತಕಗಳನ್ನು ಪರಾಮರ್ಶಿಸಬಹುದು.

         ಎಲ್ಲಕ್ಕಿಂತ ಮುಖ್ಯವಾಗಿ ಉಳಿದವರೆಲ್ಲರಿಗಿಂತ ಪರಿಣಾಮಕಾರಿಯಾಗಿ ಪ್ರಬಂಧ ಬರೆಯಬಲ್ಲೆ, ವಿಷಯ ನಿರೂಪಿಸಬಲ್ಲೆ ಎಂಬ ಆತ್ಮವಿಶ್ವಾಸ ಇರಬೇಕು. ಇಂಥ ಆತ್ಮವಿಶ್ವಾಸಕ್ಕಾಗಿ ಗಳಿಸುವುದಕ್ಕಾಗಿ ಸತತ ವಿಷಯ ಸಂಗ್ರಹ, ಅಧ್ಯಯನ ಅವಶ್ಯ ಹಾಗೂ ನಿರಂತರವಾಗಿ ಜ್ಞಾನಮುಖಿಯಾಗಿರಬೇಕು.

Friday 16 September 2016

ಅವರು ಬದುಕಿದ್ದರೆ ಇಂದಿಗೆ ನೂರು ವರ್ಷ ತುಂಬುತ್ತಿತ್ತು


                   "ಕೌಸಲ್ಯಾ ಸುಪ್ರಜಾ ರಾಮ ಪೂರ್ವಾ ಸಂಧ್ಯಾ ಪ್ರವರ್ತತೇ.. ಉತ್ತಿಷ್ಠ ನರಶಾರ್ದೂಲ ಕರ್ತವ್ಯಂ ದೈವಮಾಹ್ನಿಕಂ..." ಬೆಳ್ಳಂಬೆಳ್ಳಿಗೆ ಇಂಥದೊಂದು ಸುಪ್ರಭಾತ ಎಲ್ಲ ಹಿಂದೂಗಳ ಪ್ರತಿ ಮನೆಮನೆಗಳಲ್ಲಿಯೂ ಮೊಳಗುತ್ತಿರುತ್ತದೆ. ಬಹುಶಃ ಈ ಶ್ಲೋಕಕ್ಕೆ ಗಾನಮಾಧುರ್ಯ ತುಂಬಿ ಭಾರತದಾದ್ಯಂತ ಪ್ರಸರಿಸುವಂತೆ ಮಾಡಿದ ಆ ಮಹಾನ್ ಗಾಯಕಿ  ಶ್ರೀಮತಿ ಎಂ.ಎಸ್. ಸುಬ್ಬುಲಕ್ಷ್ಮಿ. ಸಂಗೀತ ಕ್ಷೇತ್ರದಲ್ಲಿ ಭಾರತ ರತ್ನ ಪಡೆದ ಮೊದಲ ಮಹಿಳೆ ಎಂ.ಎಸ್.ಎಸ್.

                1916ರ ಸೆಪ್ಟೆಂಬರ್ 16ರಂದು ಮಧುರೈನಲ್ಲಿ ಜನಿಸಿದ ಸುಬ್ಬುಲಕ್ಷ್ಮಿಯವರು ಸಂಗೀತದ ಮನೆತನದ ಹಿನ್ನೆಲೆಯಿಂದ ಬಂದವರು. ಕಾರ್ನಟಿಕ ಸಂಗೀತದಲ್ಲಿ ತಮ್ಮ ಸಂಗೀತಾಭ್ಯಾಸ ಆರಂಭಿಸಿದ ಅವರು ಬದುಕಿರುವಾಗಲೇ ದಂತಕಥೆಯಾದವರು. ಏಷ್ಯಾದ ನೊಬೆಲ್ ಎಂದೇ ಖ್ಯಾತವಾದ ‘ರಾಮನ್ ಮ್ಯಾಗ್ಸೆಸೆ’ ಪ್ರಶಸ್ತಿ ಪಡೆದ ಮೊದಲ ಸಂಗೀತ ವಿದುಷಿಯಾದ ಇವರು 2004ರ ಡಿಸೆಂಬರ್ 11 ರಂದು ತಮ್ಮ 88ನೇ ವಯಸ್ಸಿನಲ್ಲಿ ನಮ್ಮನ್ನೆಲ್ಲ ಅಗಲಿ ಬಾರದ ಲೋಕಕ್ಕೆ ತೆರಳಿದರು ಆದಾಗ್ಯೂ ಅವರು ಹಾಡಿದ ಸಾವಿರಾರು ಹಾಡುಗಳಿಂದ ಭಾರತೀಯರ ಹೃದಯ ನಿವಾಸದಲ್ಲಿ ಶಾಶ್ವತವಾಗಿ ನೆಲೆ ನಿಂತಿದ್ದಾರೆ. ಅವರು ಬದುಕಿದ್ದರೆ ಇಂದಿಗೆ 100 ವರ್ಷ ತುಂಬುತ್ತಿತ್ತು. ಸ್ವರ ಸಾಮ್ರಾಜ್ಞಿ ಎಂ.ಎಸ್. ಸುಬ್ಬುಲಕ್ಷ್ಮಿ ಅವರಿಗೆ ಜನ್ಮಶತಮಾನೋತ್ಸವದ ಹಾರ್ದಿಕ ಶುಭಾಶಯಗಳು.

Thursday 1 September 2016

ಸ್ತಬ್ಧವಾದ ಸೌಂಡ್ ಮಾಸ್ಟರ್

ಸ್ತಬ್ಧವಾದ ಸೌಂಡ್ ಮಾಸ್ಟರ್ 

(ಸಂಗ್ರಹ) ಗುರುಪ್ರಸಾದ್ ಎಚ್

                               1929ರ ನವೆಂಬರ್ ತಿಂಗಳ ಪ್ರಾರಂಭ. ಅಮೆರಿಕದ ಇತಿಹಾಸದಲ್ಲಿಯೇ ಕರಾಳವಾದ ಷೇರು ಕುಸಿತ ಎಂಬ ಎಂಟು ಕಾಲಮ್ಮಿನ ಸುದ್ದಿ ಬಂದಾಗ, ಗೋಪಾಲ್ ಬೋಸ್ ಭೂಮಿಗಿಳಿದು ಹೋದರು. ಒಂಬತ್ತು ವರ್ಷದ ಹಿಂದೆ, ಜೈಲಿಗೆ ತಳ್ಳಲು ಬಂದ ಬ್ರಿಟಿಷರ ಕೈಯಿಂದ ತಪ್ಪಿಸಿಕೊಂಡು ಕಲಕತ್ತೆಯಿಂದ ಹಡಗಿನಲ್ಲಿ ಅಡಗಿ ಕೂತು ಅಮೆರಿಕದ ಹೊಸ ನೆಲಕ್ಕೆ ಬಂದಿದ್ದ ಬೋಸ್, ಆ ಒಂದು ದಶಕದಲ್ಲಿ ಮಾಡಿದ ಬ್ಯುಸಿನೆಸ್ಸುಗಳೆಷ್ಟೋ ಪಟ್ಟ ಪಡಿಪಾಟಲೆಷ್ಟೋ! ಕೈಯಲ್ಲಿದ್ದ ಪುಡಿಗಾಸನ್ನೆಲ್ಲ ಷೇರು ಮಾರ್ಕೆಟ್ಟಿನಲ್ಲಿ ಅದೃಷ್ಟ ಪರೀಕ್ಷೆಗೆ ಹೂಡಿದ್ದ ಬೋಸ್‍ಗೆ, ದಿನ ಬೆಳಗಾಗುವದರೊಳಗೆ, ಇಡೀ ಷೇರು ಮಾರುಕಟ್ಟೆಯೇ ಕ್ರ್ಯಾಷ್ ಆಗಿ ಕಂಪೆನಿಗಳೆಲ್ಲ ಮಂಗಮಾಯವಾದಾಗ ಹೃದಯವೇ ಬಾಯಿಗೆ ಬಂತು. ಅದಾಗಷ್ಟೇ ಮಗನನ್ನು ಹೆತ್ತ ಹೆಂಡತಿಯನ್ನು ಆಸ್ಪತ್ರೆಯಲ್ಲಿ ಮಲಗಿಸಿ ಬೋಸ್ ಸಾಲ ಎತ್ತಲು ಹೋದರು. ಕೊನೆಗೂ ಎಪ್ಪತ್ತೈದು ಡಾಲರನ್ನು ಹೇಗೋ ಸಂಪಾದಿಸಿ, ಆಸ್ಪತ್ರೆಗೆ ಕಟ್ಟಿದ ಮೇಲಷ್ಟೇ, ಮಗುವನ್ನೂ ಹೆಂಡತಿಯನ್ನೂ ಅಲ್ಲಿಂದ ಬಿಡಿಸಿ ಮನೆಗೆ ಕರೆದುಕೊಂಡು ಹೋಗಲು ಸಾಧ್ಯವಾದದ್ದು! ಹುಟ್ಟಿದ ದಿನವೇ ಹೀಗೆ ಅಪ್ಪನನ್ನು ಇಷ್ಟೊಂದು ಓಡಾಡಿಸಿ ಸತಾಯಿಸಿದ ಕಿಲಾಡಿ ಹುಡುಗನೇ - ಜಗತ್ತಿಗೆಲ್ಲ ಹೊಸ ಬಗೆಯ ಸೌಂಡ್ ಸಿಸ್ಟಮನ್ನು ಪರಿಚಯಿಸಿ ಅಪ್ಪನ ನಾಮಾಂಕಿತವನ್ನು ಅಜರಾಮರವಾಗಿಸಿ ಬಿಲಿಯಾಧೀಶನಾಗಿ ತೀರಿಕೊಂಡ ಅಮರ ಗೋಪಾಲ ಬೋಸ್!

  ಕಲಕತ್ತಾ ಯೂನಿವರ್ಸಿಟಿಯಲ್ಲಿ ಭೌತಶಾಸ್ತ್ರ ಕಲಿಯುತ್ತಿದ್ದರೂ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದ ಗೋಪಾಲ್ ಬೋಸ್‍ಗೆ ಅಂತಿಮ ಪರೀಕ್ಷೆಗೆ ಎರಡು ವಾರ ಇರುವಾಗ ಬ್ರಿಟಿಷರು ತನ್ನನ್ನು ಯಾವ ಕ್ಷಣದಲ್ಲಾದರೂ ಬಂಧಿಸಿ ಹೊತ್ತೊಯ್ಯಲು ತಯಾರಾಗಿದ್ದಾರೆ ಎನ್ನುವ ಗುಪ್ತ ಮಾಹಿತಿ ಸಿಕ್ಕಿತು. ಕೈಯಲ್ಲಿ ಕೇವಲ ಐದು ರೂಪಾಯಿ ಹಿಡಿದುಕೊಂಡು ಬಾಂಗ್ಲಾ ಬಂದರನ್ನು ಬಿಟ್ಟ ಹಡಗಿನಲ್ಲಿ ನುಸುಳಿದಾಗ, ಅವರಿಗೆ ಅದೆಲ್ಲಿ ಹೋಗುತ್ತದೆಂದೂ ಗೊತ್ತಿರಲಿಲ್ಲ! ಹಡಗು ಹಲವಾರು ವಾರಗಳ ತರುವಾಯ ಅಮೆರಿಕ ತಲುಪಿದಾಗ, ಎಂತಹ ಪರಿಸ್ಥಿತಿಗೂ ಎದೆಯೊಡ್ಡಿ ನಿಲ್ಲುವ ಸ್ಥೈರ್ಯ ಬೆಳೆಸಿಕೊಂಡಿದ್ದ ಬೋಸ್, ಅಲ್ಲಿ ತನ್ನ ಜೀವನದ ಹೊಸ ಅಧ್ಯಾಯ ಪ್ರಾರಂಭಿಸಲು ಮುಂದಾದರು. ಅದಾಗಲೇ ಅಮೆರಿಕ ಸೇರಿ ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡುತ್ತಿದ್ದ ಡಾ|| ತಾರಕನಾಥ ದಾಸರ ಕ್ರಾಂತಿಕಾರಿಗಳ ಗುಂಪು ಸೇರಿಕೊಂಡರು. ಭಗವದ್ಗೀತೆ, ವೇದಾಂತ, ಉಪನಿಷತ್ತುಗಳನ್ನು ಆಳವಾಗಿ ಅಭ್ಯಾಸ ಮಾಡಿದ್ದ, ಭಾರತೀಯರಿಗಿಂತ ಹೆಚ್ಚು ಭಾರತೀಯರಾಗಿದ್ದ ಅಮೆರಿಕನ್ ಸ್ಕೂಲ್ ಟೀಚರ್ ಒಬ್ಬಳನ್ನು ಪ್ರೀತಿಸಿ ಮದುವೆಯಾದರು. ಇವರಿಬ್ಬರ ಪ್ರೇಮದ ಫಲವಾಗಿ ಹುಟ್ಟಿದ ಕೂಸೆ ಅಮರ್ ಬೋಸ್.


      ಗೋಪಾಲ ಬೋಸ್ ಅವರ ಮನೆ ಆ ಕಾಲಕ್ಕೆ ಕ್ರಾಂತಿಕಾರಿಗಳ ಕಾಶಿ. ಜಲಿಯನ್ ವಾಲಾಬಾಗ್‍ನ ಹತ್ಯಾಕಾಂಡದಲ್ಲಿ ಅದು ಹೇಗೋ ಪವಾಡಸದೃಶ್ಯರಾಗಿ ಪಾರಾಗಿ ಬಂದವರು, ಬೋಸರೆದುರು ಕೂತು ಅಲ್ಲಿನ ದುರಂತದ ಕಥೆಗಳನ್ನು ವಿವರಿಸುತ್ತಿದ್ದರೆ, ಹುಡುಗ ಅಮರ್, ಅವುಗಳನ್ನು ತನ್ಮಯನಾಗಿ ಕೇಳುತ್ತಿದ್ದ. ವಾರಕ್ಕೊಮ್ಮೆ ತಾಯಿ ಮಾಡುವ ವೇದಾಂತದ ಉಪನ್ಯಾಸಗಳನ್ನು ಧ್ಯಾನಸ್ಥನಾಗಿ ಕೇಳಿಸಿಕೊಳ್ಳುತ್ತಿದ್ದ. ಏಳನೆಯ ವಯಸ್ಸಿಗೆ ಪಿಟೀಲಿನ ಹುಚ್ಚು ಹತ್ತಿಕೊಂಡಿತು. ಹದಿಮೂರು ತುಂಬುವ ಹೊತ್ತಿಗೆ, ಯಾವುದೇ ಇಲೆಕ್ಟ್ರಾನಿಕ್ ಉಪಕರಣ ಸಿಕ್ಕರೂ ಅದನ್ನು ತಕ್ಷಣ ಬಿಚ್ಚಿ ಅಂಗಡಿ ಇಟ್ಟು ಮತ್ತೆ ಯಥಾಸ್ಥಿತಿಗೆ ಜೋಡಿಸುವ ಕೌಶಲ ಕೈಹಿಡಿಯಿತು. ಹದಿನೈದರ ಎಳೆವೆಯಲ್ಲೇ ಈ ಮರಿಬೋಸ್ ಓಣಿಓಣಿಗಳಲ್ಲಿ ಓಡಾಡಿ ಯಾರ್‍ಯಾರ ಮನೆಯಲ್ಲಿ ರೇಡಿಯೋ ಕೆಟ್ಟಿದೆಯೋ ಅವೆಲ್ಲವನ್ನೂ ಸರಿಮಾಡಿಕೊಟ್ಟು ಚಿಲ್ಲರೆ ಡಾಲರ್ ಸಂಪಾದಿಸಲು ಆರಂಭಿಸಿದ! "ಅಪ್ಪ, ನನಗೆ ಗೊಂಬೆ ತಂದುಕೊಡುವಷ್ಟು ಆರ್ಥಿಕ ಶಕ್ತಿ ನಿನಗಿಲ್ಲವೆಂದು ಬಲ್ಲೆ. ನನ್ನ ಆಟಿಕೆ ನಾನೇ ಮಾಡಿಕೊಳ್ಳುತ್ತೇನೆ!" ಎಂದು ತಂದೆಗೆ ಸಮಾಧಾನ ಹೇಳಿ, ಗರಾಜಿನಲ್ಲಿ ಮುರಿದುಬಿದ್ದ ಚಿಕ್ಕಪುಟ್ಟ ಸಾಮಾನುಗಳನ್ನೇ ಜೋಡಿಸಿ ಆಟಿಕೆಗಳನ್ನು ಮಾಡಿಕೊಂಡ! ಅವನ ಕೈಯಲ್ಲಿ ರೂಪುಗೊಂಡ ಆಟಿಕೆರೈಲು ಕೀಲಿಕೊಟ್ಟರೆ ಹತ್ತಡಿ ದೂರಕ್ಕೆ ಚಲಿಸುತ್ತಿತ್ತು!

   ಮಗನ ಪ್ರತಿಭೆ ಹೀಗೆ ಹದಿಹರೆಯದ ಶುರುವಾತಿನಲ್ಲೇ ಜ್ವಾಜಲ್ಯಮಾನವಾಗಿ ಉರಿಯುವುದನ್ನು ಕಂಡ ಅಪ್ಪನಿಗೆ, ಹೇಗಾದರೂ ಮಾಡಿ ಮಗನನ್ನು ದೊಡ್ಡ ಶಿಕ್ಷಣ ಸಂಸ್ಥೆಗೇ ಸೇರಿಸಬೇಕೆಂಬ ಆಸೆ ಹುಟ್ಟಿತು. ಅದಕ್ಕಾಗಿ ಹತ್ತು ಸಾವಿರ ಡಾಲರುಗಳ ಸಾಲಸೋಲ ಮಾಡಿ, ಅಂತು ಮಗನನ್ನು ಆಗಿನ (ಮತ್ತು ಈಗಲೂ) ಪ್ರತಿಷ್ಠಿತ ಮೆಸಾಚುಸೆಟ್ಸ್ ತಂತ್ರಜ್ಞಾನ ಸಂಸ್ಥೆ (ಎಮ್‍ಐಟಿ)ಗೆ ಸೇರಿಸಿದರು. ಎರಡೇ ಎರಡು ವರ್ಷ ಕಲಿತು ಅಲ್ಲಿಂದ ಹೊರಬರುತ್ತೇನೆ ಎಂದುಕೊಂಡು ಹೋದ ಅಮರ್, ಅಲ್ಲಿ ಮುಂದೆ ಡಿಗ್ರಿಯ ಮೇಲೆ ಡಿಗ್ರಿ ಸಂಪಾದಿಸಿ ಬರೋಬ್ಬರಿ ನಲವತ್ತೈದು ವರ್ಷ ಪ್ರಾಧ್ಯಾಪಕರಾಗಿ ದುಡಿದು ತನ್ನ ಜೀವಿತದ ಮೂರನೇ ಎರಡರಷ್ಟನ್ನು ಅಲ್ಲೇ ಸಾರ್ಥಕವಾಗಿ ಕಳೆದದ್ದು ಮಾತ್ರ ಅವರ ಬದುಕಿನ ಬಹುದೊಡ್ಡ ಮಧುರ ಆಕಸ್ಮಿಕ. ಬಾಲ್ಯದಲ್ಲೇ ಬೆಳೆಸಿಕೊಂಡ ಎಲೆಕ್ಟ್ರಿಕಲ್ ಮತ್ತು ಶ್ರವ್ಯ ತಂತ್ರಜ್ಞಾನದ ಮೋಹ ಬೋಸರನ್ನು ಸಾಯುವ ಕೊನೆಗಳಿಗೆಯವರೆಗೂ ಬಿಟ್ಟು ಹೋಗಲಿಲ್ಲ.

         ಎಮ್‍ಐಟಿಯಲ್ಲಿ ಮಾಸ್ಟರ್ ಡಿಗ್ರಿ ಮುಗಿಸಿದ ತಕ್ಷಣ ಬೋಸ್‍ಗೆ ಫುಲ್‍ಬ್ರೈಟ್ ಸ್ಕಾಲರಶಿಪ್ ಸಿಕ್ಕಿತು. ಬಾಲ್ಯದಿಂದಲೂ ಭಾರತದ ಬಗ್ಗೆ ಅಪರಿಮಿತ ಸೆಳೆತ ಹೊಂದಿದ್ದ ಬೋಸ್‍ಗೆ ತನ್ನ ಪೂರ್ವಿಕರ ನೆಲಕ್ಕೆ ಬರಲು ಸ್ಕಾಲರಶಿಪ್ ಒಂದು ಒಳ್ಳೆಯ ನೆಪ ಒದಗಿಸಿತು. ಬೋಸ್ ದೆಹಲಿಗೆ ಬಂದು ರಾಷ್ಟ್ರೀಯ ಭೌತಶಾಸ್ತ್ರ ಪ್ರಯೋಗಾಲಯದಲ್ಲಿ ಒಂದು ವರ್ಷ ಸಂಶೋಧನ ವಿದ್ಯಾರ್ಥಿಯಾಗಿ ಅಧ್ಯಯನ, ಕೆಲಸ ಮಾಡಿದರು. ದೆಹಲಿಗೆ ಬರುವುದಕ್ಕಿಂತ ಮುಂಚೆ ಒಂದು ತಿಂಗಳ ರಜೆಯ ಮಜಾ ಅನುಭವಿಸುತ್ತಿದ್ದಾಗ, ಬೋಸ್ ಮಾಡದ ಪ್ರಯೋಗವೇ ಇರಲಿಲ್ಲ. ಸ್ವತಃ ಒಳ್ಳೆಯ ವಯೊಲಿನ್ ವಾದಕರಾದ ಅವರು ತನ್ನ ಸಂಗೀತವನ್ನು ರೆಕಾರ್ಡ್ ಮಾಡಲು ಒಂದು ದುಬಾರಿ ರೆಕಾರ್ಡನ್ನು ಖರೀದಿಸಿದರು. ಆದರೆ, ಅದರಲ್ಲಿ ದಾಖಲಾದ ಶಬ್ದದ ಗುಣಮಟ್ಟ ಮಾತ್ರ ಅವರನ್ನು ತೀವ್ರ ನಿರಾಶೆಗೊಳಿಸಿತ್ತು. ತನ್ನ ನಿರೀಕ್ಷೆಗೆ ಹತ್ತನೇ ಒಂದರಷ್ಟೂ ಹತ್ತಿರವಿಲ್ಲದಿದ್ದ ಆ ರೆಕಾರ್ಡರನ್ನು ಕೋಪ ಮತ್ತು ಹತಾಶೆಯ ಭರದಲ್ಲಿ ಬೋಸ್ ಎಸೆದೇಬಿಟ್ಟಿದ್ದರು! ಆದರೆ, ಅಂತಹುದೇ - ಆದರೆ ಜಗತ್ತಿನಲ್ಲಿ ಇದುವರೆಗೆ ಯಾರೂ ಮಾಡಿರದಿದ್ದ ರೆಕಾರ್ಡಿಂಗ್ ವ್ಯವಸ್ಥೆಯನ್ನು ನಾನೇಕೆ ರಚಿಸಬಾರದು ಎಂಬ ಗುಂಗಿಹುಳ ಮಾತ್ರ ಮೆದುಳನ್ನು ಸದಾ ಕೊರೆಯುತ್ತಲೇ ಇತ್ತು. ದೆಹಲಿಯಲ್ಲಿರುವಾಗಲು ಈ ಚಿಂತನೆ ನಡೆದೇ ಇತ್ತು.

  ಕೆಲಸದೊತ್ತಡ ಮಧ್ಯೆ ಒಂದೆರಡು ವಾರ ಬ್ರೇಕ್ ತೆಗೆದುಕೊಂಡ ಬೋಸ್ ಸುತ್ತಾಡಲೆಂದು ಬೆಂಗಳೂರಿಗೆ ಬಂದರು. ಬಂಗಾಳಿಯಾದ್ದರಿಂದ ಸಹಜ ಕುತೂಹಲದಿಂದ ಇಲ್ಲಿನ ರಾಮಕೃಷ್ಣ ಮಠಕ್ಕೆ ಭೇಟಿ ಕೊಟ್ಟರು. ಆಗ, ಅಲ್ಲಿನ ಸ್ವಾಮೀಜಿಯೊಬ್ಬರ ಜೊತೆ ನಡೆದ ಅರ್ಧತಾಸಿನ ಮಾತುಕತೆ ಬೋಸರ ಜೀವನದ ಗತಿಯನ್ನೇ ಬದಲಿಸಿಬಿಟ್ಟಿತು! "ಎರಡು ಬಗೆಯ ಸಾಧಕರಿರುತ್ತಾರೆ. ತಾನು ಅಂದುಕೊಂಡದ್ದನ್ನು ತುಂಬ ಆಳವಾಗಿ ಯೋಚಿಸಿ, ನಿರಂತರ ಶೋಧಗಳನ್ನು ಮಾಡಿ ಕೊನೆಗೊಂದು ದಿನ ತನ್ನ ಸಾಧನೆಯನ್ನು ಜಗತ್ತಿಗೆ ತೋರಿಸುವವರು ಒಂದು ಬಗೆ. ಮಲಗಿದ್ದಾಗ, ನಡೆಯುವಾಗ, ಸ್ನಾನ ಮಾಡುವಾಗ - ಎಲ್ಲೆಂದರಲ್ಲಿ ಥಟ್ಟನೆ ಐಡಿಯಾ ಹೊಳೆದು, ಹಾಗೆ ಅಂತರ್ಬೋಧೆಯಿಂದ ಮಿಂಚಿ ಮಾಯವಾದ ಕನಸುಗಳನ್ನು ನನಸು ಮಾಡಲು ಮುನ್ನುಗ್ಗುವವರು ಇನ್ನೊಂದು ಬಗೆ. ಇವರಿಬ್ಬರೂ ಸಮಾನಶಕ್ತಿಯ ಸಾಧಕರೇ" ಎಂದು ಆ ಸ್ವಾಮೀಜಿ ಹೇಳಿದರಂತೆ. ನಿಂತಲ್ಲಿ ಕೂತಲ್ಲಿ ಹೊಸ ಐಡಿಯಾಗಳನ್ನು ಸೃಜಿಸುತ್ತಿದ್ದ, ಆದರೆ ಅಂತಹ ಐಡಿಯಾಗಳಿಗೆ ಆಯುಷ್ಯವಿಲ್ಲ ಎಂದೇ ಬಗೆದಿದ್ದ ಬೋಸರಿಗೆ ಸ್ವಾಮೀಜಿಯ ಮಾತಿನಿಂದ ಜ್ಞಾನೋದಯವಾಯಿತು. ತನ್ನ ಕನಸುಗಳನ್ನು ಬೆನ್ನಟ್ಟಿ ಸಾಕಾರಗೊಳಿಸಲು ಬೇಕಾದ ಸ್ಥೈರ್ಯ ಮತ್ತು ಚೈತನ್ಯ ಅವರಿಗಿಲ್ಲಿ ಸಿಕ್ಕಿತು. ಬೋಸ್ ಕಾರ್ಪೊರೇಷನ್ ಸ್ಥಾಪನೆಯಾಗಿಯೇಬಿಟ್ಟಿತು!

 ಯಾವುದೋ ಸಂಗತಿಯನ್ನು ವರ್ಷಾನುಗಟ್ಟಲೇ ಕೂತು ಯೋಚಿಸಿ ಫಲಿತಾಂಶ ಪಡೆಯುವುದು ಬೋಸ್ ಶೈಲಿಯಲ್ಲ. ಒಮ್ಮೆ ಫಿಲಡೆಲ್ಫಿಯಾದಿಂದ ಸ್ವಿಜರಲೆಂಡಿಗೆ ವಿಮಾನದಲ್ಲಿ ಹೋಗುತ್ತಿದ್ದಾಗ, ಅದರಲ್ಲಿ ಬಳಸುತ್ತಿದ್ದ ಹೆಡಫೋನ್ ಸಮರ್ಪಕವಾಗಿಲ್ಲ ಎಂದು ಅವರಿಗೆ ಅನ್ನಿಸಿತು. ವಿಮಾನದ ಹಾರಾಟದ  ಶಬ್ದವೆಲ್ಲ ಅಳಿಸಿ ಹೋಗಿ ಕೇವಲ ಸಂಗೀತವೊಂದೇ ತನ್ನ ಕಿವಿತುಂಬುವಂತಿದ್ದರೆ ಎಷ್ಟು ಚೆನ್ನಿತ್ತು! ಎಂದು ಯೋಚಿಸಿದ ಕ್ಷಣದಲ್ಲೇ Noise cancelling Headphone ಚಿಂತನೆ ಹುಟ್ಟಿತು. ಈ ಹೆಡ್‍ಫೋನ್‍ಗಳು ಹೊರಗಿನಿಂದ ಕಿವಿ ತೂರಲು ಯತ್ನಿಸುವ ಎಲ್ಲ ಇತರ ಗದ್ದಲವನ್ನೂ ಅಲ್ಲೇ ಕೊಂದುಹಾಕಿ ನಾವು ಕೇಳಬಯಸುವ ಸಂಗತಿಯನ್ನು ಮಾತ್ರವೇ ಕಿವಿಯೊಳಗೆ ಬಿಟ್ಟುಕೊಡುತ್ತವೆ! ಪ್ರಯಾಣ ಮುಗಿಸುತ್ತ ವಿಮಾನ ಭೂಸ್ಪರ್ಶ ಮಾಡುವ ಹೊತ್ತಿಗೆ, ಬೋಸ್ ಕೈಯಲ್ಲಿ ಆ ಉತ್ಪನ್ನದ ಡಿಸೈನ್ ತಯಾರಾಗಿಬಿಟ್ಟಿತು! 1994ರಲ್ಲಿ ಬೋಸರ ಕಂಪೆನಿ, ಅಡಿಷನರ್ ಎಂಬ ತಂತ್ರಜ್ಞಾನವನ್ನು ಬಿಡುಗಡೆಗೊಳಿಸಿತು. ಇನ್ನೂ ಕಟ್ಟಿಯೇ ಇಲ್ಲದ ಸಭಾಂಗಣದ ಮೂಲೆ ಮೂಲೆಗಳಲ್ಲಿ ಕೂತು, ಅಲ್ಲಿ ಕೇಳಿಸುವ ದನಿಯ ಮಟ್ಟ ಮತ್ತು ಗುಣಮಟ್ಟ ಯಾವ ಬಗೆಯದ್ದಾಗಿರುತ್ತದೆ ಎನ್ನುವದನ್ನು ಅತ್ಯಂತ ನಿಖರವಾಗಿ ಹೇಳುವ ತಂತ್ರಜ್ಞಾನ ಅದು! ಅಲ್ಲಿಂದೀಚೆಗೆ ಜಗತ್ತಿನಲ್ಲಿ ಕಟ್ಟಲ್ಪಟ್ಟ ಎಲ್ಲಾ ಸಭಾಂಗಣಗಳಲ್ಲೂ ‘ಆಡಿಷನರ್’ ಬಳಕೆಯಾಗಿದೆ.

     ಬೋಸರ ಹೆಸರನ್ನು ಶ್ರವ್ಯಪ್ರಪಂಚದಲ್ಲಿ ಚಿರಸ್ಥಾಯಿಗೊಳಿಸಿದ್ದು ಅವರು 1968ರಲ್ಲಿ ರೂಪಿಸಿದ 901 ಸ್ಪೀಕರ್. ಒಂದು ಸಂಗೀತ ಅಥವಾ ಭಾಷಣ ತುಂಬಾ ಚೆನ್ನಾಗಿ ಕೇಳಿಸಬೇಕು ಎಂದರೆ, ಅದನ್ನು ಧ್ವನಿವರ್ಧಕ ಆದಷ್ಟು ದೊಡ್ಡ ದನಿಯಲ್ಲಿ ಪ್ರೇಕ್ಷಕರಿಗೆ ತಲುಪಿಸಬೇಕು. ಹಾಗೆಯೇ, ಸ್ಪೀಕರ್ ಪೆಟ್ಟಿಗೆ ಕೇಳುಗನಿಗೆ ಆದಷ್ಟೂ ಹತ್ತಿರವಿರಬೇಕು ಎಂದೇ ಆಗಿನ ಕಂಪೆನಿಗಳು ತಿಳಿದಿದ್ದವು. ಒಂದು ಶಬ್ದವನ್ನು ಚೆನ್ನಾಗಿ ಕೇಳಲು ಸ್ಪೀಕರನ್ನು ನಿಮ್ಮಿಂದ ಆದಷ್ಟು ದೂರ ಹಿಡಿಯಿರಿ! - ಎಂದು ಹೇಳಿದ ಬೋಸರ ಬಗ್ಗೆ, ಆ ಕ್ಷೇತ್ರದಲ್ಲಿ ಇಡೀ ಪ್ರಪಂಚದಲ್ಲೇ ಪಾರುಪತ್ಯ ಸಾಧಿಸಿದ್ದ ಜಪಾನಿನ ಕಂಪೆನಿ, "ಇದೊಂದು ತಲೆಕೆಟ್ಟವನ ಪ್ರಲಾಪ" ಎಂದು ಪ್ರಚಾರ ಮಾಡಿತು! ಬೋಸ್ ವಿನ್ಯಾಸಗೊಳಿಸಿದ ಸ್ಪೀಕರ್‌ನಲ್ಲಿ ಕೇಳುಗನತ್ತ ಬರುತ್ತಿದ್ದ ಧ್ವನಿ ಕೇವಲ ಹತ್ತು ಶೇಕಡಾ ತೊಂಬತ್ತು! ಹೀಗೆ ಗೋಡೆಗೆ ಬಡಿದ ಧ್ವನಿತರಂಗಗಳು ಇನ್ನಷ್ಟು ಹೆಚ್ಚು ಶಕ್ತಿಯನ್ನು ಗಳಿಸಿಕೊಂಡು ಪ್ರಸಾರವಾಗುತ್ತವೆ ಎನ್ನುವುದನ್ನು ಬೋಸ್ ಶೋಧಿಸಿದ್ದರು! ಹಾಗಾಗಿ, ಬೋಸರ ಸ್ಪೀಕರ್, ಗುಣಮಟ್ಟದ ವಿಷಯದಲ್ಲಿ ಆಗ ಜಗತ್ತಿನ ನಂಬರ್ ಒಂದು ಆಗಿ ಮೆರೆಯುತ್ತಿದ್ದ ಉತ್ಪನ್ನಗಳನ್ನು ಸಾರಾಸಗಟಾಗಿ ಮೂಲೆಗೆ ತಳ್ಳಿತು! ಇಂದಿಗೂ ಧ್ವನಿವರ್ಧಕಗಳ ವಿಷಯದಲ್ಲಿ ಏಕಮೇವಾದ್ವಿತೀಯವಾಗಿ ಮೆರೆಯುತ್ತಿರುವ ಈ "ಪ್ರತಿಧ್ವನಿ ತಂತ್ರಜ್ಞಾನ"ಕ್ಕೆ ಸರಿಸಾಟಿಯಾಗಿ ಪೈಪೋಟಿ ಕೊಡಬಲ್ಲ ಬೇರೆ ಉತ್ಪನ್ನ ಬಂದಿಲ್ಲ!

    ವ್ಯಾಟಿಕನ್ನಿನ ಚರ್ಚಿನಲ್ಲಿ ಪೋಪರ ಸಂದೇಶವನ್ನು ಜಗತ್ತಿಗೆ ಕೇಳಿಸಲು, ಮೆಕ್ಕಾದ ಮಸೀದಿಯಲ್ಲಿ ಮುಲ್ಲಾರ ಪ್ರಾರ್ಥನೆಯನ್ನು ನೆರೆದ ಸಾವಿರಾರು ಜನರ ಕಿವಿಗೆ ತಲುಪಿಸಲು ಬಳಕೆಯಾಗುತ್ತಿರುವುದು ಬೋಸ್ ಕಂಪೆನಿಯ ಸ್ಪೀಕರ್‍ಏ ಜಗತ್ತಿನ ಅಷ್ಟೂ ಮರ್ಸಿಡಿಸ್ ಬೆಂಜ್, ಅಕ್ಯುರಾ, ಜಿಎಮ್‍ಸಿ, ನಿಸ್ಸಾನ್, ಮಾಜ್ದಾ, ಆಡಿ, ಕ್ಯಾಡಿಲಾಕ್, ಪೋರ್ಶ್, ಇನ್ಫಿನಿಟಿ ಕಾರುಗಳಲ್ಲಿ ಬಳಕೆಯಾಗುವ ಆಡಿಯೋ ಸಿಸ್ಟಮ್‍ಅನ್ನು ಅಭಿವೃದ್ಧಿಪಡಿಸಿದ್ದು ಬೋಸ್ ಸಾಹೇಬರೇ. ಆದರೆ, ಒಂದಾನೊಂದು ಕಾಲದಲ್ಲಿ ಜನರಲ್ ಮೋಟರ್ಸ್ ಕಂಪೆನಿಗೆ ಮೊತ್ತಮೊದಲ ಕಾರ್ ಸ್ಟಿರೀಯೋ ಮಾರುವ ಮುನ್ನ ಅಂತಹದೊಂದು ಅತ್ಯಾಧುನಿಕ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಲು ಬೋಸ್ ಹದಿಮೂರು ಮಿಲಿಯ ಡಾಲರುಗಳನ್ನು ಖರ್ಚುಮಾಡಿದ್ದರು ಎನ್ನುವುದು ಯಾರಿಗೂ ತಿಳಿದಿರಲಿಕ್ಕಿಲ್ಲ. ಹಾಗೆಯೇ, ಗಗನಯಾತ್ರಿಗಳಿಗೆಂದು ಬೋಸ್ ವಿಶೇಷ ವಿನ್ಯಾಸದ ಹೆಡ್‍ಫೋನ್ ಅಭಿವೃದ್ಧಿಪಡಿಸದಿದ್ದರೆ, ಗಗನನೌಕೆಗಳಲ್ಲಿ ಪ್ರಯಾಣ ಮಾಡುವ ಅಷ್ಟೂ ಜನ, ಶಾಶ್ವತವಾಗಿ ಕಿವುಡರಾಗುವ ತೊಂದರೆಗೆ ಈಡಾಗಬೇಕಾಗಿತ್ತು! ಒಲಿಂಪಿಕ್ ಕ್ರೀಡೆಗಳಿಂದ ಹಿಡಿದು ಜಗದ್ವಿಖ್ಯಾತ ರಾಕ್ ಸಂಗೀತ ಪ್ರದರ್ಶನಗಳವರೆಗೆ, ಮೆಜೆಸ್ಟಿಕ್ ಥಿಯೇಟರುಗಳಿಂದ ಹಿಡಿದು ಹಾಲಿವುಡ್ಡಿನ ಅತ್ಯಾಧುನಿಕ ತಂತ್ರಜ್ಞಾನಗಳವರೆಗೆ, ನಾವು-ನೀವು ಬಳಸುವ ಪುಟ್ಟ ಸ್ಪೀಕರುಗಳಿಂದ ಹಿಡಿದು ಸಾವಿರಾರು ಜನ ಕೂರುವ ಆಡಿಟೋರಿಯಮ್ಮುಗಳ ಧ್ವನಿವ್ಯವಸ್ಥೆಯವರೆಗೆ - ಜಗತ್ತಿನಲ್ಲಿ "ಸೌಂಡ್" ಎಂದಾಗ ಕಣ್ಣೆದುರು ಬರುವ ಹೆಸರು - "ಬೋಸ್" ಒಂದೇ.

    ಇಷ್ಟೆಲ್ಲ ಆದರೂ ಬೋಸ್ ಧನದಾಹಿಯಾಗಿರಲಿಲ್ಲ. ಇಂದಿಗೂ ಪ್ರೈವೆಟ್ ಕಂಪೆನಿಯಾಗಿಯೇ ಉಳಿದಿರುವ ಬೋಸ್ ಕಂಪೆನಿಯ ಲಾಭವೆಲ್ಲವೂ ಸೌಂಡ್ ಇಂಜಿನಿಯರಿಂಗಿನಲ್ಲಿ ನಡೆಯುತ್ತಿರುವ ಸಾವಿರಾರು ಸಂಶೋಧನೆಗಳಿಗೆ ಹರಿದುಹೋಗುತ್ತದೆ. "ನಾವು ಷೇರು ಮಾರುಕಟ್ಟೆ ಪ್ರವೇಶಿಸಿಲ್ಲ. ಒಂದು ವೇಳೆ ಈ ಕಂಪೆನಿ ಪಬ್ಲಿಕ್ ಸೆಕ್ಟರ್ ಆದರೆ, ನಾವು ಯಾವ ಕ್ಷೇತ್ರದಲ್ಲಿ ಎಷ್ಟು ಹಣ ಖರ್ಚು ಮಾಡಬೇಕು ಎನ್ನುವುದನ್ನು ನಿರ್ದೇಶಿಸುವ ಹತ್ತಾರು ತಲೆಗಳು ಹುಟ್ಟಿಕೊಳ್ಳುತ್ತವೆ. ಸಂಶೋಧನೆಯ ಓನಾಮ ಗೊತ್ತಿಲ್ಲದವರೆಲ್ಲ ಬಂದು ನಮ್ಮ ಕೈಹಿಡಿದು ಸಿಕ್ಕ ಸಿಕ್ಕ ದಿಕ್ಕುಗಳಲ್ಲಿ ಎಳೆದಾಡತೊಡಗುತ್ತಾರೆ" ಎನ್ನುತ್ತಿದ್ದ ಬೋಸ್, ತನ್ನ ಕಂಪೆನಿಯ ಲಾಭದ ಬಹುದೊಡ್ಡ ಪಾಲನ್ನು ತನ್ನ ಮಾತೃಸಂಸ್ಥೆ ಎಮ್‍ಟಿಐಗೆ ದೇಣಿಗೆಯಾಗಿ ನೀಡಿದ್ದಾರೆ. "ನನಗಿರುವುದು ಒಂದೇ ಮನೆ, ಒಂದೇ ಕಾರು. ಅಷ್ಟರಲ್ಲಿ ನಾನು ತೃಪ್ತ. ಹೆಚ್ಚಿಗೆ ಏನನ್ನೂ ಅಪೇಕ್ಷಿಸಲಾರೆ" ಎನ್ನುತ್ತಿದ್ದ ಈ ಬಿಲಿಯಾಧೀಶ, ಹಲವಾರು ಸಲ ಫೋರ್ಬ್ಸ್ ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದರು ಎನ್ನುವ ಸಂಗತಿಯನ್ನು ಅವರ ಜೊತೆ ವ್ಯವಹರಿಸಿದವರಿಗೂ ನಂಬುವುದಕ್ಕೆ ಕಷ್ಟವಾಗುತ್ತಿತ್ತು.

               ಬೋಸ್ - ತಾನೇ ಪ್ರಾರಂಭಿಸಿದ ’ಮನೋ-ಶ್ರವಣ ತಂತ್ರಜ್ಞಾನ" (Psycho Acoustics) ಎಂಬ ಹೊಸ ಜ್ಞಾನಶಾಖೆಯನ್ನು ನಲವತ್ತು ವರ್ಷಗಳಿಗೂ ಹೆಚ್ಚು ಕಾಲ ಎಮ್‍ಐಟಿಯಲ್ಲಿ ಬೋಧಿಸಿದರು. ಇಂದು ಆ ಸಂಸ್ಥೆಯ ಅತಿ ಜನಪ್ರಿಯ ಕೋರ್ಸುಗಳಲ್ಲಿ ಇದು ಕೂಡ ಒಂದು. "ಮುನ್ನೂರೈವತ್ತು ಜನ ಕೂತ ಸಭಾಂಗಣಕ್ಕೆ ಬಂದು ಬೋಸ್ ಶಬ್ದದ ಬಗ್ಗೆ ಪಾಥ ಮಾಡಲು ಶುರು ಮಾಡಿದರೆಂದರೆ, ಇಡೀ ಸಭಾಂಗಣ ಸ್ತಬ್ಧವಾಗಿ ಬಿಡುತ್ತಿತ್ತು!" ಎಂದು ಅವರ ಸಹೋದ್ಯೋಗಿಯಾಗಿದ್ದ ವಿಲಿಯಮ್ ಬ್ರಾಡಿ ನೆನಪಿಸಿಕೊಳ್ಳುತ್ತಾರೆ. ಅವರು ತನ್ನ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಸಮಯದ ಮಿತಿ ಇಡುತ್ತಿರಲಿಲ್ಲ. ಸಾಮಾನ್ಯವಾಗಿ ಸಂಜೆ ಏಳುಗಂಟೆಗೆ ಶುರುವಾದ ಪರೀಕ್ಷೆ ಕೆಲವು ಸಲ ಮುಂಜಾನೆ ಐದು ಗಂಟೆಯವರೆಗೂ ಹೋಗುತ್ತಿತ್ತು! ಅಷ್ಟೂ ಹೊತ್ತು ಎಚ್ಚರವಿದ್ದು ಕೂತು ಬೋಸ್, ಪರೀಕ್ಷೆ ಬರೆಯುವವರಿಗೆ ಐಸಕ್ರೀಮ್ ಸಪ್ಲೈ ಮಾಡುತ್ತಿದ್ದರು!


  ಕೇವಲ ಶ್ರವಣ ಮಾತ್ರದಿಂದಲೇ ಶತ್ರುವನ್ನು ಪತ್ತೆಹಿಡಿದು ಬಾಣ ಹೊಡೆಯುತ್ತಿದ್ದ ಅರ್ಜುನನಂತೆ, ಶಬ್ದದ ಅನಂತ ಸಾಧ್ಯತೆಗಳನ್ನು ತೆಗೆದು ಶೋಧಿಸಿ ಅದರಿಂದಲೇ ಒಂದು ಸಾಮ್ರಾಜ್ಯ ಕಟ್ಟಿದ ಸವ್ಯಸಾಚಿ ಬೋಸ್, ಶುಕ್ರವಾರ, 2013ರ ಜುಲೈ 12ರಂದು ಮೆಸಾಚುಸೆಟ್ಸ್‍ನಲ್ಲಿ ಕೊನೆಯುಸಿರೆಳೆದರು. ಕಂದುಬಣ್ಣದ ಭಾರತೀಯರಿಗೆ ಹೋಟೆಲುಗಳಲ್ಲಿ ಊಟ ಕೊಡದೆ ಸತಾಯಿಸುತ್ತಿದ್ದ ಅಮೆರಿಕದ ದ್ವಿಮುಖನೀತಿಯ ಕಹಿಯುಂಡೂ ಆ ನೆಲದಲ್ಲೇ ಬಿಲಿಯನ್ ಡಾಲರ್ ಕಂಪೆನಿ ಕಟ್ಟಿ ಭಾರತೀಯ ಹೆಸರನ್ನು ಚಿರಸ್ಥಾಯಿಗೊಳಿಸಿದ ಅಮರ್ ಬೋಸ್ ಇನ್ನು ನಿಶ್ಯಬ್ಧ.


- ರೋಹಿತ್ ಚಕ್ರತೀರ್ಥ

Tuesday 30 August 2016

ನುಡಿಗಟ್ಟುಗಳು

*ಕೆ.ಪಿ.ಎಸ್.ಸಿ. `ಸಿ' ಗ್ರುಪ್ ಹುದ್ದೆಗಳ ನೇಮಕಾತಿ ಪರೀಕ್ಷಾ ಕೆಲವು ನುಡಿಗಟ್ಟುಗಳು*

✍ ಜ್ಞಾನಮುಖಿ ( Jnanamukhi )
ಬ್ಲಾಗ್ (ವೆಬ್‍ಸೈಟ್): www.jnanamukhi.blogspot.in


🌻 ಅಂಕುರಾರ್ಪಣ ಮಾಡು - ಪ್ರಾರಂಭೋತ್ಸವ
🌻 ಅಲಾಲುಟೋಪಿ - ಮೋಸ ಮಾಡುವವನು
🌻 ಇಕ್ಕಳದಲ್ಲಿ ಸಿಕ್ಕಿಸು - ತೊಂದರೆಗೆ ಈಡು ಮಾಡು
🌻 ಉತ್ಸವ ಮೂರ್ತಿ - ಕೆಲಸ ಮಾಡದ ಆಲಸಿ
🌻 ಉಭಯ ಸಂಕಟ - ಎರಡರಲ್ಲಿ ಏನನ್ನೂ ಆರಿಸಿಕೊಳ್ಳಬೇಕೆಂಬ ಚಿಂತೆ
🌻 ಊದುವ ಶಂಖ ಊದಿಬಿಡು - ಹೇಳುವುದು ನಿಷ್ಪ್ರಯೋಜಕವಾದರೂ ಹೇಳಿಬಿಡು
🌻 ಊರತ್ತೆ - ವೇಶ್ಯೆಗೆ ಆಶ್ರಯ ಕೊಟ್ಟವಳು
🌻 ಒನಕೆ ಚಿಗುರು - ಅಸಾಧ್ಯವಾದುದು ಆಗು
🌻 ಒಬ್ಬರ ಕೈ ವೀಣೆಯಾಗಿರು - ಇತರರ ಇಚ್ಚೆಯಂತೆ ನಡೆ
🌻 ಕಣ್ಣಿಗೆ ಅಂಜನ ಹಾಕು - ಸ್ಪಷ್ಟವಾಗಿ ಅರಿವಾಗು
🌻 ಕಣ್ಣಿನಲ್ಲಿ ಗಂಗಾವತಾರವಾಗು - ಆನಂದಭಾಷ್ಪ
🌻 ಕಣ್ಣುರಿ - ಅಸೂಯೆ
🌻 ಕಣ್ಸವಿ - ಇಷ್ಟವಾದ ನೋಟ
🌻 ಕಲ್ಲುನೀರು ಕರಗುವ ಹೊತ್ತು - ಮಧ್ಯರಾತ್ರಿ
🌻 ಕಾಗೆ ಮುಳುಗು - ಸ್ನಾನದ ಶಾಸ್ತ್ರ ಮಾಡು
🌻 ಕಾಲಗುಣ - ಶಕುನ
🌻 ಕಾಲಲ್ಲಿ ಹಾವು ಬಿಡು - ಗೊಂದಲಪಡಿಸು
🌻 ಕಿವಿ ಸೋಲು - ಕೇಳು, ನಂಬು
🌻 ಕುಂತೀ ಮಕ್ಕಳ ಸಂಸಾರ - ಕಷ್ತದ ಜೀವನ
🌻 ಕೈ ಕಂಡ ಕೆಲಸ - ತನಗೆ ತಿಳಿದಿರುವ ಕೆಲಸ
🌻 ಕೈ ಹರಿತ ಆಗು - ಅನುಭವಿಯಾಗು
🌻 ಗಟ್ಟಿಕುಳ - ಶ್ರೀಮಂತ
🌻 ಗಾಳಿಗೆ ಗರಿ ಮೂಡು - ಶೀಘ್ರತೆ ಹೆಚ್ಚಾಗು
🌻 ಗುಡ್ಡಕ್ಕೆ ಕಲ್ಲುಹೊರು - ವ್ಯರ್ಥವಾದ ಕೆಲಸ ಮಾಡು
🌻 ಚಿದಂಬರ ರಹಸ್ಯ - ಅರ್ಥವಾಗದ ಗುಟ್ಟು
🌻 ತಲೆ ಕುಂಬಾರನ ಚಕ್ರವಾಗು - ಯೋಚನಾಕ್ರಾಂತವಾಗು
🌻 ತಲೆಯ ಮೇಲೆ ಕೈ ಇಡು - ವಂಚಿಸು
🌻 ನರಿಯ ಕಕ್ಕೆಕಾಯಿ ವ್ರತ - ಪಾಲಿಸಲಾಗದ ಪ್ರತಿಜ್ಞೆ
🌻 ನಾಯಿ ಮುಟ್ಟಿದ ಮಡಕೆ - ಅಪವಿತ್ರವಾದುದು
🌻ನೆತ್ತರು ಬಸಿ - ಶ್ರಮ ಪಡು
🌻 ಬಕಧ್ಯಾನ - ಬಹಳ ಕಪಟದಿಂದಿರು
🌻 ಬಲಗಣ್ಣು ಅದುರು - ಗಂಡಸರಿಗೆ ಶುಭ ಶಕುನವೆಂದು ನಂಬಿಕೆ
🌻 ಬಸವನ ಹಿಂದೆ ಬಾಲ - ಎಡೆಬಿಡದ ಸಂಗಾತಿ
🌻 ಬಾಯಿ ಬಂಧನ - ಉಪವಾಸ
🌻 ಬಾಯಿಗಳಿಗೆ ಬಾಯಿಕುಕ್ಕೆ - ನಿಯಂತ್ರಣ
🌻 ಬಾಯಿಬೆಲ್ಲ ಮರುಳಾಗುವ ಮಾತು
🌻 ಬಿಳಿಕುದುರೆ ಚಾಕರಿ - ಅತೀವ ಶಿಸ್ತು
🌻 ಬಿಳೀ ಮಜ್ಜಿಗೆ - ಹೆಂಡ
🌻 ಬೆನ್ನಿನ ಹೊಗೆಯೆಬ್ಬಿಸು - ಚೆನ್ನಾಗಿ ಹೊಡೆ
🌻 ಬೆನ್ನುಕಾಯಿ - ಕಾಪಾಡು
🌻 ಬೆಳ್ಳಿನಾಲಿಗೆ - ಅನುನಯದ ಮಾತು
🌻 ಭೂಮಿ ತೂಕದವ - ಭೂಮಿಯಂತೆ ಬಹುಶಾಂತ ಸ್ವಭಾವದವ
🌻 ಮುಂಗೈತಿಕ್ಕು - ವಿನಯ ತೋರಿಸು
🌻 ಮುಖಮುರಿ - ಅವಮಾನಗೊಳಿಸು
🌻 ಮುಖವೀಣೆ - ಮುಖಸ್ತುತಿ ಮಾಡುವವರು

Wednesday 24 August 2016

ವಿದ್ಯಾರ್ಥಿಗಳ ಪತ್ರಿಕಾಗೋಷ್ಠಿ

ಮಹಾರಾಷ್ಟ್ರದ ಚಂದ್ರಾಪುರದಲ್ಲಿರುವ ವಿದ್ಯಾನಿಕೇತನ ಶಾಲೆಯ 7ನೇ ತರಗತಿಯ ಇಬ್ಬರು ವಿದ್ಯಾರ್ಥಿಗಳು ಇತ್ತೀಚೆಗೆ ಪತ್ರಿಕಾಗೋಷ್ಠಿ ಕರೆದಿದ್ದರು..!

ವಿಷಯವೇನು ಗೊತ್ತೇ?
        ಸ್ಕೂಲ್ ಬ್ಯಾಗ್^ನ ಭಾರ ತಾಳದೇ ಅವರು ಅಕ್ಷರಶಃ ಸಿಡಿದೆದ್ದಿದ್ದರು. ಪ್ರತಿದಿನ 8 ವಿಷಯಗಳ 16 ಪುಸ್ತಕಗಳು (each subject textbook + notebook) ಮತ್ತು ಕೆಲವೊಮ್ಮೆ ಪುಸ್ತಕಗಳ ಸಂಖ್ಯೆ 20ಕ್ಕೂ ಅಧಿಕವಾಗಿರುತ್ತಿತ್ತು. ಅಷ್ಟು ಪುಸ್ತಕಗಳನ್ನು ಹಾಕಿಕೊಂಡು 6ರಿಂದ 7 ಕೆ.ಜಿ. ಭಾರದ ಬ್ಯಾಗ್ ಹೊತ್ತುಕೊಂಡು ಮೂರನೇ ಮಹಡಿಯಿರುವ ಕ್ಲಾಸ್^ಗೆ ಹೋಗುವುದು ಬಹಳ ಕಷ್ಟವಾಗ್ತಿದೆ. ದಯಮಾಡಿ ನಮ್ಮ ಶಾಲೆಯ ಆಡಳಿತ ಮಂಡಳಿಗೆ ನೀವಾದರೂ (ಪತ್ರಕರ್ತರು) ಹೇಳಿ ಬ್ಯಾಗ್ ಭಾರ ಕಡಿಮೆಗೊಳಿಸಿ ಎಂದು ಅಲವತ್ತುಕೊಂಡಿದ್ದರು.

              ಇದು ನಾವೆಲ್ಲಾ ಆಲೋಚಿಸಬೇಕಾದ ವಿಷಯ. ನಾನು ಶಾಲೆಯೊಂದರಲ್ಲಿ ಶಿಕ್ಷಕನಾಗಿದ್ದಾಗ ಅಲ್ಲಿ ಮಕ್ಕಳ ಬ್ಯಾಗ್ ಭಾರವನ್ನು ಕಡಿಮೆಗೊಳಿಸಲು ಒಂದು ಉಪಾಯ ಮಾಡಿದ್ದೆ. ನನ್ನ ಬೋಧನಾ ವಿಷಯದ ನೋಟ್ ಬುಕ್ (ಫೇರ್ ಬುಕ್) ನಕಾಶೆ ಪುಸ್ತಕ ಮತ್ತು ಪ್ರಾಜೆಕ್ಟ್ ಬುಕ್ ನ್ನು ಪ್ರತಿ ಶನಿವಾರ ಮಾತ್ರ ತರಲು ಹೇಳುತ್ತಿದ್ದೆ. ಅಂದು ಆ ವಾರದಲ್ಲಿ ಮುಗಿಸಿದ ಭೂಗೋಳದ ಅಧ್ಯಾಯದ ಮೇಲಿನ ನಕಾಶೆಯ ಅಭ್ಯಾಸವನ್ನು ಪೂರ್ಣಗೊಳಿಸಲು ವಿದ್ಯಾರ್ಥಿಗಳಿಗೆ ಹೇಳಿ ಆ periodನಲ್ಲಿ ಸರದಿಯಂತೆ ವಿದ್ಯಾರ್ಥಿಯನ್ನು ಕರೆದು ಅವನ/ಳ ಮುಂದೆ ಫೇರ್ ಬುಕ್ ತಿದ್ದುತ್ತಿದ್ದೆ. ಇದರಿಂದ ವಿದ್ಯಾರ್ಥಿಯು ಬರವಣಿಗೆಯಲ್ಲಿ ಮಾಡಿರುವ ತಪ್ಪುಗಳನ್ನು ಸರಿಪಡಿಸಿ ಅವನಿಗೆ ತಿಳಿಸಿ ಹೇಳಲು ಅನುಕೂಲವಾಗುತ್ತಿತ್ತು. ಕೆಲವು ಸಂದರ್ಭಗಳಲ್ಲಿ ಶಾಲಾ ಅವಧಿ ಮುಗಿದ ಮೇಲೂ ಒಂದೆರಡು ಗಂಟೆ ಅಲ್ಲಿಯೇ ಸ್ಟಾಫ್ ರೂಮ್^ನಲ್ಲಿ ಕುಳಿತು ಫೇರ್ ಬುಕ್ ತಿದ್ದಿದಿದೆ. ನನ್ನ ವಿದ್ಯಾರ್ಥಿಗಳಿಗಾಗಿ ವಾರಕ್ಕೆ ಒಂದೆರಡು ಗಂಟೆ ಹೆಚ್ಚಿಗೆ ಮೀಸಲಿಟ್ಟರೆ ನನ್ನ ಗಂಟೇನೂ ಮುಳುಗಿ ಹೋಗುವುದಿಲ್ಲ. ಅಷ್ಟಕ್ಕೂ ನನ್ನ ಆ ಕ್ರಮದಿಂದ ವಿದ್ಯಾರ್ಥಿಗಳ ಬ್ಯಾಗ್ ಭಾರ ಕಡಿಮೆಯಾಗಿದ್ದಂತೂ ಸುಳ್ಳಲ್ಲ.

      ಕೊನೆಯದಾಗಿ ಹೇಳುವುದಾದರೆ, ಎಲ್ಲ ಶಾಲೆಗಳ ಪ್ರತಿಯೊಬ್ಬ ಶಿಕ್ಷಕರು ಮನಸ್ಸು ಮಾಡಿದರೆ ಮಕ್ಕಳ ಬ್ಯಾಗ್ ಭಾರದ ಕಷ್ಟವನ್ನು ನಿವಾರಿಸಬಹುದು. ಅವು ನಮ್ಮ ಹೊಟ್ಟೆಯಲ್ಲಿ ಹುಟ್ಟದಿದ್ದರೆ ಏನಾಯಿತು? ಅವು ನಮ್ಮ ಮಕ್ಕಳಲ್ಲವೇ? ನಾವು ನಮ್ಮ ಸ್ವಂತ ಮಕ್ಕಳಿಗೆ ನೀಡುವಷ್ಟು ಗಮನವಾದರೂ ನಮ್ಮ ವಿದ್ಯಾರ್ಥಿಗಳಿಗೆ ನೀಡಬೇಕಲ್ಲವೇ? ದೂರದಲ್ಲೆಲ್ಲೋ ವಿದ್ಯಾರ್ಥಿಗಳ ಪಾಲಕರು ನಮ್ಮನ್ನು ನಂಬಿ ಮಕ್ಕಳನ್ನು ಕಳುಹಿಸಿರುತ್ತಾರೆ. ಅವರು ಶಾಲೆಯಲ್ಲಿ ಇರುವಷ್ಟು ಹೊತ್ತಾದರೂ ನಾವು ಅವರ ಪಾಲಿಗೆ ತಾಯಿ-ತಂದೆಯರಾಗಬೇಕಲ್ಲವೇ?

ಶಿಕ್ಷಕರ ಸಮುದಾಯ ಈ ನಿಟ್ಟಿನಲ್ಲಿ ಏನು ಕ್ರಮ ಕೈಗೊಳ್ಳುತ್ತದೆ ಎಂಬುದನ್ನು ಕಾದುನೋಡಬೇಕು.

ಓ.ಎಂ.ಆರ್. ಶೀಟ್ ( OMR sheet ) ಹೇಗೆ ತುಂಬಬೇಕು?


    ಇದು ಸ್ಪರ್ಧಾತ್ಮಕ ಯುಗ. ಇಂದು ಬಹುತೇಕ ಸರ್ಕಾರಿ ಹುದ್ದೆಗಳನ್ನು ಸ್ಪರ್ಧಾತ್ಮಕ ಪರೀಕ್ಷೆಗಳ ಮೂಲಕ ನೇಮಕ ಮಾಡಿಕೊಳ್ಳಲಾಗುತ್ತದೆ. ಕೆಲವೇ ಸಾವಿರ ಹುದ್ದೆಗಳಿಗೆ ಲಕ್ಷಾಂತರ ಅಭ್ಯರ್ಥಿಗಳು ಪೈಪೋಟಿ ಒಡ್ಡಿರುತ್ತಾರೆ. ಶ್ರಮದಿಂದ ಓದಿ ಪರೀಕ್ಷೆಗೆ ತಯಾರಾಗಿ ಲವಲವಿಕೆಯಿಂದ ಪರೀಕ್ಷೆಗೇನೋ ಹೋಗಿರುತ್ತಾರೆ. ಆದರೆ ಅವರಲ್ಲಿ ಕೆಲವು ಅಭ್ಯರ್ಥಿಗಳು ಪರೀಕ್ಷಾ ವೇಳೆ ಓ.ಎಂ.ಆರ್. ಶೀಟ್‍ನ ಸೂಚನೆಗಳು ಸರಿಯಾಗಿ ತುಂಬುವಲ್ಲಿ ಎಡವಟ್ಟು ಮಾಡಿಕೊಂಡು ಕೈಕೈ ಹಿಸುಕಿಕೊಂಡು ಹೊರಬರುತ್ತಾರೆ. ಇದರಿಂದ ಶ್ರಮದಿಂದ ಓದಿದ ಪ್ರಯತ್ನವೆಲ್ಲ ನಷ್ಟವಾಗಿ ವ್ಯಾಕುಲರಾಗುತ್ತಾರೆ.

           ಹಾಗಾದರೆ, ತಪ್ಪಾಗದಂತೆ ಓ.ಎಂ.ಆರ್.ಶೀಟ್ (O.M.R Sheet ) ತುಂಬುವುದು ಹೇಗೆ ಎಂಬುದರ ಬಗ್ಗೆ ಇಲ್ಲಿ ಸಲಹೆಗಳನ್ನು ನೀಡಲಾಗಿದೆ.

* ಓ.ಎಂ.ಆರ್. ಶೀಟ್‍ನ್ನು ಬಬಲ್ ಶೀಟ್ ಎಂತಲೂ ಕರೆಯುತ್ತಾರೆ. ಬಬಲ್‍ಗಳ ಮೇಲೆ ಗುರುತು ಮಾಡುವಾಗ ಸಂಬಂಧಪಟ್ಟ ಪರೀಕ್ಷಾ ಮಂಡಳಿಯು ನಿಗದಿಪಡಿಸಿದ ನಿಯಮಾವಳಿಗಳಿಗೆ ಅನುಗುಣವಾಗಿ ಪೆನ್ ಅಥವಾ ಪೆನ್ಸಿಲ್‍ನಿಂದ ಗುರುತು ಮಾಡಬೇಕು. ಆದ್ದರಿಂದ ಭರ್ತಿ ಮಾಡುವದರ ಮೊದಲು ಶೀಟ್‍ನಲ್ಲಿರುವ ಸೂಚನೆಗಳನ್ನು ಎಚ್ಚರಿಕೆಯಿಂದ ಓದಿಕೊಳ್ಳಬೇಕು.

* ನೀಲಿ/ಕಪ್ಪು ಬಣ್ಣದ ಬಾಲ್‍ಪೆನ್ ತೆಗೆದುಕೊಂಡು ಹೋಗಿ. ಎಚ್.ಬಿ. ಪೆನ್ಸಿಲ್ ಜೊತೆಗಿರಲಿ. ಯಾವುದೇ ಕಾರಣಕ್ಕೂ ಇಂಕ್ ಪೆನ್ ಬಳಸಬೇಡಿ.

* ಓ.ಎಂ.ಆರ್. ವೃತ್ತದ ಗೆರೆಯೊಳಗಿರುವ ಜಾಗದಷ್ಟನ್ನು ಮಾತ್ರ ತುಂಬಿ. ಭಾಗಶಃ ಇಲ್ಲವೇ ಚೆಲ್ಲಾಪಿಲ್ಲಿಯಾಗುವಂತೆ ತುಂಬಬಾರದು.

* ಮೊದಲಿಗೆ ಓ.ಎಂ.ಆರ್. ಶೀಟ್‍ನಲ್ಲಿನ ಸರ್ಕಲ್ (ವೃತ್ತ) ಅಥವಾ ಬಾಕ್ಸ್‍ಗಳನ್ನು ತೆಳುವಾದ ರೀತಿಯಲ್ಲಿ ತುಂಬಿ ಅನಂತರ ಗಾಢವಾಗಿ ಕಾಣುವಂತೆ ಮಾಡಿ. ಆದರೆ ಓವರ್ ರೈಟ್ ಮಾಡಬೇಡಿ.

* ಓ.ಎಂ.ಆರ್. ಶೀಟ್‍ನಲ್ಲಿ ಕೆಲವೊಂದು ಭಾಗಗಳಲ್ಲಿ `ಇಲ್ಲಿ ಏನನ್ನೂ ಬರೆಯಬೇಡಿ' ಎಂದು ಸೂಚಿಸಲಾಗಿರುತ್ತದೆ. ಅಂತಹ ಜಾಗಗಳಲ್ಲಿ ಬರೆಯುವುದಾಗಲೀ, ಗೀಚುವುದಾಗಲೀ ಸಲ್ಲದು.
* ಓ.ಎಂ.ಆರ್. ಬಾರ್ ಕೋಡ್ ಮೇಲೆ ಏನನ್ನೂ ಮೂಡಿಸಬೇಡಿ.

* ಓ.ಎಂ.ಆರ್. ಇಂಡೆಕ್ಸ್ ಪಾಯಿಂಟ್ ಮೇಲೆ ಏನನ್ನೂ ಗುರುತು ಹಾಕಬೇಡಿ. ಇವುಗಳು ಕಾರ್ಯನಿರ್ವಹಣೆಗೆ ಅಗತ್ಯವಾಗಿರುತ್ತವೆ. ಓ.ಎಂ.ಆರ್. ಶೀಟ್ ಐಡೆಂಟಿಫಿಕೇಷನ್‍ ಬ್ಲಾಕ್‍ನಲ್ಲಿ ಏನಾದರೂ ಬದಲಾವಣೆಯಾದರೆ ಆ ಶೀಟ್‍ನ್ನು ತಿರಸ್ಕರಿಸಲಾಗುತ್ತದೆ.

* ಓ.ಎಂ.ಆರ್. ಶೀಟ್‍ನ್ನು ಮಡಚಬೇಡಿ. ಪಿನ್ ಅಥವಾ ಸ್ಟ್ಯಾಪಲ್ ಹಾಕುವುದನ್ನು ಮಾಡಬೇಡಿ.

* ಪರೀಕ್ಷಾ ಅವಧಿ ಮುಗಿಯಲು ಇನ್ನೇನು ೫ ನಿಮಿಷ ಇದೆ ಎನ್ನುವಾಗಲೇ ಓ.ಎಂ.ಆರ್. ಮೂಲ ಪ್ರತಿಯೊಂದಿಗಿರುವ ನಕಲು ಪ್ರತಿಯನ್ನು ತುಂಬ ಎಚ್ಚರಿಕೆಯಿಂದ ಬೇರ್ಪಡಿಸಿ. ಅದಕ್ಕಾಗಿ ಗೆರೆ ಎಳೆದು `ಕತ್ತರಿ' ಮಾರ್ಕ್ ಕೊಟ್ಟಿರುತ್ತಾರೆ. ಆ ಗೆರೆ ಭಾಗವಷ್ಟೆ ಮಡಚಿ ನಂತರ ಬೇರ್ಪಡಿಸಿ ಮೂಲಪ್ರತಿಯನ್ನು ಪರೀಕ್ಷಾ ವೀಕ್ಷಕರಿಗೆ ನೀಡಿ ನಕಲು ಪ್ರತಿಯನ್ನು ನಿಮ್ಮೊಂದಿಗೆ ಇಟ್ಟುಕೊಳ್ಳಿ. ನೆನಪಿರಲಿ, ನೇಮಕಾತಿ ಪ್ರಕ್ರಿಯೆ ಮುಗಿಯುವವರೆಗೆ ನಕಲು ಪ್ರತಿಯನ್ನು ಜೋಪಾನವಾಗಿ ಇಟ್ಟುಕೊಳ್ಳಬೇಕು.

* ಓ.ಎಂ.ಆರ್‌ನಲ್ಲಿ ಗುರುತು ಮಾಡುವುದಕ್ಕಿಂತ ಮೊದಲು ಮುಖಪುಟದಲ್ಲಿರುವ ಸೂಚನೆಗಳನ್ನು ಗಮನವಿಟ್ಟು ಓದಿಕೊಳ್ಳಿ.

* ಕೊನೆಯದಾಗಿ ಬಹಳ ಮುಖ್ಯವಾದ ಅಂಶವೆಂದರೆ ನಿಮ್ಮ ಪರೀಕ್ಷೆಯ ನೋಂದಣಿ ಸಂಖ್ಯೆ (ರೆಜಿಸ್ಟ್ರೇಶನ್ ನಂಬರ್)ಯನ್ನು ತುಂಬ ಎಚ್ಚರದಿಂದ ತುಂಬಿ. ಅತ್ತ ಇತ್ತ ನೋಡುತ್ತ ತುಂಬುವುದು ಮಾಡಬಾರದು.

ಜ್ಞಾನಮುಖಿ
ಮೊ: 9945479292
ಬ್ಲಾಗ್ : www.jnanamukhi.blogspot.in

Saturday 11 June 2016

ಸೈನಿಕರು ವಿವಿಗೆ ಹೋಗಿ ದೇಶಭಕ್ತಿ ಪಾಠ ಹೇಳಿಕೊಡಬೇಕಾದ ಪರಿಸ್ಥಿತಿ ಬಂದಿರುವಾಗ ಮಹಾಯೋಧ ತಿಮ್ಮಯ್ಯ ನೆನಪಾದರು!

Posted by : Guruprasad Hattigoudar
Mob: 9945479292

ಮಡಿಕೇರಿಯ ಶ್ರೀಮಂತ ದಂಪತಿಯೊಬ್ಬರು ಬೆಂಗಳೂರಿನ ಬಿಷಪ್ ಕಾಟನ್ ಶಾಲೆಯ ಪ್ರಿನ್ಸಿಪಾಲರೊಡನೆ ಮಾತನಾಡುತ್ತಾ ಕುಳಿತಿದ್ದರು. ಬ್ರಿಟಿಷರು ಮತ್ತು ಆಂಗ್ಲೋ ಇಂಡಿಯನ್ನರಿಗೆಂದೇ ಕಟ್ಟಲಾಗಿದ್ದ ಶಾಲೆಗೆ ಮಕ್ಕಳನ್ನು ಸೇರಿಸಲು ಬಂದಿದ್ದರು. ಎಂಥೆಂಥಾ ಶಿಫಾರಸ್ಸುಗಳಿದ್ದರೂ ಅದುವರೆಗೆ ಯಾವೊಬ್ಬ ಭಾರತೀಯನಿಗೂ ಅಲ್ಲಿ ಪ್ರವೇಶ ಸಿಕ್ಕಿರಲಿಲ್ಲ. ಹುಡುಗರಿಬ್ಬರು ಆಫೀಸಿನ ಹೊರಗೆ ಗೋಡೆಗೊರಗಿ ನಿಂತು ಬಿಳಿಯ ಹುಡುಗರನ್ನು ಬೆರಗುಗಣ್ಣುಗಳಿಂದ ನೋಡುತ್ತಿದ್ದರು. ದೇಸೀ ಹುಡುಗರನ್ನು ಯಾವುದೋ ಅನ್ಯಗ್ರಹಜೀವಿಗಳಂತೆ ನೋಡುತ್ತಾ ಬಂದ ಬಿಳಿಹುಡುಗರ ಒಂದು ತಂಡಕ್ಕೆ ಈ ದೇಸೀ ಅಣ್ಣತಮ್ಮಂದಿರನ್ನು ರೇಗಿಸಬೇಕೆನಿಸಿತು. ಒಬ್ಬ ಹುಡುಗ ಏನು ನೀಗ್ರೋಗಳನ್ನೂ ಇಲ್ಲಿ ಸೇರಿಸಿಕೊಳ್ಳುತ್ತಾರೋ? ಎಂದ. ಅಷ್ಟೇ, ಅಣ್ಣತಮ್ಮಂದಿರಿಬ್ಬರು ಆ ಬಿಳಿ ಹುಡುಗರ ಮೇಲೆ ಬಿದ್ದರು. ನೆಲಕ್ಕೆ ಬೀಳಿಸಿ ಗುದ್ದತೊಡಗಿದರು. ಗಲಾಟೆಯ ಸದ್ದಿಗೆ ಪ್ರಿನ್ಸಿಪಾಲರು ಹೊರಗೆ ಬಂದರು. ಪೋಷಕರಿಗೆ ಈ ಹುಡುಗರು ಇಲ್ಲೂ ತುಂಟತನ ಶುರುಮಾಡಿದರೇ, ಇನ್ನು ಪ್ರವೇಶ ಖಂಡಿತಾ ಸಿಗುವುದಿಲ್ಲ ಎಂದುಕೊಂಡರು. ಆದರೆ ಪ್ರವೇಶಕ್ಕೆ ಮಡಿಕೇರಿಯ ಪ್ರತಿಷ್ಠಿತ ಬ್ರಿಟಿಷರ ಶಿಫಾರಸ್ಸುಇತ್ತು. ಹುಡುಗರು ದಾಖಲಾದರು. ಎಲ್ಲರೂ ಬಿಳಿಯರೇ. ಇಬ್ಬರು ಮಾತ್ರ ಭಾರತೀಯರು. ಆದರೂ ಹಳೆಯ ಗುದ್ದು ಈ ಹುಡುಗರಿಗೆ ಸ್ಟಾರ್‌ಗಿರಿಯನ್ನು ತಂದುಕೊಟ್ಟಿತ್ತು. ಬಿಷಪ್ ಕಾಟನ್ ಎಂದರೆ ಬ್ರಿಟಿಷ್ ಶಿಸ್ತಿಗೆ ಹೆಸರುವಾಸಿಯಾಗಿದ್ದ ಶಾಲೆ. ಆದರೆ ಈ ಹುಡುಗರು ತಮ್ಮ ಎಂದಿನ ತುಂಟತನವನ್ನು ಇಲ್ಲೂ ಪ್ರದರ್ಶನ ಮಾಡತೊಡಗಿದರು. ಗೋಡೆ ಹಾರಿ ಸೈಕಲ್ ಸವಾರಿ ಮಾಡುತ್ತಿದ್ದರು. ಪೇಟೆ ಸುತ್ತುತ್ತಿದ್ದರು. ಡ್ಯಾನ್ಸ್ ಪಾರ್ಟಿಗಳಿಗೆ ಹೋಗುತ್ತಿದ್ದರು. ಪ್ರಿನ್ಸಿಪಾಲರು ಹುಡುಗರು ಕೆಟ್ಟುಹೋಗುತ್ತಿದ್ದಾರೆ. ಹೀಗೆ ಮುಂದುವರಿದರೆ ಅವರ ಭವಿಷ್ಯ ಕತ್ತಲಾಗಲಿದೆ. ಭೂಮಿಗೆ ಭಾರವಾಗಿ ಬದುಕುವವರಾಗುತ್ತಾರೆ ಎಂದು ಪೋಷಕರಿಗೆ ಖಾರವಾಗಿ ಪತ್ರ ಬರೆದರು. ಪೋಷಕರು ಮಕ್ಕಳು ತಮ್ಮ ಪ್ರತಿಷ್ಠೆಯನ್ನು ಮಣ್ಣುಪಾಲು ಮಾಡಿದರು ಎಂದು ಕೊರಗಿದರು. ಬೆಂಗಳೂರಿಗೆ ಬಂದು ಬುದ್ಧಿ ಹೇಳಿ ಹೋದರು.ಆದರೇನು ಬಂತು? ಅಣ್ಣತಮ್ಮಂದಿರು ಸುಧಾರಿಸಲಿಲ್ಲ. ತುಂಟತನದೊಂದಿಗೇ ಶಾಲೆಯ ಆಟ-ಪಾಟ-ಓಟಗಳಲ್ಲಿ ಹೆಸರು ಮಾಡಿದ್ದರು. ಪ್ರಿನ್ಸಿಪಾಲರು ಒಮ್ಮೆ ಇವರ ಓದು ಮುಗಿದರೆ ಸಾಕು ಎಂದು ಗೊಣಗುತ್ತಿದ್ದರು. ಆದರೆ ಕಾಲ ಏನನ್ನು ತಾನೇ ಬದಲು ಮಾಡದು? ಭಾರತೀಯರಿಗೆ ಪ್ರವೇಶವಿಲ್ಲ ಎಂಬ ನಿಯಮದ ಕಾಲೇಜಿಗೆ ಮುಂದೆ ಭಾರತೀಯರೇ ಘನತೆಯನ್ನು ತಂದರು. ಯಾವ ಹುಡುಗರನ್ನು ಭೂಮಿಗೆ ಭಾರವಾಗುವವರು ಎಂದುಕೊಂಡಿದ್ದರೋ ಅದೇ ಹುಡುಗರನ್ನು ಮುಂದೆ ಅದೇ ಪ್ರಿನ್ಸಿಪಾಲರು ನಮ್ಮ ಶಾಲೆಯ ಹೆಮ್ಮೆಯ ವಿದ್ಯಾರ್ಥಿಗಳು ಎಂದು ಎದೆಯುಬ್ಬಿಸಿ ಹೇಳುವ ಕಾಲವೂ ಬಂತು.ಆ ಹುಡುಗರು ಯಾರೆಂದುಕೊಂಡಿರಿ? ಅವರಲ್ಲಿ ಒಬ್ಬ ಬ್ರಿಟಿಷ್ ಆರ್ಮಿಯ ರೆಜಿಮೆಂಟ್ ಅಧಿಕಾರಿಯಾಗಿ, ಮುಂದೆ ನೇತಾಜಿ ಸೇನೆಯಲ್ಲಿ ಕರ್ನಲ್ ಆಗಿ ಬಲಿದಾನ ಮಾಡಿದ ಪೊನ್ನಪ್ಪ. ಇನ್ನೊಬ್ಬರು ಮಹಾಯೋಧ ಜನರಲ್ ತಿಮ್ಮಯ್ಯ. ಕೊಡಗಿನ ಜನರ ಪ್ರೀತಿಯ ಡುಬ್ಬು. ಮಿಲಿಟರಿಯ ಅಕ್ಕರೆಯ ಟಿಮ್ಮಿ.

ಮನೆಯಲ್ಲಿ ಸುಖವೈಭೋಗ, ಬಾಯಲ್ಲಿ ಚಿನ್ನದ ಚಮಚ. ಹೊರನೋಟಕ್ಕೆ ಬ್ರಿಟಿಷ್ ಸಂಸ್ಕೃತಿಯ ಮೋಹಿ. ಆದರೆ ಆಂತರ್ಯದಲ್ಲಿ ಅಪ್ಪಟ ಕೊಡವ ಸಂಪ್ರದಾಯವಾದಿ. ಸಂದಿಗ್ಧ ಪರಿಸ್ಥಿತಿಯಲ್ಲಿ ಸ್ಥಿತಪ್ರಜ್ಞ. ಸೈನಿಕರ ಸ್ನೇಹಿತ ಮತ್ತು ತಂದೆ-ತಾಯಿ-ಗುರು ಎಲ್ಲವೂ. ಸಾಧಾರಣ ಸೈನಿಕನನ್ನೂ ಬಾಯ್ ಎನ್ನದೆ ಜಂಟಲ್ ಮ್ಯಾನ್ ಎಂದು ಕರೆಯುವ ಹಿರಿಯ. ಅಧಿಕಾರಿಯಾದರೂ ಯೋಧರೊಡನೆ ತೆರಳುವ ದೊಡ್ಡತನ. ಜನರಲ್ ಎಂಬ ಅಹಮ್ಮುಗಳನ್ನು ಬಿಟ್ಟು ಸೈನಿಕರೊಡನೆ ತಮಾಷೆ ಮಾತಾಡುವ ಆಪ್ತ. ಸಾಕ್ಷಾತ್ ಬ್ರಹ್ಮಗಿರಿಯೇ ಎದ್ದುಬಂದಂಥಾ ಶರೀರ. ಕಾರ್ಯದಲ್ಲಿ ರಾಜನಂಥಾ ಗಾಂಭೀರ್ಯ.ಇವಿಷ್ಟು ಹೊರನೋಟಕ್ಕೆ ಕಾಣುವ ತಿಮ್ಮಯ್ಯ. ಆದರೆ ಪ್ರಾಮಾಣಿಕವಾದ ಒಬ್ಬ ವ್ಯಕ್ತಿ ಉನ್ನತ ಹುದ್ದೆಯಲ್ಲಿದ್ದರೂ ಎಷ್ಟೊಂದು ಪಾಡುಪಡಬಲ್ಲ ಎಂಬುದಕ್ಕೆ ಜನರಲ್ ತಿಮ್ಮಯ್ಯನವರ ಬದುಕು ಒಂದು ಉದಾಹರಣೆ. ಸದಾ ದೇಶದ ಸೈನ್ಯ, ಸೈನಿಕರ ಬಗ್ಗೆ ಧ್ಯಾನಿಸಿದವನಿಗೆ ಸಿಕ್ಕಿದ್ದು ಸದಾ ಅವಮಾನ, ಕಿರಿಕಿರಿಗಳು. ಮಂದಬುದ್ಧಿಯ ಆಡಳಿತದಿಂದ ಒಬ್ಬ ಪ್ರತಿಭಾನ್ವಿತ, ದೇಶಭಕ್ತ ಯೋಧ ತನ್ನ ಕಣ್ಣಮುಂದೆ ನನ್ನ ಸೈನಿಕರು ಸಾಯುವುದನ್ನು ನೋಡಲಾರೆ ಎಂದು ವಿದೇಶಕ್ಕೆ ಹೊರಟುಹೋದ. ತನ್ನ ಕನಸ್ಸಿನ ಸೈನ್ಯ ಕಟ್ಟಲೂ ಆ ಯೋಧನಿಗೆ ಆಡಳಿತ ಬಿಡಲಿಲ್ಲ. ಮುಂದೆ ಅವರ ಅನುಪಸ್ಥಿತಿ ದೇಶಕ್ಕೆ ಮುಳುವಾಗಿ ಕಂಡಿತು. ಅದು ಇತಿಹಾಸ.ತಿಮ್ಮಯ್ಯನವರು ಶ್ರೇಷ್ಠ ಎನಿಸುವುದು ಕೇವಲ 60ರ ದಶಕದ ತಿಮ್ಮಯ್ಯ ಎಪಿಸೋಡ್‌ನ ಕಾರಣಕ್ಕೆ ಮಾತ್ರ ಅಲ್ಲ. ಮೊದಲ ಪಾಕಿಸ್ತಾನ ಯುದ್ಧದ ಸಮಯದಲ್ಲಿ ಅವರು ಮೆರೆದ ಸಾಹಸವನ್ನು ನಮ್ಮ ದೇಶವೇನು ಸಮ ವಿಶ್ವವೇ ಬೆರಗಿನಿಂದ ನೋಡಿತು.1948ನೇ ಇಸವಿಯ ಬೇಸಿಗೆ. ಜಮ್ಮು-ಕಾಶ್ಮೀರಕ್ಕೆ ಪಾಕಿಸ್ತಾನ ಸೈನ್ಯವನ್ನು ನುಗ್ಗಿಸಿತ್ತು.

ಬುಡಕಟ್ಟು ಜನರನ್ನು ಪ್ರಚೋದಿಸಿ ಭಾರತದ ವಿರುದ್ಧ ಛೂಬಿಡಲಾಗಿತ್ತು. ಗೆರಿ ಯುದ್ಧತಂತ್ರ, ಪ್ರತಿಕೂಲ ಹವಾಮಾನ, ಜೊತೆಗೆ ಭಾರತೀಯ ಸೈನ್ಯದಲ್ಲಿ ಸಾಕಷ್ಟು ಯೋಧರು ಮತ್ತು ಯುದ್ಧಸಾಮಗ್ರಿಗಳ ಕೊರತೆ. ಪೂರ್ವ ತಯಾರಿಯೂ ಇಲ್ಲ. ತಿಮ್ಮಯ್ಯ ಹೆಚ್ಚುವರಿ ಸೈನ್ಯಕ್ಕೆ ದೆಹಲಿಗೆ ಬೇಡಿಕೆ ಇಟ್ಟರು. ಮಂತ್ರಿಮಂಡಳ ಎಂದಿನಂತೆ ಉದಾಸೀನ ಮಾಡಿತು. ಇನ್ನು ಉಳಿದಿರುವುದು ತಂತ್ರಮಾರ್ಗವೊಂದೇ ಎನ್ನುವುದನ್ನು ತಿಮ್ಮಯ್ಯ ಅರ್ಥಮಾಡಿಕೊಂಡರು.

ಮುಖಾಮುಖಿಯಾಗುವುದಕ್ಕಿಂತ ದೊಮ್ಮಾಲ್-ಮುಜಫರಾಬಾದ್ ಕಡೆಯಿಂದ ನುಗ್ಗುವುದೊಂದೇ ಪರಿಹಾರ ಎಂದುಕೊಂಡರು. ಜೊಜಿಲಾಕಣಿವೆಯನ್ನು ವಶಪಡಿಸಿಕೊಂಡರೆ ಮಾತ್ರ ಭಾರತಕ್ಕೆ ಲೇಹ್-ಲಡಾಕ್‌ಗಳು ಉಳಿಯುತ್ತವೆ ಎಂಬುದು ತಿಮ್ಮಯ್ಯನವರಿಗೆ ಗೊತ್ತಿತ್ತು. ಆದರೆ ಅದು ಕಷ್ಟದ ಕೆಲಸ. ಜೋಜಿಲಾ 11000 ಅಡಿ ಎತ್ತರದಲ್ಲಿತ್ತು. ಟ್ಯಾಂಕರುಗಳನ್ನು ಹತ್ತಿಸುವುದು ಸಾಧ್ಯವಿಲ್ಲದ ಮಾತು. ಆದರೆ ತಿಮ್ಮಯ್ಯ ಸೈನಿಕರಿಗೆ ಅದು ಸಾಧ್ಯ ಎಂದು ಧೈರ್ಯ ತುಂಬಿದರು. ಎಲ್ಲರೂ ಒಮ್ಮೆ ಬೆಚ್ಚಿಬಿದ್ದರು. ಏಕೆಂದರೆ ಟ್ಯಾಂಕರು ಏರದ ಜಾಗದಲ್ಲಿ ಸುಮಾರು 450 ಕಿ.ಮೀ ದೂರ ಗುಟ್ಟಿನಲ್ಲಿ ನಮ್ಮ ಸೈನ್ಯ ಸಾಗಬೇಕಿತ್ತು. ಇದುವರೆಗೆ ಅಂಥ ಸಾಹಸ ಪ್ರಪಂಚದಲ್ಲೆಲ್ಲೂ ನಡೆದಿಲ್ಲ. ನಡೆಯಲು ಸಾಧ್ಯವಿಲ್ಲ ಎಂದು ಕೆಲವರು ಅಡ್ಡಮಾತು ಆಡಿದರು. ಆದರೆ ತಿಮ್ಮಯ್ಯ ಮುನ್ನುಗ್ಗುವಂತೆ ಆಜ್ಞಾಪಿಸಿದರು. ಗುರಿ ಮುಟ್ಟಿದರು. ಲೇಹ್ ವಶವಾಯಿತು. ಇಂದಿಗೂ ಈ ಘಟನೆ ವಿಶ್ವದ ಸಮರ ಇತಿಹಾಸದಲ್ಲಿ ಸ್ಮರಣೀಯ ದಾಖಲೆ. ಇದರ ಸುದ್ದಿಯನ್ನು ಕೇಳಿದ ಪ್ರಪಂಚದ ಹಲವು ಮಿಲಿಟರಿ ಮುಖಂಡರು ಮೂಗಿನ ಮೇಲೆ ಬೆರಳಿಟ್ಟರು. ಲೇಹ್‌ನಲ್ಲಿ ಹಳೆಯದಾಗಿದ್ದ ವಿಮಾನ ನಿಲ್ದಾಣವನ್ನು ದುರಸ್ತಿ ಮಾಡಿಸಿದರು.ಅಂದು ತಿಮ್ಮಯ್ಯ ನೆಟ್ಟ ಭಾರತದ ಧ್ವಜ ಇಂದಿಗೂ ಲೇಹ್ನಲ್ಲಿ ಹಾರುತ್ತಿದೆ. ತಿಮ್ಮಯ್ಯರ ಈ ವಿಜಯದಿಂದ ಅವರು ವಿಶ್ವಾದ್ಯಂತ ಹೆಸರಾದರು.

ತಿಮ್ಮಯ್ಯನವರ ನಿರ್ಧಾರಗಳನ್ನು ಹತ್ತಿರದಿಂದ ಕಂಡಿದ್ದ ವಿಶ್ವಸಂಸ್ಥೆ, 1953ರಲ್ಲಿ ಕೊರಿಯಾ ಬಿಕ್ಕಟ್ಟನ್ನು ನಿಭಾಯಿಸಲು ತಟಸ್ಥ ದೇಶಗಳ ಪರವಾಗಿ ತಿಮ್ಮಯ್ಯನವರನ್ನು ದೂತರನ್ನಾಗಿ ಕಳುಹಿಸಬೇಕೆಂದು ಸರ್ಕಾರವನ್ನು ಕೇಳಿಕೊಂಡಿತು. ಕೊರಿಯಾದ ಇತ್ತಂಡಗಳ ಪರವಾಗಿ ಬಲಾಢ್ಯ ದೇಶಗಳಿದ್ದವು. ಸುಮಾರು ಒಂದೂವರೆ ಲಕ್ಷ ಯುದ್ಧ ಕೈದಿಗಳ ಸಮಸ್ಯೆಯನ್ನು ಜಗತ್ತು ನಿಭಾಯಿಸಲಾರದೆ ಒದ್ದಾಡುತ್ತಿತ್ತು. ಆದರೆ ತಿಮ್ಮಯ್ಯ ಅದನ್ನು ಭಾರತೀಯ ರಾಜಿ ತೀರ್ಮಾನ ಶೈಲಿಯಲ್ಲಿ ಮುಗಿಸಿ ಬೆಟ್ಟದಂಥ ಸಮಸ್ಯೆಯನ್ನು ಕರಗಿಸಿದರು. ಇದನ್ನು ಮೆಚ್ಚಿದ ಅಮೆರಿಕ ಅಧ್ಯಕ್ಷ ಐಸೆನ್ ಹೋವರ್ ‘ಸೂಕ್ಷ್ಮವಾದ ಸಮಸ್ಯೆಯನ್ನು ನಿಭಾಯಿಸಿದ ತಿಮ್ಮಯ್ಯ ಚಾಲಾಕಿ’ ಎಂದು ಬಣ್ಣಿಸಿದರು. ಬ್ರಿಟನ್ನಿನ ವಿದೇಶಾಂಗ ಕಾರ್ಯದರ್ಶಿ ‘ಇದು ತಾಳ್ಮೆಯ ಮತ್ತು ಚಮತ್ಕಾರಿ ನಡೆ’ ಎಂದು ಭಾರತದ ಬೆನ್ನುತಟ್ಟಿದರು. ಈ ಮೂಲಕ ಇಡೀ ವಿಶ್ವ ಭಾರತವನ್ನು ನೋಡಿತು. ತಿಮ್ಮಯ್ಯನವರ ಸಾಧನೆಯನ್ನು ಪರಿಗಣಿಸಿದ ಸರ್ಕಾರ ಪದ್ಮಭೂಷಣವನ್ನು ನೀಡಿ ಸನ್ಮಾನಿಸಿತು.1956ರಲ್ಲಿ ವೆಸ್ಟರ್ನ್ ಕಮಾಂಡಿನ ಅಧಿಕಾರ ವಹಿಸಿಕೊಂಡ ತಿಮ್ಮಯ್ಯ ನಾಗಾಗಳ ಮನಸ್ಸನ್ನು ಕದ್ದು ಸ್ನೇಹ ಸಂಪಾದಿಸಿದರು.

ಈಶಾನ್ಯ ರಾಜ್ಯಗಳನ್ನು ಹತ್ತಿರ ತರುವ ಉದ್ದೇಶದಿಂದ ಕುಮಾವೂನಿಗಳ ಪಡೆಯನ್ನು ಕಟ್ಟಿದರು. ಆಗಲೇ ತಿಮ್ಮಯ್ಯನವರಿಗೆ ಚೀನಾ ಕಡೆಯಿಂದ ಏನೋ ನಡೆಯುತ್ತಿದೆ ಎಂಬ ವಾಸನೆ ಹೊಡೆಯಲಾರಂಭಿಸಿತ್ತು. ಈಶಾನ್ಯ ರಾಜ್ಯಗಳಲ್ಲಿ ನೆಹರೂ ಯುಗದಲ್ಲಿ ಏನೇನು ಸುಧಾರಣೆಗಳಾದವೋ ಅವೆಲ್ಲವೂ ತಿಮ್ಮಯ್ಯನವರ ಸಾಧನೆಗಳು. ತಿಮ್ಮಯ್ಯನವರು ವೆಸ್ಟರ್ನ್ ಕಮಾಂಡಿಗೆ ವರ್ಗವಾಗದೇ ಇರುತ್ತಿದ್ದರೆ ಇಂದು ಈಶಾನ್ಯ ರಾಜ್ಯಗಳು ಹೀಗಿರುತ್ತಿರಲಿಲ್ಲ ಎಂಬುದನ್ನು ಇಂದಿಗೂ ಮಿಲಿಟರಿ ಅಧಿಕಾರಿಗಳು, ರಕ್ಷಣಾ ತಜ್ಞರು ಹೇಳುತ್ತಾರೆ ಎಂದರೆ ತಿಮ್ಮಯ್ಯನವರ ಕಾರ್ಯವನ್ನು ಅಳೆಯಬಹುದು. 1957ರಲ್ಲಿ ತಿಮ್ಮಯ್ಯ ಚೀಫ್ ಆಫ್ ಆರ್ಮಿ ಸ್ಟಾಫ್ ಅಗಿ ಅಧಿಕಾರ ವಹಿಸಿಕೊಂಡರು. ನೂತನ ಜನರಲ್ ಆದ ತಿಮ್ಮಯ್ಯನವರ ತಲೆಯಲ್ಲಿ ಚೀನಾ ಅಪಾಯ ಒಂದೇ ಸಮನೆ ಗಿರಕಿ ಹೊಡೆಯುತ್ತಿತ್ತು. ಚೀನಾವನ್ನು ಎದುರಿಸಲೆಂದೇ ಒಳಗೊಳಗೇ ಕಾರ್ಯತಂತ್ರಗಳನ್ನು ರೂಪಿಸತೊಡಗಿದರು. ಕುಮಾವೂನ್ ರೆಜಿಮೆಂಟನ್ನು ಬಲಪಡಿಸಿದರು. ವಿದೇಶಗಳನ್ನು ಸುತ್ತಿಬಂದರು. ಇಂಗ್ಲೆಂಡಿಗೆ ತೆರಳಿ ಆಗಿನ ಕಾಲದಲ್ಲಿ ಹಿಮಾಲಯ ಏರಿದ್ದ ಸರ್ ಜಾನ್ ಹಂಟ್ ಅವರನ್ನು ಭೇಟಿಯಾಗಿ ಬಂದರು. ಹಿಮಪರ್ವತಗಳನ್ನು ಏರುವ ತರಬೇತಿ ಪಡೆದರು. ಸ್ಕೀಯಿಂಗ್ ಉಪಕರಣ, ಯುದ್ಧ ಉಡುಪುಗಳ ಬಗ್ಗೆ ತಜ್ಞತೆ ಪಡೆದರು.

ಮರಳಿ ಬಂದವರು ದೇಶದ ಎಲ್ಲಾ ವಿಶ್ವವಿದ್ಯಾಲಯಗಳೂ ಸೇರಿದಂತೆ 200 ಮೌಂಟನೀರಿಂಗ್ ಮತ್ತು ಸ್ಕೀಯಿಂಗ್ ಕ್ಲಬ್‌ಗಳನ್ನು ತೆರೆದರು. ಹಿಮಾಚ್ಛಾದಿತ ಪ್ರದೇಶಗಳಲ್ಲಿ ಯುದ್ಧಮಾಡಲು ಮತ್ತಷ್ಟು ತಿಳಿಯುವ ಆವಶ್ಯಕತೆ ಇದೆ ಎಂದು ಅವಕಾಶಕ್ಕಾಗಿ ತಿಮ್ಮಯ್ಯ ಎದುರುನೋಡುತ್ತಿದ್ದರು. ಅದೇ ವರ್ಷ ರೋಮಿನಲ್ಲಿ ಒಲಂಪಿಕ್ ನಡೆಯುತ್ತಿತ್ತು. ಶೀತಪ್ರದೇಶದಲ್ಲಿ ಕ್ರೀಡಾಪಟುಗಳು ದೇಹದ ಸ್ಥಿರತೆಯನ್ನು ಹೇಗೆ ಕಾಪಾಡಿಕೊಳ್ಳುತ್ತಾರೆ ಎಂಬುದನ್ನು ನೋಡಲು ಸ್ವತಃ ರೋಮ್ಗೆ ತೆರಳಿದರು. ಈ ಎಲ್ಲಾ ತಯಾರಿಗಳನ್ನು ತಿಮ್ಮಯ್ಯ ಕೇವಲ ಸಂಶಯದ ದೃಷ್ಟಿಯಿಂದ ಮಾಡಿರಲಿಲ್ಲ. 1950ರ ಹೊತ್ತಿಗಾಗಲೇ ಚೀನಾ ಭಾರತದ ಗಡಿಯೊಳಗೆ ಮುಂದುವರಿಯುವ ಲಕ್ಷಣಗಳು ಗೋಚರಿಸುತ್ತಿದ್ದವು.

ರಾಜಕೀಯ ಮುಖಂಡರು ಕಣ್ಣಿಲ್ಲದವರಾದಮೇಲೆ ಮೇಲೆ ನಮ್ಮ ದೇಶವನ್ನು ಸೈನ್ಯವೊಂದು ಮಾತ್ರ ರಕ್ಷಣೆ ಮಾಡಬಲ್ಲದು ಎಂದು ತಿಮ್ಮಯ್ಯ ನಂಬಿದ್ದರು. ಚೀನಾದ ಚಟುವಟಿಗಳನ್ನು ಕೂಲಂಕಷವಾಗಿ ಗಮನಿಸುತ್ತಿದ್ದ ತಿಮ್ಮಯ್ಯನವರಿಗೆ ಅಪಾಯ ಕಟ್ಟಿಟ್ಟ ಬುತ್ತಿ ಎಂಬುದು ತಿಳಿದುಹೋಗಿತ್ತು. ಅದೇ ಹೊತ್ತಲ್ಲಿಕೈಲಾಸ ಮಾನಸಸರೋವರದಲ್ಲಿ ಸ್ವಾಮಿ ಪ್ರಣವಾನಂದ ಎಂಬವರು ಚೀನಾ ಮುನ್ನುಗ್ಗುತ್ತಿದೆ ಎಂದು ಸರ್ಕಾರಕ್ಕೆ ಎಚ್ಚರಿಕೆ ಕೊಡುತ್ತಿದ್ದರು. The Current Weekly ಹಿಮಾಲಯದಲ್ಲಿ ಚೀನಾದ ಹಸ್ತಕ್ಷೇಪವನ್ನು ಎಚ್ಚರಿಸಿ ಸರಣಿ ಲೇಖನಗಳನ್ನು ಪ್ರಕಟಿಸಿತು. ಆದರೆ ಭಾರತೀಯ ಕಮ್ಯುನಿಸ್ಟರು ಅದರ ವಿರುದ್ಧ ವಾಕ್ಸಮರಗಳನ್ನು ಮಾಡುತ್ತಿದ್ದರು. ಅದಕ್ಕೆ ಹೆದರಿದಂತೆ ಕಂಡ ನೆಹರೂ ಬಾಯಿಮುಚ್ಚಿಕೊಂಡು ಕುಳಿತಿದ್ದರು. ಆಗ ಕಮ್ಯುನಿಸ್ಟರ ವಿರುದ್ಧ ದೇಶದಲ್ಲಿ ಗುಡುಗಿದವರು ಒಬ್ಬನೇ ಒಬ್ಬ ಯೋಧ ಜನರಲ್ ಕಾರ್ಯಪ್ಪ. 1959ರಲ್ಲಿ ‘ದೇಶಕ್ಕೆ ಶತ್ರುಗಳು ಪಾಕಿಸ್ತಾನಿಗಳಲ್ಲ. ಭಾರತದೊಳಗಿನ ಕಮ್ಯುನಿಸ್ಟರು’ ಎಂದಿದ್ದರು ಮಾಜಿ ಕಮಾಂಡರ್ ಇನ್ ಚೀಫ್ ಜನರಲ್ ಕಾರ್ಯಪ್ಪ. ಅವರ ಹೇಳಿಕೆ ತಿಮ್ಮಯ್ಯನವರ ಶಕ್ತಿಯನ್ನು ಹೆಚಿಸಿತು. ಸರ್ಕಾರಕ್ಕೆ ಸುದೀರ್ಘವಾದ ವರದಿಯೊಂದನ್ನು ತಯಾರು ಮಾಡಿ ಕಳುಹಿಸಿದರು. ಆದರೆ ನೆಹರೂ ಮತ್ತು ಕೃಷ್ಣ ಮೆನನ್ ಜೋಡಿ ಆ ವರದಿಯ ಬಗ್ಗೆ ತಲೆಕೆಡಿಸಿಕೊಳ್ಳಲಿಲ್ಲ. ಮೆನನ್ ಅಂತೂ ತಿಮ್ಮಯ್ಯನವರನ್ನು ‘ಬ್ರಿಟಿಷ್ ಕಾಲದ ಮನುಷ್ಯ’ ಎಂದು ಹಂಗಿಸಿದರು. ತಿಮ್ಮಯ್ಯನವರ ವರದಿಯನ್ನಿಟ್ಟುಕೊಂಡು ರಾಜಗೋಪಾಲಾಚಾರಿಯವರು ನೆಹರೂ ವಿರುದ್ಧ ಹೋರಾಟ ಸಂಘಟಿಸಿದರು. ಅದಕ್ಕೂ ನೆಹರೂ ಕ್ಯಾರೇ ಅನ್ನಲಿಲ್ಲ. ಕೊನೆಗೆ ಬೇಸತ್ತರಾಜಗೋಪಾಲಾಚಾರಿ ಸ್ವತಂತ್ರ ಪಾರ್ಟಿ ಕಟ್ಟಿದರು. ನೆಹರೂರ ಈ ಉದಾಸೀನವನ್ನು ಪಾಕಿಸ್ತಾನ ಕೂಡ ಹಂಗಿಸಿ ಮಾತನಾಡಿತು. ‘ನಾವಿಬ್ಬರೂ ಕೂಡಿ ರಕ್ಷಣಾ ಒಪ್ಪಂದ ಮಾಡಿಕೊಳ್ಳೋಣ’ ಎಂದು ಕಾಲೆಳೆಯಿತು. ಆ ಮಾತೂ ಕೂಡಾ ನೆಹರೂಗೆ ನಾಟಲಿಲ್ಲ.ಇತ್ತ ತಿಮ್ಮಯ್ಯ ಬೇಸತ್ತುಹೋದರು.

3000 ಜನ ದೆಹಲಿಯ ವಿದ್ಯಾರ್ಥಿಗಳು ತಿಮ್ಮಯ್ಯನವರನ್ನು ಭೇಟಿಯಾಗಿ ನಮ್ಮನ್ನು ಗಡಿಗೆ ಕಳುಹಿಸಿ ಎಂದು ಬೇಡಿಕೊಂಡರು. ಅಂಥ ಸಂದರ್ಭವನ್ನು ಕೂಡ ತಿಮ್ಮಯ್ಯ ದುರುಪಯೋಗಪಡಿಸಿಕೊಳ್ಳದೆ ವಿದ್ಯಾರ್ಥಿಗಳನ್ನು ಸಮಾಧಾನಪಡಿಸಿ ಕಳುಹಿಸಿದರು. ಇನ್ನು ತನ್ನ ದೇಶವನ್ನು, ಸೈನ್ಯವನ್ನು ರಕ್ಷಣೆ ಮಾಡಲು ದೇವರಿಂದಲೂ ಸಾಧ್ಯವಿಲ್ಲ ಎಂದ ತಿಮ್ಮಯ್ಯ ನೇರ ನೆಹರೂ ಕಚೇರಿಗೆ ತೆರಳಿ ರಾಜೀನಾಮೆ ಪತ್ರವನ್ನು ಒಗೆದು ಬಂದರು. ಆಗ ಮಾತ್ರ ನೆಹರೂ ಬೆವತುಹೋದರು. ದೇಶಾದ್ಯಂತ ತಿಮ್ಮಯ್ಯ ಪರ ಧ್ವನಿ ಏಳುತ್ತಿತ್ತು. ನೆಹರೂ ಈಗ ಬೇಡಿಕೆ ಪರಿಶೀಲಿಸುವ ನಾಟಕವಾಡತೊಡಗಿದರು. ತಿಮ್ಮಯ್ಯ ಇನ್ನೆರಡು ವರ್ಷದಲ್ಲಿ ನಿವೃತ್ತರಾಗುತ್ತಾರೆ ಎಂಬ ಸಂಗತಿ ತಿಳಿದಿದ್ದ ನೆಹರೂ ನಾಜೂಕಿನಿಂದ ಅವರನ್ನು ಸಾಗಹಾಕಿದರು. ತಿಮ್ಮಯ್ಯ ರಾಜೀನಾಮೆ ಹಿಂತೆಗೆದುಕೊಂಡರು. ಚೀನಾ ಕೂಡಾ ಅದನ್ನು ಕಾಯುತ್ತಿತ್ತು. ತಿಮ್ಮಯ್ಯ ಜನರಲ್ ಆಗಿರುವವರೆಗೆ ಭಾರತ ಅಪಾಯಕಾರಿ ಎಂದು ಚೀನಾ ಭಾವಿಸಿ ಸಮಯ ಕಾಯುತ್ತಿತ್ತು. ಮುಂದೆ ತಿಮ್ಮಯ್ಯ ನಿವೃತ್ತರಾದರು. ನಡೆಯಬಾರದ್ದು ನಡೆಯಿತು.9-4-1961ರ ಶಂಕರ್ಸ್ ವೀಕ್ಲಿ ತಿಮ್ಮಯ್ಯನವರ ವ್ಯಂಗ್ಯಚಿತ್ರವನ್ನು ಬಿಡಿಸಿ ಅವರಿಗೆ ಗೌರವಾರ್ಪಣೆ ಸಲ್ಲಿಸಿ ‘ನಮ್ಮ ದೇಶದ ದುರದೃಷ್ಟವೆಂದರೆ ಯೋಗ್ಯ ರಕ್ಷಣಾ ಸಚಿವರು ಸಿಗದೇ ಇದ್ದುದು. ತಿಮ್ಮಯ್ಯನವರೊಂದಿಗೆ ಮೆನನ್ ಕೈಜೋಡಿಸಿದ್ದಿದ್ದರೆ ನಮ್ಮ ಸೈನ್ಯವನ್ನು ಎದುರಿಸುವ ತಾಕತ್ತು ಜಗತ್ತಿನ ಯಾವ ಶಕ್ತಿಗೂ ಇರುತ್ತಿರಲಿಲ್ಲ. ತಿಮ್ಮಯ್ಯ ರಾಜಕೀಯ ಬಲಿಪಶುವಾದರು’ ಎಂದು ಬರೆಯಿತು. ಅಂದರೆ ತಿಮ್ಮಯ್ಯ ಸೈನ್ಯ ಬಿಟ್ಟೊಡನೆ ದೇಶಕ್ಕೆ ಚೀನಾದ ಅಪಾಯ ಮತ್ತು ಭಾರತದ ಸೋಲು ಖಚಿತ ಎಂಬುದು ತಿಳಿದುಹೋಗಿತ್ತು. ಮುಂದೆ ಚೀನಾ ಆಕ್ರಮಣ ಮಾಡಿದಾಗ ನೆಹರೂ ರೇಡಿಯೋದಲ್ಲಿ ನಮ್ಮ ಸೈನ್ಯ ಅಸಹಾಯಕ ಪರಿಸ್ಥಿತಿಯಲ್ಲಿದೆ ಎಂದು ಬಿಕ್ಕಿದ್ದರು. ತಿಮ್ಮಯ್ಯನವರ ಮಾತು ಕೇಳದೇ ಇದ್ದ ತಪ್ಪಿಗೆ ನೆಹರೂವೇನೋ ಬಿಕ್ಕಿದರು. ಆದರೆ ದೇಶ ಅದರಿಂದ ಬಹಳಷ್ಟನ್ನು ಕಳೆದುಕೊಂಡಿತ್ತು.ಆದರೆ ಕೃಷ್ಣ ಮೆನನ್ ತಮ್ಮ ಚಾಳಿ ಮುಂದುವರಿಸಿದರು.

ತಿಮ್ಮಯ್ಯನವರ ಬಗ್ಗೆ ನೆಹರೂಗೆ ಕಿವಿಯೂದುತ್ತಲೇ ಇದ್ದರು. ಈ ಮೆನನ್ ಎಂಥಾ ಮನುಷ್ಯನೆಂದರೆ, ಒಮ್ಮೆ ವಿಮಾನ ನಿಲ್ದಾಣದಲ್ಲಿ ತಮ್ಮೊಡನಿದ್ದ ಮಿಲಿಟರಿ ಅಧಿಕಾರಿಗಳೊಡನೆ ಮಾತಾಡುತ್ತಾ ಮೆನನ್ ಒಬ್ಬ ಅಧಿಕಾರಿಯ ಹೆಗಲ ಮೇಲೆ ಕೈ ಇಟ್ಟು ದೂರಕ್ಕೆ ಕರೆದುಕೊಂಡುಹೋದರು. ನೀನು ಉತ್ತಮ ಅಧಿಕಾರಿ, ನಿನಗೆ ಮಿಲಿಟರಿಯಲ್ಲಿ ಒಳ್ಳೆಯ ಭವಿಷ್ಯವಿದೆ ಎಂದು ಆತನನ್ನು ಉಬ್ಬಿಸಲು ನೋಡಿದರು. ಆ ತಿಮ್ಮಯ್ಯ ಇzನ, ಅವನು ಹೇಗೆ? ಎಂದು ದಾಳ ಹಾಕಿದರು. ಆಅಧಿಕಾರಿಗೆ ಉರಿದುಹೋಯಿತು. ಮುಖಕ್ಕೆ ಹೊಡೆದಂತೆ ‘ಅವರು ನನ್ನ ಮೇಲಧಿಕಾರಿ. ಅವರ ಬಗ್ಗೆ ಮಾತಾಡುವ ಅರ್ಹತೆ ನನಗಿಲ್ಲ’ ಎಂದು ಉತ್ತರಿಸಿದರು. ಆ ಚಾಲಾಕಿ ಅಧಿಕಾರಿ ಸ್ಯಾಮ್ ಮಾಣಿಕಶಾ ಈ ವಿಷಯವನ್ನು ಇಷ್ಟಕ್ಕೇ ಬಿಡಲಿಲ್ಲ. ಪತ್ರಕರ್ತರಿಗೆ ಸಂಗತಿಯನ್ನು ತಿಳಿಸಿಬಿಟ್ಟಿದ್ದರು. ಪುನಃ ಮೆನನ್ ಟೀಕೆಗೊಳಗಾದರು. ಮೆನನ್ ಇದರಿಂದ ಮತ್ತಷ್ಟು ಕುದಿಯತೊಡಗಿದರು. ಅದೇ ಹೊತ್ತಲ್ಲಿ ಅಮೆರಿಕನ್ ಲೇಖಕ ಇವಾನ್ಸ್ ತಿಮ್ಮಯ್ಯನವರ ಜೀವನಚರಿತ್ರೆಯನ್ನು ಬರೆಯಲು ಭಾರತಕ್ಕೆ ಬಂದಿದ್ದ. ಬಿಡುಗಡೆಗೆ ಮುನ್ನವೇ ಪುಸ್ತಕ ಸುದ್ದಿಯಾಗತೊಡಗಿತು. ಮೆನನ್ ಅದಕ್ಕೂ ಅಡ್ಡಗಾಲು ಹಾಕಿದರು. ತಿಮ್ಮಯ್ಯ ಸರಕಾರಿ ಮಾಹಿತಿಯನ್ನು ದಾಖಲಿಸಿದ್ದಾನೆ ಎಂದು ಬೊಬ್ಬೆ ಹಾಕತೊಡಗಿದರು. ಪುಸ್ತಕದ ಪರ ಪಾರ್ಲಿಮೆಂಟಿನಲ್ಲೂ ಚರ್ಚೆಯಾಯಿತು. ಆದರೆ ಪುಸ್ತಕ ಪ್ರಕಾಶನಕ್ಕೆ ತಿಮ್ಮಯ್ಯ ಅನುಮತಿ ಕೊಟ್ಟ ದಾಖಲೆಗಳಿರಲಿಲ್ಲ. ಇವಾನ್ಸ್ ಅಮೆರಿಕಾದಲ್ಲಿ ಪುಸ್ತಕ ಬಿಡುಗಡೆ ಮಾಡಿದರು. ಆದರೂ ಮೆನನ್ ತಿಮ್ಮಯ್ಯನವರನ್ನು ಬೆಂಬಿಡದೆ ಕಾಡಿದರು. ‘ತಿಮ್ಮಯ್ಯ 30-1-1961ರಂದು ಕ್ಷಿಪ್ರಕ್ರಾಂತಿ ನಡೆಸಿ ಲಿಮಿಟರಿ ಆಡಳಿತ (Coup D’Etat) ತರಲು ಸಂಚುಹೂಡಿದ್ದರು ಎಂದು ಸುದ್ದಿಹಬ್ಬಿಸಿದರು (INDIA CHINA WAR-NEVILLE MAXWELL).

ಅಷ್ಟರಹೊತ್ತಿಗೆ ಮೆನನ್ ಎಂಥ ಮನುಷ್ಯ ಎಂಬುದು ದೇಶಕ್ಕೆ ತಿಳಿದುಹೋಗಿತ್ತು. ಆತನ ಸಂಚು ಫಲಿಸಲಿಲ್ಲ. ವಿದೇಶದ ತಿಮ್ಮಯ್ಯ ಅಭಿಮಾನಿಗಳು ಮೆನನ್ ಮೇಲೆ ಒಂದು ಕಣ್ಣಿಟ್ಟೇ ಇದ್ದರು.ಮೈಕಲ್ ಬ್ರೇಚರ್ ಎಂಬ ವಿಶ್ವರಾಜಕೀಯದ ವಿಶ್ಲೇಷಣೆಗಾರ ಮತ್ತು ತಿಮ್ಮಯ್ಯ ಅಭಿಮಾನಿ ತನ್ನ India and World Politics ಪುಸ್ತಕದ ಸಿದ್ಧತೆಯಲ್ಲಿದ್ದಾಗ ಕೃಷ್ಣ ಮೆನನ್‌ರಲ್ಲಿ ತಿಮ್ಮಯ್ಯನವರ ಬಗ್ಗೆ ಮೊಚನು ಬಾಣಗಳ ಪ್ರಶ್ನೆಗಳನ್ನು ಎಸೆದರು. ಬ್ರೇಚರ್‌ನ ಯಾವ ಪ್ರಶ್ನೆಗೂ ಮೆನನ್ ಸರಿಯಾದ ಉತ್ತರವನ್ನು ಕೊಡದೆ ತಿಣುಕಾಡಿದರು. ತಿಮ್ಮಯ್ಯ ಮತ್ತು ಮೆನನ್ ನಡುವೆ ನಡೆದಿರುವುದನ್ನೆ ತಿಳಿದಿದ್ದ ಬ್ರೇಚರ್ ಅದನ್ನು ಪುಸ್ತಕದಲ್ಲಿ ಉಖಿಸಿ, ‘ತಿಮ್ಮಯ್ಯನವರ ಸಾಧನೆಯ ಬಗ್ಗೆ ಮೆನನ್ ಹೊಟ್ಟೆಯುರಿ ಪಡುತ್ತಿದ್ದಾರೆ. ಅವರು ಕೀಳರಿಮೆಯಿಂದ ಬಳಲುತ್ತಿದ್ದಾರೆ. ತಿಮ್ಮಯ್ಯ ಒಬ್ಬ ಶಾಂತಿದೂತ. ಸ್ವತಂತ್ರ ಭಾರತದಲ್ಲಿ ತಿಮ್ಮಯ್ಯನವರಿಗೆ ಸರಿಸಾಟಿಯಾದ ವ್ಯಕ್ತಿ ಮತ್ತೊಬ್ಬ ಇಲ್ಲ’ ಎಂದು ಬರೆಯುತ್ತಾರೆ. ಈ ಪುಸ್ತಕ ಪ್ರಕಟಣೆಯ ನಂತರ ಭಾರತದ ರಾಜಕಾರಣ ವಿದೇಶಿಯರಿಗೆ ತಮಾಷೆಯ ಸರಕಾಗುತ್ತದೆ.

ಇನ್ನೊಮ್ಮೆ ಆಚಾರ್ಯ ಕೃಪಲಾನಿ ಸಂಸತ್ತಿನಲ್ಲಿ ಮೆನನ್ ಮುಂದೆಯೇ ಅವರು ತಿಮ್ಮಯ್ಯನವರನ್ನು ನಡೆಸಿಕೊಂಡ ಬಗೆಯನ್ನು ಆಕ್ರೋಶಭರಿತರಾಗಿ ಮಾತಾಡುತ್ತಾ ಮೆನನ್ ಮುಖದ ನೀರಿಳಿಸುತ್ತಾರೆ.ಎಂಥಾ ವಿಪರ್ಯಾಸ ನೋಡಿ! ಅವೆ ನಡೆದು ಅರ್ಧ ಶತಮಾನದ ನಂತರ ಕೂಡಾ ತಿಮ್ಮಯ್ಯ ವಿಶ್ವಾದ್ಯಂತ ಮಹಾವ್ಯಕ್ತಿಯಾಗಿ ಗೌರವ ಕಾಪಾಡಿಕೊಂಡಿದ್ದಾರೆ. ಆದರೆ ಕೃಷ್ಣ ಮೆನನ್ ‘ತಿಮ್ಮಯ್ಯ ಎಪಿಸೋಡ್’ ನಿಂದ ಮಾತ್ರ ನೆನಪಿಗೆ ಬರುತ್ತಾರೆ. ಸ್ವಂತವೆನ್ನುವ ಐಡೆಂಟಿಟಿಯೇ ಇಲ್ಲದ ಮನುಷ್ಯರಾಗಿ ಮೆನನ್ ಕಾಣುತ್ತಾರೆ. ಮಹಾತ್ಮ ರಾಮನಿಗೂ ರಾಕ್ಷಸ ಮಾರೀಚನಿಗೂ ಇರುವ ವ್ಯತ್ಯಾಸದಂತೆ ಇವರಿಬ್ಬರು ಕಾಣುತ್ತಾರೆ.ಭಾರತ ತಿಮ್ಮಯ್ಯನವರನ್ನು ಸರಿಯಾಗಿ ನಡೆಸಿಕೊಳ್ಳದಿದ್ದರೂ ವಿಶ್ವಸಂಸ್ಥೆ ಅವರಿಗೆ ಯೋಗ್ಯ ಸ್ಥಾನವನ್ನು ನೀಡಿತು.
1964ರಲ್ಲಿ ವಿಶ್ವಸಂಸ್ಥೆ ತಿಮ್ಮಯ್ಯನವರನ್ನು ಸೈಪ್ರಸ್ ದೇಶದ ಸೇನಾ ಮುಖಂಡನಾಗಿ ನೇಮಕ ಮಾಡಿತು. ಆಂತರಿಕ ಹೋರಾಟದಿಂದ ಮತ್ತು ಗ್ರೀಕಿನ ಉಪಟಳದಿಂದ ಸೈಪ್ರಸನ್ನು ತಿಮ್ಮಯ್ಯ ರಕ್ಷಿಸಿದರು. ಹಲವು ದೇಶಗಳು ಅವರನ್ನು ಸೈನಿಕ ತರಬೇತಿಗಾಗಿ ಕರೆಸಿಕೊಂಡವು. ಇಸ್ರೇಲ್, ರಷ್ಯಾ, ಇಂಗ್ಲೆಂಡ್, ಈಜಿಪ್ಟ್‌ಗಳ ಸೈನ್ಯಕ್ಕೆ ಮಾರ್ಗದಶನ ಮಾಡಿದರು. ಇಂಥ ಭಾಗ್ಯ ಪಡೆದ ಭಾರತದ ಮೊಟ್ಟಮೊದಲ ಭಾರತೀಯ ಯೋಧ ನಮ್ಮ ಕೊಡಂದೇರ ಸುಬ್ಬಯ್ಯ ತಿಮ್ಮಯ್ಯ. ಬ್ರಿಟಿಷ್ ಸರ್ಕಾರ ಕೊಡಮಾಡುವ ಪ್ರತಿಷ್ಠಿತ Distinguished Service Order (DSO) ಪಡೆದ ಮೊದಲ ಭಾರತೀಯ ಜನರಲ್ ಕೆ. ಎಸ್. ತಿಮ್ಮಯ್ಯ.

1945ರಿಂದ 1965ರವರೆಗೆ ಭಾರತದಲ್ಲಿ ಮತ್ತು ವಿದೇಶದಲ್ಲಿ ಅತಿಹೆಚ್ಚು ಚಾಲ್ತಿಯಲ್ಲಿದ್ದ ಹೆಸರು ತಿಮ್ಮಯ್ಯನವರದ್ದು. ಇದು ಅವರ ಕ್ರಿಯಾಶೀಲತೆಗೆ ಸಾಕ್ಷಿ. ಸೈನಿಕ ಕಾರ್ಯಾಚರಣೆ ಸಮಯದಲ್ಲಿ ಹೆಡ್‌ಕ್ವಾರ್ಟರ್‌ಗಳಲ್ಲಿ ಕೂರದೆ ಸೈನಿಕರೊಂದಿಗೆ ತೆರಳಿದ ಏಕೈಕ ಭಾರತೀಯ ಜನರಲ್ ತಿಮ್ಮಯ್ಯ. ಆದರೆ ದೇಶಕ್ಕೆ ಗೌರವ ತಂದುಕೊಟ್ಟ, ಸೈನ್ಯವನ್ನು ಕಟ್ಟಿ ಬೆಳೆಸಿದ ಮಡಿಕೇರಿಯ ತಿಮ್ಮಯ್ಯನವರ ಮನೆ ‘ಸನ್ನಿಸೈಡ್’ ಇಂದಿಗೂ ತಿಮ್ಮಯ್ಯ 60ರ ದಶಕದಲ್ಲಿ ಅನುಭವಿಸಿದ ಅವಮಾನಕ್ಕೆ ಸಾಕ್ಷಿಯೋ ಎಂಬಂತೆ ಹರುಕುಮುರುಕಾಗಿ ನಿಂತಿದೆ. ತಿಮ್ಮಯ್ಯನವರ ಕುಟುಂಬಸ್ಥರು ಒಂದು ಕಾಲದಲ್ಲಿ ವೈಭವದಿಂದ ಮೆರೆದ ಆ ಮನೆಯನ್ನು ಸರ್ಕಾರಕ್ಕೆ ಬಿಟ್ಟುಕೊಟ್ಟಿದ್ದರು.ನಮ್ಮ ಸರ್ಕಾರ ಅದನ್ನು ಸ್ಮಾರಕ ಮಾಡಬಹುದಿತ್ತು, ಇಲ್ಲ ಮ್ಯೂಸಿಯಂ ಮಾಡಬಹುದಿತ್ತು. ಅದನ್ನೊಂದು ತೀರ್ಥಕ್ಷೇತ್ರದಂತೆ ಪರಿವರ್ತಿಸಬಹುದಿತ್ತು. ಆದರೆ ನಮ್ಮ ರಾಜ್ಯ ಸರ್ಕಾರ ಅದನ್ನು ಭ್ರಷ್ಟಾಚಾರದ ಗರ್ಭಗುಡಿಯಂತಿರುವ ಆರ್‌ಟಿಒ ಕಚೇರಿಯಾಗಿ ಮಾಡಿತು. ಜೀವನದುದ್ದಕ್ಕೂ ಪ್ರಾಮಾಣಿಕತೆ, ದೇಶಭಕ್ತಿ, ನೇರನುಡಿ, ಬಲಶಾಲಿ ಸೈನ್ಯ, ವಿಶ್ವದ ಶಾಂತಿಗೆ ಬದುಕು ಮುಡಿಪಿಟ್ಟ ಮಹಾತ್ಮನನ್ನು ನಾವು ನೋಡಿಕೊಂಡ ರೀತಿ ಇದು.

ಮಾರ್ಚ್ 31 ಭಾರತದ ಹೆಸರನ್ನು ವಿಶ್ವಕ್ಕೆ ಸಾರಿದ, ಭಾರತದ ಗೌರವವನ್ನು ಹೆಚ್ಚಿಸಿದ ಆ ಮಹಾಯೋಧನ ಜನ್ಮ ದಿನ. ದೇಶಭಕ್ತಿಯ ಪಾಠ ಹೇಳಿಕೊಡಲು ಶಾಲಾ-ಕಾಲೇಜುಗಳಿಗೆ ಸೈನಿಕರನ್ನು ಕಳುಹಿಸಿಕೊಡಬೇಕೆಂದು ಕೇಂದ್ರ ಸರ್ಕಾರ ಯೋಚಿಸುತ್ತಿರುವ ಸಂದರ್ಭದಲ್ಲಿ ಮಹಾಯೋಧ ತಿಮ್ಮಯ್ಯ ನೆನಪಾದರು!

Author: Anonymous but thanks to him from Jnanamukhi.