Keep in touch...

ನಿಮ್ಮ ಅಭಿಪ್ರಾಯ ಹಂಚಿಕೊಳ್ಳಿ - ನನ್ನ ಇ-ಮೇಲ್ : gshattigoudar@gmail.com ಮೊಬೈಲ್: +9199454 79292 (only SMS / WhatsApp)

Saturday 11 June 2016

ಸೈನಿಕರು ವಿವಿಗೆ ಹೋಗಿ ದೇಶಭಕ್ತಿ ಪಾಠ ಹೇಳಿಕೊಡಬೇಕಾದ ಪರಿಸ್ಥಿತಿ ಬಂದಿರುವಾಗ ಮಹಾಯೋಧ ತಿಮ್ಮಯ್ಯ ನೆನಪಾದರು!

Posted by : Guruprasad Hattigoudar
Mob: 9945479292

ಮಡಿಕೇರಿಯ ಶ್ರೀಮಂತ ದಂಪತಿಯೊಬ್ಬರು ಬೆಂಗಳೂರಿನ ಬಿಷಪ್ ಕಾಟನ್ ಶಾಲೆಯ ಪ್ರಿನ್ಸಿಪಾಲರೊಡನೆ ಮಾತನಾಡುತ್ತಾ ಕುಳಿತಿದ್ದರು. ಬ್ರಿಟಿಷರು ಮತ್ತು ಆಂಗ್ಲೋ ಇಂಡಿಯನ್ನರಿಗೆಂದೇ ಕಟ್ಟಲಾಗಿದ್ದ ಶಾಲೆಗೆ ಮಕ್ಕಳನ್ನು ಸೇರಿಸಲು ಬಂದಿದ್ದರು. ಎಂಥೆಂಥಾ ಶಿಫಾರಸ್ಸುಗಳಿದ್ದರೂ ಅದುವರೆಗೆ ಯಾವೊಬ್ಬ ಭಾರತೀಯನಿಗೂ ಅಲ್ಲಿ ಪ್ರವೇಶ ಸಿಕ್ಕಿರಲಿಲ್ಲ. ಹುಡುಗರಿಬ್ಬರು ಆಫೀಸಿನ ಹೊರಗೆ ಗೋಡೆಗೊರಗಿ ನಿಂತು ಬಿಳಿಯ ಹುಡುಗರನ್ನು ಬೆರಗುಗಣ್ಣುಗಳಿಂದ ನೋಡುತ್ತಿದ್ದರು. ದೇಸೀ ಹುಡುಗರನ್ನು ಯಾವುದೋ ಅನ್ಯಗ್ರಹಜೀವಿಗಳಂತೆ ನೋಡುತ್ತಾ ಬಂದ ಬಿಳಿಹುಡುಗರ ಒಂದು ತಂಡಕ್ಕೆ ಈ ದೇಸೀ ಅಣ್ಣತಮ್ಮಂದಿರನ್ನು ರೇಗಿಸಬೇಕೆನಿಸಿತು. ಒಬ್ಬ ಹುಡುಗ ಏನು ನೀಗ್ರೋಗಳನ್ನೂ ಇಲ್ಲಿ ಸೇರಿಸಿಕೊಳ್ಳುತ್ತಾರೋ? ಎಂದ. ಅಷ್ಟೇ, ಅಣ್ಣತಮ್ಮಂದಿರಿಬ್ಬರು ಆ ಬಿಳಿ ಹುಡುಗರ ಮೇಲೆ ಬಿದ್ದರು. ನೆಲಕ್ಕೆ ಬೀಳಿಸಿ ಗುದ್ದತೊಡಗಿದರು. ಗಲಾಟೆಯ ಸದ್ದಿಗೆ ಪ್ರಿನ್ಸಿಪಾಲರು ಹೊರಗೆ ಬಂದರು. ಪೋಷಕರಿಗೆ ಈ ಹುಡುಗರು ಇಲ್ಲೂ ತುಂಟತನ ಶುರುಮಾಡಿದರೇ, ಇನ್ನು ಪ್ರವೇಶ ಖಂಡಿತಾ ಸಿಗುವುದಿಲ್ಲ ಎಂದುಕೊಂಡರು. ಆದರೆ ಪ್ರವೇಶಕ್ಕೆ ಮಡಿಕೇರಿಯ ಪ್ರತಿಷ್ಠಿತ ಬ್ರಿಟಿಷರ ಶಿಫಾರಸ್ಸುಇತ್ತು. ಹುಡುಗರು ದಾಖಲಾದರು. ಎಲ್ಲರೂ ಬಿಳಿಯರೇ. ಇಬ್ಬರು ಮಾತ್ರ ಭಾರತೀಯರು. ಆದರೂ ಹಳೆಯ ಗುದ್ದು ಈ ಹುಡುಗರಿಗೆ ಸ್ಟಾರ್‌ಗಿರಿಯನ್ನು ತಂದುಕೊಟ್ಟಿತ್ತು. ಬಿಷಪ್ ಕಾಟನ್ ಎಂದರೆ ಬ್ರಿಟಿಷ್ ಶಿಸ್ತಿಗೆ ಹೆಸರುವಾಸಿಯಾಗಿದ್ದ ಶಾಲೆ. ಆದರೆ ಈ ಹುಡುಗರು ತಮ್ಮ ಎಂದಿನ ತುಂಟತನವನ್ನು ಇಲ್ಲೂ ಪ್ರದರ್ಶನ ಮಾಡತೊಡಗಿದರು. ಗೋಡೆ ಹಾರಿ ಸೈಕಲ್ ಸವಾರಿ ಮಾಡುತ್ತಿದ್ದರು. ಪೇಟೆ ಸುತ್ತುತ್ತಿದ್ದರು. ಡ್ಯಾನ್ಸ್ ಪಾರ್ಟಿಗಳಿಗೆ ಹೋಗುತ್ತಿದ್ದರು. ಪ್ರಿನ್ಸಿಪಾಲರು ಹುಡುಗರು ಕೆಟ್ಟುಹೋಗುತ್ತಿದ್ದಾರೆ. ಹೀಗೆ ಮುಂದುವರಿದರೆ ಅವರ ಭವಿಷ್ಯ ಕತ್ತಲಾಗಲಿದೆ. ಭೂಮಿಗೆ ಭಾರವಾಗಿ ಬದುಕುವವರಾಗುತ್ತಾರೆ ಎಂದು ಪೋಷಕರಿಗೆ ಖಾರವಾಗಿ ಪತ್ರ ಬರೆದರು. ಪೋಷಕರು ಮಕ್ಕಳು ತಮ್ಮ ಪ್ರತಿಷ್ಠೆಯನ್ನು ಮಣ್ಣುಪಾಲು ಮಾಡಿದರು ಎಂದು ಕೊರಗಿದರು. ಬೆಂಗಳೂರಿಗೆ ಬಂದು ಬುದ್ಧಿ ಹೇಳಿ ಹೋದರು.ಆದರೇನು ಬಂತು? ಅಣ್ಣತಮ್ಮಂದಿರು ಸುಧಾರಿಸಲಿಲ್ಲ. ತುಂಟತನದೊಂದಿಗೇ ಶಾಲೆಯ ಆಟ-ಪಾಟ-ಓಟಗಳಲ್ಲಿ ಹೆಸರು ಮಾಡಿದ್ದರು. ಪ್ರಿನ್ಸಿಪಾಲರು ಒಮ್ಮೆ ಇವರ ಓದು ಮುಗಿದರೆ ಸಾಕು ಎಂದು ಗೊಣಗುತ್ತಿದ್ದರು. ಆದರೆ ಕಾಲ ಏನನ್ನು ತಾನೇ ಬದಲು ಮಾಡದು? ಭಾರತೀಯರಿಗೆ ಪ್ರವೇಶವಿಲ್ಲ ಎಂಬ ನಿಯಮದ ಕಾಲೇಜಿಗೆ ಮುಂದೆ ಭಾರತೀಯರೇ ಘನತೆಯನ್ನು ತಂದರು. ಯಾವ ಹುಡುಗರನ್ನು ಭೂಮಿಗೆ ಭಾರವಾಗುವವರು ಎಂದುಕೊಂಡಿದ್ದರೋ ಅದೇ ಹುಡುಗರನ್ನು ಮುಂದೆ ಅದೇ ಪ್ರಿನ್ಸಿಪಾಲರು ನಮ್ಮ ಶಾಲೆಯ ಹೆಮ್ಮೆಯ ವಿದ್ಯಾರ್ಥಿಗಳು ಎಂದು ಎದೆಯುಬ್ಬಿಸಿ ಹೇಳುವ ಕಾಲವೂ ಬಂತು.ಆ ಹುಡುಗರು ಯಾರೆಂದುಕೊಂಡಿರಿ? ಅವರಲ್ಲಿ ಒಬ್ಬ ಬ್ರಿಟಿಷ್ ಆರ್ಮಿಯ ರೆಜಿಮೆಂಟ್ ಅಧಿಕಾರಿಯಾಗಿ, ಮುಂದೆ ನೇತಾಜಿ ಸೇನೆಯಲ್ಲಿ ಕರ್ನಲ್ ಆಗಿ ಬಲಿದಾನ ಮಾಡಿದ ಪೊನ್ನಪ್ಪ. ಇನ್ನೊಬ್ಬರು ಮಹಾಯೋಧ ಜನರಲ್ ತಿಮ್ಮಯ್ಯ. ಕೊಡಗಿನ ಜನರ ಪ್ರೀತಿಯ ಡುಬ್ಬು. ಮಿಲಿಟರಿಯ ಅಕ್ಕರೆಯ ಟಿಮ್ಮಿ.

ಮನೆಯಲ್ಲಿ ಸುಖವೈಭೋಗ, ಬಾಯಲ್ಲಿ ಚಿನ್ನದ ಚಮಚ. ಹೊರನೋಟಕ್ಕೆ ಬ್ರಿಟಿಷ್ ಸಂಸ್ಕೃತಿಯ ಮೋಹಿ. ಆದರೆ ಆಂತರ್ಯದಲ್ಲಿ ಅಪ್ಪಟ ಕೊಡವ ಸಂಪ್ರದಾಯವಾದಿ. ಸಂದಿಗ್ಧ ಪರಿಸ್ಥಿತಿಯಲ್ಲಿ ಸ್ಥಿತಪ್ರಜ್ಞ. ಸೈನಿಕರ ಸ್ನೇಹಿತ ಮತ್ತು ತಂದೆ-ತಾಯಿ-ಗುರು ಎಲ್ಲವೂ. ಸಾಧಾರಣ ಸೈನಿಕನನ್ನೂ ಬಾಯ್ ಎನ್ನದೆ ಜಂಟಲ್ ಮ್ಯಾನ್ ಎಂದು ಕರೆಯುವ ಹಿರಿಯ. ಅಧಿಕಾರಿಯಾದರೂ ಯೋಧರೊಡನೆ ತೆರಳುವ ದೊಡ್ಡತನ. ಜನರಲ್ ಎಂಬ ಅಹಮ್ಮುಗಳನ್ನು ಬಿಟ್ಟು ಸೈನಿಕರೊಡನೆ ತಮಾಷೆ ಮಾತಾಡುವ ಆಪ್ತ. ಸಾಕ್ಷಾತ್ ಬ್ರಹ್ಮಗಿರಿಯೇ ಎದ್ದುಬಂದಂಥಾ ಶರೀರ. ಕಾರ್ಯದಲ್ಲಿ ರಾಜನಂಥಾ ಗಾಂಭೀರ್ಯ.ಇವಿಷ್ಟು ಹೊರನೋಟಕ್ಕೆ ಕಾಣುವ ತಿಮ್ಮಯ್ಯ. ಆದರೆ ಪ್ರಾಮಾಣಿಕವಾದ ಒಬ್ಬ ವ್ಯಕ್ತಿ ಉನ್ನತ ಹುದ್ದೆಯಲ್ಲಿದ್ದರೂ ಎಷ್ಟೊಂದು ಪಾಡುಪಡಬಲ್ಲ ಎಂಬುದಕ್ಕೆ ಜನರಲ್ ತಿಮ್ಮಯ್ಯನವರ ಬದುಕು ಒಂದು ಉದಾಹರಣೆ. ಸದಾ ದೇಶದ ಸೈನ್ಯ, ಸೈನಿಕರ ಬಗ್ಗೆ ಧ್ಯಾನಿಸಿದವನಿಗೆ ಸಿಕ್ಕಿದ್ದು ಸದಾ ಅವಮಾನ, ಕಿರಿಕಿರಿಗಳು. ಮಂದಬುದ್ಧಿಯ ಆಡಳಿತದಿಂದ ಒಬ್ಬ ಪ್ರತಿಭಾನ್ವಿತ, ದೇಶಭಕ್ತ ಯೋಧ ತನ್ನ ಕಣ್ಣಮುಂದೆ ನನ್ನ ಸೈನಿಕರು ಸಾಯುವುದನ್ನು ನೋಡಲಾರೆ ಎಂದು ವಿದೇಶಕ್ಕೆ ಹೊರಟುಹೋದ. ತನ್ನ ಕನಸ್ಸಿನ ಸೈನ್ಯ ಕಟ್ಟಲೂ ಆ ಯೋಧನಿಗೆ ಆಡಳಿತ ಬಿಡಲಿಲ್ಲ. ಮುಂದೆ ಅವರ ಅನುಪಸ್ಥಿತಿ ದೇಶಕ್ಕೆ ಮುಳುವಾಗಿ ಕಂಡಿತು. ಅದು ಇತಿಹಾಸ.ತಿಮ್ಮಯ್ಯನವರು ಶ್ರೇಷ್ಠ ಎನಿಸುವುದು ಕೇವಲ 60ರ ದಶಕದ ತಿಮ್ಮಯ್ಯ ಎಪಿಸೋಡ್‌ನ ಕಾರಣಕ್ಕೆ ಮಾತ್ರ ಅಲ್ಲ. ಮೊದಲ ಪಾಕಿಸ್ತಾನ ಯುದ್ಧದ ಸಮಯದಲ್ಲಿ ಅವರು ಮೆರೆದ ಸಾಹಸವನ್ನು ನಮ್ಮ ದೇಶವೇನು ಸಮ ವಿಶ್ವವೇ ಬೆರಗಿನಿಂದ ನೋಡಿತು.1948ನೇ ಇಸವಿಯ ಬೇಸಿಗೆ. ಜಮ್ಮು-ಕಾಶ್ಮೀರಕ್ಕೆ ಪಾಕಿಸ್ತಾನ ಸೈನ್ಯವನ್ನು ನುಗ್ಗಿಸಿತ್ತು.

ಬುಡಕಟ್ಟು ಜನರನ್ನು ಪ್ರಚೋದಿಸಿ ಭಾರತದ ವಿರುದ್ಧ ಛೂಬಿಡಲಾಗಿತ್ತು. ಗೆರಿ ಯುದ್ಧತಂತ್ರ, ಪ್ರತಿಕೂಲ ಹವಾಮಾನ, ಜೊತೆಗೆ ಭಾರತೀಯ ಸೈನ್ಯದಲ್ಲಿ ಸಾಕಷ್ಟು ಯೋಧರು ಮತ್ತು ಯುದ್ಧಸಾಮಗ್ರಿಗಳ ಕೊರತೆ. ಪೂರ್ವ ತಯಾರಿಯೂ ಇಲ್ಲ. ತಿಮ್ಮಯ್ಯ ಹೆಚ್ಚುವರಿ ಸೈನ್ಯಕ್ಕೆ ದೆಹಲಿಗೆ ಬೇಡಿಕೆ ಇಟ್ಟರು. ಮಂತ್ರಿಮಂಡಳ ಎಂದಿನಂತೆ ಉದಾಸೀನ ಮಾಡಿತು. ಇನ್ನು ಉಳಿದಿರುವುದು ತಂತ್ರಮಾರ್ಗವೊಂದೇ ಎನ್ನುವುದನ್ನು ತಿಮ್ಮಯ್ಯ ಅರ್ಥಮಾಡಿಕೊಂಡರು.

ಮುಖಾಮುಖಿಯಾಗುವುದಕ್ಕಿಂತ ದೊಮ್ಮಾಲ್-ಮುಜಫರಾಬಾದ್ ಕಡೆಯಿಂದ ನುಗ್ಗುವುದೊಂದೇ ಪರಿಹಾರ ಎಂದುಕೊಂಡರು. ಜೊಜಿಲಾಕಣಿವೆಯನ್ನು ವಶಪಡಿಸಿಕೊಂಡರೆ ಮಾತ್ರ ಭಾರತಕ್ಕೆ ಲೇಹ್-ಲಡಾಕ್‌ಗಳು ಉಳಿಯುತ್ತವೆ ಎಂಬುದು ತಿಮ್ಮಯ್ಯನವರಿಗೆ ಗೊತ್ತಿತ್ತು. ಆದರೆ ಅದು ಕಷ್ಟದ ಕೆಲಸ. ಜೋಜಿಲಾ 11000 ಅಡಿ ಎತ್ತರದಲ್ಲಿತ್ತು. ಟ್ಯಾಂಕರುಗಳನ್ನು ಹತ್ತಿಸುವುದು ಸಾಧ್ಯವಿಲ್ಲದ ಮಾತು. ಆದರೆ ತಿಮ್ಮಯ್ಯ ಸೈನಿಕರಿಗೆ ಅದು ಸಾಧ್ಯ ಎಂದು ಧೈರ್ಯ ತುಂಬಿದರು. ಎಲ್ಲರೂ ಒಮ್ಮೆ ಬೆಚ್ಚಿಬಿದ್ದರು. ಏಕೆಂದರೆ ಟ್ಯಾಂಕರು ಏರದ ಜಾಗದಲ್ಲಿ ಸುಮಾರು 450 ಕಿ.ಮೀ ದೂರ ಗುಟ್ಟಿನಲ್ಲಿ ನಮ್ಮ ಸೈನ್ಯ ಸಾಗಬೇಕಿತ್ತು. ಇದುವರೆಗೆ ಅಂಥ ಸಾಹಸ ಪ್ರಪಂಚದಲ್ಲೆಲ್ಲೂ ನಡೆದಿಲ್ಲ. ನಡೆಯಲು ಸಾಧ್ಯವಿಲ್ಲ ಎಂದು ಕೆಲವರು ಅಡ್ಡಮಾತು ಆಡಿದರು. ಆದರೆ ತಿಮ್ಮಯ್ಯ ಮುನ್ನುಗ್ಗುವಂತೆ ಆಜ್ಞಾಪಿಸಿದರು. ಗುರಿ ಮುಟ್ಟಿದರು. ಲೇಹ್ ವಶವಾಯಿತು. ಇಂದಿಗೂ ಈ ಘಟನೆ ವಿಶ್ವದ ಸಮರ ಇತಿಹಾಸದಲ್ಲಿ ಸ್ಮರಣೀಯ ದಾಖಲೆ. ಇದರ ಸುದ್ದಿಯನ್ನು ಕೇಳಿದ ಪ್ರಪಂಚದ ಹಲವು ಮಿಲಿಟರಿ ಮುಖಂಡರು ಮೂಗಿನ ಮೇಲೆ ಬೆರಳಿಟ್ಟರು. ಲೇಹ್‌ನಲ್ಲಿ ಹಳೆಯದಾಗಿದ್ದ ವಿಮಾನ ನಿಲ್ದಾಣವನ್ನು ದುರಸ್ತಿ ಮಾಡಿಸಿದರು.ಅಂದು ತಿಮ್ಮಯ್ಯ ನೆಟ್ಟ ಭಾರತದ ಧ್ವಜ ಇಂದಿಗೂ ಲೇಹ್ನಲ್ಲಿ ಹಾರುತ್ತಿದೆ. ತಿಮ್ಮಯ್ಯರ ಈ ವಿಜಯದಿಂದ ಅವರು ವಿಶ್ವಾದ್ಯಂತ ಹೆಸರಾದರು.

ತಿಮ್ಮಯ್ಯನವರ ನಿರ್ಧಾರಗಳನ್ನು ಹತ್ತಿರದಿಂದ ಕಂಡಿದ್ದ ವಿಶ್ವಸಂಸ್ಥೆ, 1953ರಲ್ಲಿ ಕೊರಿಯಾ ಬಿಕ್ಕಟ್ಟನ್ನು ನಿಭಾಯಿಸಲು ತಟಸ್ಥ ದೇಶಗಳ ಪರವಾಗಿ ತಿಮ್ಮಯ್ಯನವರನ್ನು ದೂತರನ್ನಾಗಿ ಕಳುಹಿಸಬೇಕೆಂದು ಸರ್ಕಾರವನ್ನು ಕೇಳಿಕೊಂಡಿತು. ಕೊರಿಯಾದ ಇತ್ತಂಡಗಳ ಪರವಾಗಿ ಬಲಾಢ್ಯ ದೇಶಗಳಿದ್ದವು. ಸುಮಾರು ಒಂದೂವರೆ ಲಕ್ಷ ಯುದ್ಧ ಕೈದಿಗಳ ಸಮಸ್ಯೆಯನ್ನು ಜಗತ್ತು ನಿಭಾಯಿಸಲಾರದೆ ಒದ್ದಾಡುತ್ತಿತ್ತು. ಆದರೆ ತಿಮ್ಮಯ್ಯ ಅದನ್ನು ಭಾರತೀಯ ರಾಜಿ ತೀರ್ಮಾನ ಶೈಲಿಯಲ್ಲಿ ಮುಗಿಸಿ ಬೆಟ್ಟದಂಥ ಸಮಸ್ಯೆಯನ್ನು ಕರಗಿಸಿದರು. ಇದನ್ನು ಮೆಚ್ಚಿದ ಅಮೆರಿಕ ಅಧ್ಯಕ್ಷ ಐಸೆನ್ ಹೋವರ್ ‘ಸೂಕ್ಷ್ಮವಾದ ಸಮಸ್ಯೆಯನ್ನು ನಿಭಾಯಿಸಿದ ತಿಮ್ಮಯ್ಯ ಚಾಲಾಕಿ’ ಎಂದು ಬಣ್ಣಿಸಿದರು. ಬ್ರಿಟನ್ನಿನ ವಿದೇಶಾಂಗ ಕಾರ್ಯದರ್ಶಿ ‘ಇದು ತಾಳ್ಮೆಯ ಮತ್ತು ಚಮತ್ಕಾರಿ ನಡೆ’ ಎಂದು ಭಾರತದ ಬೆನ್ನುತಟ್ಟಿದರು. ಈ ಮೂಲಕ ಇಡೀ ವಿಶ್ವ ಭಾರತವನ್ನು ನೋಡಿತು. ತಿಮ್ಮಯ್ಯನವರ ಸಾಧನೆಯನ್ನು ಪರಿಗಣಿಸಿದ ಸರ್ಕಾರ ಪದ್ಮಭೂಷಣವನ್ನು ನೀಡಿ ಸನ್ಮಾನಿಸಿತು.1956ರಲ್ಲಿ ವೆಸ್ಟರ್ನ್ ಕಮಾಂಡಿನ ಅಧಿಕಾರ ವಹಿಸಿಕೊಂಡ ತಿಮ್ಮಯ್ಯ ನಾಗಾಗಳ ಮನಸ್ಸನ್ನು ಕದ್ದು ಸ್ನೇಹ ಸಂಪಾದಿಸಿದರು.

ಈಶಾನ್ಯ ರಾಜ್ಯಗಳನ್ನು ಹತ್ತಿರ ತರುವ ಉದ್ದೇಶದಿಂದ ಕುಮಾವೂನಿಗಳ ಪಡೆಯನ್ನು ಕಟ್ಟಿದರು. ಆಗಲೇ ತಿಮ್ಮಯ್ಯನವರಿಗೆ ಚೀನಾ ಕಡೆಯಿಂದ ಏನೋ ನಡೆಯುತ್ತಿದೆ ಎಂಬ ವಾಸನೆ ಹೊಡೆಯಲಾರಂಭಿಸಿತ್ತು. ಈಶಾನ್ಯ ರಾಜ್ಯಗಳಲ್ಲಿ ನೆಹರೂ ಯುಗದಲ್ಲಿ ಏನೇನು ಸುಧಾರಣೆಗಳಾದವೋ ಅವೆಲ್ಲವೂ ತಿಮ್ಮಯ್ಯನವರ ಸಾಧನೆಗಳು. ತಿಮ್ಮಯ್ಯನವರು ವೆಸ್ಟರ್ನ್ ಕಮಾಂಡಿಗೆ ವರ್ಗವಾಗದೇ ಇರುತ್ತಿದ್ದರೆ ಇಂದು ಈಶಾನ್ಯ ರಾಜ್ಯಗಳು ಹೀಗಿರುತ್ತಿರಲಿಲ್ಲ ಎಂಬುದನ್ನು ಇಂದಿಗೂ ಮಿಲಿಟರಿ ಅಧಿಕಾರಿಗಳು, ರಕ್ಷಣಾ ತಜ್ಞರು ಹೇಳುತ್ತಾರೆ ಎಂದರೆ ತಿಮ್ಮಯ್ಯನವರ ಕಾರ್ಯವನ್ನು ಅಳೆಯಬಹುದು. 1957ರಲ್ಲಿ ತಿಮ್ಮಯ್ಯ ಚೀಫ್ ಆಫ್ ಆರ್ಮಿ ಸ್ಟಾಫ್ ಅಗಿ ಅಧಿಕಾರ ವಹಿಸಿಕೊಂಡರು. ನೂತನ ಜನರಲ್ ಆದ ತಿಮ್ಮಯ್ಯನವರ ತಲೆಯಲ್ಲಿ ಚೀನಾ ಅಪಾಯ ಒಂದೇ ಸಮನೆ ಗಿರಕಿ ಹೊಡೆಯುತ್ತಿತ್ತು. ಚೀನಾವನ್ನು ಎದುರಿಸಲೆಂದೇ ಒಳಗೊಳಗೇ ಕಾರ್ಯತಂತ್ರಗಳನ್ನು ರೂಪಿಸತೊಡಗಿದರು. ಕುಮಾವೂನ್ ರೆಜಿಮೆಂಟನ್ನು ಬಲಪಡಿಸಿದರು. ವಿದೇಶಗಳನ್ನು ಸುತ್ತಿಬಂದರು. ಇಂಗ್ಲೆಂಡಿಗೆ ತೆರಳಿ ಆಗಿನ ಕಾಲದಲ್ಲಿ ಹಿಮಾಲಯ ಏರಿದ್ದ ಸರ್ ಜಾನ್ ಹಂಟ್ ಅವರನ್ನು ಭೇಟಿಯಾಗಿ ಬಂದರು. ಹಿಮಪರ್ವತಗಳನ್ನು ಏರುವ ತರಬೇತಿ ಪಡೆದರು. ಸ್ಕೀಯಿಂಗ್ ಉಪಕರಣ, ಯುದ್ಧ ಉಡುಪುಗಳ ಬಗ್ಗೆ ತಜ್ಞತೆ ಪಡೆದರು.

ಮರಳಿ ಬಂದವರು ದೇಶದ ಎಲ್ಲಾ ವಿಶ್ವವಿದ್ಯಾಲಯಗಳೂ ಸೇರಿದಂತೆ 200 ಮೌಂಟನೀರಿಂಗ್ ಮತ್ತು ಸ್ಕೀಯಿಂಗ್ ಕ್ಲಬ್‌ಗಳನ್ನು ತೆರೆದರು. ಹಿಮಾಚ್ಛಾದಿತ ಪ್ರದೇಶಗಳಲ್ಲಿ ಯುದ್ಧಮಾಡಲು ಮತ್ತಷ್ಟು ತಿಳಿಯುವ ಆವಶ್ಯಕತೆ ಇದೆ ಎಂದು ಅವಕಾಶಕ್ಕಾಗಿ ತಿಮ್ಮಯ್ಯ ಎದುರುನೋಡುತ್ತಿದ್ದರು. ಅದೇ ವರ್ಷ ರೋಮಿನಲ್ಲಿ ಒಲಂಪಿಕ್ ನಡೆಯುತ್ತಿತ್ತು. ಶೀತಪ್ರದೇಶದಲ್ಲಿ ಕ್ರೀಡಾಪಟುಗಳು ದೇಹದ ಸ್ಥಿರತೆಯನ್ನು ಹೇಗೆ ಕಾಪಾಡಿಕೊಳ್ಳುತ್ತಾರೆ ಎಂಬುದನ್ನು ನೋಡಲು ಸ್ವತಃ ರೋಮ್ಗೆ ತೆರಳಿದರು. ಈ ಎಲ್ಲಾ ತಯಾರಿಗಳನ್ನು ತಿಮ್ಮಯ್ಯ ಕೇವಲ ಸಂಶಯದ ದೃಷ್ಟಿಯಿಂದ ಮಾಡಿರಲಿಲ್ಲ. 1950ರ ಹೊತ್ತಿಗಾಗಲೇ ಚೀನಾ ಭಾರತದ ಗಡಿಯೊಳಗೆ ಮುಂದುವರಿಯುವ ಲಕ್ಷಣಗಳು ಗೋಚರಿಸುತ್ತಿದ್ದವು.

ರಾಜಕೀಯ ಮುಖಂಡರು ಕಣ್ಣಿಲ್ಲದವರಾದಮೇಲೆ ಮೇಲೆ ನಮ್ಮ ದೇಶವನ್ನು ಸೈನ್ಯವೊಂದು ಮಾತ್ರ ರಕ್ಷಣೆ ಮಾಡಬಲ್ಲದು ಎಂದು ತಿಮ್ಮಯ್ಯ ನಂಬಿದ್ದರು. ಚೀನಾದ ಚಟುವಟಿಗಳನ್ನು ಕೂಲಂಕಷವಾಗಿ ಗಮನಿಸುತ್ತಿದ್ದ ತಿಮ್ಮಯ್ಯನವರಿಗೆ ಅಪಾಯ ಕಟ್ಟಿಟ್ಟ ಬುತ್ತಿ ಎಂಬುದು ತಿಳಿದುಹೋಗಿತ್ತು. ಅದೇ ಹೊತ್ತಲ್ಲಿಕೈಲಾಸ ಮಾನಸಸರೋವರದಲ್ಲಿ ಸ್ವಾಮಿ ಪ್ರಣವಾನಂದ ಎಂಬವರು ಚೀನಾ ಮುನ್ನುಗ್ಗುತ್ತಿದೆ ಎಂದು ಸರ್ಕಾರಕ್ಕೆ ಎಚ್ಚರಿಕೆ ಕೊಡುತ್ತಿದ್ದರು. The Current Weekly ಹಿಮಾಲಯದಲ್ಲಿ ಚೀನಾದ ಹಸ್ತಕ್ಷೇಪವನ್ನು ಎಚ್ಚರಿಸಿ ಸರಣಿ ಲೇಖನಗಳನ್ನು ಪ್ರಕಟಿಸಿತು. ಆದರೆ ಭಾರತೀಯ ಕಮ್ಯುನಿಸ್ಟರು ಅದರ ವಿರುದ್ಧ ವಾಕ್ಸಮರಗಳನ್ನು ಮಾಡುತ್ತಿದ್ದರು. ಅದಕ್ಕೆ ಹೆದರಿದಂತೆ ಕಂಡ ನೆಹರೂ ಬಾಯಿಮುಚ್ಚಿಕೊಂಡು ಕುಳಿತಿದ್ದರು. ಆಗ ಕಮ್ಯುನಿಸ್ಟರ ವಿರುದ್ಧ ದೇಶದಲ್ಲಿ ಗುಡುಗಿದವರು ಒಬ್ಬನೇ ಒಬ್ಬ ಯೋಧ ಜನರಲ್ ಕಾರ್ಯಪ್ಪ. 1959ರಲ್ಲಿ ‘ದೇಶಕ್ಕೆ ಶತ್ರುಗಳು ಪಾಕಿಸ್ತಾನಿಗಳಲ್ಲ. ಭಾರತದೊಳಗಿನ ಕಮ್ಯುನಿಸ್ಟರು’ ಎಂದಿದ್ದರು ಮಾಜಿ ಕಮಾಂಡರ್ ಇನ್ ಚೀಫ್ ಜನರಲ್ ಕಾರ್ಯಪ್ಪ. ಅವರ ಹೇಳಿಕೆ ತಿಮ್ಮಯ್ಯನವರ ಶಕ್ತಿಯನ್ನು ಹೆಚಿಸಿತು. ಸರ್ಕಾರಕ್ಕೆ ಸುದೀರ್ಘವಾದ ವರದಿಯೊಂದನ್ನು ತಯಾರು ಮಾಡಿ ಕಳುಹಿಸಿದರು. ಆದರೆ ನೆಹರೂ ಮತ್ತು ಕೃಷ್ಣ ಮೆನನ್ ಜೋಡಿ ಆ ವರದಿಯ ಬಗ್ಗೆ ತಲೆಕೆಡಿಸಿಕೊಳ್ಳಲಿಲ್ಲ. ಮೆನನ್ ಅಂತೂ ತಿಮ್ಮಯ್ಯನವರನ್ನು ‘ಬ್ರಿಟಿಷ್ ಕಾಲದ ಮನುಷ್ಯ’ ಎಂದು ಹಂಗಿಸಿದರು. ತಿಮ್ಮಯ್ಯನವರ ವರದಿಯನ್ನಿಟ್ಟುಕೊಂಡು ರಾಜಗೋಪಾಲಾಚಾರಿಯವರು ನೆಹರೂ ವಿರುದ್ಧ ಹೋರಾಟ ಸಂಘಟಿಸಿದರು. ಅದಕ್ಕೂ ನೆಹರೂ ಕ್ಯಾರೇ ಅನ್ನಲಿಲ್ಲ. ಕೊನೆಗೆ ಬೇಸತ್ತರಾಜಗೋಪಾಲಾಚಾರಿ ಸ್ವತಂತ್ರ ಪಾರ್ಟಿ ಕಟ್ಟಿದರು. ನೆಹರೂರ ಈ ಉದಾಸೀನವನ್ನು ಪಾಕಿಸ್ತಾನ ಕೂಡ ಹಂಗಿಸಿ ಮಾತನಾಡಿತು. ‘ನಾವಿಬ್ಬರೂ ಕೂಡಿ ರಕ್ಷಣಾ ಒಪ್ಪಂದ ಮಾಡಿಕೊಳ್ಳೋಣ’ ಎಂದು ಕಾಲೆಳೆಯಿತು. ಆ ಮಾತೂ ಕೂಡಾ ನೆಹರೂಗೆ ನಾಟಲಿಲ್ಲ.ಇತ್ತ ತಿಮ್ಮಯ್ಯ ಬೇಸತ್ತುಹೋದರು.

3000 ಜನ ದೆಹಲಿಯ ವಿದ್ಯಾರ್ಥಿಗಳು ತಿಮ್ಮಯ್ಯನವರನ್ನು ಭೇಟಿಯಾಗಿ ನಮ್ಮನ್ನು ಗಡಿಗೆ ಕಳುಹಿಸಿ ಎಂದು ಬೇಡಿಕೊಂಡರು. ಅಂಥ ಸಂದರ್ಭವನ್ನು ಕೂಡ ತಿಮ್ಮಯ್ಯ ದುರುಪಯೋಗಪಡಿಸಿಕೊಳ್ಳದೆ ವಿದ್ಯಾರ್ಥಿಗಳನ್ನು ಸಮಾಧಾನಪಡಿಸಿ ಕಳುಹಿಸಿದರು. ಇನ್ನು ತನ್ನ ದೇಶವನ್ನು, ಸೈನ್ಯವನ್ನು ರಕ್ಷಣೆ ಮಾಡಲು ದೇವರಿಂದಲೂ ಸಾಧ್ಯವಿಲ್ಲ ಎಂದ ತಿಮ್ಮಯ್ಯ ನೇರ ನೆಹರೂ ಕಚೇರಿಗೆ ತೆರಳಿ ರಾಜೀನಾಮೆ ಪತ್ರವನ್ನು ಒಗೆದು ಬಂದರು. ಆಗ ಮಾತ್ರ ನೆಹರೂ ಬೆವತುಹೋದರು. ದೇಶಾದ್ಯಂತ ತಿಮ್ಮಯ್ಯ ಪರ ಧ್ವನಿ ಏಳುತ್ತಿತ್ತು. ನೆಹರೂ ಈಗ ಬೇಡಿಕೆ ಪರಿಶೀಲಿಸುವ ನಾಟಕವಾಡತೊಡಗಿದರು. ತಿಮ್ಮಯ್ಯ ಇನ್ನೆರಡು ವರ್ಷದಲ್ಲಿ ನಿವೃತ್ತರಾಗುತ್ತಾರೆ ಎಂಬ ಸಂಗತಿ ತಿಳಿದಿದ್ದ ನೆಹರೂ ನಾಜೂಕಿನಿಂದ ಅವರನ್ನು ಸಾಗಹಾಕಿದರು. ತಿಮ್ಮಯ್ಯ ರಾಜೀನಾಮೆ ಹಿಂತೆಗೆದುಕೊಂಡರು. ಚೀನಾ ಕೂಡಾ ಅದನ್ನು ಕಾಯುತ್ತಿತ್ತು. ತಿಮ್ಮಯ್ಯ ಜನರಲ್ ಆಗಿರುವವರೆಗೆ ಭಾರತ ಅಪಾಯಕಾರಿ ಎಂದು ಚೀನಾ ಭಾವಿಸಿ ಸಮಯ ಕಾಯುತ್ತಿತ್ತು. ಮುಂದೆ ತಿಮ್ಮಯ್ಯ ನಿವೃತ್ತರಾದರು. ನಡೆಯಬಾರದ್ದು ನಡೆಯಿತು.9-4-1961ರ ಶಂಕರ್ಸ್ ವೀಕ್ಲಿ ತಿಮ್ಮಯ್ಯನವರ ವ್ಯಂಗ್ಯಚಿತ್ರವನ್ನು ಬಿಡಿಸಿ ಅವರಿಗೆ ಗೌರವಾರ್ಪಣೆ ಸಲ್ಲಿಸಿ ‘ನಮ್ಮ ದೇಶದ ದುರದೃಷ್ಟವೆಂದರೆ ಯೋಗ್ಯ ರಕ್ಷಣಾ ಸಚಿವರು ಸಿಗದೇ ಇದ್ದುದು. ತಿಮ್ಮಯ್ಯನವರೊಂದಿಗೆ ಮೆನನ್ ಕೈಜೋಡಿಸಿದ್ದಿದ್ದರೆ ನಮ್ಮ ಸೈನ್ಯವನ್ನು ಎದುರಿಸುವ ತಾಕತ್ತು ಜಗತ್ತಿನ ಯಾವ ಶಕ್ತಿಗೂ ಇರುತ್ತಿರಲಿಲ್ಲ. ತಿಮ್ಮಯ್ಯ ರಾಜಕೀಯ ಬಲಿಪಶುವಾದರು’ ಎಂದು ಬರೆಯಿತು. ಅಂದರೆ ತಿಮ್ಮಯ್ಯ ಸೈನ್ಯ ಬಿಟ್ಟೊಡನೆ ದೇಶಕ್ಕೆ ಚೀನಾದ ಅಪಾಯ ಮತ್ತು ಭಾರತದ ಸೋಲು ಖಚಿತ ಎಂಬುದು ತಿಳಿದುಹೋಗಿತ್ತು. ಮುಂದೆ ಚೀನಾ ಆಕ್ರಮಣ ಮಾಡಿದಾಗ ನೆಹರೂ ರೇಡಿಯೋದಲ್ಲಿ ನಮ್ಮ ಸೈನ್ಯ ಅಸಹಾಯಕ ಪರಿಸ್ಥಿತಿಯಲ್ಲಿದೆ ಎಂದು ಬಿಕ್ಕಿದ್ದರು. ತಿಮ್ಮಯ್ಯನವರ ಮಾತು ಕೇಳದೇ ಇದ್ದ ತಪ್ಪಿಗೆ ನೆಹರೂವೇನೋ ಬಿಕ್ಕಿದರು. ಆದರೆ ದೇಶ ಅದರಿಂದ ಬಹಳಷ್ಟನ್ನು ಕಳೆದುಕೊಂಡಿತ್ತು.ಆದರೆ ಕೃಷ್ಣ ಮೆನನ್ ತಮ್ಮ ಚಾಳಿ ಮುಂದುವರಿಸಿದರು.

ತಿಮ್ಮಯ್ಯನವರ ಬಗ್ಗೆ ನೆಹರೂಗೆ ಕಿವಿಯೂದುತ್ತಲೇ ಇದ್ದರು. ಈ ಮೆನನ್ ಎಂಥಾ ಮನುಷ್ಯನೆಂದರೆ, ಒಮ್ಮೆ ವಿಮಾನ ನಿಲ್ದಾಣದಲ್ಲಿ ತಮ್ಮೊಡನಿದ್ದ ಮಿಲಿಟರಿ ಅಧಿಕಾರಿಗಳೊಡನೆ ಮಾತಾಡುತ್ತಾ ಮೆನನ್ ಒಬ್ಬ ಅಧಿಕಾರಿಯ ಹೆಗಲ ಮೇಲೆ ಕೈ ಇಟ್ಟು ದೂರಕ್ಕೆ ಕರೆದುಕೊಂಡುಹೋದರು. ನೀನು ಉತ್ತಮ ಅಧಿಕಾರಿ, ನಿನಗೆ ಮಿಲಿಟರಿಯಲ್ಲಿ ಒಳ್ಳೆಯ ಭವಿಷ್ಯವಿದೆ ಎಂದು ಆತನನ್ನು ಉಬ್ಬಿಸಲು ನೋಡಿದರು. ಆ ತಿಮ್ಮಯ್ಯ ಇzನ, ಅವನು ಹೇಗೆ? ಎಂದು ದಾಳ ಹಾಕಿದರು. ಆಅಧಿಕಾರಿಗೆ ಉರಿದುಹೋಯಿತು. ಮುಖಕ್ಕೆ ಹೊಡೆದಂತೆ ‘ಅವರು ನನ್ನ ಮೇಲಧಿಕಾರಿ. ಅವರ ಬಗ್ಗೆ ಮಾತಾಡುವ ಅರ್ಹತೆ ನನಗಿಲ್ಲ’ ಎಂದು ಉತ್ತರಿಸಿದರು. ಆ ಚಾಲಾಕಿ ಅಧಿಕಾರಿ ಸ್ಯಾಮ್ ಮಾಣಿಕಶಾ ಈ ವಿಷಯವನ್ನು ಇಷ್ಟಕ್ಕೇ ಬಿಡಲಿಲ್ಲ. ಪತ್ರಕರ್ತರಿಗೆ ಸಂಗತಿಯನ್ನು ತಿಳಿಸಿಬಿಟ್ಟಿದ್ದರು. ಪುನಃ ಮೆನನ್ ಟೀಕೆಗೊಳಗಾದರು. ಮೆನನ್ ಇದರಿಂದ ಮತ್ತಷ್ಟು ಕುದಿಯತೊಡಗಿದರು. ಅದೇ ಹೊತ್ತಲ್ಲಿ ಅಮೆರಿಕನ್ ಲೇಖಕ ಇವಾನ್ಸ್ ತಿಮ್ಮಯ್ಯನವರ ಜೀವನಚರಿತ್ರೆಯನ್ನು ಬರೆಯಲು ಭಾರತಕ್ಕೆ ಬಂದಿದ್ದ. ಬಿಡುಗಡೆಗೆ ಮುನ್ನವೇ ಪುಸ್ತಕ ಸುದ್ದಿಯಾಗತೊಡಗಿತು. ಮೆನನ್ ಅದಕ್ಕೂ ಅಡ್ಡಗಾಲು ಹಾಕಿದರು. ತಿಮ್ಮಯ್ಯ ಸರಕಾರಿ ಮಾಹಿತಿಯನ್ನು ದಾಖಲಿಸಿದ್ದಾನೆ ಎಂದು ಬೊಬ್ಬೆ ಹಾಕತೊಡಗಿದರು. ಪುಸ್ತಕದ ಪರ ಪಾರ್ಲಿಮೆಂಟಿನಲ್ಲೂ ಚರ್ಚೆಯಾಯಿತು. ಆದರೆ ಪುಸ್ತಕ ಪ್ರಕಾಶನಕ್ಕೆ ತಿಮ್ಮಯ್ಯ ಅನುಮತಿ ಕೊಟ್ಟ ದಾಖಲೆಗಳಿರಲಿಲ್ಲ. ಇವಾನ್ಸ್ ಅಮೆರಿಕಾದಲ್ಲಿ ಪುಸ್ತಕ ಬಿಡುಗಡೆ ಮಾಡಿದರು. ಆದರೂ ಮೆನನ್ ತಿಮ್ಮಯ್ಯನವರನ್ನು ಬೆಂಬಿಡದೆ ಕಾಡಿದರು. ‘ತಿಮ್ಮಯ್ಯ 30-1-1961ರಂದು ಕ್ಷಿಪ್ರಕ್ರಾಂತಿ ನಡೆಸಿ ಲಿಮಿಟರಿ ಆಡಳಿತ (Coup D’Etat) ತರಲು ಸಂಚುಹೂಡಿದ್ದರು ಎಂದು ಸುದ್ದಿಹಬ್ಬಿಸಿದರು (INDIA CHINA WAR-NEVILLE MAXWELL).

ಅಷ್ಟರಹೊತ್ತಿಗೆ ಮೆನನ್ ಎಂಥ ಮನುಷ್ಯ ಎಂಬುದು ದೇಶಕ್ಕೆ ತಿಳಿದುಹೋಗಿತ್ತು. ಆತನ ಸಂಚು ಫಲಿಸಲಿಲ್ಲ. ವಿದೇಶದ ತಿಮ್ಮಯ್ಯ ಅಭಿಮಾನಿಗಳು ಮೆನನ್ ಮೇಲೆ ಒಂದು ಕಣ್ಣಿಟ್ಟೇ ಇದ್ದರು.ಮೈಕಲ್ ಬ್ರೇಚರ್ ಎಂಬ ವಿಶ್ವರಾಜಕೀಯದ ವಿಶ್ಲೇಷಣೆಗಾರ ಮತ್ತು ತಿಮ್ಮಯ್ಯ ಅಭಿಮಾನಿ ತನ್ನ India and World Politics ಪುಸ್ತಕದ ಸಿದ್ಧತೆಯಲ್ಲಿದ್ದಾಗ ಕೃಷ್ಣ ಮೆನನ್‌ರಲ್ಲಿ ತಿಮ್ಮಯ್ಯನವರ ಬಗ್ಗೆ ಮೊಚನು ಬಾಣಗಳ ಪ್ರಶ್ನೆಗಳನ್ನು ಎಸೆದರು. ಬ್ರೇಚರ್‌ನ ಯಾವ ಪ್ರಶ್ನೆಗೂ ಮೆನನ್ ಸರಿಯಾದ ಉತ್ತರವನ್ನು ಕೊಡದೆ ತಿಣುಕಾಡಿದರು. ತಿಮ್ಮಯ್ಯ ಮತ್ತು ಮೆನನ್ ನಡುವೆ ನಡೆದಿರುವುದನ್ನೆ ತಿಳಿದಿದ್ದ ಬ್ರೇಚರ್ ಅದನ್ನು ಪುಸ್ತಕದಲ್ಲಿ ಉಖಿಸಿ, ‘ತಿಮ್ಮಯ್ಯನವರ ಸಾಧನೆಯ ಬಗ್ಗೆ ಮೆನನ್ ಹೊಟ್ಟೆಯುರಿ ಪಡುತ್ತಿದ್ದಾರೆ. ಅವರು ಕೀಳರಿಮೆಯಿಂದ ಬಳಲುತ್ತಿದ್ದಾರೆ. ತಿಮ್ಮಯ್ಯ ಒಬ್ಬ ಶಾಂತಿದೂತ. ಸ್ವತಂತ್ರ ಭಾರತದಲ್ಲಿ ತಿಮ್ಮಯ್ಯನವರಿಗೆ ಸರಿಸಾಟಿಯಾದ ವ್ಯಕ್ತಿ ಮತ್ತೊಬ್ಬ ಇಲ್ಲ’ ಎಂದು ಬರೆಯುತ್ತಾರೆ. ಈ ಪುಸ್ತಕ ಪ್ರಕಟಣೆಯ ನಂತರ ಭಾರತದ ರಾಜಕಾರಣ ವಿದೇಶಿಯರಿಗೆ ತಮಾಷೆಯ ಸರಕಾಗುತ್ತದೆ.

ಇನ್ನೊಮ್ಮೆ ಆಚಾರ್ಯ ಕೃಪಲಾನಿ ಸಂಸತ್ತಿನಲ್ಲಿ ಮೆನನ್ ಮುಂದೆಯೇ ಅವರು ತಿಮ್ಮಯ್ಯನವರನ್ನು ನಡೆಸಿಕೊಂಡ ಬಗೆಯನ್ನು ಆಕ್ರೋಶಭರಿತರಾಗಿ ಮಾತಾಡುತ್ತಾ ಮೆನನ್ ಮುಖದ ನೀರಿಳಿಸುತ್ತಾರೆ.ಎಂಥಾ ವಿಪರ್ಯಾಸ ನೋಡಿ! ಅವೆ ನಡೆದು ಅರ್ಧ ಶತಮಾನದ ನಂತರ ಕೂಡಾ ತಿಮ್ಮಯ್ಯ ವಿಶ್ವಾದ್ಯಂತ ಮಹಾವ್ಯಕ್ತಿಯಾಗಿ ಗೌರವ ಕಾಪಾಡಿಕೊಂಡಿದ್ದಾರೆ. ಆದರೆ ಕೃಷ್ಣ ಮೆನನ್ ‘ತಿಮ್ಮಯ್ಯ ಎಪಿಸೋಡ್’ ನಿಂದ ಮಾತ್ರ ನೆನಪಿಗೆ ಬರುತ್ತಾರೆ. ಸ್ವಂತವೆನ್ನುವ ಐಡೆಂಟಿಟಿಯೇ ಇಲ್ಲದ ಮನುಷ್ಯರಾಗಿ ಮೆನನ್ ಕಾಣುತ್ತಾರೆ. ಮಹಾತ್ಮ ರಾಮನಿಗೂ ರಾಕ್ಷಸ ಮಾರೀಚನಿಗೂ ಇರುವ ವ್ಯತ್ಯಾಸದಂತೆ ಇವರಿಬ್ಬರು ಕಾಣುತ್ತಾರೆ.ಭಾರತ ತಿಮ್ಮಯ್ಯನವರನ್ನು ಸರಿಯಾಗಿ ನಡೆಸಿಕೊಳ್ಳದಿದ್ದರೂ ವಿಶ್ವಸಂಸ್ಥೆ ಅವರಿಗೆ ಯೋಗ್ಯ ಸ್ಥಾನವನ್ನು ನೀಡಿತು.
1964ರಲ್ಲಿ ವಿಶ್ವಸಂಸ್ಥೆ ತಿಮ್ಮಯ್ಯನವರನ್ನು ಸೈಪ್ರಸ್ ದೇಶದ ಸೇನಾ ಮುಖಂಡನಾಗಿ ನೇಮಕ ಮಾಡಿತು. ಆಂತರಿಕ ಹೋರಾಟದಿಂದ ಮತ್ತು ಗ್ರೀಕಿನ ಉಪಟಳದಿಂದ ಸೈಪ್ರಸನ್ನು ತಿಮ್ಮಯ್ಯ ರಕ್ಷಿಸಿದರು. ಹಲವು ದೇಶಗಳು ಅವರನ್ನು ಸೈನಿಕ ತರಬೇತಿಗಾಗಿ ಕರೆಸಿಕೊಂಡವು. ಇಸ್ರೇಲ್, ರಷ್ಯಾ, ಇಂಗ್ಲೆಂಡ್, ಈಜಿಪ್ಟ್‌ಗಳ ಸೈನ್ಯಕ್ಕೆ ಮಾರ್ಗದಶನ ಮಾಡಿದರು. ಇಂಥ ಭಾಗ್ಯ ಪಡೆದ ಭಾರತದ ಮೊಟ್ಟಮೊದಲ ಭಾರತೀಯ ಯೋಧ ನಮ್ಮ ಕೊಡಂದೇರ ಸುಬ್ಬಯ್ಯ ತಿಮ್ಮಯ್ಯ. ಬ್ರಿಟಿಷ್ ಸರ್ಕಾರ ಕೊಡಮಾಡುವ ಪ್ರತಿಷ್ಠಿತ Distinguished Service Order (DSO) ಪಡೆದ ಮೊದಲ ಭಾರತೀಯ ಜನರಲ್ ಕೆ. ಎಸ್. ತಿಮ್ಮಯ್ಯ.

1945ರಿಂದ 1965ರವರೆಗೆ ಭಾರತದಲ್ಲಿ ಮತ್ತು ವಿದೇಶದಲ್ಲಿ ಅತಿಹೆಚ್ಚು ಚಾಲ್ತಿಯಲ್ಲಿದ್ದ ಹೆಸರು ತಿಮ್ಮಯ್ಯನವರದ್ದು. ಇದು ಅವರ ಕ್ರಿಯಾಶೀಲತೆಗೆ ಸಾಕ್ಷಿ. ಸೈನಿಕ ಕಾರ್ಯಾಚರಣೆ ಸಮಯದಲ್ಲಿ ಹೆಡ್‌ಕ್ವಾರ್ಟರ್‌ಗಳಲ್ಲಿ ಕೂರದೆ ಸೈನಿಕರೊಂದಿಗೆ ತೆರಳಿದ ಏಕೈಕ ಭಾರತೀಯ ಜನರಲ್ ತಿಮ್ಮಯ್ಯ. ಆದರೆ ದೇಶಕ್ಕೆ ಗೌರವ ತಂದುಕೊಟ್ಟ, ಸೈನ್ಯವನ್ನು ಕಟ್ಟಿ ಬೆಳೆಸಿದ ಮಡಿಕೇರಿಯ ತಿಮ್ಮಯ್ಯನವರ ಮನೆ ‘ಸನ್ನಿಸೈಡ್’ ಇಂದಿಗೂ ತಿಮ್ಮಯ್ಯ 60ರ ದಶಕದಲ್ಲಿ ಅನುಭವಿಸಿದ ಅವಮಾನಕ್ಕೆ ಸಾಕ್ಷಿಯೋ ಎಂಬಂತೆ ಹರುಕುಮುರುಕಾಗಿ ನಿಂತಿದೆ. ತಿಮ್ಮಯ್ಯನವರ ಕುಟುಂಬಸ್ಥರು ಒಂದು ಕಾಲದಲ್ಲಿ ವೈಭವದಿಂದ ಮೆರೆದ ಆ ಮನೆಯನ್ನು ಸರ್ಕಾರಕ್ಕೆ ಬಿಟ್ಟುಕೊಟ್ಟಿದ್ದರು.ನಮ್ಮ ಸರ್ಕಾರ ಅದನ್ನು ಸ್ಮಾರಕ ಮಾಡಬಹುದಿತ್ತು, ಇಲ್ಲ ಮ್ಯೂಸಿಯಂ ಮಾಡಬಹುದಿತ್ತು. ಅದನ್ನೊಂದು ತೀರ್ಥಕ್ಷೇತ್ರದಂತೆ ಪರಿವರ್ತಿಸಬಹುದಿತ್ತು. ಆದರೆ ನಮ್ಮ ರಾಜ್ಯ ಸರ್ಕಾರ ಅದನ್ನು ಭ್ರಷ್ಟಾಚಾರದ ಗರ್ಭಗುಡಿಯಂತಿರುವ ಆರ್‌ಟಿಒ ಕಚೇರಿಯಾಗಿ ಮಾಡಿತು. ಜೀವನದುದ್ದಕ್ಕೂ ಪ್ರಾಮಾಣಿಕತೆ, ದೇಶಭಕ್ತಿ, ನೇರನುಡಿ, ಬಲಶಾಲಿ ಸೈನ್ಯ, ವಿಶ್ವದ ಶಾಂತಿಗೆ ಬದುಕು ಮುಡಿಪಿಟ್ಟ ಮಹಾತ್ಮನನ್ನು ನಾವು ನೋಡಿಕೊಂಡ ರೀತಿ ಇದು.

ಮಾರ್ಚ್ 31 ಭಾರತದ ಹೆಸರನ್ನು ವಿಶ್ವಕ್ಕೆ ಸಾರಿದ, ಭಾರತದ ಗೌರವವನ್ನು ಹೆಚ್ಚಿಸಿದ ಆ ಮಹಾಯೋಧನ ಜನ್ಮ ದಿನ. ದೇಶಭಕ್ತಿಯ ಪಾಠ ಹೇಳಿಕೊಡಲು ಶಾಲಾ-ಕಾಲೇಜುಗಳಿಗೆ ಸೈನಿಕರನ್ನು ಕಳುಹಿಸಿಕೊಡಬೇಕೆಂದು ಕೇಂದ್ರ ಸರ್ಕಾರ ಯೋಚಿಸುತ್ತಿರುವ ಸಂದರ್ಭದಲ್ಲಿ ಮಹಾಯೋಧ ತಿಮ್ಮಯ್ಯ ನೆನಪಾದರು!

Author: Anonymous but thanks to him from Jnanamukhi.

ಸಮ್ಮೋಹನ ಅಂದರೇನು ?


Posted by
Guruprasad Hattigoudar
Mob: 9945479292

ಸಮ್ಮೋಹನ (ಹಿಪ್ನೋಟಿಸಮ್) ಕಲೆಯ ಬಗ್ಗೆ ನಿಮಗೆ ಗೊತ್ತೇ ? ಅದನ್ನು ಬಲ್ಲವರನ್ನು ಹತ್ತಿರದಿಂದ ಯಾರನ್ನಾದರೂ ನೋಡಿದ್ದೀರಾ ? ಎಂಬ ಪ್ರಶ್ನೆಗಳಿಗೆ ನಿಮ್ಮ ಉತ್ತರ ಏನು ? ಮೊದಲ ಪ್ರಶ್ನೆಗೆ ಬಹುತೇಕ ಮಂದಿ ಹೌದು ಎಂದರೆ, ಎರಡನೇ ಪ್ರಶ್ನೆಗೆ ಬಹುತೇಕ ಮಂದಿ ಇಲ್ಲ ಅಥವಾ ಒಂದು ಬಾರಿ ನೋಡಿದ್ದೇನೆ ಎಂದೇ ಹೇಳುತ್ತಾರೆ. ಇದರಿಂದಾಗಿ ಸಮ್ಮೋಹನ ಅನ್ನುವುದು ತೀರಾ ಅಪರೂಪದ ಒಂದು ವಿದ್ಯೆ ಅನ್ನುವುದು ಅರಿವಾಗುತ್ತದೆ. ಸಮ್ಮೋಹನದ ಬಗ್ಗೆ ಗೊತ್ತು ಎಂದು ಉತ್ತರಿಸಿದವರನ್ನು ಅದರ ಬಗ್ಗೆ ವಿವರ ಕೇಳಿ ನೋಡಿ, ಬೇರೆಯವರನ್ನು ತಮ್ಮ ಹತೋಟಿಗೆ ತೆಗೆದುಕೊಂಡು ಅವರಿಂದ ಏನು ಬೇಕಾದರೂ ಬಾಯಿ ಬಿಡಿಸುವ ವಿದ್ಯೆ. ಅನ್ನಬಹುದು. ಆದರೆ ಇದು ಪೂರ್ತಿ ಸರಿಯಲ್ಲ. ಅದು ನಿಜವಾಗಿದ್ದರೆ ಪೊಲೀಸ್ ತನಿಖಾಧಿಕಾರಿಗಳೆಲ್ಲಾ ಸಮ್ಮೋಹನ ಕಲಿತು ಕಳ್ಳರ ಬಾಯಿಯನ್ನು ಸುಲಭವಾಗಿ ಬಿಡಿಸುತ್ತಿದ್ದರು.


ಮೊದಲನೆಯದಾಗಿ ಸಮ್ಮೋಹನದ ಬಗ್ಗೆ ಜನರಲ್ಲಿರುವ ತಿಳುವಳಿಕೆಗಿಂತಲೂ ಪೂರ್ವಾಗ್ರಹವಾದ ಮೂಢ ನಂಬಿಕೆಗಳೇ ಹೆಚ್ಚು. ಸಮ್ಮೋಹನ ಎಂದರೆ ಏನೋ ಮಾಟ, ಮಂತ್ರ, ತಂತ್ರದಂತೆ ಭಯ ಬೀಳುವುದೂ ಇದೆ. ಅಥವಾ ಹಾಗೆ ಭಯ ಬೀಳುವಂತೆ ನಂಬಿಸಲಾಗಿದೆ. ಇದು ಈ ವಿದ್ಯೆಯನ್ನು ಕಲಿತ ಕೆಲವೇ ಕೆಲವು ವ್ಯಕ್ತಿಗಳ ಹುನ್ನಾರವಷ್ಟೇ. ಒಬ್ಬ ಮಂತ್ರವಾದಿ ಹೇಗೆ ತನ್ನ ವಿದ್ಯೆ ಬೇರೆಯವರಿಗೆ ತಿಳಿಯದಂತೆ ರಹಸ್ಯ ಕಾಪಾಡಿ ಅದೊಂದು ಬ್ರಹ್ಮವಿದ್ಯೆ ಎನ್ನುವಂತೆ ಬಿಂಬಿಸುತ್ತಾನೋ, ಅದೇ ರೀತಿ ಸಮ್ಮೋಹನ ಕಲಿತವರೂ ಸಹ ತಮ್ಮ ಮೇಲರಿಮೆಯಿಂದಾಗಿ, ಅಥವಾ ತಮ್ಮ ವಿದ್ಯೆಗೆ ಇನ್ನಿಲ್ಲದ ಮಹತ್ವ ಸಿಕ್ಕು ತಮಗೆ ಹೆಚ್ಚಿನ ಗೌರವ ಸಿಗಲಿ ಎಂಬ ಕಾರಣಕ್ಕೆ ಸಮ್ಮೋಹನದ ಬಗ್ಗೆ ಇಲ್ಲ ಸಲ್ಲದ ಕಥೆ ಕಟ್ಟುವುದೂ ಇದೆ. ಇದರಿಂದಾಗಿ ಅದರ ಬಗ್ಗೆ ಅಷ್ಟೊಂದು ಅರಿವಿಲ್ಲದ ಸಾಮಾನ್ಯರು ಸಮ್ಮೋಹನವೆಂದರೆ ಭಯ ಬೀಳುವ, ಅದನ್ನು ಕಲಿತ ವ್ಯಕ್ತಿಗಳು ಏನು ಬೇಕಾದರೂ ಮಾಡಬಲ್ಲರು ಎಂದು ಆತಂಕ ಪಡುವಂತಾಗಿದೆ.


ಇದಕ್ಕೆಲ್ಲಾ ಕಾರಣ ಇದೊಂದು ವಿಶಿಷ್ಟ ಕಲೆಯಾಗಿದ್ದು ಎಲ್ಲರಿಂದಲೂ ಇದನ್ನು ಸುಲಭವಾಗಿ ಕಲಿಯಲು ಸಾಧ್ಯವಿಲ್ಲದಿರುವುದೇ ಆಗಿದೆ. ಆದರೆ ಎಲ್ಲಾ ಕಲೆಗಳೂ ಎಲ್ಲರಿಗೂ ಕಲಿಯಲು ಸಾಧ್ಯವಿಲ್ಲ ಅನ್ನುವ ವಾಸ್ತವವನ್ನು ಅರಿತುಕೊಂಡರೆ ಸಮ್ಮೋಹನದ ಬಗ್ಗೆ ಇರುವ ಮೂಢನಂಬಿಕೆ ಕಡಿಮೆಯಾಗುತ್ತದೆ. ಉದಾ : ನಾವು ಎಷ್ಟೇ ಜಾದೂ ಕಲಿತರೂ ಅದರಲ್ಲಿ ಕರಗತವಾದ ಜಾದೂಗಾರರಂತೆ ಜಾದೂ ಮಾಡಲು ಸಾಧ್ಯವಿಲ್ಲ. ಅದೇ ರೀತಿ ಎಲ್ಲರೂ ಕ್ರಿಕೆಟ್‌ನಲ್ಲಿ ಮಿಂಚಲು, ಹಾಕಿಯಲ್ಲಿ ವಿಜ್ರಂಭಿಸಲು ಸಾಧ್ಯವಿಲ್ಲ. ಎಷ್ಟೋ ಜನರಿಗೆ ವಾಹನ ಚಾಲನೆ ಕರಗತವಾಗುವುದೇ ಇಲ್ಲ. ಚಿತ್ರಕಲೆ ಕೆಲವರಿಗೆ ಮಾತ್ರ ಸಿದ್ದಿಸುವುದು. ಅಷ್ಟೇಕೆ ನುರಿತ ಕುಂಬಾರನಂತೆ ನಾವು ಮಡಿಕೆ ಮಾಡಲು ಸಾಧ್ಯವೇ ? ಅವರವರ ಸಾಮರ್ಥ್ಯ ಅವರವರಿಗೆ ತಾನೆ ? ಅದೇ ರೀತಿ ಸಮ್ಮೋಹನವೂ ಒಂದು ಕಲೆಯಾಗಿದ್ದು ಅದು ಎಲ್ಲರಿಗೂ ಕಲಿಯಲು ಸಾಧ್ಯವಿಲ್ಲ ಅಂದಾಕ್ಷಣ ಅದೇನೂ ಬ್ರಹ್ಮವಿದ್ಯೆ ಆಗಲು ಸಾಧ್ಯವೇ ಇಲ್ಲ. ನಿಶ್ಚಿತವಾಗಿ ಅದೊಂದು ವೈಜ್ಞಾನಿಕ ವಿಷಯ. ಯಾವುದೇ ಶಕ್ತಿಯ, ಭೂತ - ಪ್ರೇತದ ಪ್ರಭಾವದಿಂದ ಸಮ್ಮೋಹನ ಕಲಿಯುವಂತಹುದೇನೂ ಅಲ್ಲ. ಮನಸ್ಸಿನ ಹತೋಟಿಯಿಂದ ದಕ್ಕಿಸಿಕೊಳ್ಳಬೇಕಾದ ಕಲೆ ಅಷ್ಟೇ.


ವೈಜ್ಞಾನಿಕವಾಗಿ ಸಮ್ಮೋಹನ ಹೇಗೆ ನಡೆಯುತ್ತದೆ ?


ಪ್ರತಿಯೊಬ್ಬರಲ್ಲೂ ಎರಡು ಮನಸ್ಸುಗಳಿರುತ್ತವೆ. 1. ಬಾಹ್ಯ ಮನಸ್ಸು, 2. ಸುಪ್ತ ಮನಸ್ಸು.


1. ಬಾಹ್ಯ ಮನಸ್ಸು : ಇದು ನಮಗೆಲ್ಲಾ ಅರಿವಿಗೆ ಬರುವ ನಮ್ಮ ಮನಸ್ಸು. ನಾವು ಯೋಚಿಸುವುದು ಇದರಲ್ಲೇ. ಕೋಪ, ತಾಪ, ದುಃಖ, ದುಮ್ಮಾನಗಳೆಲ್ಲಾ ಇದರಲ್ಲೇ ಮಾಡುತ್ತೇವೆ. ಸುಖ, ಸಂತೋಷಗಳೆಲ್ಲಾ ಈ ಮನಸ್ಸಿಗೇ ಬೇಕಾಗಿರುವುದು. ವಾಸ್ತವವಾಗಿ ನಾವು ನಿದ್ರಿಸುವುದು ಎಂದರೆ ಈ ಬಾಹ್ಯ ಮನಸ್ಸೇ ನಿದ್ರಿಸುವುದು.


2. ಸುಪ್ತ ಮನಸ್ಸು : ಇದು ನಮ್ಮ ಅನುಭವಕ್ಕೆ ಅಷ್ಟಾಗಿ ನಿಲುಕಲಾರದು. ಆದರೆ ನಮ್ಮ ಬಾಹ್ಯ ಮನಸ್ಸನ್ನು ಮತ್ತು ದೇಹವನ್ನು ನಮ್ಮ ಅನುಭವಕ್ಕೆ ಬಾರದೇನೇ, ಅನುಮತಿಯನ್ನೂ ಪಡೆಯದೇನೇ ನಿಯಂತ್ರಿಸುತ್ತಿರುತ್ತದೆ. ಉದಾ : ನಾವು ಏನೋ ಕೆಲಸ ಮಾಡುತ್ತಿರುವಾಗ ನಿಮ್ಮ ಮುಂಗೈಗೆ ಚೂರು ಬಿಸಿ ತಾಗಿತು ಅಂದುಕೊಳ್ಳಿ. ಆಗ ತಟ್ಟನೆ ಕೈ ಹಿಂತೆಗೆದುಕೊಳ್ಳುತ್ತೇವೆ. ಆ ಸಮಯದಲ್ಲಿ ಕಂಡಿತವಾಗಿ ನನ್ನ ಮುಂಗೈಗೆ ಬಿಸಿ ತಾಗುತ್ತಿದೆ, ಅದು ಸುಡುತ್ತದೇನೋ, ಕೈ ಹಿಂತೆಗೆದುಕೊಳ್ಳೋಣ ಎಂದು ಯಾರಾದರೂ ಯೋಚಿಸಿರುತ್ತಾರಾ? ಇಲ್ಲ. ನಾವು ಯೋಚಿಸುವ ಮುನ್ನವೇ ನಮ್ಮ ಸುಪ್ತ ಮನಸ್ಸು ಆ ಕೆಲಸವನ್ನು ಮಾಡಿಸಿರುತ್ತದೆ. ಅದೇ ಅದರ ಕೆಲಸ.


ಅದೇ ರೀತಿ ನಾವೊಂದು ತಪ್ಪಾದ ಕೆಲಸವನ್ನು ಮಾಡಲು ಹೊರಟಾಗಲೂ ಸಹ ಬೇಡ, ಸಿಕ್ಕಿ ಹಾಕಿಕೊಳ್ತೀಯ ಎಂದು ಎಚ್ಚರಿಸುವುದು ಇದೇ ಸುಪ್ತ ಮನಸ್ಸು. ಆದರೆ ಅದರ ಮಾತನ್ನು ಕೇಳದೇನೇ ನಾವು ಸಂಕಷ್ಟಕ್ಕೆ ಸಿಕ್ಕಿ ಹಾಕಿಕೊಳ್ಳುತ್ತೇವೆ. ರಾತ್ರಿ ಕಾಣುವ ಕನಸುಗಳು ಸುಪ್ತ ಮನಸ್ಸಿಗೆ ಉತ್ತಮ ಉದಾಹರಣೆ. ಬಾಹ್ಯ ಮನಸ್ಸು ಮಲಗಿರುವಾಗ ಸುಪ್ತ ಮನಸ್ಸು ಹೆಚ್ಚು ಕ್ರಿಯಾಶೀಲವಾಗಿರುತ್ತದೆ. ಆದರೆ ಯಾವಾಗಲೂ ಅದು ನಿದ್ರಿಸುವುದಿಲ್ಲ. ಸದಾ ಬಾಹ್ಯ ಮನಸ್ಸಿನಿಂದ ಅದು ಸಂದೇಶಗಳನ್ನು ಸ್ವೀಕರಿಸುತ್ತಲೆ ಇರುತ್ತದೆ. ಹಾಗೆ ಸ್ವೀಕರಿಸಿದ ಸಂದೇಶಗಳ ಪ್ರತಿಫಲನವೇ ಕನಸುಗಳು. ನಾವು ದಿನವಿಡೀ ಸುಪ್ತ ಮನಸ್ಸಿಗೆ ಏನೇನು ಸಂದೇಶಗಳನ್ನು ನೀಡುತ್ತಾ ಹೋಗಿರುತ್ತವೋ ಅದೆಲ್ಲಾ ಕನಸಿನ ರೂಪದಲ್ಲಿ ಅದು ಮನನ ಮಾಡುತ್ತದೆ. ನಾವು ಸಂಕಷ್ಟದಲ್ಲಿದ್ದಾಗ ಕೆಟ್ಟ ಕನಸುಗಳು ಬೀಳುವುದು ಇದೇ ಕಾರಣಕ್ಕೇ.


ಆದರೆ ಬಾಹ್ಯ ಮನಸ್ಸಿನಂತೆ ಸುಪ್ತ ಮನಸ್ಸಿಗೆ ತರ್ಕ ಮಾಡುವ, ಪ್ರಶ್ನಿಸುವ ಗುಣವಿಲ್ಲ. ಬಾಹ್ಯ ಮನಸ್ಸು ನೀಡುವ ಆಜ್ಞೆಗಳನ್ನು ಪಾಲಿಸುತ್ತಾ ಹೋಗುತ್ತದೆ. ಇದನ್ನೇ ಸಮ್ಮೋಹನದಲ್ಲಿ ನಾವು ಉಪಯೋಗಿಸಿಕೊಳ್ಳುವುದು. ನಿಜವಾಗಿ ಸಮ್ಮೋಹನ ಏನೆಂದರೆ ಎದುರಿನ ವ್ಯಕ್ತಿಯ ಬಾಹ್ಯ ಮನಸ್ಸನ್ನು ನಿದ್ರೆಗೆ ಜಾರಿಸಿ ಆತನ ಸುಪ್ತ ಮನಸ್ಸನ್ನು ನಮ್ಮ ಹತೋಟಿಗೆ ತೆಗೆದುಕೊಳ್ಳುವುದು. ಆ ಮೂಲಕ ಆತನು ಆ ಸಮಯದಲ್ಲಿ ನಾವು ಏನು ಹೇಳಿದರೂ ಕೇಳುವಂತೆ ಮಾಡುವುದು. ಸುಪ್ತ ಮನಸ್ಸಿಗೆ ತರ್ಕ, ಅಥವಾ ಪ್ರಶ್ನಿಸುವ ಗುಣವಿಲ್ಲವಾದ್ದರಿಂದ ನಮ್ಮ ಆಜ್ಞೆಯನ್ನು ಅದು ಪಾಲಿಸುತ್ತದೆ. ಇದು ಒಂದು ರೀತಿಯ ಸನ್ನಿ ಎಂದರೆ ತಪ್ಪಾಗಲಾರದು. ಬೇರೆಯವರು ಹೇಳಿದ್ದನ್ನೆ ನಂಬುವುದು. ತರ್ಕ ಮಾಡದಿರುವುದು ಅಂದರೆ ಇದೇನೇ. ಉದಾ : ಒಬ್ಬ ಸಮ್ಮೋಹನಗೊಂಡ ವ್ಯಕ್ತಿಗೆ ಈಗ ನಿನ್ನ ತಂದೆಯ ಕಪಾಳಕ್ಕೆ ಜೋರಾಗಿ ಬಾರಿಸುತ್ತೀಯ. ಎಂದು ಹೇಳಿದರೆ ಅವನು ಹಾಗೆಯೇ ಮಾಡುತ್ತಾನೆ. ಅದನ್ನು ಸಮ್ಮೋಹನಗೊಳ್ಳದ ವೇಳೆ ಮಾಡಿಸಲು ಸಾಧ್ಯವಿಲ್ಲ. ಏಕೆಂದರೆ ಬಾಹ್ಯ ಮನಸ್ಸು ತರ್ಕ ಮತ್ತು ಪ್ರಶ್ನಿಸುವ ಗುಣ ಹೊಂದಿದೆ. ಏನೇ ಇದ್ದರೂ ಅದರ ಸಾಧಕ ಬಾದಕಗಳನ್ನು ಅದು ವಿವೇಚಿಸುತ್ತದೆ. ಆದುದರಿಂದಲೇ ಸಮ್ಮೋಹಕರು ಅದನ್ನು ನಿದ್ರೆಗೆ ಜಾರುವಂತೆ ಮಾಡುತ್ತಾರೆ. ಸಮ್ಮೋಹನ ಎಂದರೆ ಇದೇನೆ.


ಎದುರಿನವರ ಸುಪ್ತ ಮನಸ್ಸನ್ನು ನಮ್ಮ ಹತೋಟಿಗೆ ತೆಗೆದುಕೊಂಡು ನಮಗೆ ಬೇಕಾದಂತಹ ಕೆಲಸಗಳನ್ನು ಮಾಡಿಸುತ್ತೇವೆಂಬುದೇನೋ ಸರಿ. ಆದರೆ ಆ ಸುಪ್ತ ಮನಸ್ಸಿನಲ್ಲೂ ಬೇರೂರಿರುವ ನಂಬಿಕೆಗಳಿಗೆ ಹೊಡೆತ ಕೊಟ್ಟು ಅವರಿಂದ ಕೆಲಸ ಮಾಡಿಸಲು ಸಾಧ್ಯವಿಲ್ಲ. ಉದಾ : ಎಂದೂ ಮಾಂಸಾಹಾರ ಮಾಡದ, ಅದರತ್ತ ಆಸಕ್ತಿಯನ್ನೇ ಹೊಂದಿರದ ವ್ಯಕ್ತಿಯನ್ನು ಸಮ್ಮೋಹನಗೊಳಿಸಿದರೂ ಮಾಂಸ ತಿನ್ನಿಸಲು ಸಾಧ್ಯವಿಲ್ಲ. ಏಕೆಂದರೆ ಅವನ ಸುಪ್ತ ಮನಸ್ಸಿನಲ್ಲೂ ಸಹ ಮಾಂಸಾಹರ ನಿಶಿದ್ಧ ಎಂಬ ನಂಬಿಕೆ ಬೇರೂರಿರುತ್ತದೆ. ಅಂತಹ ಸಂದರ್ಭದಲ್ಲಿ ಅವರಿಗೆ ಒತ್ತಾಯ ಮಾಡಿದರೆ ಸಮ್ಮೋಹನ ನಿದ್ರೆಯಿಂದ ಅವರು ಹೊರ ಬಂದು ಬಿಡುತ್ತಾರೆ.


ಸಮ್ಮೋಹನದಿಂದ ಏನು ಸಾಧ್ಯ ?


* ರಸ್ತೆಯಲ್ಲಿ ನಡೆದು ಹೋಗುತ್ತಿರುವ ವ್ಯಕ್ತಿಯ ಮನಸ್ಸನ್ನು ನಮ್ಮ ಹತೋಟಿಗೆ ತೆಗೆದುಕೊಂಡು ನಾವು ಯೋಚಿಸಿದಂತೆ ಒಂದು ಕೊಲೆಯನ್ನು ಬೇಕಾದರೂ ಮಾಡಿಸಬಹುದು.

* ಯಾವುದೋ ಹುಡುಗಿಯ ಮನಸ್ಸನ್ನು ನಮ್ಮ ಹತೋಟಿಗೆ ತೆಗೆದುಕೊಂಡು ಅವಳೇ ನಮ್ಮ ಬಳಿ ಬಂದು ಮುತ್ತು ಕೊಡುವಂತೆ ಮಾಡಬಹುದು.

* ಹೆಂಗಸೊಬ್ಬಳು ಅವಳು ಧರಿಸಿರುವ ಆಭರಣಗಳನ್ನೆಲ್ಲಾ ತಾನಾಗೆ ಕಳಚಿ ತಂದು ನಮಗೆ ಕೊಡುವಂತೆ ಮಾಡಬಹುದು.

- ಹೀಗೆಲ್ಲಾ ನೀವು ತಿಳಿದುಕೊಂಡಿದ್ದರೆ ಅದು ಕಂಡಿತಾ ತಪ್ಪು. ಇದೆಲ್ಲಾ ನಿಜವಾಗುವಂತಿದ್ದರೆ ಕಳ್ಳರು, ದರೋಡೆಗಾರರು, ರೇಪಿಸ್ಟ್‌ಗಳೆಲ್ಲಾ ಎಂದೋ ಸಮ್ಮೋಹನವನ್ನು ಕಲಿತುಕೊಂಡು ತಮ್ಮ ಕೆಲಸವನ್ನು ಸುಲಲಿತವನ್ನಾಗಿಸಿಕೊಂಡಿರುತ್ತಿದ್ದರು. ನಾನು ಸ್ವತಃ ಇದನ್ನು ಕಲಿತು ಸಾಕಷ್ಟು ಪ್ರಯೋಗ ನಡೆಸಿರುವೆನಾದ್ದರಿಂದ ಇದರ ಪರಿಮಿತಿಯ ಬಗ್ಗೆ ಅರಿವಿದೆ. ಎಲ್ಲೋ ಕಥೆ/ಕಾದಂಬರಿಗಳಲ್ಲಿ ಬರೆದಿರುವಂತೆ, ಅಥವಾ ಸಿನೆಮಾಗಳಲ್ಲಿ ತೋರಿಸಿರುವಂತೆ ಅಮೋಘ ಶಕ್ತಿಯೇನೂ ಸಮ್ಮೋಹನಕ್ಕೆ ಇಲ್ಲ. ಆದರೆ ಸಾಧಾರಣ ಬದುಕಿನಲ್ಲಿ ನಾವು ಊಹಿಸುವುದಕ್ಕಿಂತಲೂ ಅದ್ಬುತ ಶಕ್ತಿ ಮಾತ್ರ ಇದಕ್ಕೆ ಇರುವುದು ನಿಜ. ಆದರೆ ಅದನ್ನು ನಾವು ಅಂದುಕೊಂಡಂತೆಲ್ಲಾ ಬಳಸಲು ಸಾಧ್ಯವಿಲ್ಲ.


ವಾಸ್ತವವಾಗಿ ಏನೆಲ್ಲಾ ಸಾಧ್ಯ ?


ನಾನು ನಾಲ್ಕಾರು ವರ್ಷ ಸತತವಾಗಿ ಅಭ್ಯಾಸ ಮಾಡಿದ್ದರಿಂದ ಹಾಗೂ ಈ ವಿದ್ಯೆಯಲ್ಲಿ ನಿಷ್ಣಾತರಾದವರನ್ನು ಸಂಧಿಸಿದ್ದರಿಂದ ತಿಳಿದು ಬಂದ ವಿಷಯಗಳು ಹಲವಾರು.


* ಸಮ್ಮೋಹನದಿಂದ ಕೆಟ್ಟ ಚಟಗಳನ್ನು ಬಿಡಿಸಬಹುದು. ಆದರೆ ನಿರಂತರವಾಗಿ ಸಮ್ಮೋಹನಗೊಳಿಸುತ್ತಾ ಅವರಿಗೆ ನಿರ್ದೇಶನ ನೀಡಬೇಕಾಗುತ್ತದೆ. ಅದಕ್ಕೂ ಮೊದಲು ಅವರು ಸಮ್ಮೋಹನಕ್ಕೊಳಗಾಗಬೇಕು. ಸಾಧಾರಣವಾಗಿ ಕೆಟ್ಟ ಚಟಕ್ಕೆ ಬಲಿಯಾಗುವವರು ದುರ್ಭಲ ಮನಃಸ್ಥಿತಿಯವರೇ. ಇಂತವರನ್ನು ಸಮ್ಮೋಹನಗೊಳಿಸುವುದು ಕಷ್ಟಸಾಧ್ಯ. ಮನೋಬಲ ಧೃಡವಾಗಿರುವ , ಏಕಾಗ್ರತೆ ಇರುವವರೇ ಸಮ್ಮೋಹನಕ್ಕೆ ಯೋಗ್ಯರು.


* ಓದಿನಲ್ಲಿ ಆಸಕ್ತಿ ಇಲ್ಲದ ವಿದ್ಯಾರ್ಥಿಗೆ ಆಸಕ್ತಿ ಬರುವಂತೆ ಮಾಡಬಹುದು. ಇದಕ್ಕೂ ನಿರಂತರ ಸಮ್ಮೋಹನದ ಅಗತ್ಯ ಇದೆ.


* ಒಮ್ಮೆ ನಮಗೆ ಸಮ್ಮೋಹನಗೊಂಡ ವ್ಯಕ್ತಿ ಕಂಡಿತಾ ನಮ್ಮ ಹಿಡಿತದಲ್ಲಿ ಇರುತ್ತಾನೆ. ಆದರೆ ಅವನಿಂದ ಎಲ್ಲಾ ಕೆಲಸಗಳನ್ನೂ ಮಾಡಿಸಲು ಸಾಧ್ಯವಿಲ್ಲ. ಸಮ್ಮೋಹನಗೊಂಡಾಗಲೂ ಆತನ ಒಳ ಮನಸ್ಸು ಎಚ್ಚರವಾಗಿಯೇ ಇರುತ್ತದೆಯಾದ್ದರಿಂದ ಅವನ ಆಂತರ್ಯಕ್ಕೆ ಒಪ್ಪದ ಕೆಲಸವನ್ನು ಮಾಡಿಸಲು ಸಾಧ್ಯವಿಲ್ಲ. ಸಮ್ಮೋಹನಗೊಳಿಸಿದಾಗ ಹುಡುಗನಿಗೆ ನಿನ್ನ ಬಟ್ಟೆಗಳನ್ನು ತೆಗೆದು ಹಾಕು ಅಂದಾಗ ಅವನು ಹಾಗೆಯೇ ಮಾಡಬಹುದು. ಆದರೆ ಹುಡುಗಿಗೆ ಹಾಗೆ ಹೇಳಿದಾಗ ಅವಳು ಅದನ್ನು ತಿರಸ್ಕರಿಸುತ್ತಾಳೆ.


* ಸಮ್ಮೋಹನಗೊಂಡ ವ್ಯಕ್ತಿಯ ಪಂಚೇಂದ್ರಿಯಗಳು ಅವರ ಒಳ ಮನಸ್ಸಿನ ಸಂಪರ್ಕದಲ್ಲಿ ಇರುವುದಿಲ್ಲ. ಉದಾ : ಟಿ.ವಿ.ಯಲ್ಲಿ ಸಿನೆಮಾ ಬರುತ್ತಿದೆ, ಆದರೆ ಮ್ಯೂಟ್ ಮಾಡಲಾಗಿದೆ ಎಂದು ಆಜ್ಞಾಪಿಸಿದರೆ ಆತನಿಗೆ ಟಿವಿ ವ್ಯಾಲ್ಯೂಮ್ ಎಷ್ಟೇ ಇದ್ದರೂ ಯಾವ ಶಬ್ದವೂ ಕೇಳಿಸುವುದಿಲ್ಲ. ಅದೇ ರೀತಿ ಟಿವಿಯಲ್ಲಿ ಸುದ್ದಿ ಪ್ರಸಾರವಾಗುತ್ತಿರುವುದನ್ನು ತೋರಿಸಿ ನೋಡು ರಾಜ್‌ಕುಮಾರ್ ಅವರ ಮಯೂರ ಚಿತ್ರ ಬರುತ್ತಿದೆ ಎಂದರೆ, ಆತ ಹೌದು ಎಂದು ಕಣ್ಣರಳಿಸಿ ನೋಡುತ್ತಾನೆ. ಎಚ್ಚರಾದ ನಂತರ ನೀನು ಯಾವ ಚಿತ್ರ ನೋಡಿದೆ? ಎಂದು ಕೇಳಿದರೆ ಕಂಡಿತಾ ಅವನು ನಾನು ನೋಡಿದ್ದು ಮಯೂರ ಎಂದೇ ಹೇಳುತ್ತಾನೆ. ಈ ರೀತಿಯ ಎಷ್ಟು ಪ್ರಯೋಗಗಳನ್ನು ಬೇಕಾದರೂ ಮಾಡಬಹುದು.


* ಸಮ್ಮೋಹನಗೊಂಡಾಗ ಯಾರನ್ನೂ ಗುರುತು ಹಿಡಿಯಲು ಸಾಧ್ಯವಿಲ್ಲ ಎಂದು ನಿರ್ದೇಶಿಸಿದರೆ, ಆತನ ಎಷ್ಟೇ ಹತ್ತಿರದ ಸ್ನೇಹಿತರಂತಿರಲಿ, ತಂದೆ ತಾಯಿಯರನ್ನೂ ಗುರುತು ಹಿಡಿಯಲಾರ.


* ಸಮ್ಮೋಹನಗೊಳಿಸಿದಾಗ ನಿನಗೆ ಚಳಿಯಾಗುತ್ತದೆ ಎಂದರೆ ಎಷ್ಟೇ ಸೆಖೆ ಇದ್ದರೂ ನಡುಗಲಾರಂಬಿಸುತ್ತಾರೆ. ಹಾಗೆಯೇ ಸೆಖೆಯಾಗುತ್ತಿದೆ ಎಂದರೆ ಎಷ್ಟೇ ಚಳಿ ಇದ್ದರೂ ಸೆಖೆಯ ಅನುಭವ ಪಡೆಯುತ್ತಾರೆ.


* ನಾನೀಗ ಎಚ್ಚರಗೊಳಿಸುತ್ತೇನೆ, ಎಚ್ಚರಾದ ನಂತರ ನಿನಗೆ ಎದ್ದು ನಡೆದಾಡಲು ಸಾಧ್ಯವಿಲ್ಲ ಎಂದು ಹೇಳಿ ಸಮ್ಮೋಹನದಿಂದ ಎಬ್ಬಿಸಿದರೆ, ಎದ್ದ ನಂತರವೂ ಆತನಿಂದ ನಡೆದಾಡಲು ಸಾಧ್ಯವಾಗುವುದಿಲ್ಲ. ಕುಳಿತುಕೊಂಡೇ ಇರುತ್ತಾನೆ.


* ಖಾಲಿ ಹಾಳೆಯ ಪುಸ್ತಕದಲ್ಲಿ ಬಣ್ಣಬಣ್ಣದ ಚಿತ್ರಗಳಿವೆ ಎಂದು ಸಮ್ಮೋಹನದಲ್ಲಿ ತೋರಿಸಿದರೆ ನಂತರ ಎಚ್ಚರಾದ ನಂತರವೂ ಆತನಿಗೆ ಬಿಳಿ ಹಾಳೆಯಲ್ಲೂ ಬಣ್ಣಬಣ್ಣದ ಚಿತ್ರಗಳು ಕಾಣಿಸುತ್ತವೆ.


* ಸಮ್ಮೋಹನಗೊಂಡವರ ಮನಸ್ಸಿಗೆ ನೋವಾಗದಂತಹ, ಕೀಳಾಗಿ ನಡೆಸಿಕೊಳ್ಳದಂತಹ ಏನೇ ಕೆಲಸಗಳನ್ನಾದರೂ, ಹಾವ ಭಾವಗಳನ್ನಾದರೂ ಅವರಿಂದ ಮಾಡಿಸಬಹುದು. ಹಾಡು ಹೇಳಿಸಬಹುದು, ನೃತ್ಯ ಮಾಡಿಸಬಹುದು.


* ನಾನು ಮಾಡಿದ ಕುತೂಹಲಕಾರಿ ಪ್ರಯೋಗವೆಂದರೆ ಒಬ್ಬ ಹುಡುಗನನ್ನು ಸಮ್ಮೋಹನಗೊಳಿಸಿ ನೀನು ಈಗ ಎಚ್ಚರಾಗುತ್ತೀಯ, ಎಚ್ಚರಾದ ನಂತರ ನಿನಗೆ ಟೇಬಲ್ ಮೇಲಿರುವ ಪುಸ್ತಕ ಕಾಣಿಸುವುದಿಲ್ಲ. ಎಂದು ಹೇಳಿ ಎಬ್ಬಿಸಿದ್ದೆ. ಟೇಬಲ್ ಮೇಲೆ ಬೇರೇನೂ ವಸ್ತುಗಳಿಲ್ಲದೇ ಬರೇ ಒಂದು ಪುಸ್ತಕವನ್ನು ಮಾತ್ರ ಇಡಲಾಗಿತ್ತು. ಎಚ್ಚರಾದ ನಂತರ ಟೇಬಲ್ ಮೇಲಿರುವ ಪುಸ್ತಕ ಕೊಡು ಅಂದಾಗ ಅವನು ಟೇಬಲ್ ನೋಡಿ ಅಲ್ಲಿ ಏನೂ ಇಲ್ಲ ಅಂದ! ಇನ್ನೊಮ್ಮೆ ಸಮ್ಮೋಹನಗೊಳಿಸಿ ನಿನಗೆ ಎಚ್ಚರಾದ ನಂತರ ನಾವ್ಯಾರೂ ನಿನ್ನ ಕಣ್ಣಿಗೆ ಕಾಣಿಸುವುದಿಲ್ಲ ಎಂದು ಹೇಳಿ ಎಬ್ಬಿಸಿದೆ. ಆಶ್ಚರ್ಯವೆಂದರೆ ಆ ಕೋಣೆಯಲ್ಲಿ ಮೂರ್ನಲ್ಕು ಜನರಿದ್ದರೂ ಸಹ ಅವನು ಯಾರನ್ನೂ ಕಂಡು ಹಿಡಿಯಲಾಗದೇ ಹುಡುಕತೊಡಗಿದ್ದ. ಎದುರಲ್ಲೇ ಹೋದರೂ ಸಹ ಅವನು ಗಮನಿಸಲಿಲ್ಲ. ಇಂತಹವನ್ನು ಮನೋರಂಜನೆಗಾಗಿ ಮಾತ್ರವೇ ಮಾಡಬೇಕು.


ಕಲಿಯುವುದು ಹೇಗೆ ?


ಕಂಡಿತಾ ಇದು ಸುಲಭವಲ್ಲ. ಹಾಗಂತ ಸಾಧ್ಯವೇ ಇಲ್ಲ ಎಂದೇನಲ್ಲ. ಆದರೆ ಕಲಿಯಲು ಅಪರಿಮಿತವಾದ ಸಹನೆ ಮತ್ತು ಸಮಯ, ಶ್ರದ್ಧೆ ಬೇಕಾಗುತ್ತದೆ. ಒಂದೆರಡು ದಿನಕ್ಕೆ, ತಿಂಗಳಿಗೆ ಕರಗತವಾಗುವ ಕಲೆಯಲ್ಲ ಇದು. ಮುಖ್ಯವಾಗಿ ಚೆನ್ನಾಗಿ ತಿಳಿದಿರುವ ವ್ಯಕ್ತಿಯ ಮಾರ್ಗದರ್ಶನ ಬೇಕೆ ಬೇಕಾಗುತ್ತದೆ. ಇಲ್ಲವೆಂದರೆ ನಾವು ಕಷ್ಟಕ್ಕೆ ಸಿಲುಕುವುದಲ್ಲದೇ ನಮ್ಮಿಂದ ಪ್ರಯೋಗಕ್ಕೊಳಗಾಗಿ ಬೇರೆಯವರಿಗೂ ತೊಂದರೆ ಆಗಬಹುದು.


ಏಕಾಗ್ರತೆಯೇ ಇದರ ಮುಖ್ಯ ಬಂಡವಾಳ. ಅದನ್ನು ಸಾಧಿಸಲು ಅನೇಕ ಕ್ರಮಗಳಿವೆ. ಅವುಗಳನ್ನು ಇಲ್ಲಿ ಸವಿವರವಾಗಿ ನೀಡಲು ಸ್ಥಳಾಭಾವ. ಹಾಗೂ ಹಾಗೆ ನೀಡಬೇಕೆಂದರೆ ದೊಡ್ಡದೊಂದು ಪುಸ್ತಕವನ್ನೇ ಬರೆಯಬೇಕಾದೀತು. ಧ್ಯಾನ ಮಾಡುವುದನ್ನು ಅಭ್ಯಾಸ ಮಾಡಿಕೊಳ್ಳಬೇಕು. ಏಕಾಗ್ರತೆ ಗಳಿಸಲು ಕೆಲವೊಂದು ಪರಿಕರಗಳನ್ನು ಮಾಡಿಕೊಳ್ಳಬೇಕು. ಬಿಳಿಯ ಹಾಳೆಯ ಮಧ್ಯೆ ಚಿಕ್ಕದೊಂದು ಕಪ್ಪು ಚುಕ್ಕೆ ಇಟ್ಟು ಅದರ ಮೇಲೆ ಗಮನ ಇರಿಸಿ ಮನಸ್ಸಿನಲ್ಲಿ ಏನೂ ಯೋಚನೆ ಬಾರದಂತೆ ಬರೇ ಆ ಚುಕ್ಕೆ ಮಾತ್ರ ಇರುವಂತೆ ಮಾಡುವುದು ಒಂದು ವಿಧಾನ. ಇಂತಹ ಸಂದರ್ಭದಲ್ಲಿ ಕೆಲವು ದಿನಗಳು ಕಳೆದಂತೆ ನಮ್ಮ ದೇಹವನ್ನು ಏನೋ ಶಕ್ತಿ ಆವರಿಸಿಕೊಂಡಂತೆ ಭಾಸವಾಗುತ್ತದೆ. ಅದು ಬೇರೇನಲ್ಲ, ನಮ್ಮ ಸುಪ್ತ ಮನಸ್ಸು ಪ್ರಚೋದನೆಗೊಳಗಾಗಿ ನಮ್ಮ ಬಾಹ್ಯ ಮನಸ್ಸಿನೊಂದಿಗೆ ಬೆರೆಯುತ್ತಿರುವುದರ ಸಂಕೇತ.


ಇಂತಹ ಅಭ್ಯಾಸಗಳನ್ನು ಮುಂದುವರಿಸಿದಂತೆ 15-20 ನಿಮಿಷಗಳ ನಂತರ ಕಣ್ಣು ಮುಚ್ಚಿಕೊಳ್ಳಬೇಕು. ಆಗ ಏನೇನೋ ದೃಶ್ಯಗಳು ಗೋಚರಿಸುತ್ತವೆ. ಹಾಗೂ ಒಂದು ಸುಪ್ತ ನಿದ್ರೆಗೆ ಜಾರುತ್ತೇವೆ. ಪ್ರಾರಂಭದಲ್ಲಿ ಏನೇನೋ ಮಾತುಗಳು, ಧ್ವನಿಗಳು ಕೇಳಲಾರಂಭಿಸುತ್ತವೆ. ನಿದ್ರೆಯಿಂದ ಎಚ್ಚರಾದ ನಂತರ ನಮ್ಮ ದೇಹದ ಹಿಡಿತವೇ ಇರದಂತೆ ಭಾಸವಾಗುತ್ತದೆ. ಇದೆಲ್ಲಾ ನಾವು ಸರಿಯಾದ ಕ್ರಮದಲ್ಲಿ ಏಕಾಗ್ರತೆ ಪಡೆಯುತ್ತಿದ್ದೇವೆ ಎಂಬುದರ ಸಂಕೇತಗಳಾಗಿವೆ.


ಸ್ವ-ಸಮ್ಮೋಹನ


ಮೇಲೆ ತಿಳಿಸಿದ ಅಭ್ಯಾಸಗಳನ್ನು ಕನಿಷ್ಟ ಒಂದು ವರ್ಷವಾದರು ಮಾಡಿದ ನಂತರ ಸ್ವ-ಸಮ್ಮೋಹನಕ್ಕೆ ಇಳಿಯಬೇಕು. ಏಕಾಂತ ಸ್ಥಳದಲ್ಲಿ ಅಂಗಾತ ಮಲಗಿಕೊಂಡು ಕಣ್ಣು ಮುಚ್ಚಿ ನಿಮ್ಮ ಒಳ ಮನಸ್ಸಿಗೆ ಏನಾದರು ಆದೇಶ ನೀಡುತ್ತಾ ಹೋಗಿರಿ. ಉದಾ : ನನ್ನ ಬಲಗೈ ಎದೆಯ ಮೇಲೆ ಬರಬೇಕು ಎಂದಾಗಿರಬಹುದು. ಆದರೆ ನೀವಾಗೇ ಅದನ್ನು ಮಾಡಬಾರದು. ನೀವು ಸತತವಾಗಿ ನಿಮ್ಮ ಸುಪ್ತ ಮನಸ್ಸಿಗೆ ಆದೇಶ ನೀಡುತ್ತಾ ಹೋದಂತೆ, ಸುಪ್ತ ಮನಸ್ಸು ಪ್ರಚೋದನೆಗೊಂಡು ನಿಮ್ಮ ಬಲಗೈಯನ್ನು ತಾನಾಗೇ ಎದೆಯ ಮೇಲೆ ಬರುವಂತೆ ಮಾಡುತ್ತದೆ. ಆಗ ನಿಮ್ಮ ಸುಪ್ತ ಮನಸ್ಸು ಹತೋಟಿಗೆ ಬಂದಿದೆ ಎಂದೇ ಅರ್ಥ.


ಇಂತಹ ಪ್ರಯೋಗಗಳನ್ನೂ ಸಹ ವರ್ಷಗಟ್ಟಲೇ ಬಿಡದೇ ಮಾಡುತ್ತಿರಬೇಕು. ತಣ್ಣೀರನ್ನು ಇದು ಬಿಸಿಯಾಗಿದೆ ಎಂದು ಮನಸ್ಸಿನಲ್ಲಿ ಅಂದುಕೊಂಡು ನಿವು ಮುಟ್ಟಿದರೆ ಅದು ಬಿಸಿಯ ಅನುಭವ ನೀಡಬೇಕು. ಅಂಗೈಯಲ್ಲಿ ಒಂದು ನಾಣ್ಯವನ್ನು ಇರಿಸಿಕೊಂಡು ಅದು ಬಿಸಿಯಾಗುತ್ತಿದೆ ಅಂದುಕೊಳ್ಳುತ್ತಾ ಹೋದರೆ, ಸ್ವಲ್ಪ ಸಮಯದಲ್ಲೆ ಅದು ಬಿಸಿಯಾದಂತೆ ಭಾಸವಾಗಿ ಕೈ ಸುಡುವಂತಗಬೇಕು. ಅಲ್ಲಿಯವರೆಗೂ ನಿಮ್ಮ ಅಭ್ಯಾಸ ನೆಡೆಯುತ್ತಿರಬೇಕು.


ಇಷ್ಟಾದ ನಂತರ ಬೇರೆ ವ್ಯಕ್ತಿಗಳನ್ನು ಸಮ್ಮೋಹನಕ್ಕೆ ಒಳಪಡಿಸಲು ಸಾಧ್ಯ. ಇದಕ್ಕೆ ಸೂಕ್ತ ವ್ಯಕ್ತಿಯ ಮಾರ್ಗದರ್ಶನ ಬೇಕೇ ಬೇಕು. ಮತ್ತು ಸಮ್ಮೋಹನದ ಬಗ್ಗೆ ಇರುವ ಪುಸ್ತಕಗಳನ್ನೆಲ್ಲಾ ಒಂದೂ ಬಿಡದೇ ಓದಬೇಕು.


ಸಮ್ಮೋಹನ ಬೇಡ !


ನನ್ನ ಅನಿಸಿಕೆಯೆಂದರೆ ಬೇರೆ ವ್ಯಕ್ತಿಗಳನ್ನು ಸಮ್ಮೋಹನಗೊಳಿಸಲು ಪ್ರಯತ್ನ ಪಡದಿರುವುದೇ ಉತ್ತಮ. ನೀವೊಬ್ಬ ಮನೋವಿಜ್ಞಾನಿ ಅಥವಾ ಮನೋರಂಜನೆ ನೀಡುವ ಸ್ಟೇಜ್ ಜಾದೂಗಾರ ಆಗಿರದ ಹೊರತೂ ಅದರ ಅಗತ್ಯ ಯಾರಿಗೂ ಇರುವುದಿಲ್ಲ. ಬದಲಿಗೆ ಸಮ್ಮೋಹನ ಎಂದರೇನೆಂದು ತಿಳಿದುಕೊಂಡು, ಸ್ವ-ಸಮ್ಮೋಹನದಿಂದ ಲಾಭ ಪಡೆಯುವುದೇ ಜಾಣತನ. ಸ್ವ- ಸಮ್ಮೋಹನದಿಂದ ನಮ್ಮ ಬದುಕನ್ನು ಆದಷ್ಟು ಉತ್ತಮ ಪಡಿಸಿಕೊಳ್ಳಬಹುದು. ನೆಮ್ಮದಿಯಿಂದ ಇರಬಹುದು. ಮನಸ್ಸನ್ನು ಹತೋಟಿಯಲ್ಲಿ ಇಟ್ಟುಕೊಳ್ಳಹುದು. ನಮಗೆ ಬೇಕಾದ ಕೆಲಸಗಳೆಡೆಗೆ ಮನಸ್ಸನ್ನು ಹರಿಯುವಂತೆ ಮಾಡಬಹುದು. ಸಂಕಷ್ಟಗಳು ಎದುರಾದಾಗ ಕೂಡಾ ನಿಶ್ಚಿಂತೆಯಿಂದ ಇರಲು ಸಾಧ್ಯ.

Author:  Shripati

ಐಎಎಸ್ ಮಾಡಲು ಸಲಹೆಗಳು

This articel about Civis Services Exam (IAS IPS IFS etc..) information. some suggestions and guidelines are here. I hope it will give use to you. I got this by WhatsApp

Yours
Guruprasad S Hattigoudar
Mob: 9945479292

ಐಎಎಸ್ ( IAS) ಗೆ ಸಿದ್ಧತೆ ಮಾಡಿಕೊಳ್ಳಲು ನಮ್ಮ ಸಲಹೆಗಳು
ಐ ಎ ಎಸ್ ಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದೀರಾ? ಅಥವಾ ಮಾಡಬೇಕು ಎಂದು ಕೊಂಡುರುವಿರಾ? ಹಾಗಾದರೆ ಹೇಗೆ ಸಿದ್ಧತೆ ಮಾಡಿಕೊಳ್ಳುವುದು ಎಂಬ ಗೊಂದಲದಲ್ಲಿದ್ದೀರಾ? ಹಾಗಾದರೆ ನಿಮಗೆ ನಮ್ಮ ಕೆಲವು ಸಲಹೆಗಳನ್ನು ನೀಡುತ್ತಿದ್ದೇವೆ ತೆಗೆದುಕೊಳ್ಳಿ.

ಮೊದಲಿಗೆ IAS ಎಂಬುದು ದೇಶದಲ್ಲಿಯೇ ಅತ್ಯಂತ ಕಠಿಣ ಪರೀಕ್ಷೆಗಳಲ್ಲಿ ಒಂದು ಎಂಬುದು ತಿಳಿದಿರಲಿ. ಇದ್ದರೆ ಇರಲಿ ಬಿಡಿ. ಅದು ಹಾಗೆ ಕಠಿಣವಾಗಿರುವುದಕ್ಕೆ ತಾನೇ ನೀವು ಅದನ್ನು ಎದುರಿಸಲು ಸಿದ್ಧವಾಗಿರುವುದು!. ಕ್ಷಮಿಸಿ ಸಿದ್ಧವಾಗಲು ಎದ್ದಿರುವುದು. ಈಗ ವಿಚಾರಕ್ಕೆ ಬರೋಣ. ಹೇಗೆ ಸಿದ್ಧವಾಗುವುದು.
1. ಮೊದಲು ದೃಢ ನಿರ್ಧಾರ ಮಾಡಿ.
IAS ಆಗಲೇ ಬೇಕು ಎಂಬ ದೃಢ ನಿರ್ಧಾರವನ್ನು ಮೊದಲು ಮಾಡಿ. ಯಾವುದೇ ರೀತಿಯ ನಕಾರಾತ್ಮಕ ಆಲೋಚನೆಗಳನ್ನು ಮಾಡಬೇಡಿ. ಏಕೆಂದರೆ ಈ ನಕಾರಾತ್ಮಕ ಆಲೋಚನೆಗಳು ನಿಮ್ಮನ್ನು ಹಿಂದಕ್ಕೆ ತಳುತ್ತವೆ ಎಂಬುದನ್ನು ಮರೆಯಬೇಡಿ. ಒಂದು ಮಾತು ತಿಳಿಯಿರಿ. “ ನಾವೇನಾದರು ಮಾಡಬೇಕೆಂದು ನಮ್ಮ ಹೃದಯಾಂತರಾಳದಿಂದ ಬಯಸಿದಾಗ, ಅದನ್ನು ನೆರವೇರಿಸಲು ನಮಗೆ ಇಡೀ ಬ್ರಹ್ಮಾಂಡವೇ ನೆರವಾಗುತ್ತದೆ” ಎಂದು ಪ್ರಸಿದ್ಧ ಪುಸ್ತಕ ’ದಿ ಆಲ್ಕೆಮಿಸ್ಟ್” ಹೇಳುತ್ತದೆ.
2 . ನಿಮ್ಮ ವಿಷಯವನ್ನು ಆಯ್ಕೆ ಮಾಡಿಕೊಳ್ಳಿ.
ಸರಿಯಾದ ಆರಂಭ ಯಶಸ್ಸಿಗೆ ಸೋಫಾನ ಎಂಬುದನ್ನು ಮರೆಯಬೇಡಿ. ಪ್ರಿಲಿಮಿನರಿ ಮತ್ತು ಮುಖ್ಯ ಪರೀಕ್ಷೆಗೆ ಯಾವ ಯಾವ ವಿಷಯವನ್ನು ಆಯ್ಕೆ ಮಾಡಿಕೊಳ್ಳಬೇಕು ಎಂಬುದನ್ನು ಮೊದಲೇ ನಿರ್ಧರಿಸಿ. ಆದಷ್ಟು ನಿಮಗೆ ತಿಳುವಳಿಕೆಯಿರುವ ವಿಷಯಗಳನ್ನೇ ಆಯ್ಕೆ ಮಾಡಿಕೊಳ್ಳಿ. ಆಯ್ಕೆಗೆ ಮೊದಲು ಒಮ್ಮೆ ಅವುಗಳ ಪರಾಮರ್ಶನ ಗ್ರಂಥಗಳ ಲಭ್ಯತೆಯ ಬಗ್ಗೆ ಅರಿತುಕೊಳ್ಳಿ. ಇತರರ ಅಭಿಪ್ರಾಯಕ್ಕಿಂತ ನಿಮ್ಮ ಅಂತರಾಳದ ಅಭಿಪ್ರಾಯಕ್ಕೆ ಬೆಲೆಕೊಡಿ.
3.ನಿರಂತರವಾಗಿ ಅಭ್ಯಾಸ ಮಾಡಿ
ಯಾವುದೇ ಕಾರಣಕ್ಕು ನಿಮ್ಮ ಅಭ್ಯಾಸವನ್ನು ಅರ್ಧದಲ್ಲಿಯೇ ಬಿಡಬೇಡಿ. ನಿರಂತರವಾಗಿ ಅಭ್ಯಾಸ ಮಾಡಿ. ಪರೀಕ್ಷೆ ಮುಗಿಯುವವರೆಗು ಬೇರೆಲ್ಲ ಕೆಲಸಗಳನ್ನು ಮತ್ತು ನಿಮ್ಮ ಹವ್ಯಾಸಗಳನ್ನು ಬದಲಾಯಿಸಿಕೊಳ್ಳಿ.
4. ಓದಿ, ಓದಿ, ಬರೆಯಿರಿ ಮತ್ತು ಓದಿ.
ಹೌದು ನಿರಂತರ ಓದು, ಸ್ವಯಂ ರಚಿಸಿದ ಟಿಪ್ಪಣಿಗಳು ನಿಮ್ಮನ್ನು ಯಶಸ್ವಿಗಳನ್ನಾಗಿಸುತ್ತದೆ. ಬೆಳಗ್ಗಿನಿಂದ ರಾತ್ರಿಯವರೆಗೆ ಓದಿ. ಮತ್ತು ರಾತ್ರಿಯಿಂದ ಬೆಳಗಿನವರೆಗೆ ಓದಿ. ಇದು ಹತ್ತನೆಯ ತರಗತಿಯ ಪರೀಕ್ಷೆ ಅಲ್ಲ. ಚೆನ್ನಾಗಿ ನಿದ್ದೆ ಮಾಡಿ, ಪಠ್ಯಕ್ರಮ ಏನಿದೆಯೊ ಅದನ್ನು ಓದಲು. IASನಲ್ಲಿ ಸೂರ್ಯನ ಕೆಳಗೆ ಇರುವ ಯಾವುದೇ ವಿಚಾರವನ್ನಾದರು ಅವರು ಪ್ರಶ್ನೆಯ ರೂಪದಲ್ಲಿ ಕೇಳಬಹುದು. ಅದಕ್ಕಾಗಿ ನಿರಂತರವಾಗಿ ಓದಿದರೆ ಮಾತ್ರ ಸಾಧ್ಯ. ಅದನ್ನು ವ್ಯವಸ್ಥಿತವಾಗಿ ಓದಿ. ವೇಳಾಪಟ್ಟಿಯಿದ್ದರೆ ನಿಮ್ಮ ಓದು ಸುಲಭವಾಗಿ ಸಾಗುತ್ತದೆ. HINDU, TELL ME WHY, ENCYCLOPAEDIA’S, ಪ್ರಜಾವಾಣಿ. ವಿಜಯ ಕರ್ನಾಟಕ, TIMES ಹೀಗೆ ಎಲ್ಲಾ ಬಗೆಯ ಪತ್ರಿಕೆಗಳನ್ನು ಮತ್ತು ನಿಯತಕಾಲಿಕೆಗಳನ್ನು ಓದಿ. ತಪ್ಪದೆ ಟಿಪ್ಪಣಿ ಮಾಡಿಕೊಳ್ಳಿ.
5. ಸಾಮಾನ್ಯ ಙ್ಞಾನವನ್ನು ಹೆಚ್ಚಿಸಿಕೊಳ್ಳಿ.
ಓದುವಾಗ ಪ್ರಚಲಿತ ಸಂಗತಿಗಳನ್ನು ಸಹ ಟಿಪ್ಪಣಿ ಮಾಡಿಕೊಳ್ಳಿ. ಮಾಹಿತಿಗಾಗಿ ಸುದ್ದಿ ವಾಹಿನಿಗಳನ್ನು ಮಿತವಾಗಿ ನೋಡಿ. ಆದರೆ ಟಿ.ವಿ ಅಥವಾ ಅಂತರ್ ಜಾಲಕ್ಕೆ ಅಂಟಿಕೊಳ್ಳಬೇಡಿ.\


6. ಚರ್ಚಾ ಕೂಟವನ್ನು ರಚಿಸಿಕೊಳ್ಳಿ.
ಸಾಧ್ಯವಾದರೆ ನಿಮ್ಮದೇ ಆದ ಗೆಳೆಯರ ಅಥವಾ ಸಮಾನ ಮನಸ್ಕರ ಚರ್ಚಾ ಕೂಟವನ್ನು ರಚಿಸಿಕೊಳ್ಳಿ. ಅಲ್ಲಿ ನಿಮ್ಮ ಸಂಶಯಗಳನ್ನು ಮತ್ತು ಮಾಹಿತಿಯನ್ನು ವಿನಿಮಯ ಮಾಡಿಕೊಳ್ಳಿ. ಮರಕ್ಕಿಂತ ಮರ ದೊಡ್ಡದು ಎಂಬ ಗಾದೆಯಂತೆ ಓದಿರುವ ನಿಮ್ಮ ಸ್ನೇಹಿತರು ಅವರ ಅನುಭವವನ್ನು ನಿಮ್ಮ ಜೊತೆ ಹಂಚಿಕೊಳ್ಳಬಹುದು.
7. ನಿರಾಶರಾಗ ಬೇಡಿ
ಯಶಸ್ಸು ಒಂದೇ ಸಲ ಸಿಕ್ಕರು , ಮೊದಲ ಬಾರಿಗೆ ಸಿಗುವುದಿಲ್ಲ. ಯಾವುದೇ ಕಾರಣಕ್ಕು ನಿರಾಶರಾಗ ಬೇಡಿ. ನಿಮ್ಮ ಗುರಿಯನ್ನು ತಲುಪುವವರೆಗು ಅದರ ಬಗ್ಗೆ ಯೋಚಿಸಬೇಡಿ. ಇಂದು ಮೊದಲ ಸ್ಥಾನ ಪಡೆದ ವಿದ್ಯಾರ್ಥಿ ಸಹ ಹಿಂದೆ ಅನುತ್ತೀರ್ಣನಾಗಿದ್ದನೆಂದು ಮರೆಯಬೇಡಿ.
8. ಗ್ರಂಥಾಲಯಗಳಿಗೆ ಭೇಟಿಕೊಡುತ್ತಿರಿ.
ನಿಮಗೆ ಬೇಕಾದ ಆಧಾರ ಗ್ರಂಥಗಳ ಜೊತೆಗೆ ನಿಮಗೆ ಉಪಯುಕ್ತವಾಗಬಹುದಾದ ಹಲವು ಗ್ರಂಥಗಳು ದೊರೆಯುವ ಸ್ಥಳ ಗ್ರಂಥಾಲಯ ತಪ್ಪದೇ ಭೇಟಿ ಕೊಡುತ್ತಿರಿ. ಯಾರಿಗೆ ಗೊತ್ತು ಯಾವ ವಿಚಾರ ಎಲ್ಲಿ ಉಪಯೋಗಕ್ಕೆ ಬರುತ್ತದೆಯೋ?

9. ತಪ್ಪದೇ ವ್ಯಾಯಾಮ/ ಧ್ಯಾನ ಮಾಡಿ.
ನಿಮ್ಮ ಪರೀಕ್ಷಾ ಸಿದ್ಧತೆಗೆ ನೀವು ದೈಹಿಕವಾಗಿ ಮತ್ತು ಮಾನಸಿಕವಾಗಿ ಸಧೃಡವಾಗಿರಬೇಕೆಂಬುದನ್ನು ಮರೆಯಬೇಡಿ. ವ್ಯಾಯಾಮ ಮತ್ತು ಧ್ಯಾನಗಳು ನಿಮ್ಮ ದೇಹ ಮತ್ತು ಮನಸ್ಸನ್ನು ಉಲ್ಲಾಸಿತವನ್ನಾಗಿ ಇಡುತ್ತವೆ.
10. ಏಕಾಂತದಲ್ಲಿ ಕನಸು ಕಾಣಿ
ಇದೊಂದು ರೀತಿ visualization ತಂತ್ರ ಹಗಲುಗನಸು ಕಾಣಿ. ಆದರೆ ಅದು ವಾಸ್ತವವಾಗುವಂತಿರಲಿ. ಇದೇ ಹಗಲು ಗನಸುಗಳು ನಿಮ್ಮನ್ನು ಪ್ರೇರಣೆ ಮಾಡುತ್ತವೆ ಎಂಬುದನ್ನು ಮರೆಯಬೇಡಿ.
ಇನ್ನೇಕೆ ತಡ ಸಲಹೆ ಓದಿದಿರಲ್ಲ. ಮತ್ತೇ ಶುರು ಹಚ್ಚಿಕೊಳ್ಳಿ. ALL THE BEST FOR FUTURE IAS!!!!!!!!!!

ಕೆಪಿಎಸ್‌ಸಿ (ಕೆಎಎಸ್) ಸಂದರ್ಶನ

This article about how to face KAS ( KPSC ) interview. I got this article by WhatsApp.
 by - Guruprasad Hattigoudar
         Jnanamukhi
         Mob: 9945479292

(KPSC (KAS) Interview Preparation Guidelines, suggestions)

* ಕರ್ನಾಟಕ ಲೋಕಸೇವಾ ಆಯೋಗ ಕೆಎಎಸ್‌ ಹುದ್ದೆಗಳಿಗೆ ಸದ್ಯದಲ್ಲೇ ಸಂದರ್ಶನ ನಡೆಸಲಿದೆ. ಈ ಸಂದರ್ಶನಕ್ಕೆ ತಯಾರಿ ಹೇಗಿರಬೇಕೆಂಬ ಕುರಿತು ತಜ್ಞರು ನೀಡಿರುವ ಸಲಹೆ ಇಲ್ಲಿದೆ.

ಕರ್ನಾಟಕ ಲೋಕ ಸೇವಾ ಆಯೋಗ (ಕೆಪಿಎಸ್‌ಸಿ) ಗೆಜೆಟೆಡ್‌ ಪ್ರೊಬೆಷನರ್ಸ್‌ಗಳ ನೇಮಕಕ್ಕೆ ಸಂಬಂಧಿಸಿದಂತೆ ಸದ್ಯವೇ ಸಂದರ್ಶನ ನಡೆಸುವುದಾಗಿ ಪ್ರಕಟಿಸಿದೆ. ಈಗಾಗಲೇ ನಿಮಗೆ ತಿಳಿದಿರುವಂತೆ ಸಂದರ್ಶನದಲ್ಲಿ ಮತ್ತು ಮುಖ್ಯ ಪರೀಕ್ಷೆಯಲ್ಲಿ ಪಡೆದ ಅಂಕಗಳನ್ನು ಸೇರಿಸಿ ಮೆರಿಟ್‌ ಲಿಸ್ಟ್‌ ಪ್ರಕಟಿಸಲಾಗುತ್ತದೆ. ಹೀಗಾಗಿ ಸಂದರ್ಶನಕ್ಕೆ ಸಾಕಷ್ಟು ಸಿದ್ಧತೆ ನಡೆಸಿಯೇ ಹೋಗಬೇಕು. ಕಳೆದ ವಾರ ಯಶಸ್ವಿ ಸಂದರ್ಶನಗಳು ಏನೇನು, ಸಂದರ್ಶನದಲ್ಲಿ ಯಾವೆಲ್ಲಾ ಸಾಮರ್ಥ್ಯ‌ವನ್ನು ಅಳೆಯಲಾಗುತ್ತದೆ, ಸಂದರ್ಶನದ ದಿನ ಹೇಗೆ ಸಿದ್ಧತೆ ಮಾಡಿಕೊಳ್ಳಬೇಕು, ಸಂದರ್ಶನ ಕೊಠಡಿಯಲ್ಲಿ ನಿಮ್ಮ ವರ್ತನೆ ಹೇಗಿರಬೇಕೆಂಬುದನ್ನು ತಿಳಿದುಕೊಂಡಿದ್ದೀರಿ, ಇಂದು ಸಂದರ್ಶನದ ಇನ್ನಷ್ಟು ವಿಷಗಳನ್ನು ತಿಳಿದುಕೊಳ್ಳೋಣ.


ಸಂದರ್ಶನದ ಪ್ರಶ್ನೆಗಳಿಗೆ ಉತ್ತರಿಸುವಾಗ ವಹಿಸಬೇಕಾದ ಎಚ್ಚರಿಕೆಗಳು :
━━━━━━━━━━━━━━━━━━━━━━━━━━━

•►ಸಂದರ್ಶಕರು ಕೇಳುವ ಪ್ರಶ್ನೆಗಳನ್ನು ಸ್ಪಷ್ಟವಾಗಿ ಕೇಳಿಸಿಕೊಳ್ಳಬೇಕು. ಸ್ಪಷ್ಟವಾಗಿ ಕೇಳಿಸಿಕೊಳ್ಳದಿದ್ದಾಗ, ನಮ್ಮ ಉತ್ತರಗಳು ತಪ್ಪಾಗಿರುತ್ತವೆ.

•►ಸಂದರ್ಶಕರು ಕೇಳಿದ ಪ್ರಶ್ನೆ ನಮಗೆ ಸರಿಯಾಗಿ ಅರ್ಥವಾಗದಿದ್ದರೆ. ಇನ್ನೊಮ್ಮೆ ಕೇಳಬೇಕೆಂದು ವಿನಂತಿಮಾಡಿಕೊಳ್ಳಿ.

•►ಒರಟಾಗಿ ಉತ್ತರಿಸಬಾರದು. ಅನಾವಶ್ಯಕವಾಗಿ ನಗು ಇರಬಾರದು.

•►ಯಾವ ಸಂದರ್ಶಕರು ಪ್ರಶ್ನೆ ಕೇಳುತ್ತಾರೋ ಅವರ ಕಡೆಗೆ ಮುಖಮಾಡಿ ಉತ್ತರಿಸಿ.

•►ಉತ್ತರ ನೀಡುವಾಗ, ನೆಲ ನೋಡುತ್ತಾ, ಕಿಡಕಿ ನೋಡುತ್ತಾ, ಫ್ಯಾನ್‌ ನೋಡುತ್ತಾ, ಉತ್ತರಿಸಬಾರದು.

•►ನಮ್ಮ ತಪ್ಪುಗಳನ್ನು ಸಂದರ್ಶಕರು ಎತ್ತಿ ತೋರಿಸಿದಾಗ, ಅದನ್ನು ಮನಃಪೂರ್ವಕವಾಗಿ ಒಪ್ಪಿಕೊಂಡು ಬಿಡಿ.

•►ವಿಚಾರ ಮಾಡಿ ಉತ್ತರ ನೀಡಿ. ಅವಸರದಲ್ಲಿ ತಪ್ಪು ಉತ್ತರ ನೀಡಿ. ನಂತರ ಕ್ಷಮೆ ಕೇಳುವುದು ಸೂಕ್ತವಲ್ಲ. ಅವರ ಕೇಳಿದ ಪ್ರಶ್ನೆಗೆ ನಿಮಗೆ ಉತ್ತರ ಗೊತ್ತಿರದಿದ್ದರೆ, ಕ್ಷಮಿಸಿ ನನಗೆ ಗೊತ್ತಿಲ್ಲವೆಂದು ಸ್ಪಷ್ಟವಾಗಿ ಹೇಳಿ. ಅದು ಬಿಟ್ಟು ಉತ್ತರ ಗೊತ್ತಿರದಿದ್ದಾಗ, ಬಾಯಿ ಮುಚ್ಚಿಕೊಂಡು ಸುಮ್ಮನೆ ಕುಳಿತುಕೊಳ್ಳುವುದು ಒಳ್ಳೇಯದಲ್ಲ.

•►ಸಂದರ್ಶಕರರ ಬಗೆಗೆ ಗೌರವ ಇರಲಿ. ಇವರಿಗೇನು ಗೊತ್ತು ಎಂದು ತಪ್ಪು ಉತ್ತರ ನೀಡುವದರ ಮೂಲಕ ಅವರನ್ನು ಮೋಸಗೊಳಿಸುವ ಪ್ರಯತ್ನ ಮಾಡಬೇಡಿ.

•►ಉತ್ತರ ಹೇಳುವಾಗ ಅಹಂ ಪ್ರದರ್ಶನ ಮಾಡಬೇಡಿ. ಸರಳತೆ ಇರಲಿ.

•►ಉತ್ತರಿಸುವಾಗ ಸ್ಪಷ್ಟತೆ ಇರಲಿ, ಬಾಯಿಯಲ್ಲಿ ಗೊಣಗಬೇಡಿ.

•►ಕೆಲವೊಮ್ಮೆ ಸಂದರ್ಶಕರು ಉದ್ದೇಶಪೂರ್ವಕವಾಗಿ ನಿಮ್ಮನ್ನು ಕೆರಳಿಸುವ ಪ್ರಯತ್ನ ಮಾಡುತ್ತಾರೆ. ಆದರೆ, ನೀವು ಯಾವುದೇ ಕಾರಣಕ್ಕೂ ಸಹನೆ ಕಳೆದುಕೊಳ್ಳಬೇಡಿ.

•►ನಿಮ್ಮ ಉಚ್ಛಾರಣೆ ಅತೀ ದೊಡ್ಡದಿರಬಾರದು/ಚಿಕ್ಕದಾಗಿಯೂ ಇರಬಾರದು.

•►ನೀವು ಉತ್ತರ ನೀಡುವಾಗ ಜಾತಿ, ಧರ್ಮ, ಪ್ರದೇಶ, ವೈಯಕ್ತಿಕ ಮಟ್ಟದ ಟೀಕೆ ಇರಬಾರದು.

•►ನಿಮ್ಮ ಉತ್ತರಗಳಲ್ಲಿ ಪ್ರಾಮಾಣಿಕತನ ಇರಲಿ ಹಾಗೂ ದೈಹಿಕ ಅಂಗಾಂಗಗಳ ಚಲನೆ ನಿಯಂತ್ರಣದಲ್ಲಿರಲಿ. ಸಂದರ್ಶಕರ ಕಡೆ ಕೈಮಾಡಿ ಉತ್ತರಿಸುವುದು ಸೂಕ್ತವಲ್ಲ.

•►ಸಂದರ್ಶಕರ ಎದುರಿನಲ್ಲಿ ಕಣ್ಣೀರು ಹಾಕುವುದು, ನಾಟಕೀಯ ವರ್ತನೆ ಮಾಡುವುದು ಹಾಗೂ ನಿಮ್ಮ ಅಸಹಾಯಕತೆಯನ್ನು ಪ್ರದರ್ಶನ ಮಾಡುವುದು ಬೇಡ.

•►ಗಮನಿಸಿ ಎಲ್ಲಾ ಪ್ರಶ್ನೆಗಳಿಗೂ ಉತ್ತರ ಕೊಡಬೇಕೆಂಬ ಹುಚ್ಚು ಕಲ್ಪನೆ ಬೇಡ. ಒಂದೇ ಪ್ರಶ್ನೆಯಾದರೂ ಸಮರ್ಪಕವಾಗಿ ಹಾಗೂ ಆತ್ಮವಿಶ್ವಾಸದಿಂದ ಉತ್ತರಿಸಿರಿ.

•►ಸಂದರ್ಶನ ಮುಗಿಸಿ ಹೊರಗೆ ಬರುವಾಗ, ಎಲ್ಲರಿಗೂ ನಗು ಮುಖದಿಂದ ಧನ್ಯವಾದಗಳನ್ನು ಹೇಳಿ ಹೊರಗೆ ಬನ್ನಿ.


●.ಸಂದರ್ಶನದಲ್ಲಿ ಆಯ್ಕೆಯಾಗದಿರಲು ಕಾರಣಗಳು :

•► ಸರಿಯಾದ ವ್ಯಕ್ತಿತ್ವ ಪ್ರದರ್ಶನ ಮಾಡುವದರಲ್ಲಿ ವಿಫಲ.
•► ನಕಾರಾತ್ಮಕ ವರ್ತನೆಗಳ ಪ್ರದರ್ಶನ.
•► ಆಸಕ್ತಿ ಹಾಗೂ ಉತ್ಸಾಹದ ಕೊರತೆ.
•► ಹುದ್ದೆಗೆ ಸಂಬಂಧಪಟ್ಟಂತೆ ಸರಿಯಾದ ಪೂರ್ವ ತಯಾರಿ ಇಲ್ಲದ್ದು.
•► ಸಾಮಾನ್ಯ ಜ್ಞಾನದ ಬಗೆಗೆ ಮಾಹಿತಿ ಕೊರತೆ.
•► ಸಂದರ್ಶಕರ ಮೇಲೆ ಹಣ, ವಸ್ತು, ಅಧಿಕಾರ ಪ್ರಭಾವ ಬಳಸಿದ್ದು.


ಸಂದರ್ಶನದಲ್ಲಿ ಸಾಮಾನ್ಯವಾಗಿ ಕೇಳುವ ಪ್ರಶ್ನೆಗಳು :


ರಾಜ್ಯದಲ್ಲಿ ಇದುವರೆಗೆ ನಡೆದಿರುವ ಕೆಎಎಸ್‌ ಪರೀಕ್ಷೆಯಲ್ಲಿ ಕೇಳಲಾದ ಪ್ರಶ್ನೆಗಳು ಈ ಕೆಳಗಿನ ವಿಷಯಗಳಗೆ ಸಂಬಂಧಪಟ್ಟವಾಗಿವೆ.

1) ಸ್ವ-ವಿವರ ಬಗೆಗಿನ ಪ್ರಶ್ನೆಗಳು
2) ಅಭ್ಯರ್ಥಿಯ ಜಿಲ್ಲೆಗೆ ಸಂಬಂಧಪಟ್ಟಿರುವ ವಿಷಯದ ಬಗ್ಗೆ.
3) ಶೈಕ್ಷಣಿಕ ಬಗೆಗೆ ಹಾಗೂ ವಿಷಯಗಳ ಬಗೆಗೆ.
4) ನೇಮಕಗೊಳ್ಳುವ ಇಲಾಖೆಗೆ ಸಂಬಂಧಪಟ್ಟಂತೆ.
5) ಪ್ರಚಲಿತ ವಿಷಯಗಳು.
6) ಸಾಮಾನ್ಯ ಜ್ಞಾನಕ್ಕೆ ಸಂಬಂಧಪಟ್ಟಿದ್ದು.
7) ತಾರ್ಕಿಕ ಪ್ರಶ್ನೆಗಳು
8) ಇತರ ವಿಷಯಗಳು.

1) ಸ್ವ-ವಿವರ ಬಗೆಗಿನ ಪ್ರಶ್ನೆಗಳು

1) ನಿಮ್ಮ ಹೆಸರಿನ ಮಹತ್ವ
2) ನಿಮ್ಮ ಹುಟ್ಟಿದ ದಿನಾಂಕದ ವಿಶೇಷತೆ
3) ನಿಮ್ಮ ತಂದೆ-ತಾಯಿಯ ಬಗ್ಗೆ.
4) ಹವ್ಯಾಸಗಳ ಬಗ್ಗೆ.
5) ನಿಮ್ಮ ಮೆಚ್ಚಿನ ನಾಯಕ.
6) ನಿನಗೆ ಇಷ್ಟವಿರುವ ಸ್ಥಳ.
7) ನೀವು ಯಾವ ದಿನಪತ್ರಿಕೆ ಓದುತ್ತೀರಿ.


2) ಜಿಲ್ಲಾ ವಿಶೇಷತೆ ಪ್ರಶ್ನೆಗಳು: (ಯಾವ ಜಿಲ್ಲೆಗೆ ಸೇರಿದವರಾಗಿರುತ್ತಾರೋ ಆ ಜಿಲ್ಲೆ ಬಗ್ಗೆ)


1) ಜಿಲ್ಲೆಯ ರಾಜಕೀಯ ನಾಯಕರು.
2) ಖನಿಜ ಸಂಪನ್ಮೂಲ, ಸ್ಥಾನ, ಬೆಳೆ, ಕೈಗಾರಿಕೆ, ನೀರಾವರಿ.
3) ಜಿಲ್ಲೆಯ ಧಾರ್ಮಿಕ ಸ್ಥಳಗಳ ಮಹತ್ವ ಹಾಗೂ ಸ್ಮಾರಕಗಳ ಬಗೆಗಿನ ಮಾಹಿತಿ.
4) ಜಿಲ್ಲೆಯ ಇತಿಹಾಸ, ಪ್ರಸಿದ್ಧ ಅರಸರು, ನಾಯಕರು, ಚಳುವಳಿಕಾರರು, ರಾಜಮನೆತನಗಳು.
5) ಜಿಲ್ಲಾ ಪ್ರಚಲಿತ ವಿಷಯಗಳು.
6) ಜಿಲ್ಲಾ ಸಾಹಿತಿಗಳು, ಅವರ ಕೃತಿಗಳು.
7) ಜಿಲ್ಲೆಯ ಪ್ರಮುಖರು ನಾಯಕರು ಮತ್ತು ಅವರ ಸಾಧನೆ.
8) ಶಿಕ್ಷಣ ಹಾಗೂ ಆರ್ಥಿಕ ಅಂಶಗಳು.


3) ವಿದ್ಯಾರ್ಹತೆ ಮತ್ತು ಶೈಕ್ಷಣಿಕ.


1) ಓದಿದ ಶಾಲೆ ಹಾಗೂ ಕಾಲೇಜಿನ ಮಾಹಿತಿ.
2) ನೀವು ಮಾಡಿದ ಕೋರ್ಸ್‌ಗಳ ಬಗ್ಗೆ,
3) ಇಷ್ಟವಾದ ವಿಷಯಗಳು ಯಾವವು.
4) ನೀನು ಇಷ್ಟಪಡುವ ವಿಷಯದಲ್ಲಿನ ಜ್ಞಾನವನ್ನು ಪರೀಕ್ಷಿಸುವುದು.


4) ಪ್ರಚಲಿತ ವಿಷಯಗಳು :ಕಳೆದ ಮೂರು ನಾಲ್ಕು ತಿಂಗಳಲ್ಲಿ ಮಾಹಿತಿ.


1) ರಾಜ್ಯದಲ್ಲಿನ ಪ್ರಚಲಿತ ವಿಷಯಗಳು
2) ರಾಷ್ಟ್ರದಲ್ಲಿನ ಪ್ರಚಲಿತ ವಿಷಯಗಳು
3) ಅಂತರರಾಷ್ಟ್ರೀಯ ಪ್ರಚಲಿತವನ್ನು ನೋಡಿಕೊಳ್ಳಬೇಕು.


5) ಸಾಮಾನ್ಯ ಜ್ಞಾನಕ್ಕೆ ಸಂಬಂಧಪಟ್ಟಿದ್ದು


1) ಭಾರತೀಯ ಇತಿಹಾಸ
2) ಭಾರತ ಭೂಗೋಳ
3) ವಿಜ್ಞಾನ ತಂತ್ರಜ್ಞಾನ
4) ಕರ್ನಾಟಕ ಇತಿಹಾಸ
5) ಕರ್ನಾಟಕ ಭೂಗೋಳ
6) ಸಂವಿಧಾನ ಮತ್ತು ರಾಜಕೀಯ
7) ಪರಿಸರ ಮತ್ತು ಜೈವಿಕ ವೈವಿಧ್ಯತೆ


6) ತಾರ್ಕಿಕ ಪ್ರಶ್ನೆಗಳು :


1) ನಿನಗೆ ಲಂಚಕ್ಕೆ ಒತ್ತಾಯ ಮಾಡಿದಾಗ ನೀನು ಏನು ಮಾಡುತ್ತಿಯಾ?
2) ನೀನು ಮಾಡದ ತಪ್ಪಿಗೆ, ನಿನ್ನನ್ನು ಗುರಿಯಾಗಿಸಿದಾಗ, ನೀನು ಏನು ಮಾಡುತ್ತೀಯಾ?
3) ರಾಜಕೀಯ ಹಸ್ತಕ್ಷೇಪ ಪದೇ ಪದೇ ನಡೆದಾಗ ನೀನು ಏನು ಮಾಡುತ್ತಿ ?
4) ತಪ್ಪು ನಿರ್ಧಾರ ಕೈಗೊಂಡಾಗ, ಆಗ ನಿನ್ನ ಪ್ರತಿಕ್ರಿಯೆ ?
5) ನಿನ್ನ ಕೈ ಕೆಳಗಿನ ಅಧಿಕಾರಿಗಳು ನಿನ್ನ ವರ್ಗಾವಣೆಗೆ ಮುಷ್ಕರ ಮಾಡಿದಾಗ ?
6) ನಿನ್ನ ಆಡಳಿತದ ವೈಫಲ್ಯದ ವಿರುದ್ಧ ಜನರು ಪ್ರತಿಭಟನೆ ಮಾಡಿದಾಗ ?


7) ಇತರ ವಿಷಯಗಳು :
1) ನೀವು ಈ ಹುದ್ದೆಗೆ ಬರಲು ಕಾರಣವೇನು?
2) ಈ ಮುಂಚಿನ ಹುದ್ದೆಯನ್ನು ಬಿಟ್ಟು ಈ ಹುದ್ದೆಗೆ ಬರಲು ಕಾರಣವೇನು?
3) ಸಂಬಳಕ್ಕಾಗಿ ಸೇರುತ್ತೀರೋ? ಸೇವೆಗಾಗಿ ಸೇರುತ್ತೀರೋ?
4) ಮುಖ್ಯ ಪರೀಕ್ಷೆಯಲ್ಲಿ ಈ ವಿಷಯವನ್ನೇ ಆಯ್ಕೆ ಮಾಡಿಕೊಳ್ಳಲು ಕಾರಣ ?
5) ಈ ಹುದ್ದೆಗೆ ನೀನು ಎಷ್ಟು ಅರ್ಹನು ನಿನ್ನನ್ನು ನಿರೂಪಿಸು.
6) ಡಿಗ್ರಿ ಮುಗಿಸಿ ಇಷ್ಟು ವರ್ಷ ಗ್ಯಾಪ್‌ ಆಗಲು ಕಾರಣವೇನು ?
7) ನಿನ್ನ ಮುಖ್ಯ ಪರೀಕ್ಷೆಯ ರೋಲ್‌ ನಂ. ಯಾವುದು ?
8) ಇಲ್ಲಿ ಬರುವಾಗ ಯಾವ ರೀತಿ ಪ್ರಯಾಣ ಮಾಡಿ ಬಂದಿರುವೆ ?

ಬಿಟ್ಟಾಕ್ಕೋಣ

ಮೋದಿ ಹೇಳಿದ್ದು make in india, navu ನೀವು ವಿದೇಶಿ ವಸ್ತಗಳ್ನು ಪಟ್ಟಿ ಮಾಡಿ ಬಳಸುವುದನ್ನು stop madalu try madabeku

1970 ರಲ್ಲಿ 1$=4ರೂ.
V.  
ಇಂದು 1$ = Rs. 68ರೂ

ಈ ವಷಾ೯ಂತ್ಯದಲ್ಲಿ ಸಂಭವನಿಯ 1$ = Rs. 72
ಡಾಲರ್ ಬಲಗೊಂಡಿದೆ,ರೂಪಾಯಿ
ಬಲಹೀನಗೊಂಡಿದೆ.ಆದರೆ ಇದನ್ನು ಯಾವ ಭಾರತಿಯನು ಬಯಸಿರಲಿಲ್ಲಾ....!
ಇದನ್ನು ತಡೆಯುವುದು ಹೇಗೆ....?

1. ಒಂದು ಕೂಲ್ ಡ್ರಿಂಕ್
ತಯಾರಾಗುವದು ಕೆವಲ 70-80 ಪೈಸೆಯಲ್ಲಿ.
ಅದರೆ ನಾವು ಕೊಡುವುದು 10-12
ರೂಗಳು. ನಿಲ್ಲಿಸೋಣ ಇದನ್ನು. ಕುಡಿಯೋಣ ನಿಂಬು ಶರಬತ್ತು (Lemon juice), ಲಸ್ಸಿ,ಹಣ್ಣಿನಜೂಸ್,ಮಜ್ಜಿಗೆ,ಇತ್ಯಾದಿ.

2. ಬಳಸೋಣ ಸೋಪ್ಸ್ (Soaps) Cinthol,
Santoor,Medimix, Neem, Godrej ಬ್ರಾಂಡ್ ಗಳನ್ನು.

ಬಿಟ್ಟಾಕ್ಕೋಣ- lux,lifebuoy,
rexona, liril, dove, pears, hamam,camay, palmolive!

3. ಪೇಸ್ಟ್  (Toothpaste)
ಬಳಸೋಣ-  Neem, babool, vicco, dabur .

ಬಿಟ್ಟಾಕಿ colgate,close up,pepsodent, cibaca

4. Toothbrush ಬಳಸಿ-  prudent, ajanta,promise

ಬಿಟ್ಟಾಕ್ಕೋಣ- colgate, close up, oral-b, pepsodent,forhans.

5. Shaving cream ಬಳಸಿ -godrej, emami
ಬಿಟ್ಟಾಕ್ಕೋಣ- palmolive,old spice, gillete.

6. Blade ಬಳಸಿ- supermax, topaz, laser, ashoka.

ಬಿಟ್ಟಾಕ್ಕೋಣ- seven-o-clock, 365, gillete

7. ಪೌಡರ್ ಗಳು ಬಳಸಿ-
santoor, gokul,cinthol, boroplus

ಬಿಟ್ಟಾಕ್ಕೋಣ- ponds, old spice, johnson,shower
to shower.

8. ಹಾಲಿನ ಪುಡಿ(Milk powder)
ಬಳಸಿ ನಂದಿನಿ, indiana, amul,amulya

ಬಿಟ್ಟಾಕ್ಕೋಣ- anikspray,milkana, everyday
milk, milkmaid

9. Shampoo ಬಳಸಿ-
Nirma, Velvette.

ಬಿಟ್ಟಾಕ್ಕೋಣ- halo, all clear, sunsilk, head and shoulders, pantene

10.ಸಿಮ್ (Mobile connections) ಬಳಸಿ - bsnl, airtel,reliance,idea,docomo

ಬಿಟ್ಟಾಕ್ಕೋಣ- vodafone

11.ತಿನ್ನುವ ಪದಾರ್ಥಗಳು (Food)
ತಿನ್ನಿ ಸ್ಥಳೀಯ ಹೊಟಲ್ ಗಳಲ್ಲಿ,ರೆಷ್ಟೊರೆಂಟ್ ಗಳಲ್ಲಿ.

ಬಿಟ್ಟಾಕ್ಕೋಣ- mac-d, subway, pizza hut, kfc

12.ಫೋನ್ ಬಳಸಿ -(Mobile)
 micromax, karbonn, lava,croma

ಬಿಟ್ಟಾಕ್ಕೋಣ - samsung,apple, htc, sony

13. ಗಾಡಿ ಬಳಸಿ (Bikes)-
hero, bajaj

ಬಿಟ್ಟಾಕ್ಕೋಣ- honda, yamaha

14.ಚಪ್ಪಲಿ ಬಳಸಿ- paragon, chavda,lakhani

ಬಿಟ್ಟಾಕ್ಕೋಣ- nike, reebok, adidas,converse

15.ಬಟ್ಟೆ (Jeans and shirts)
ಬಳಸಿ - spykar, k-lounge

ಬಿಟ್ಟಾಕ್ಕೋಣ- lee, levi's,U.s. Polo, pepe,benetton

16. Watch ಬಳಸಿ - titan, sonata ,fasttrack

ಬಿಟ್ಟಾಕ್ಕೋಣ- tommy, Citizen, zodiac, tissot
Hindustan leverನ ಯಾವುದೇ ಉತ್ಪಾದನೆಗಳನ್ನು ಬಳಸಬೇಡಿ,ಯಾಕೆಂದರೆ
ಹೆಸರು ಮಾತ್ರ ಹಿಂದುಸ್ತಾನ್
ಅದನ್ನು ನಡೆಸುವದು ಫಾರಿನ್ ಕಂಪೆನಿಗಳು.
 ನಾವು ಸರ್ಕಾರವನ್ನು ಬೈಯುತ್ತೇವೆ.
ಆದರೆ ಈಗ ನಾವೇ ಗಮನಿಸೋಣ. ಒಮ್ಮೆ ಯೋಚಿಸೋಣ ರೂಪಾಯಿಮೌಲ್ಯ ಉಳಿಸುವುದು ಯಾರ ಕೈಯಲ್ಲಿದೆ ಅಂತ.
ನಾವು ನೀವು ಖರೀದಿಸಿದ ಫಾರಿನ್ ಮೇಡ್ ವಸ್ತುಗಳಿಗೆ ಭಾರತ ಸರಕಾರವು ಆ ದೇಶಕ್ಕೆ ಡಾಲರ್ ರೂಪದಲ್ಲಿ ಹಣ ಕೊಡಬೇಕಾಗುತ್ತದೆ.
ಉದಾಹರಣೆ: Samsung s4- 41ಸಾವಿರ ರೂಪಾಯಿ ಇದೆ.
Micromax can4-,  17
ಸಾವಿರ ರೂಪಾಯಿಗಳು,ಅಂದರೆ
ನಾವು ಕಳೆದುಕೊಳ್ಳುವ 24ಸಾವಿರ ರೂಪಾಯಿ,
ಡಾಲರ್ ರೂಪದಲ್ಲಿ ಉತ್ತರ ಕೊರಿಯಾಕ್ಕೆ ಹೊಗುತ್ತದೆ.
ಅಂತೆಯೆ ಚೈನಾ ದೇಶ ಪ್ರಗತಿಯಲ್ಲಿ ಮುಂದಿದೆ.
ಎಂದರೆ ಕಾರಣ ಜಗತ್ತಿನಲ್ಲಿ ಬಳಸುವ ಬಹುತೇಕ ವಸ್ತುಗಳು ಮೇಡ್ ಇನ್ ಚೈನಾ ಆಗಿವೆ.
ನಾವು ಸಾಧ್ಯವಾದಷ್ಟು ಮೇಡ್ ಇನ್
ಇಂಡಿಯಾ ವಸ್ತುಗಳನ್ನು ಬಳಸಿದರೆ ಸಾಕು.
ಅಂತೆಯೇ made in India ವಸ್ತುಗಳೆಲ್ಲ quality &fancy ಯಾಗಿಲ್ಲ ನಿಜ. ಆದರೆ
ಅವುಗಳನ್ನು ನಾವು ಬಳಸಿದರೆ ಅವರಿಗೆ ನಾವು ಇನ್ನು ಉತ್ತಮವಾದವುಗಳನ್ನು ತಯಾರಿಸಲು ಸಪೋರ್ಟ್ ಮಾಡಿದ ಹಾಗೆ.
ನೋಡೋಣಾ ಈ ವರ್ಷಾಂತ್ಯದಲ್ಲಿ
1$ = 72. ರೂ ಆಗುವುದಾ.....     ಇಲ್ಲಾ
1$ = 50 ರೂ ಆಗುವುದಾ....?

ಏಳಿ ಎದ್ದೇಳಿ .......
ಇದು ನಮ್ಮ ನಿಮ್ಮಿಂದಲೇ ಆರಂಭವಾಗಲಿ.
ಇದನ್ನು ಸಾಧ್ಯವಾದಷ್ಟು ಜನರಿಗೆ ಕಳುಹಿಸಿ. ತಿಳಿಸಿ. ಮನವರಿಕೆ ಮಾಡೋಣ. ಮೊದಲು ನಾವು ವಿದೇಶಿ ಮೋಹದಿಂದ ದೂರವಾಗೋಣ.
ಸೈನಿಕರಂತೆ ಜೀವ ಕೊಡುವ ಕಷ್ಟವೇನಿಲ್ಲ ಇಲ್ಲಿ. ದೇಶಕ್ಕಾಗಿ ಹೀಗಾದರೂ ಒಂದು ಅಳಿಲು ಸೇವೆ ಇರಲಿ.