Keep in touch...

ನಿಮ್ಮ ಅಭಿಪ್ರಾಯ ಹಂಚಿಕೊಳ್ಳಿ - ನನ್ನ ಇ-ಮೇಲ್ : gshattigoudar@gmail.com ಮೊಬೈಲ್: +9199454 79292 (only SMS / WhatsApp)

Saturday 30 July 2011

ಸ್ಪರ್ಧಾತ್ಮಕ ಪರೀಕ್ಷೆಗಳ ಸ್ಪರ್ಧಾಳುಗಳಿಗಾಗಿ `ಯುವ ಮನಸ್ಸಿನ ಮೆಟ್ಟಿಲು'

Aravind Chokkadi's Book "Yuva Manassina Mettilu" points
ಸ್ಪರ್ಧಾತ್ಮಕ ಪರೀಕ್ಷೆಗಳ ಸ್ಪರ್ಧಾಳುಗಳಿಗಾಗಿ ಅರವಿಂದ್ ಚೊಕ್ಕಾಡಿಯವರ `ಯುವ ಮನಸ್ಸಿನ ಮೆಟ್ಟಿಲು' ಪುಸ್ತಕದಿಂದ ಆಯ್ದುಕೊಳ್ಳಲಾದ ಅಂಶಗಳು

* ನೇಮಕಾತಿಯ ಪರೀಕ್ಷೆಗಳಿಗೆ ಬಂದಾಗ ನಿಮ್ಮ ಸಿದ್ಧತೆಗಳು ಮೊದಲ ಹತ್ತು ರ್‍ಯಾಂಕ್ ಒಳಗಿನ ಆಯ್ಕೆಗೆ ತಕ್ಕಷ್ಟು ಇರಬೇಕು.

* ಪರಿಣಿತಿ ಇರುವ ಕಾರ್ಯವನ್ನು ನಿರ್ವಹಿಸುವಾಗ ಆತ್ಮವಿಶ್ವಾಸದ ಮಟ್ಟ ಜಾಸ್ತಿ ಇರುತ್ತದೆ.

* `ಅಯ್ಯೋ, ನನಗೆ ಕ್ರಿಕೆಟ್ ಆಡಲು ಬರುವದಿಲ್ಲವಲ್ಲ' ಎಂದು ನಾನು ದುಃಖಿಸುತ್ತಾ ಕುಳಿತರೆ ಹಾಕಿ ಆಡಲು ನನಗಿರುವ ಕೊಂಚ ಆತ್ಮವಿಶ್ವಾಸವೂ ಕಳೆದು ಹೋಗುವದು. ಹಂತಹಂತವಾಗಿ ಎಲ್ಲಾ ಕಾರ್ಯಗಳಲ್ಲೂ ನನಗಿರುವ ಆತ್ಮವಿಶ್ವಾಸ ಹೊರಟು ಹೋಗುತ್ತದೆ.

* ಎಲ್ಲದರಲ್ಲೂ ಪರಿಣಿತಿ ಇಲ್ಲದಿರುವದು ನನ್ನ ಅನರ್ಹತೆಯಲ್ಲ ಎನ್ನುವದನ್ನು ಅರ್ಥ ಮಾಡಿಕೊಳ್ಳಬೇಕು. ನನಗೆ ಯಾವುದರಲ್ಲಿ ಪರಿಣಿತಿ ಇದೆಯೋ, ಯಾವುದರಲ್ಲಿ ನಾನು ಪರಿಣಿತಿಯನ್ನು ಗಳಿಸಿಕೊಳ್ಳಬಲ್ಲೆನೋ ಅಂತಹ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಬೇಕು. ಕೆಲವು ಯಶಸ್ಸುಗಳು ಸಿಗುತ್ತವೆ. ಆ ಯಶಸ್ಸು ಆತ್ಮವಿಶ್ವಾಸವನ್ನು ಒಂದು ಹಂತದವರೆಗೆ ಎತ್ತರಿಸುತ್ತವೆ.

* ನಮ್ಮಲ್ಲಿ ಕೆಲವರು ಗಣಿತ ಬಹಳ ಕಷ್ಟ ಎನ್ನುತ್ತಾರೆ. ಪದೇ ಪದೇ ಫೇಲಾಗುತ್ತಾರೆ. ಅವರಿಗಾಗಿ ಒಂದು ಸಲಹೆ - ಸ್ವಲ್ಪ ಕೆಳಹಂತದ ಲೆಕ್ಕವನ್ನು ಮಾಡಿ. ಆ ಲೆಕ್ಕವನ್ನು ನಿಮಗೆ ಮಾಡಲು ಆಗುತ್ತದೆ. ಅಷ್ಟರಮಟ್ಟಿಗಿನ ಸಾಮರ್ಥ್ಯ ನಿಮಗಿದೆಯೆಂದು ನಿಮಗೆ ಗೊತ್ತಾಗುತ್ತದೆ. ಇನ್ನು ಸ್ವಲ್ಪ ಮೇಲಿನ ಹಂತದ ಲೆಕ್ಕವನ್ನು ಮಾಡಿ. ಒಂದೆರಡು ಪ್ರಯತ್ನದಲ್ಲಿ ಆ ಲೆಕ್ಕವನ್ನು ಮಾಡುವ ಸಾಮರ್ಥ್ಯವೂ ಬರುತ್ತದೆ. ಆಮೇಲೆ ಮೊದಲು ಯಾವ ಲೆಕ್ಕ ನಿಮಗೆ ಕಷ್ಟ ಎನಿಸಿತ್ತೋ ಆ ಲೆಕ್ಕವನ್ನು ಮಾಡಲು ಸಾಧ್ಯವಾಗುತ್ತದೆ. ಗಣಿತವನ್ನು ನಿರ್ವಹಿಸುವ ಸಾಮರ್ಥ್ಯ, ಅದಕ್ಕೆ ಬೇಕಾದ ಆತ್ಮವಿಶ್ವಾಸ ನಿಮಗೆ ಬಂದಿರುತ್ತದೆ.

ಯಾವಾಗಲೂ ಯಾವ ಹಂತದಲ್ಲಿ ನಮಗೆ ವೈಫಲ್ಯದ ಅನುಭವವಾಗುತ್ತದೆಯೋ ಆಗ ಅದಕ್ಕಿಂತ ಕೆಳಗಿನ ಹಂತದಲ್ಲಿ ಕಾರ್ಯ ಆರಂಭಿಸಬೇಕು. ಅಲ್ಲಿಯೂ ವೈಫಲ್ಯ ಉಂಟಾದರೆ ಅದಕ್ಕೂ ಕೆಳಗಿನ ಹಂತದಿಂದ ಆರಂಭಿಸಬೇಕು. ಯಶಸ್ಸು ಸಿಗುವ ಹಂತದಿಂದ ಆರಂಭಿಸಿ ಹಂತಹಂತವಾಗಿ ಏರುತ್ತಾ ಹೋಗಬೇಕು.

* ಓಂದು ಕಾವ್ಯ ಭಾಗವನ್ನು ನೀವು ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಉತ್ತರಿಸುವದಕ್ಕಾಗಿ ಓದಿಕೊಳ್ಳುತ್ತಿದ್ದರೆ ಸಹೃದಯನ ಓದಿನ ಹಾಗೆ ಸಂತೋಷದಿಂದ ಅನುಭವಿಸಿಕೊಂಡು ಓದಿದರೆ ಸಾಲುವದಿಲ್ಲ. ಯಾವ ಸಾಲಿನ ವಿವರಗಳು ಏನು ಹೇಳುತ್ತವೆ ಮತ್ತು ಅವು ಯಾವ ಭಾವವನ್ನು ಹೇಗೆ ವಿವರಿಸುತ್ತವೆ ಎಂಬುದನ್ನು ಸ್ಮರಣೆಯಲ್ಲಿ ಇರಿಸಿಕೊಳ್ಳುತ್ತಾ ಓದಬೇಕಾಗುತ್ತದೆ.

* ಕೇವಲ ವಿಷಯಗಳನ್ನು ತಿಳಿದುಕೊಳ್ಳುವದಕ್ಕಾಗಿ ನಡೆಸುವದು ಓದು. ವಿಷಯಗಳನ್ನು ನಿರ್ದಿಷ್ಟ ಚೌಕಟ್ಟಿನ ಒಳಗೆ ಮರುಮಂಡನೆ ಮಾಡುವದಕ್ಕಾಗಿ ನಡೆಸುವದು -ಅಭ್ಯಾಸ.

* ಸುಮ್ಮನೆ ಓದುತ್ತಾ ಹೋಗುವದರಿಂದ ಬರುವ ಮರುಮಂಡನೆಯ ಶಕ್ತಿ ಸ್ವಲ್ಪ ದುರ್ಬಲವಾಗಿಯೇ ಇರುತ್ತದೆ. ಆದ್ದರಿಂದ ಓದು ಮತ್ತು ಮರುಮಂಡನೆಯ ಶಕ್ತಿಯೊಂದಿಗೆ ಪರಸ್ಪರ ಸಂಬಂಧವನ್ನು ಕಲ್ಪಿಸಿಕೊಂಡೇ ಓದಬೇಕಾಗುತ್ತದೆ.

* ಒಂದು ಪಠ್ಯಭಾಗದ ಯಾವ ಭಾಗವನ್ನು ನೀವು ಓದುತ್ತಿರುವಿರೋ ಆ ಘಟಕಕ್ಕೆ ಸಂಬಂಧಿಸಿದಂತೆ ಬರಬಹುದಾದ ಒಂದು ಪ್ರಶ್ನೆಯನ್ನು ರೂಪಿಸಿಕೊಳ್ಳಿ. ಆ ಪ್ರಶ್ನೆಗೆ ಯಾವ ರೀತಿ ಉತ್ತರಿಸಬಹುದು ಎಂಬುದನ್ನು ತಿಳಿದುಕೊಳ್ಳುವ ರೂಪದಲ್ಲಿ ಘಟಕದ ಪಠ್ಯವಿಷಯವನ್ನು ಓದಿಕೊಳ್ಳಿ.

* ಓದು, ಅನುಭವ ಮತ್ತು ಗ್ರಹಿಕೆಯಿಂದ ಪ್ರಾಪ್ತವಾಗಿರುವ ಪೂರ್ವಜ್ಞಾನವನ್ನೇ ಬಳಸಿಕೊಂಡು ಓದುವದರಿಂದ ಹೊಸ ವಿಷಯಗಳು ಪೂರ್ವಜ್ಞಾನದೊಂದಿಗೆ ಕೂಡಿಕೊಂಡು ಕಲಿಕೆ ಸಾಗುತ್ತದೆ.

* ಪರೀಕ್ಷೆಯ ಹಳೆಯ ಪ್ರಶ್ನೆಪತ್ರಿಕೆಗಳನ್ನು ಆರಿಸಿಕೊಂಡು ಪ್ರಶ್ನೆಗಳು ಯಾವ ಸ್ವರೂಪದಲ್ಲಿರುತ್ತವೆ ಎಂಬುದನ್ನು ಅರ್ಥಮಾಡಿಕೊಳ್ಳಬೇಕು. ನಂತರ ಪ್ರತಿಯೊಂದು ಘಟಕವನ್ನು ಓದಿದ ಹಾಗೆಲ್ಲ ಆ ಘಟಕದಲ್ಲಿ ಯಾವ ರೂಪದಲ್ಲಿ ಪ್ರಶ್ನೆಗಳು ಬರಬಹುದು ಎಂಬುದನ್ನು ಕಲ್ಪಿಸಿಕೊಂಡು ಪ್ರಶ್ನೆಗಳನ್ನು ರಚಿಸಬೇಕು. ಒಂದೆರಡು ದಿನ ಬಿಟ್ಟುಕೊಂಡು ಆ ಪ್ರಶ್ನೆಗಳಿಗೆ ಉತ್ತರಿಸಬೇಕು. ತಪ್ಪಿಲ್ಲದೇ ಉತ್ತರಿಸಲು ಸಮರ್ಥರಾದರೆ ಆ ಪಠ್ಯಭಾಗವನ್ನು ಚೆನ್ನಾಗಿ ಅಭ್ಯಾಸ ಮಾಡಿದ್ದೀರೆಂದೇ ಅರ್ಥ.

ವಿರಾಮ ಓದು

`ಹಾರ್ಸ್ ಪವರ್' ಎಂಬ ಹೆಸರು ಹೇಗೆ ಬಂದಿತು ಗೊತ್ತೇ?

ಜೇಮ್ಸ್ ವ್ಯಾಟ್ ಎಂಬ ವಿಜ್ಞಾನಿ ಹಬೆಯಂತ್ರ ಕಂಡು ಹಿಡಿದ ದಿನಗಳ ವಿಷಯ. ಆತ ತನ್ನ ಯಂತ್ರಗಳ ಕೆಲಸದ ವೇಗವನ್ನು ಕುದುರೆಗಳ ಶಕ್ತಿಗೆ ಹೋಲಿಸುತ್ತಿದ್ದನಂತೆ. ನನ್ನ ಯಂತ್ರ ಇದೋ ಇಷ್ಟು ಕುದುರೆಗಳ ಶಕ್ತಿಗೆ ಸಮಾನ ಎಂದು ಹೇಳಿ ಮಾರಾಟ ಮಾಡುತ್ತಿದ್ದನಂತೆ. ಹೀಗೆ ಅಂದಿನಿಂದ ಹಾರ್ಸ್ ಪವರ್ ಎಂಬ ಪದ ಬಳಕೆಗೆ ಬಂದಿತು. ಆಗಿನಿಂದ ಹಾರ್ಸ್ ಪವರ್ ಶಕ್ತಿಯ ಪ್ರತಿರೂಪವಾಯಿತು.


ನಮಾಜ್:

ಅರೇಬಿಕ್ ಭಾಷೆಯಲ್ಲಿ `ನಮಾಜ್'ನ್ನು `ಸಲಾತ್' ಎಂದೂ ಕರೆಯುತ್ತಾರೆ. `ಸಲಾತ್' ಎಂಬ ಶಬ್ದ `ಸಿಲಾ' ಎಂಬ ಮೂಲದಿಂದ ಬಂದಿದ್ದು. ಸಿಲಾ, ಸಲಾತ್, ನಮಾಜ್ ಎಂದರೆ ಕೂಡುವದು, ಒಂದಾಗುವದು, ಹೊಂದುವದು ಎಂದರ್ಥ. ಇದನ್ನೇ ಸಂಸ್ಕೃತದಲ್ಲಿ `ಯೋಗ' ಎನ್ನುವರು. ಆತ್ಮ-ಪರಮಾತ್ಮಗಳ ಸಾಮರಸ್ಯವನ್ನೇ `ಯೋಗ' ಅಥವಾ `ನಮಾಜ್' ಎನ್ನುತ್ತಾರೆ.

ನಮಾಜ್ ಹಜರತ್ ಮಹ್ಮದ್ ಪೈಗಂಬರ್‌ರವರಿಂದ ಮತ್ತು ಯೋಗವು ಮಹರ್ಷಿ ಪತಂಜಲಿಯವರಿಂದ ಹೊಸ ಸ್ವರೂಪ ಪಡೆದುಕೊಂಡವು.

ನೀರು, ತನ್ನಿ, ವೆಲ್ಲಂ, ನಿಳ್ಳು, ಪಾನಿ, ಜಲ, ವಾಟರ್, ಎಚ್.ಟು.ಓ., ಅಪ್ಪು - ಹೀಗೆ ಹೆಸರು ಬೇರೆಬೇರೆಯಾದರೂ ವಸ್ತುವೊಂದೇ, ಹಾಗೆಯೇ ನಮಾಜ್, ಸಲಾತ್, ಯೋಗ ಎಲ್ಲವೂ ಒಂದೇ.

"ಇನ್ನಾಸ್ ಸಲಾತ್ ತನ್ಹಾ ಫಸ್ಯೆಯೇ ವೆಲ್ಮೂಂಕರ್"
- ಕುರ್-ಆನ್ ೨೯:೪೫ ಅಧ್ಯಾಯ

ಅರ್ಥ: - ನಮಾಜಿ (ನಮಾಜ್ ಮಾಡುವವ)ಯನ್ನು ಎಂದೆಂದೂ ಅನಾರೋಗ್ಯಕರ ಕಾಯಿಲೆಗಳು ಮತ್ತು ಅನಾರೋಗ್ಯಕರ ವಿಚಾರಗಳು ದೇಹ, ಮನಸ್ಸು ಮತ್ತು ಆತ್ಮವನ್ನು ತಟ್ಟಲು ಸಾಧ್ಯವಿಲ್ಲ.




ಸರ್.ಎಂ.ವಿ.ವಿಶ್ವೇಶ್ವರಯ್ಯನವರ ಬದುಕಿನ ಪುಟ್ಟ ಘಟನೆಗಳು:

೧. ೧೯೪೭ರಲ್ಲಿ ದಿಲ್ಲಿಯ ಬಿರ್ಲಾ ಹೌಸ್‍ನಲ್ಲಿ ಗಾಂಧೀಜಿಯವರನ್ನು ಭೇಟಿ ಮಾಡ ಬಂದವರೆಲ್ಲ ನೆಲದ ಮೇಲಿನ ಜಮಖಾನಾಲ್ಲಿ ಕುಳಿತುಕೊಂಡಿದ್ದನ್ನು ಕಂಡ ಎಂ.ವಿ. `ನನಗೇಕೆ ಕುರ್ಚಿ?' ಎಂದು ಪ್ರಶ್ನಿಸಿದರು. ಬಳಿಕ ನಿಮ್ಮ ಮೇಲೆ ನನಗೆ ಅಸಮಧಾನವಿದೆ. ನಾನು ಬರೆದ ಪತ್ರಗಳಿಗೆ ತಾವು ಉತ್ತರಿಸಿಲ್ಲ ಎಂದರು. ಹೀಗೆ ಗಾಂಧಿಯವರಿಗೆ ನೇರಾನೇರ ಹೇಳಿ ಬಿಡುತ್ತಿದ್ದರು ವಿಶ್ವೇಶ್ವರಯ್ಯ.

೨. ನಂದಿ ಬೆಟ್ಟದಲ್ಲೊಮ್ಮೆ ಗಾಂಧೀಜಿ ಮತ್ತು ಸರ್.ಎಂ.ವಿ. ಭೇಟಿ ನಿಗದಿಯಾಗಿತ್ತು. ಸಮಯಕ್ಕೆ ಅಷ್ಟೇ ಬೆಲೆ ನೀಡುತ್ತಿದ್ದ ಎಂ.ವಿ. ನಿಗದಿತ ಸಮಯಕ್ಕೆ ಗಾಂಧಿ ಭೇಟಿಗೆ ಬೆಳಿಗ್ಗೆ ೮ಕ್ಕೆ ತೆರಳಿದ್ದರು. ಗಾಂಧೀಜಿ ೫ ನಿಮಿಷ ತಡವಾಗಿ ಬಂದರು. ಸರ್.ಎಂ.ವಿ. ಅವರು ಹೊರಟು ಹೋಗಿದ್ದರು. ಭೇಟಿ ನಡೆಯಲಿಲ್ಲ. ಮಾರನೆಯ ದಿನ ಗಾಂಧಿ ಮತ್ತೆ ಭೇಟಿಗೆ ಸಮಯ ನಿಗದಿ ಮಾಡಿ ೫ ನಿಮಿಷ ಮುಂಚಿತವಾಗಿಯೇ ಸರ್.ಎಂ.ವಿ.ಗೆ ಕಾದಿದ್ದರು. ಈ ಭೇಟಿ ಕೇವಲ ೧೫ ನಿಮಿಷಗಳಲ್ಲೇ ಮುಗಿದಿತ್ತು.
"ಇದು ಬಹುತೇಕ ನಮ್ಮ ಕೊನೆಯ ಭೇಟಿ ಆಗಬಹುದು. ನಿಮ್ಮ ಧೋರಣೆಗಳೇ ಬೇರೆ. ನಾವು ಭೇಟಿಯಾಗಿ ಚರ್ಚಿಸುವುದಕ್ಕೆ ಏನೂ ಉಳಿದಿಲ್ಲ" ಎಂದು ಖಡಕ್ಕಾಗಿ ತಿಳಿಸಿದ್ದರು ಎಂ.ವಿ.



೩. " ನಮ್ಮ ದೃಷ್ಟಿಕೋನ ಅನೇಕ ರೀತಿಯಲ್ಲಿ ಭಿನ್ನವಾಗಿದೆ. ಗ್ರಾಮೀಣ ಜನಸಮೂಹದ ಬಡತನ ನಿವಾರಿಸಲು ಯಂತ್ರಶಕ್ತಿ ಉಪಯೋಗಕ್ಕೆ ಬಾರದು. ನನಗೆ ಗ್ರಾಮೀಣ ಬದುಕಿನ ಅನುಭವ ಹೆಚ್ಚು. ಈಗಿರುವ ಜನಸಂಖ್ಯೆಯ ಶಕ್ತಿಯನ್ನು ಹಾಳಾಗುವಂತೆ ಮಾಡಿದರೆ ಆತ್ಮಹತ್ಯೆಯಾದಂತೆಯೇ ಸರಿ."
- ಎಂ.ಕೆ. ಗಾಂಧಿ. ೨೩ ನವೆಂಬರ್ ೧೯೩೪


" ನೀವು ಹೇಳಿದಂತೆ ನಮ್ಮಿಬ್ಬರ ದೃಷ್ಟಿಕೋನ ಭಿನ್ನ. ನೀವು ಗ್ರಾಮ ಕೈಗಾರಿಕೆಗಳ ಅಭಿವೃದ್ಧಿಗೆ ಮಾತ್ರ ಗಮನ ಕೊಟ್ಟಿದ್ದೀರಿ. ನಾನು ಗ್ರಾಮ ಮತ್ತು ಬೃಹತ್ ಕೈಗಾರಿಕೆಗಳಿಗೆ ಬೆಂಬಲ ನೀಡುತ್ತೇನೆ. ನಾನು ಜನರ ಶೋಷಣೆಗೆ ದೇಶವನ್ನು ತಯಾರಿಸುತ್ತಿರುವೆನು ಎಂಬ ತಮ್ಮ ಭಾವನೆ ಉಚಿತವಾದುದಲ್ಲ. ನೂರು ಮೈಲು ಪ್ರಯಾಣವನ್ನು ಅತಿ ಕಡಿಮೆ ಸಮಯದಲ್ಲಿ ಮಾಡಲು ಬೇಕಾದಾಗ ನೀವು ಖಂಡಿತವಾಗಿಯೂ ಎತ್ತಿನ ಬಂಡಿಯನ್ನು ಆಯ್ಕೆ ಮಾಡುವದಿಲ್ಲ."
- ಸರ್.ಎಮ್.ವಿ.


ಸಂಗ್ರಹ: ವಿಜಯ ಕರ್ನಾಟಕ `ಲವ ಲವಿಕೆ' ಪುರವಣಿ - ೯ ಸಪ್ಟೆಂಬರ್ ೨೦೧೦

ವೇಗವಾಗಿ ಓದುವದು ಹೇಗೆ?

Speed Reading

EªÀÅ (¥ÀŸÀÛPÀUÀ¼ÀÄ) ¤ªÀÄä£ÀÄß ¨ÉÊ0iÀÄÄåªÀ¢®è, ºÉÆqÉ0iÀÄĪÀ¢®è, ¨ÉøÀgÀ ªÀiÁrPÉƼÀÄîªÀ¢®è, ªÀÄÄdÄUÀgÀ¥Àr¸ÀĪÀ¢®è. EªÀÅUÀ¼À£ÀÄß ¤ÃªÀÅ 0iÀiÁªÁUÀ ¨ÉÃPÉAzÀgÀÄ DUÀ G¥À0iÉÆÃV¹PÉƼÀÀÄzÀÄ.

¸Á°£À PɼÀUÉ ¨ÉgÀ½lÄÖ CzÀgÀ »AzÉ0iÉÄà Nr¸ÀÄvÀÛ NzÀĪÀzÀjAzÀ §ºÀ¼À ªÀÄnÖUÉ ªÉÃUÀªÁV NzÀ§ºÀÄzÀÄ.

CµÁÖV CªÀ±ÀåPÀvÉ E®è¢gÀĪÀ, ªÀĺÀvÀé«®èzÀ CA±ÀUÀ¼À£ÀÄß NzÀ¨ÁgÀzÀÄ. PÉêÀ® ªÀÄÄRå CA±ÀUÀ¼À£ÀÄß N¢©qÀ¨ÉÃPÀÄ.

¥ÀÅlUÀ¼À£ÀÄß vÀ¯ÉPɼÀUÁV ªÀiÁr NzÀĪÀzÀPÉÌ ¥Àæ0iÀÄw߸ÀzÉà ªÉÃUÀªÁV ¨ÉgÀ¼À£ÀÄß PÀzÀ°¸ÀĪÀzÀÄ.

ªÀ0iÀĹì£ÉÆA¢UÉ ¥ÀæªÉÄÃ0iÀÄ«®èzÉ ªÀÄvÉÆۧ⠪ÀåQÛ0iÀÄ CUÀvÀå«®èzÉ ¤ªÀÄUÉ ¤ÃªÉà GAmÁV¹PÉƼÀî§®è ºÀªÁå¸À-¥ÀŸÀÛPÀ ¥ÀoÀ£À. ¥ÀPÀÌzÀªÀjUÉ n.«. ±À§Ý¢AzÀ CqÀZÀuÉUÉ PÀÆqÀ EgÀĪÀ¢®è. £ÀªÀÄä£ÀÄß £ÁªÀÅ E£ÀßµÀÄÖ G£ÀßvÀªÁV PÀqÉzÀÄ gÀƦ¹PÉƼÀÄîªÀzÀPÉÌ C©üªÀÈ¢Þ¥Àr¹PÉƼÀÄîªÀzÀPÉÌ PÉ®¸ÀPÉÌ §gÀÄvÀÛzÉ.

ºÁ¼ÁV ºÉÆÃUÀĪÀzÀÆ MAzÀÄ PÀ¯É. CzÀÄ J®èjAzÀ®Æ ¸ÁzsÀå«®è. vÀ£ÀߣÀÄß vÁ£ÀÄ ºÁ¼ÀÄ ªÀiÁrPÉƼÀÄîªÀ£À£ÀÄß PÀÆqÀ 0iÀiÁgÀÆ vÀqÉ0iÀįÁgÀgÀÄ. ºÉÆÃUÉÆà PÁ® §AzÀªÀgÀÄ ¸ÉßûvÀ£À ªÀiÁvÀÄ PÉüÀĪÀ¢®è, £ÉÆÃqÀĪÀ¢®è, §zÀ¯ÁUÀĪÀ¢®è.

- «ÃgÉÃAzÀæ£ÁxÀ

£ÀªÀÄä ªÉÄzÀļÀÄ ¥ÀÅlÖ G¥ÀàjUÉ PÉÆÃuÉà CAxÀzÀÄÝ. EzÀgÀ°è PÉêÀ® £ÁªÀÅ ¤vÀå fêÀ£ÀzÀ°è G¥À0iÉÆÃUÀªÁUÀĪÀ CA±ÀUÀ¼À£Éßà dvÀ£À ªÀiÁqÀ¨ÉÃPÀÄ. CªÀÅUÀ¼À£ÀÄß PÀÆqÀ eÁUÀgÀÆPÀvɬÄAzÀ £ÀªÀÄUÉ vÀPÀëtªÉà eÁÕ¥ÀPÀ §gÀĪÀAvÉ ¨sÀzÀæªÁV ElÄÖPÉƼÀî¨ÉÃPÀÄ. zÀqÀØgÀÄ ªÀiÁvÀæªÉà EµÀÄÖ CªÀÄÆ®åªÁzÀ ¸ÀܼÀªÀ£ÀÄß ¨ÉÃqÀzÀ PÉlÖ «µÀ0iÀÄUÀ½AzÀ PÉ®¸ÀPÉÌ ¨ÁgÀzÀ «µÀ0iÀÄUÀ½AzÀ vÀÄA§ÄvÁÛgÉ. EzÀjAzÀ £ÀªÀÄUÉ ¨ÉÃPÁzÀ «µÀ0iÀÄUÀ¼À CªÀ±ÀåPÉÛ §AzÁUÀ eÁÕ¥ÀPÀPÉÌ §gÀzÉ ªÀÄgÉ0iÀÄ°è ©zÀÄݺÉÆÃUÀÄvÀÛªÉ. F eÁUÀ MAzÀÄ ¨É®Æ¤£ÀAvÉ ¸ÁV J®è «µÀ0iÀÄUÀ¼À£ÀÄß dvÀ£ÀªÁV vÀÄA©lÄÖPÉÆAqÀÄ £ÀªÀÄUÉ ¨ÉÃPÁzÁUÀ PÉ®¸ÀPÉÌ §gÀÄvÀÛªÉ JAzÀÄPÉƼÀÆîªÀzÀÄ vÀ¥ÁàUÀÄvÀÛzÉ. PÁ® PÀ¼ÉzÀ £ÀAvÀgÀ £ÁªÀÅ eÁÕ¥ÀPÀ ElÄÖPÉƼÀî¨ÉÃPÀÄ CAzÀÄPÉÆAqÀÄ ¸ÀAUÀ滸ÀĪÀ ¥Àæw «µÀ0iÀÄPÀÆÌ CµÀÖPÉÌ ªÀÄÄAZÉ ¨sÀzÀæ¥Àr¹PÉÆAqÀ CµÉÖà «µÀ0iÀÄ ¥ÀjeÁÕ£ÀªÀ£ÀÄß £ÁªÀÅ PÀ¼ÉzÀÄPÉƼÀÄîvÉÛêÉ. DzÀÝjAzÀ - C£ÀªÀ±ÀåPÀ «µÀ0iÀÄUÀ¼À PÀÄjvÀÄ vÀ¯É PÉr¹PÉƼÀî¨ÉÃr. CzÀPÉÌ ¸ÀܼÀªÀ£ÀÄß ¤ÃqÀ¨ÉÃr. CªÀÅUÀ¼À£ÀÄß ¸ÁzsÀåªÁzÀµÀÄÖ ¨ÉÃUÀ£É ªÀÄgÉ0iÀÄ®Ä ¥Àæ0iÀÄwß¹.

§Ä¢ÞªÀAvÀgÀÄ vÀªÀÄä ¸ÀªÀÄ0iÀĪÀ£ÀÄß ªÀåxÀð ªÀiÁrPÉƼÀÄîªÀ¢®è. vÀªÀÄä ªÉÄzÀĽãÀ°è CUÀvÀåªÁzÀ «µÀ0iÀÄUÀ¼À£ÀÄß ªÀiÁvÀæªÉà eÁÕ¥ÀPÀzÀ°èlÄÖPÉƼÀÄîvÁÛgÉ. EAvÀºÀ QæPÉmï «µÀ0iÀÄUÀ¼ÀÄ, ZÀ®£ÀavÀæ VÃvÉUÀ¼ÀÄ EªÉ®èªÀ£ÀÄß £É£À¦lÄÖPÉƼÀî¨ÉÃPÉAzÀgÉ ¤ªÀÄUÉ CUÀvÀåªÁzÀ vÀgÀUÀw ¥ÁoÀUÀ¼ÀÄ, fêÀ£ÀPÉÌ G¥À0iÉÆÃUÀPÉÌ §gÀĪÀ «µÀ0iÀÄUÀ¼ÀÄ ªÉÄzÀĽ£À°è eÁUÀ«®èzÉ ºÉÆÃV©qÀ§ºÀÄzÀÄ. Be careful, Be choosy CzÀPÉÌ ¤ªÀÄä ªÉÄzÀĽãÀ°è CUÀvÀåªÁzÀ «µÀ0iÀÄUÀ¼À£Éßà vÀÄA© CªÀÅ ¸ÀÆPÀÛ ¸ÀªÀÄ0iÀÄzÀ°è ºÉÆgÀ§AzÀÄ ¤ªÀÄä£ÀÄß PÁ¥ÁqÀÄvÀÛªÉ.

¥ÀjÃPÉë0iÀÄ°è ¤Ã£ÀÄ JµÀÄÖ ºÉüÀ§¯ÉèÃ? K£ÀÄ ºÉüÀ§¯ÉèÃ? J£ÀÄߪÀzÀ£ÀÄß £ÉÆÃqÀÄvÁÛgÉ0iÉÄà ºÉÆgÀvÀÄ ¤Ã£ÀÄ JµÀÄÖ N¢zÉ, K£ÀÄ N¢zÉ CAvÀ £ÉÆÃqÀĪÀ¢®è.

- qÁ|| E.J£ï.©. ±ÀªÀiÁð

ಲಾಲ್ ಬಹದ್ದೂರ ಶಾಸ್ತ್ರಿ

Lal Bahaddur Shastri

ಉತ್ತರ ಪ್ರದೇಶದ ಬನಾರಸ್‍ನಿಂದ ಕೇವಲ ೧೧ ಕಿ.ಮೀ. ದೂರದಲ್ಲಿರುವ ಮೊಗಲ್ ಸರಾಯಿ ಎಂಬ ಹಳ್ಳಿಯಲ್ಲಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರು ೧೯೦೪ನೇ ಅಕ್ಟೋಬರ್ ೨ರಂದು ಜನಿಸಿದರು.

ಶಾಸ್ತ್ರಿ ಎಂಬುದು ಇವರಹೆಸರಲ್ಲ. ದೊಡ್ದವರಾದ ನಂತರ `ಶಾಸ್ತ್ರಿ' ಎಂಬ ಪಂಡಿತ ಪರೀಕ್ಷೆಯಲ್ಲಿ ತೇರ್ಗಡೆಯಾದ ನಂತರ ಇವರ ಹೆಸರಿನಲ್ಲಿ ಶಾಸ್ತ್ರಿ ಎಂಬ ಹೆಸರು ಸೇರಿತು.

ಚಿಕ್ಕಂದಿನಲ್ಲೇ ತಂದೆಯನ್ನು ಕಳೆದುಕೊಂಡ ಶಾಸ್ತ್ರಿಯವರು ತಮ್ಮ ತಾಯಿಯ ಜೊತೆ ತಾಯಿಯ ಅಣ್ಣನ ಮನೆಯಲ್ಲಿ ಬೆಳೆದರು. ಶಾಸ್ತ್ರಿಯವರ ತಂದೆ ಶಾರದಾ ಪ್ರಸಾದ್ ಶಾಲೆಯ ಅಧ್ಯಾಪಕರಾಗಿದ್ದರು. ತಾಯಿ ರಾಮ್ ದುಲಾರಿ. ನಂತರ ೬ನೇ ತರಗತಿಯಲ್ಲಿದ್ದಾಗ ಶಾಸ್ತ್ರಿಯವರು ಚಿಕ್ಕಮ್ಮನ ಮನೆಯಲ್ಲಿ ಬೆಳೆದರು. ಚಿಕ್ಕಪ್ಪ ರಘುನಾಥ ಪ್ರಸಾದ್ ಇವರ ಚಾರಿತ್ರ್ಯ ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸಿದರು. ತಾಯಿಯಿಂದ ರಾಮಾಯಣ ಮಹಾಕಾವ್ಯಗಳ ಅಧ್ಯಯನ ಶಾಸ್ತ್ರಿಯವರಿಗೆ ತಾಯಿಯೇ ದೇವರಾಗಿದ್ದರು.
ಬಾಲಕ ಲಾಲ ಬಹದ್ದೂರ್ ಅವರು ತುಂಬಾ ಆತ್ಮಗೌರವಶಾಲಿ. ಒಮ್ಮೆ ಜಾತ್ರೆ ನೋಡಲು ಪಕ್ಕದೂರಿಗೆ ಗೆಳೆಯರೊಂದಿಗೆ ಹೋದರು. ನಡುವೆ ಕಾಲುವೆ ದಾಟಬೇಕಾಗಿತ್ತು. ಜೇಬಲ್ಲಿ ಒಂದು ಕಾಸು ಇತ್ತು. ಕೊಟ್ಟು ದೋಣಿಯ ಮೂಲಕ ಗೆಳೆಯರೊಂದಿಗೆ ದಾಟಿದರು. ಮರಳಿ ಬರುವಾಗ ಜಾತ್ರೆಯಲ್ಲಿ ಏನೂ ಕೊಳ್ಳದೇ ಇದ್ದರೂ ಜೇಬಲ್ಲಿ ಕಾಸಿರಲಿಲ್ಲ. ಸ್ನೇಹಿತರು ಕರೆದರು. ಆದರೆ ಲಾಲ್ ಬಹದ್ದೂರ್‌ರು ಜಾತ್ರೆ ಇನ್ನೂ ನೋಡುವದಿದೆ ಎಂದು ಸುಳ್ಳು ಹೇಳಿದರು. ಕಾಲುವೆ ದಾಟಲು ಸ್ನೇಹಿತರ ಬಳಿ ದುಡ್ಡು ಕೇಳಿದರೆ ಕೊಡುತ್ತಿದ್ದರು. ಆದರೆ ಕೇಳಲು ಶಾಸ್ತ್ರಿಯವರಿಗೆ ಅಭಿಮಾನ ಅಡ್ಡ ಬಂದಿತ್ತು. ಸಂಜೆಯಾದ ನಂತರ ಕಾಲುವೆ ಈಜಿ ದಡ ಸೇರಿದರು. ಬಾಲ್ಯದಿಂದಲೇ ಸ್ವಾಭಿಮಾನದ ರಕ್ಷಣೆಗಾಗಿ ಅವರಲ್ಲಿದ್ದ ಧೈರ್ಯ-ಸ್ಥೈರ್ಯ ಅದ್ಭುತವಾಗಿತ್ತು.

ಹೈಸ್ಕೂಲ್‍ನಲ್ಲಿದ್ದಾಗಲೇ ಇವರಿಗೆ ಓದುವ ಹುಚ್ಚು ಹೆಚ್ಚಾಯಿತು. ಕವಿತೆ, ಮಹಾತ್ಮರ ಜೀವನ ಚರಿತ್ರೆಗಳನ್ನು ಓದಿದರು. ಅವರೆಲ್ಲರ ಸದ್ಗುಣ, ಸದ್ವಿಚಾರಗಳ ಪ್ರಭಾವ ಇವರ ಮೇಲೆ ಬೀರಿತು.

ಲಾಲ್ ಬಹದ್ದೂರ್ ಶಾಸ್ತ್ರಿಯವರ ಪತ್ನಿ: ಲಲಿತಾ ಶಾಸ್ತ್ರಿ

ಬಾಲ್ಯದಿಂದಲೆ ಕಷ್ಟ ಸಹಿಷ್ಣುತೆಯನ್ನು ಬೆಳೆಸಿಕೊಂಡ ಇವರು ನೆಹರೂ ಮಂತ್ರಿಮಂಡಲದಲ್ಲಿ ಕೇಂದ್ರ ಸರ್ಕಾರದ ರೈಲು ಮಂತ್ರಿ ಆಗಿದ್ದರು. ಸಾಮಾನ್ಯ ಪ್ರಯಾಣಿಕರ ಅನುಕೂಲದ ಕಡೆಗೆ ಹೆಚ್ಚಿನ ಗಮನ ಕೊಡುತ್ತಿದ್ದರು. ದುರದೃಷ್ಟವೆಂಬಂತೆ ಒಮ್ಮೆ ಇವರ ಕಾಲದಲ್ಲಿಯೇ `ಅರೆಯಲೂರು ರೈಲು ದುರಂತ' ಸಂಭವಿಸಿತು. ಇವರದೇನು ತಪ್ಪಿಲ್ಲ ಎಂದು ಸರ್ಕಾರ ಹಾಗೂ ಸಾರ್ವಜನಿಕರು ಘೋಷಿಸಿದರೂ ಸಹ ಮನಃಶಾಂತಿ ಇಲ್ಲದೆ ನೂರಾರು ಜನರ ಸಾವು-ನೋವುಗಳು ಸಂಭವಿಸಿದರ ಬಗ್ಗೆ ಜಿಗುಪ್ಸೆಗೊಂಡು ತಮ್ಮ ಮಂತ್ರಿಪದವಿಗೆ ರಾಜೀನಾಮೆ ನೀಡಿದರು.

ಪಂಡಿತ್ ನೆಹರು ಅವರೇ ಸ್ವತಃ ಇವರ ಕರ್ತವ್ಯ ನಿಷ್ಠೆಯ ಬಗ್ಗೆ ಒಮ್ಮೆ ಹೀಗೆ ಹೇಳಿದ್ದರು : -
" ಶಾಸ್ತ್ರೀಜಿ ತತ್ವಸಾಧನೆಗಾಗಿ ತಮ್ಮ ಕರ್ತವ್ಯ ಪಥದಲ್ಲಿ ತ್ಯಾಗಜೀವಿಗಳೂ, ಕಷ್ಟಸಹಿಷ್ಣುಗಳು, ಧೀರೋದಾತ್ತ ಗುಣದವರು. ಇವರ ಕರ್ತವ್ಯದಲ್ಲಿ ಶ್ರದ್ಧೆ ಮತ್ತು ನಿಷ್ಠೆಗೆ ಪ್ರಥಮ ಸ್ಥಾನ. ಇವರ ಬಗ್ಗೆ ನನಗೆ ಅಪಾರ ಗೌರವವಿದೆ. ನಂಬಿಕೆ ಇದೆ. ಕೇವಲ ನಂಬಿಕೆ ಅಲ್ಲ, ಆತ್ಮನಂಬಿಕೆ. ಇವರ ಸೇವೆ, ಸಹಕಾರ ನನಗೆ ಕೊನೆಯವರೆಗೂ ಅಗತ್ಯ."

"ಜೈ ಜವಾನ್ ಜೈ ಕಿಸಾನ್" ಎಂಬ ಘೋಷಣೆ ಹೊರಡಿಸಿದ ಶಾಸ್ತ್ರೀಜಿಯವರು ಪ್ರಧಾನಿ ಆಗಿದ್ದ ಅವಧಿಯಲ್ಲಿ ಕೆಲವೊಮ್ಮೆ ದಿನವೂ ಹದಿನೆಂಟು ಗಂಟೆಗಳ ಕಾಲ ಕರ್ತವ್ಯವನ್ನು ನಿದ್ದೆಗೆಟ್ಟು ನಿರ್ವಹಿಸುತ್ತಿದ್ದರು.

ಇಂಥ ಸರಳ, ವಿನಯ, ಕುಶಾಗ್ರಮತಿಯಾಗಿದ್ದ ಲಾಲ್ ಬಹದ್ದೂರ ಶಾಸ್ತ್ರಿಯವರು ನಮ್ಮ ದೇಶದ ಪ್ರಧಾನಿಯಾಗಿದ್ದರು ಎನ್ನುವದೇ ನಮಗೆಲ್ಲ ಹೆಮ್ಮೆಯ ಸಂಗತಿಯಾಗಿದೆ. ಇವರ ಕುರಿತಾಗಿ ಇನ್ನು ಹಲವಾರು ಸಂಗತಿಗಳನ್ನು ಮುಂದಿನ ದಿನಗಳಲ್ಲಿ ಪ್ರಕಟಿಸಲು ಪ್ರಯತ್ನಿಸುತ್ತೇನೆ.

ವಿಶ್ವನಾಥನ್ ಆನಂದ


Viswanathan anand

ಗ್ರ್ಯಾಂಡ್ ಮಾಸ್ಟರ್ ವಿಶ್ವನಾಥನ್ ಆನಂದ ಇದ್ದಾರಲ್ಲ, ಅವರು ನಿಜಕ್ಕೂ ಕಂಪ್ಯೂಟರಿಗಿಂತ ಹೆಚ್ಚು ಬುದ್ಧಿವಂತರಾ? ೧೦-೧೫ ವರ್ಷಗಳ ಹಿಂದೆ ಈ ಪ್ರಶ್ನೆ ಹಲವರನ್ನು ಕಾಡಿತ್ತು. ಆ ದಿನಗಳಲ್ಲಿ ವಿಶ್ವನಾಥನ್ ಆನಂದ ಆಡಿದ ಪ್ರತಿಯೊಂದು ಚೆಸ್ ಪಂದ್ಯ ಗೆದ್ದು ಮನೆಮಾತಾಗಿದ್ದರು. ಸವಾಲು ಒಡ್ಡಿದವರನ್ನು ಕೇವಲ ಒಂದೆರಡೇ ನಿಮಿಷಗಳಲ್ಲಿ ಸೋಲಿಸಿ ಗೆಲುವಿನ ನಗೆ ಬೀರುತ್ತಿದ್ದರು. ಅರೆ, ಈ ವಿಶ್ವನಾಥನ ಆನಂದ್ ನಿಜವಾಗಿಯೂ ಕಂಪ್ಯೂಟರಿಗಿಂತ ಬುದ್ಧಿವಂತರಾ? ಎಂಬ ಪ್ರಶ್ನೆ ಹುಟ್ಟಿಕೊಂಡಿದ್ದು ಆವಾಗಲೇ. ಚೆಸ್ ಲೋಕದ ಪಂಡಿತರು ಯಾಕೆ ಹಾಗೆ ಯೋಚಿಸಿದರು ಅಂದರೆ, ಯಾವುದೇ ವಿಷಯವನ್ನಾಗಲೀ ಯೋಚಿಸಬೇಕೆಂದರೆ ನಮ್ಮ ಮೆದುಳು ಹೆಚ್ಚಿನ ಸಮಯ ತೆಗೆದುಕೊಳ್ಳುತ್ತದೆ. ಅದೇ ಕಂಪ್ಯೂಟರ್ ಆದರೆ, ಎಂಥ ಕಠಿಣ ಸಮಸ್ಯೆಗೂ ಕೇವಲ ಒಂದೆರಡು ನಿಮಿಷದಲ್ಲಿ ಉತ್ತರ ಹೇಳಿ ಬಿಡುತ್ತದೆ.

ಈಗ ಬರೀ ೧೫ ವರ್ಷಗಳ ಹಿಂದೆ ಹೀಗೆ ಯೋಚಿಸಿದ ಅದೆಷ್ಟೊ ಮಂದಿ ಗ್ರ್ಯಾಂಡ್ ಮಾಸ್ಟರ್‌ಗಳು ಒಂದು ಹೊಸ ಸಾಫ್ಟವೇರ್ ಸೃಷ್ಟಿಸಿದರು. ಹತ್ತು ಜನ ತಮ್ಮ ಐಡಿಯಾಗಳನ್ನು ಒಂದಾಗಿಸಿ ಅದನ್ನು ಕಂಪ್ಯೂಟರ್‌ಗೆ ಫೀಡ್ ಮಾಡಿದರು. ನೋಡನೋಡುತ್ತಲೇ ಕಂಪ್ಯೂಟರ್ ಗಣಿತದ ಲೆಕ್ಕಗಳಿಗೆ ಉತ್ತರ ಕೊಡುವ ವೇಗದಲ್ಲಿ ಚೆಸ್ ಆಡುವದನ್ನು ಕಲಿತೇಬಿಟ್ಟಿತು. "ಆನಂದ್ ಚಾಲೆಂಜ್ ಹಾಕ್ತಾ ಇದೀವಿ, ಈ ಕಂಪ್ಯೂಟರ್ ಜೊತೆ ಆಡ್ತೀಯ, ಇದನ್ನ ಸೋಲಿಸ್ತೀಯಾ?" ಎಂದು ಎದುರಿಗಿದ್ದವರು ಪಂಥಾಹ್ವಾನ ಒಡ್ಡಿದರು. ವಿಶ್ವನಾಥನ್ ಆನಂದ್ ಒಲ್ಲೆ ಎನ್ನಲಿಲ್ಲ. ದೊಡ್ಡ ಆತ್ಮವಿಶ್ವಾಸದೊಂದಿಗೆ ಆಡಲು ಕುಳಿತರು. ಮೂರೆ ನಿಮಿಷದಲ್ಲಿ ಕಂಪ್ಯೂಟರ್ ಸೋತು ಹೋಯಿತು...! ಕಂಪ್ಯೂಟರ್‌ಗಿಂತ ಮನುಷ್ಯನ ಮೆದುಳೇ ತೀಕ್ಷ್ಣ ಎಂದು ಸಾಬೀತಾಯಿತು.

ಅಂದಹಾಗೆ, ನಮ್ಮ ಮೆದುಳು ಹೇಗಿದೆ? ಅದರ ತೂಕ ಎಷ್ಟು? ಅದು ಹೇಗೆ ಕೆಲಸ ಮಾಡುತ್ತದೆ ಎಂಬಿತ್ಯಾದಿ ವಿವರಗಳನ್ನು ತಿಳಿಯುವಾಸೆಯೇ? ಹಾಗಾದರೆ, ಓದುತ್ತಾ ಹೋಗಿ

* ನಮ್ಮ ದೇಹದ ಶೇ.೨ರಷ್ಟು ತೂಕ ನಮ್ಮ ಮೆದುಳಿನದಾಗಿದೆ ಹಾಗೂ ದೇಹದ ಒಟ್ಟು ಶಕ್ತಿಯ ಪೈಕಿ ಶೇ.೨೫-೩೦ರಷ್ಟನ್ನು ಅದು ಬಳಸಿಕೊಳ್ಳುತ್ತದೆ.

* ಮೆದುಳಿನಲ್ಲಿ ಸುಮಾರು ೧೦೦ ಕೋಟಿ ನರಕೋಶಗಳಿವೆ. ಇಷ್ಟೆಲ್ಲ ನರಕೋಶಗಳಿದ್ದರೂ ಮೆದುಳಿನಲ್ಲಿ ಒಂದೇ ಒಂದು ಮಾಂಸಖಂಡ ಇರುವದಿಲ್ಲ. ಸಿಂಪಲ್ಲಾಗಿ ಹೇಳುವದಾದರೆ ನಮ್ಮ ಮೆದುಳು ಥೇಟ್ ಬನ್ (ತಿನ್ನುವ ಬನ್) ತರಹ ಇರುತ್ತದೆ.

Wednesday 27 July 2011

ಸೈಕಲ್ ರಿಕ್ಷಾದವನ ಮಗ ಐಎಎಸ್ ಮಾಡಿದ




ಸಾಧನೆಗೆ ಅಸಾಧ್ಯವಾದುದು ಯಾವುದೂ ಇಲ್ಲ. ಛಲವಿದ್ದರೆ, ಕಣ್ಮುಂದೆ ಒಂದು ಗುರಿಯಿದ್ದರೆ, ಕಠಿಣ ಪರಿಶ್ರಮವೂ ಜತೆಗಿದ್ದರೆ ಆಕಾಶದಷ್ಟೇ ಎತ್ತರವಿರುವ ಗೌರಿಶಂಕರವನ್ನೂ ಹತ್ತಬಹುದು, ಚಂದ್ರಲೋಕಕ್ಕೂ ಹೋಗಿಬರಬಹುದು. ಕೊನೆಯೇ ಇಲ್ಲ ಎಂಬಂಥ ಸಾಗರವನ್ನೂ ಈಜಬಹುದು. ಚೀನಾ ಗೋಡೆಯ ಇನ್ನೊಂದು ತುದಿಯನ್ನು ನಡೆದೇ ಕ್ರಮಿಸಬಹುದು. ಹಲವು ಮಂದಿ ಧೀರರು ಅಂಥ ಸಾಹಸಗಳನ್ನು ಆಗಿಂದಾಗ್ಗೆ ಮಾಡಿ ತೋರಿಸುತ್ತಲೇ ಇದ್ದಾರೆ. ಆ ಮೂಲಕ, ಅಸಾಧ್ಯ ಎಂಬ ಪದಕ್ಕೆ ಅರ್ಥವೇ ಇಲ್ಲ ಎಂದು ಮತ್ತೆ ಮತ್ತೆ ಸಾಬೀತುಪಡಿಸಿದ್ದಾರೆ. ಈ ಸಾಧನೆಗಳನ್ನು ಮೆಚ್ಚುವ ಮಂದಿ ಅದೇ ಸಂದರ್ಭದಲ್ಲಿ 'ಅಯ್ಯೋ ಬಿಡ್ರೀ. ಹಾಗೆ ಸಾಧನೆ ಮಾಡಿರುವವರೆಲ್ಲ ಲಕ್ಷಾಧಿಪತಿಗಳ ಮಕ್ಳು. ಅವರಿಗೇನು ಕಮ್ಮಿ? ಅಪ್ಪನ ದುಡ್ಡು ರಾಶಿ ರಾಶಿ ಇದೆ. ಹಾಗಾಗಿ ಒಂದೊಂದೇ ಸಾಹಸ ಮಾಡ್ತಾ ಹೋಗ್ತಾರೆ' ಎಂದು ಕೊಂಕು ನುಡಿಯುತ್ತಾರೆ.

ಯಶಸ್ಸು ಎಂಬುದು ಯಾವತ್ತೂ ಶ್ರೀಮಂತಿಕೆಯನ್ನೋ, ಪ್ರಭಾವವನ್ನೋ, ಅಂದವನ್ನೋ, ಮನೆತನವನ್ನೋ ನೋಡಿಕೊಂಡು ಬರುವುದಿಲ್ಲ. ಒಂದು ಕನಸನ್ನು ಎದುರಿಗಿಟ್ಟುಕೊಂಡೇ ಅದನ್ನು ಫೇಸ್ ಮಾಡಲು ಪ್ರಯತ್ನಿಸುತ್ತಾನಲ್ಲ? ಅವನನ್ನು ಯಶಸ್ಸೆಂಬುದು ಬಾಚಿ ತಬ್ಬಿಕೊಳ್ಳುತ್ತದೆ. ಈ ಮಾತಿಗೆ ಒಂದು ಪಸಂದ್ ಉದಾಹರಣೆಯಾಗಿ ನಮ್ಮ ಕಣ್ಮುಂದೆ ಇರುವವನ ಹೆಸರೇ ಗೋವಿಂದ ಜೈಸ್ವಾಲ್. ಈತ ಬೇರೆ ಯಾರೂ ಅಲ್ಲ. 2006ರ ಐಎಎಸ್ ಪರೀಕ್ಷೆಯಲ್ಲಿ ದೇಶಕ್ಕೇ 48ನೇ ರ್‍ಯಾಂಕು ತೆಗೆದುಕೊಂಡ ಪ್ರತಿಭಾವಂತ. ಅದರಲ್ಲೇನು ವಿಶೇಷ ಅಂದರೆ ಈ ಗೋವಿಂದ ಜೈಸ್ವಾಲ್, ಕಡುಕಡು ಕಡು ಕಡು ಬಡತನದ ಮಧ್ಯೆಯೇ ಬೆಳೆದವನು. ಕೊಳಗೇರಿಯ ಕತ್ತಲಿನಿಂದ ಬಂದವನು. ಇನ್ನೂ ವಿವರಿಸಿ ಹೇಳಬೇಕೆಂದರೆ ಆತ ಒಂದು ಲಡಕಾಸಿ ಸೈಕಲ್ ರಿಕ್ಷಾ ಓಡಿಸುವ ನಾರಾಯಣ ಜೈಸ್ವಾಲ್ ಎಂಬಾತನ ಮಗ. ಅವರಿದ್ದುದು ಕೊಳೆಗೇರಿ ತಾನೆ? ಹಾಗಾಗಿ ಅವರ ಮನೆಗೆ ವಿದ್ಯುತ್ ಸೌಲಭ್ಯವೂ ಇರಲಿಲ್ಲ. ಈ ಗೋವಿಂದ ಜೈಸ್ವಾಲ್‌ನನ್ನು ಬಿಟ್ಟರೆ ಮನೆಯಲ್ಲಿ ಬೇರೆ ಯಾರಿಗೂ ಅಕ್ಷರದ ಗಂಧವೂ ಇರಲಿಲ್ಲ. ಎಲ್ಲ ಸಂಕಟಗಳ ಮಧ್ಯೆಯೇ ಈ ಗೋವಿಂದ ಜೈಸ್ವಾಲ್ ಐಎಎಸ್ ಪಾಸು ಮಾಡಿದ ಸಾಹಸವಿದೆಯಲ್ಲ, ಹೇಳಿದರೆ ಅದೇ ಒಂದು ಚೆಂದದ ಕಥೆ.

***
ನಾರಾಯಣ ಜೈಸ್ವಾಲ್ ಕಾಶಿಯ ಕೊಳೆಗೇರಿಯಲ್ಲಿದ್ದ. ಕಾಶಿಯ ಬೀದಿಗಳಲ್ಲಿ ಬೆಳಗಿಂದ ಸಂಜೆಯತನಕ ಸೈಕಲ್ ರಿಕ್ಷಾ ತುಳಿಯುತ್ತಿದ್ದ. ಒಂದು ಸಂತೋಷವೆಂದರೆ- ಅಂಥ ಕಡುಬಡತನದ ಮಧ್ಯೆಯೂ ಆತ ಯಾವುದೇ ದುರಭ್ಯಾಸ ಅಂಟಿಸಿಕೊಳ್ಳಲಿಲ್ಲ. ಒಂದೊಂದು ಪೈಸೆಯನ್ನೂ ಕೂಡಿಸಿಟ್ಟ. ಆ ಹಣದಿಂದ ಒಂದಿಷ್ಟು ಜಮೀನು ಖರೀದಿಸಿದ. ಈ ಮಧ್ಯೆಯೇ ಅವರಿಗೆ ನಾಲ್ವರು ಮಕ್ಕಳಾದರು. ಮೂರು ಹೆಣ್ಣು, ಒಂದು ಗಂಡು. ತನ್ನ ರಿಕ್ಷಾದಲ್ಲಿ ದಿನವೂ ಅದೆಷ್ಟೋ ಮಂದಿ ಆಫೀಸರ್‌ಗಳನ್ನು ಕೂರಿಸಿಕೊಂಡು ಪೆಡಲ್ ತುಳಿಯುತ್ತಿದ್ದ ನಾರಾಯಣ ಜೈಸ್ವಾಲ್ ಇವತ್ತಲ್ಲ ನಾಳೆ ನನ್ನ ಮಕ್ಕಳೂ ಹೀಗೇ ಆಫೀಸರ್‌ಗಳಾಗಿ ಮೆರೆಯಲಿ ಅಂದುಕೊಳ್ಳುತ್ತಿದ್ದ. ದಣಿದು ಸುಸ್ತಾಗಿ ಮನೆಗೆ ಬಂದ ಮೇಲೆ ಮಕ್ಕಳನ್ನು ಹತ್ತಿರ ಕರೆದು ನೀವೆಲ್ಲ ಚೆನ್ನಾಗಿ ಓದಿ ಆಫೀಸರ್‌ಗಳಾಗಬೇಕು. ಓದದೇ ಹೋದರೆ ಉಪವಾಸವೇ ಗತಿಯಾಗುತ್ತೆ ಎಂದು ಬುದ್ಧಿ ಹೇಳುತ್ತಿದ್ದ.

ಅದೇಕೋ ಏನೋ, ನಾರಾಯಣ ಜೈಸ್ವಾಲ್‌ನ ಹೆಣ್ಣು ಮಕ್ಕಳಿಗೆ ವಿದ್ಯೆ ಒಲಿಯಲಿಲ್ಲ. ಆದರೆ ಕಿರಿಯವನಿದ್ದನಲ್ಲ ಗೋವಿಂದ? ಅವನು ತುಂಬಾ ಚೆನ್ನಾಗಿ ಓದುತ್ತಿದ್ದ. ಅವನು ಏಳನೇ ತರಗತಿಯಲ್ಲಿ ಪಾಸಾದ ತಿಂಗಳಲ್ಲೇ ಆತನ ತಾಯಿ ತೀರಿಹೋದಳು. ಇದು ನಾರಾಯಣ ಜೈಸ್ವಾಲ್‌ನ ಕುಟುಂಬಕ್ಕೆ ಬಿದ್ದ ದೊಡ್ಡ ಪೆಟ್ಟು. ಮೊದಲಿಂದಲೂ ಸಂಕಟದ ಮಧ್ಯೆಯೇ ಬೆಳೆದಿದ್ದ ನಾರಾಯಣ ಜೈಸ್ವಾಲ್, ಹೆಂಡತಿಯ ಅಗಲಿಕೆಯನ್ನು ತುಟಿಕಚ್ಚಿ ಸಹಿಸಿಕೊಂಡ. ಅದೊಂದು ದಿನ ಮಗನನ್ನು ಎದುರು ಕೂರಿಸಿಕೊಂಡು 'ನಿನ್ನ ಅಕ್ಕಂದಿರ ಮದುವೆಯ ಜವಾಬ್ದಾರಿ ನನ್ನ ಮೇಲಿದೆ ಮಗನೇ. ಆ ಹೊಣೇನ ಹೇಗಾದ್ರೂ ನಿಭಾಯಿಸ್ತೀನಿ. ನೀನು ಶ್ರದ್ಧೆಯಿಂದ ಓದು. ಸಂಕಟದ ಬದುಕು ನನಗೆ ಮಾತ್ರ ಇರಲಿ' ಅಂದು ಕಣ್ತುಂಬಿಕೊಂಡ.
ನಾರಾಯಣ ಜೈಸ್ವಾಲ್ ಕುಟುಂಬ
ವೇಳೆಗಾಗಲೇ ಸೀಮೆಎಣ್ಣೆ ದೀಪದ ಬೆಳಕಿನಲ್ಲಿಯೇ ಓದಿದ ಗೋವಿಂದ ಜೈಸ್ವಾಲ್ ಪಿಯುಸಿ ಮುಗಿಸಿದ್ದ. ಪದವಿ ತರಗತಿಯಲ್ಲಿ ಹೆಚ್ಚು ಅಂಕ ಪಡೆಯಬೇಕು ಅಂದುಕೊಂಡರೆ ಓದಲು ಮನೆಯಲ್ಲಿ ಲೈಟೇ ಇರಲಿಲ್ಲ. ಜತೆಗೆ ಮನೆಯ ಅಕ್ಕಪಕ್ಕ ದಿನದ ಇಪ್ಪತ್ನಾಲ್ಕು ಗಂಟೆಯೂ ಹತ್ತಿಗಿರಣಿ ಹಾಗೂ ಪ್ರಿಂಟಿಂಗ್ ಮೆಷಿನ್‌ಗಳು ಗಿರ್ರಗಿರ್ರಗಿರ್ರನೆ ತಿರುಗುತ್ತ ಸದ್ದು ಮಾಡುತ್ತಲೇ ಇದ್ದವು. ಈ ಸದ್ದಿನ ಮಧ್ಯೆಯೇ ಮನೆಯ ಮುಂದಿದ್ದ ಬೀದಿ ದೀಪಗಳ ಕೆಳಗೆ ಕೂತು ಗೋವಿಂದ ಜೈಸ್ವಾಲ್ ಓದಬೇಕಿತ್ತು. ಪ್ರಿಂಟಿಂಗ್ ಮೆಷಿನ್ನಿನ ಸದ್ದು ಕೇಳಿದರೆ ಓದು ತಲೆಗೆ ಹೋಗೋದಿಲ್ಲ ಅನ್ನಿಸಿದಾಗ ಎರಡೂ ಕಿವಿಗೆ ಹತ್ತಿ ತುಂಬಿಕೊಂಡು, ನಂತರ ಅದೇ ಬೀದಿ ದೀಪದ ಕೆಳಗೆ ಕೂತು ಓದಿದ ಗೋವಿಂದ. ಪ್ರತಿಫಲವಾಗಿ ಸೆಕೆಂಡ್ ಕ್ಲಾಸ್‌ನಲ್ಲಿ ಡಿಗ್ರಿ ಪಾಸು ಮಾಡಿದ.

ಈ ಸಂದರ್ಭದಲ್ಲಿಯೇ ಪರಿಚಿತರೆಲ್ಲ ಓದಿದ್ದು ಸಾಕು. ಯಾವುದಾದ್ರೂ ಕೆಲ್ಸ ಹಿಡಿ ಅಂದರು. ಬೇರೆ ಯಾವುದೂ ಸಿಗದೇ ಹೋದ್ರೆ ಅಟೆಂಡರ್ ಕೆಲಸಕ್ಕಾದ್ರೂ ಪ್ರಯತ್ನಿಸು ಅಂದರು. ಅಪ್ಪನಿಗೆ ನೆರವಾಗಬೇಕು, ಮನೆಗೆ ಆಧಾರವಾಗಬೇಕು ಎಂಬ ಆಸೆಯಿತ್ತಲ್ಲ? ಅದೇ ಕಾರಣದಿಂದ ಗೋವಿಂದ ಜೈಸ್ವಾಲ್ ಕ್ಲರ್ಕ್, ಅಟೆಂಡರ್, ಕ್ಯಾಷಿಯರ್, ಮ್ಯಾನೇಜರ್... ಹೀಗೆ ಹತ್ತು ಹಲವು ಕೆಲಸಕ್ಕೆ ಅರ್ಜಿ ಹಾಕಿದ. ಹಲವು ಸ್ಪರ್ಧಾತ್ಮಕ ಪರೀಕ್ಷೆ ಬರೆದ. ಸಂದರ್ಶನಗಳಿಗೆ ಹೋಗಿ ಬಂದ. ಆದರೆ ಎಲ್ಲ ಸಂದರ್ಶನದಲ್ಲೂ ನಿಮಗೆ ಕೆಲ್ಸ ಕೊಡ್ತೀವಿ. ನೀವು ಎಷ್ಟು ಲಂಚ ಕೊಡ್ತೀರಿ ಹೇಳಿ ಎಂದೇ ಕೇಳುತ್ತಿದ್ದರು.

ಮಧ್ಯಮ ವರ್ಗದವರು ಅನ್ನಿಸಿಕೊಳ್ಳಲು ಅಗತ್ಯವಿರುವ ಎಲ್ಲ ಸರಕಾರಿ ನೌಕರಿಗಳೂ 'ಫಿಕ್ಸ್' ಆಗಿಬಿಟ್ಟಿರುತ್ತವೆ ಎಂದು ಗೋವಿಂದ ಜೈಸ್ವಾಲ್‌ಗೆ ತುಂಬ ಬೇಗನೆ ಅರ್ಥವಾಗಿ ಹೋಯಿತು. ಅಂದರೆ, ಲಂಚ ಕೊಡದೆ ಕೆಲಸಕ್ಕೆ ಸೇರಲು ಸಾಧ್ಯವೇ ಇಲ್ಲವೆ ಎಂದು ಆತ ಯೋಚಿಸಿದ. ಆ ಪ್ರಶ್ನೆಯನ್ನೇ ಹತ್ತಾರು ಮಂದಿಗೂ ಕೇಳಿದ. ಲಂಚವನ್ನೇ ಪಡೆಯದೆ, ಕೇವಲ ಪ್ರತಿಭೆಯನ್ನು, ಮೆರಿಟ್ಟನ್ನು ಆಧರಿಸಿ ಕೊಡುವ ನೌಕರಿಯೆಂದರೆ ಜಿಲ್ಲಾಧಿಕಾರಿ ಹುದ್ದೆ. ಅದಕ್ಕೆ ಐಎಎಸ್ ಮಾಡಬೇಕು ಎಂದು ಹತ್ತಾರು ಮಂದಿ ಹೇಳಿದರು. ಅಪ್ಪನ ಬಳಿ ಎಲ್ಲವನ್ನೂ ವಿವರಿಸಿದ ಗೋವಿಂದ, ಸುಮ್ಮನಿದ್ದ. ನಂತರದ ಎರಡೇ ದಿನದಲ್ಲಿ ತನಗಿದ್ದ ಅಷ್ಟೂ ಜಮೀನನ್ನು ಮಗನ ಕೈಗಿಟ್ಟ ನಾರಾಯಣ ಜೈಸ್ವಾಲ್, 'ಕಾಶಿಯಲ್ಲಿ ಚೆನ್ನಾಗಿ ಓದೋಕ್ಕಾಗಲ್ಲ. ಈಗಲೇ ದಿಲ್ಲಿಗೆ ಹೊರಡು. ಎಲ್ಲವನ್ನೂ ಮರೆತು ಓದು. ನನ್ನ ರಟ್ಟೆಯಲ್ಲಿನ್ನೂ ಶಕ್ತಿ ಇದೆ. ದುಡೀತೀನಿ. ತಿಂಗಳು ತಿಂಗಳೂ ನಿಂಗೆ ದುಡ್ಡು ಕಳಿಸ್ತೀನಿ' ಅಂದ.

ಐಎಎಸ್ ಮಾಡಲು ದಿಲ್ಲಿಗೆ ಹೊರಟವನನ್ನು ಕಂಡು ಗೇಲಿ ಮಾಡಿದವರಿಗೆ ಲೆಕ್ಕವಿಲ್ಲ. ಆದರೆ ಅದೇನನ್ನೂ ಗಮನಿಸುವ ಸ್ಥಿತಿಯಲ್ಲಿ ಗೋವಿಂದ ಜೈಸ್ವಾಲ್ ಇರಲಿಲ್ಲ. ಆತ ಹಗಲಿರುಳೆನ್ನದೆ ಒಂದೇ ಸಮನೆ ಓದಿದ. ದಿಲ್ಲಿಯಂಥ ಊರಿನಲ್ಲಿ ಖರ್ಚಿಗೆ ಹಣ ಸಾಲುತ್ತಿಲ್ಲ ಅನ್ನಿಸಿದಾಗ ಟ್ಯೂಷನ್ ಶುರು ಮಾಡಿದ. ಆಗಲೂ ದುಡ್ಡು ಸಾಕಾಗದೇ ಹೋದಾಗ ಬೆಳಗಿನ ತಿಂಡಿಗೆ ಗುಡ್‌ಬೈ ಹೇಳಿದ. ದೇವರ ಮೇಲೆ ಅವನಿಗೆ ನಂಬಿಕೆ ಇರಲಿಲ್ಲ. ಹಾಗಾಗಿ ಹರಕೆ, ಪೂಜೆ, ವ್ರತದ ಮೊರೆ ಹೋಗಲಿಲ್ಲ. ಬದಲಿಗೆ, ಏನೇ ಕಷ್ಟ ಬಂದರೂ ನಾನೇ ಒಂದು ಕೈ ನೋಡ್ಕೋತೇನೆ ಎಂದು ನಿರ್ಧರಿಸಿಬಿಟ್ಟ.

ಇಷ್ಟೆಲ್ಲ ಆದ ನಂತರವೂ ಗೋವಿಂದ ಜೈಸ್ವಾಲ್‌ಗೆ ಒಂದು ಕೊರಗಿತ್ತು. ಏನೆಂದರೆ ಅವನಿಗೆ ಬರುತ್ತಿದ್ದುದು ಬಟ್ಲರ್ ಇಂಗ್ಲಿಷ್! ಮಾತೃಭಾಷೆಯ ಬದಲು ಇಂಗ್ಲಿಷಿನಲ್ಲಿ ಪರೀಕ್ಷೆ ಬರೆದರೆ ಒಂದು ಸ್ಕೋಪ್ ಎಂದು ಎಲ್ಲರೂ ಹೇಳುತ್ತಿದ್ದರು. ಆದರೆ ಬಾರದ ಇಂಗ್ಲಿಷಿಗಿಂತ ಮಾತೃಭಾಷೆ ಹಿಂದಿಯಲ್ಲಿ ಪರೀಕ್ಷೆ ಬರೆಯುವುದೇ ಸರಿ ಅನ್ನಿಸಿತು. ಹಾಗೇ ಮಾಡಿದ. ಪರೀಕ್ಷೆ ಮುಗಿದ ಮೇಲೆ ಕಾಶಿಗೆ, ಅದೇ ಕೊಳೆಗೇರಿಯ ಮನೆಗೆ ಬಂದುಬಿಟ್ಟ.

ಕಡೆಗೊಂದು ದಿನ ಬಂದೇ ಬಂತು. ಅದು ಗೋವಿಂದ ಜೈಸ್ವಾಲ್‌ನ ಬದುಕಿನ ಅಮೃತಘಳಿಗೆ. ಐಎಎಸ್ ಪರೀಕ್ಷೆಯಲ್ಲಿ ಆತ 48ನೇ ರ್‍ಯಾಂಕ್ ಬಂದಿದ್ದಾನೆ ಎಂಬ ಸುದ್ದಿ ಪ್ರಕಟವಾಯಿತು. ಫಲಿತಾಂಶದ ಒಂದು ರಿಜಿಸ್ಟರ್ಡ್ ಪೋಸ್ಟ್ ಪತ್ರ ಗೋವಿಂದ ಜೈಸ್ವಾಲ್‌ನ ಕೊಳೆಗೇರಿ ಮನೆಯ ವಿಳಾಸಕ್ಕೆ ಬಂದರೆ ಈ ವಿಳಾಸ ಹುಡುಕಿ ಹುಡುಕಿ ಸುಸ್ತಾದ ಅಂಚೆಯವನು 'ವಿಳಾಸದಾರರು ಪತ್ತೆಯಿಲ್ಲ' ಎಂದು ಷರಾ ಬರೆದು ವಾಪಸ್ ಕಳಿಸಿಬಿಟ್ಟಿದ್ದ! ಅಂಚೆ ಇಲಾಖೆ, ಮತ್ತೊಮ್ಮೆ ಹುಡುಕಿ ಎಂದು ಆ ಪತ್ರವನ್ನೇ ವಾಪಸ್ ಕಳುಹಿಸಿತು. ಕಡೆಗೊಮ್ಮೆ ಕೊಳೆಗೇರಿಯ ಒಂದು ಹಳೆ ಹಳೆ ಹಳೇ ಮನೆಯಲ್ಲಿ ಜೈಸ್ವಾಲ್ ಕುಟುಂಬವನ್ನು ಅಂಚೆಯವನು ಪತ್ತೆ ಮಾಡಿದ. ಕೆಲವೇ ದಿನಗಳಲ್ಲಿ ಪ್ರೊಬೇಷನರಿ ಅಫೀಸರ್ ಎಂದು ಗೋವಿಂದ ಜೈಸ್ವಾಲ್‌ನನ್ನು ನೇಮಕ ಮಾಡಿರುವ ಪತ್ರ ಕೂಡ ಆತನ ಕೈ ಸೇರಿತು. ಕೆಲವೇ ವರ್ಷಗಳ ಹಿಂದೆ ಅಟೆಂಡರ್ ಕೆಲಸಕ್ಕೆ ಅದೆಷ್ಟೋ ಲಕ್ಷ ಕೊಡಿ ಅನ್ನಿಸಿಕೊಂಡಿದ್ದ ಗೋವಿಂದ ಜೈಸ್ವಾಲ್ ಕಡೆಗೂ, ಒಂದೇ ಒಂದು ಪೈಸೆ ಲಂಚ ಕೊಡದೆ ಐಎಎಸ್ ಆಫೀಸರ್ ಆಗಿಯೇಬಿಟ್ಟ.

***
ತಿಂಗಳ ಹಿಂದಷ್ಟೇ ಗೋವಿಂದ ಜೈಸ್ವಾಲ್‌ನ ಪ್ರೊಬೇಷನ್ ಅವಧಿ ಮುಗಿದಿದೆ. ಆತನೀಗ ಉತ್ತರ ಪ್ರದೇಶದಲ್ಲಿ ಜಿಲ್ಲಾಧಿಕಾರಿ. ಮದುವೆ ಮಾರ್ಕೆಟ್‌ನಲ್ಲಿ ಅವನ ಹೆಸರು ತುಂಬ ಜೋರಾಗಿ ಓಡುತ್ತಿದೆ. ಕನ್ಯಾಪಿತೃಗಳು ಅವನ ಮುಂದೆ ಸಾಲಾಗಿ ನಿಂತಿದ್ದಾರೆ. ಜಾತಿ, ಧರ್ಮದ ಮಾತು ಬೇಡವೇ ಬೇಡ. ನೀವು 'ಯೆಸ್' ಅನ್ನಿ ಸಾಕು. ಮನೆ ಅಳಿಯನನ್ನಾಗಿ ಮಾಡ್ಕೋತೀವೆ ಅಂದಿದ್ದಾರೆ. ನಮ್ಮ ಮಗಳ ಹೆಸರಲ್ಲಿ ಮನೆ, ಜಮೀನು, ಒಡವೆ, ಬ್ಯಾಂಕ್ ಬ್ಯಾಲೆನ್ಸು ಎಲ್ಲವೂ ಇದೆ ಎಂದು ಲೆಕ್ಕ ತೋರಿಸಿದ್ದಾರೆ. ಮದುವೆಗೆ ಒಪ್ಪಿದ್ರೆ ಅದೆಷ್ಟೋ ಕೋಟಿ ವರದಕ್ಷಿಣೆ ಕೊಡುವ ಮಾತಾಡಿದ್ದಾರೆ.

ಒಂದೇ ಮಾತಲ್ಲಿ ಹೇಳುವುದಾದರೆ ಗೋವಿಂದನಿಗೆ ಈಗ ಊರ ತುಂಬಾ ನೆಂಟರು.ಆದರೆ, ಗೆಲುವಿನ ಹಮ್ಮಿನಲ್ಲಿ ಗೋವಿಂದ್ ಮೈಮರೆತಿಲ್ಲ. ತನ್ನ ಭವಿಷ್ಯ ರೂಪಿಸಲು ತಂದೆ ಪಟ್ಟ ಕಷ್ಟ ಎಂಥದೆಂದು ಅವನಿಗೆ ಗೊತ್ತಿದೆ. ಅಪ್ಪನನ್ನು ಚೆನ್ನಾಗಿ ನೋಡ್ಕೋಬೇಕು. ಅಕ್ಕಂದಿರ ಬದುಕಿಗೆ ನೆರವಾಗಬೇಕು. ತನ್ನಂಥದೇ ಹಿನ್ನೆಲೆಯಿಂದ ಬಂದ ಬಡವರ ಮನೆಯ ಮಕ್ಕಳಿಗೆ ನೆರವಾಗಬೇಕು. ಲಂಚ ಕೊಡದೇ ನೌಕರಿ ಪಡೆಯುವಂಥ ವಾತಾವರಣ ನಿರ್ಮಿಸಬೇಕು... ಇಂಥವೇ ನೂರೆಂಟು ಕನಸುಗಳು ಗೋವಿಂದ ಜೈಸ್ವಾಲ್‌ಗೆ ಇವೆ. ಈ ಪೈಕಿ ಒಂದಷ್ಟು ಕನಸುಗಳನ್ನು ನನಸು ಮಾಡಿಕೊಂಡ ನಂತರ ಬಡವರ ಮನೆಯ ಹೆಣ್ಣೊಬ್ಬಳನ್ನು ಮದುವೆಯಾಗುವುದೇ ನನ್ನ ಗುರಿ ಎಂದಾತ ದೃಢವಾಗಿ ಹೇಳಿದ್ದಾರೆ.

ಗೋವಿಂದ ಜೈಸ್ವಾಲ್‌ನ ಯಶೋಗಾಥೆಯನ್ನು ಓದಿದಿರಲ್ಲ, ಈಗ ಹೇಳಿ, ಸಾಧನೆಗೆ ಅಸಾಧ್ಯವಾದುದು ಯಾವುದಾದರೂ ಇದೆಯೇ? ಗೋವಿಂದ್ ನಮ್ಮ ನಡುವಿನ ರಿಯಲ್ ಹೀರೋ.
ಕೃಪೆ : ಎ.ಆರ್. ಮಣಿಕಾಂತ್

ಬಿಸಿರಕ್ತದ ತರುಣ ತರುಣಿಯರಿಗೆ ಡ್ರೈವಿಂಗ್ ಟಿಪ್ಸ್


Driving Tips
ಹರೆಯವೆಂದರೆ ಬಿಸಿರಕ್ತದ ವಯಸ್ಸು. ರಸ್ತೆಯಲ್ಲಂತೂ ಜೀವದ ಹಂಗು ತೊರೆದು ಇವರೆಲ್ಲ ಸವಾರಿ ಮಾಡುವುದನ್ನು ನೋಡಿದಾಗ ಎದೆ ಜುಂ ಎನ್ನುತ್ತದೆ. ಕೆಲವು ಯುವತಿಯರು ಸ್ಕೂಟಿ ಖರೀದಿಸುತ್ತಾರೆ. ಅವರಿಗೆ ಎಕ್ಸಿಲೇಟರ್ ಕೊಡೋಕೆ ಗೊತ್ತು. ಆದರೆ ತುರ್ತು ಸಂದರ್ಭದಲ್ಲಿ ಸ್ಕೂಟಿ ಬ್ಯಾಲೆನ್ಸ್ ಮಾಡಲಾಗದೇ ಅಪಘಾತಕ್ಕೆ ಈಡಾಗುತ್ತಾರೆ. ಯವಕರಂತೂ ಬೈಕ್ ಕಲಿತ ದಿನದಿಂದಲೇ ವೇಗದ ಸವಾರಿ ಸುರು ಮಾಡುತ್ತಾರೆ.

ಹರೆಯದ ಯುವಕ ಯುವತಿಯರ ಕೇರ್ ಲೆಸ್ ವಾಹನ ಸವಾರಿಯಿಂದ ಹೆಚ್ಚು ಅಪಘಾತಗಳು ಸಂಭವಿಸುತ್ತಿವೆ. ಅವರಿಗಿರುವ ಕಡಿಮೆ ವಾಹನ ಚಾಲನಾ ಅನುಭವ ಇದಕ್ಕೆಲ್ಲ ಕಾರಣ. ಇಲ್ಲಿರುವ ಸಲಹೆಗಳು ಪ್ರಮುಖವಾಗಿ ಹರೆಯದ ಯುವಕ/ಯುವತಿಯರಿಗಾಗಿ. ಉಳಿದವರೂ ಅನುಸರಿಸಬಹುದು.

* ಲೋ ಮಗಾ ಬೇಗ ಬಾರೋ ಅಂತ ಒಂದು ಕೈನಲ್ಲಿ ಬೈಕ್ ಹ್ಯಾಂಡಲ್ ಹಿಡಿದು ರೈಡ್ ಮಾಡುತ್ತ ಇನ್ನೊಂದು ಕೈನಲ್ಲಿ ಮೊಬೈಲ್ ನಲ್ಲಿ ಮಾತನಾಡುವುದು ಇಂದು ಸಾಮಾನ್ಯ ದೃಷ್ಯ. ದಯವಿಟ್ಟು ಡ್ರೈವಿಂಗ್ ಮಾಡುವಾಗ ಮೊಬೈಲ್ ಕರೆ ಮಾಡಬೇಡಿ. ಬಂದ ಕರೆಗಳನ್ನು ಸ್ವೀಕರಿಸಬೇಡಿ. ತುರ್ತು ಕರೆ ಬಂದಾಗ ವಾಹನ ಪಕ್ಕಕ್ಕೆ ನಿಲ್ಲಿಸಿ ಗಂಟೆಗಟ್ಟಲೆ ಮಾತನಾಡಿ. ಮಾತನಾಡಿ ಮುಗಿದಮೇಲೆ ಗಾಡಿ ಸ್ಟ್ರಾಟ್ ಮಾಡಿ.

* ಡ್ರೈವಿಂಗ್ ಮಾಡುತ್ತ ಮೊಬೈಲ್ ಸಂದೇಶಗಳನ್ನು ಕಳುಹಿಸಬೇಡಿ. ಇದರಿಂದ ನಿಮ್ಮ ಗಮನ ರಸ್ತೆಯಿಂದ ಬೇರೆ ಕಡೆ ಸರಿಯುತ್ತದೆ. ಅಪಘಾತವಾಗುವ ಸಂಭವ ಹೆಚ್ಚು. ಮ್ಯಾಪ್ ವೀಕ್ಷಣೆ ಕೂಡ ವಾಹನ ನಿಲ್ಲಿಸಿ ಮಾಡಿ.

* ವಾಹನ ಚಲಾಯಿಸುತ್ತಿರುವಾಗ ಪಾನೀಯ ಕುಡಿಯುವುದು ಮತ್ತು ತಿಂಡಿತಿನಿಸು ತಿನ್ನುವುದು ಮಾಡಬೇಡಿ.

* ವೇಗಕ್ಕೆ ಕಡಿವಾಣ ಹಾಕಿ. ವೇಗವಾಗಿ ಹೋಗುತ್ತಿರುವಾಗ ಅನಿರೀಕ್ಷಿತ ಸಂದರ್ಭಗಳಲ್ಲಿ ಬೈಕ್ ಅಥವಾ ಕಾರನ್ನು ನಿಲ್ಲಿಸೋದು ಕಷ್ಟ. ಅರ್ಜೆಂಟಿನಲ್ಲಿ ಯಾಕೆ ಹೋಗುತ್ತೀರಿ. ಮನೆಯಿಂದ ಬೇಗ ಹೊರಟು ಕ್ಲಪ್ತ ಸಮಯಕ್ಕೆ ಗುರಿ ಮುಟ್ಟಿ. ಹರೆಯದ ವಾಹನ ಅಪಘಾತಕ್ಕೆ ವೇಗದ ಪ್ರಯಾಣ ಪ್ರಮುಖ ಕಾರಣ.

* ಸ್ನೇಹಿತರೊಂದಿಗೆ ವಾಹನ ಸವಾರಿ ಮಾಡುತ್ತಿರುವಾಗ ಗಾಸೀಪ್ ಸುದ್ದಿ ಮಾತನಾಡಬೇಡಿ. ಅವಳು ಹಾಗಂತೆ! ಅವನಿಗೆ ಅಫೇರ್ ಇದೆಯಂತೆ ಇತ್ಯಾದಿ ಸುದ್ದಿಗಳಿಂದ ನಿಮ್ಮ ಗಮನ ರಸ್ತೆಯಲ್ಲಿರುವುದು ಕಷ್ಟ.

* ಕೋಪ ಬಂದಿದ್ದಾಗ ಅಥವಾ ಅಪ್ ಸೆಟ್ ಆಗಿರೋ ಸಂದರ್ಭದಲ್ಲಿ ವಾಹನ ಚಲಾಯಿಸದಿರಿ. ಭಾವನಾತ್ಮಕ ಸಮಸ್ಯೆಗಳು ಸುರಕ್ಷಿತ ವಾಹನ ಚಾಲನೆಗೆ ಪ್ರಮುಖ ಶತ್ರು. ಕೂಲಾಗಿ ಡ್ರೈವ್ ಮಾಡಿ.

* ಸುಮ್ಮನೆ ಕೂದಲು ಹಾರಿಸುತ್ತ, ಕೂಲಿಂಗ್ ಗ್ಲಾಸ್ ಸರಿಪಡಿಸುತ್ತ, ಮೇಕಪ್ ಮಾಡುತ್ತ ವಾಹನ ಚಾಲನೆ ಮಾಡಬೇಡಿ. ಸುಮ್ಮನೆ ಸ್ಟೈಲ್ ಮಾಡೋಕೆ ಹೋಗಿ ಸೌಂದರ್ಯ ಅಥವಾ ಜೀವ ಕಳೆದುಕೊಳ್ಳಬೇಡಿ.

* ಕುಡಿಯಬೇಡಿ. ಕುಡಿದು ವಾಹನ ಚಲಾಯಿಸಬೇಡಿ.

* ಹೊರಜಗತ್ತಿನ ಕುರಿತು ಗಮನವಿರಲಿ. ಅಂಬ್ಯುಲೆನ್ಸ್ ಹಾರ್ನ್ ಹಾಕುತ್ತಿದ್ದರೆ ದಾರಿಬಿಡಿ. ಪಾದಚಾರಿಗಳು ಅಡ್ಡಬರುತ್ತಿದ್ದಾರೆಯೇ ಗಮನಿಸಿ

* ವಾಹನ ಚಾಲನೆ ಮಾಡುವ ಮುನ್ನವೇ ಮ್ಯೂಸಿಕ್ ಸಿಸ್ಟಮ್ ಸೆಟ್ ಮಾಡಿ. ಮೆಲ್ಲಗೆ ಕೇಳುತ್ತಿರಲಿ. ಜೋರಾಗಿ ವಾಲ್ಯೂಮ್ ಇಟ್ಟು ಹೆಡ್ ಫೋನ್, ಇಯರ್ ಫೋನ್ ಬಳಸುವುದು ಮಾಡದಿರಿ. ಜೋರಾಗಿ ಮ್ಯೂಸಿಕ್ ಹಾಕಿ ವಾಹನ ಚಾಲನೆ ಮಾಡುವುದು ಕೂಡ ಹರೆಯದ ಯುವಕ ಯುವತಿಯರು ವಾಹನ ಅಪಘಾತ ಮಾಡುವುದಕ್ಕೆ ಪ್ರಮುಖ ಕಾರಣ.

* ವಾಹನದಲ್ಲಿ ಮಕ್ಕಳಿದ್ದರೆ ಅವರಿಗೆ ಸೀಟು ಬೆಲ್ಟ್ ಹಾಕಿರಿ. ಇಲ್ಲದಿದ್ದರೆ ನಿಮ್ಮ ಗಮನ ಹೆಚ್ಚು ಅವರ ಮೇಲೆಯೇ ಇರುತ್ತದೆ.

* ಸಿಗರೇಟು ಸೇದುವುದು ಕೆಟ್ಟದು. ವಾಹನ ಚಲಾಯಿಸುವಾಗ ಸೇದುವುದಂತು ಅಪಾಯಕಾರಿ. ಸಿಗರೇಟ್ ಉರಿಸುವಾಗ ನಿಮ್ಮ ಗಮನ ಎಲ್ಲೆಲ್ಲೂ ಹೋಗುತ್ತದೆ. ಅದರ ಬೂದಿಯನ್ನು ಆಶ್ ಟ್ರೇಗೆ ಹಾಕುವಾಗ ನಿಮ್ಮ ಗಮನ ರಸ್ತೆಯ ಮೇಲಿರೋದಿಲ್ಲ.

* ವಾಹನ ಚಲಾಯಿಸುತ್ತಿರುವಾಗ ಹಿಂದಿನ ಸೀಟಿನತ್ತ ಆಗಾಗ ತಿರುಗುವುದು, ಅಲ್ಲಿಟ್ಟ ಬ್ಯಾಗಿಗೆ ಕೈ ಹಾಕುವುದು ಮಾಡಬೇಡಿ.

* ಡ್ರೈವಿಂಗ್ ಮಾಡುತ್ತಿರುವಾಗ ರಸ್ತೆಯ ಬದಿಯಲ್ಲಿರುವ ಸೀನರಿಗಳು, ಜಾಹೀರಾತು ಬೋರ್ಡ್ ಗಳನ್ನು ನೋಡುತ್ತ ಮೈಮರೆಯಬೇಡಿ.

ಪ್ರಾಣ ಯಾವತ್ತೂ ಅಮೂಲ್ಯ. ಅದು ನಿಮ್ಮದಾಗಿರಬಹುದು. ರಸ್ತೆಯಲ್ಲಿರುವ ಪಾದಚಾರಿಗಳದಾಗಿರಬಹುದು. ಅಥವಾ ಇತರ ವಾಹನ ಚಾಲಕರಾದಗಿರಬಹುದು. ನಿಮ್ಮ ಚಿತ್ತ ಚಾಂಚಲ್ಯದಿಂದ ಅಮೂಲ್ಯ ಜೀವಹಾನಿ, ನಿಮ್ಮ ಪ್ರೀತಿಯ ಅಪ್ಪ ಅಮ್ಮ, ಅಣ್ಣ, ತಂಗಿ, ಅಕ್ಕ, ತಮ್ಮ ಸ್ನೇಹಿತರಿಗೆ ನೀವಿಲ್ಲದೇ ತುಂಬಾ ದುಃಖವಾಗುತ್ತದೆ. ಹೀಗಾಗಿ ನಿಮ್ಮ ಸಂಪೂರ್ಣ ಗಮನ ವಾಹನ ಚಾಲನೆ ಮೇಲಿರಲಿ. ಅಪಘಾತ, ಅನಾಹುತ ತಪ್ಪಿಸಲು ಈ ಅಮೂಲ್ಯ ಸಲಹೆ ಪಾಲಿಸಿರಿ. ಹ್ಯಾಪಿ ಡ್ರೈವಿಂಗ್...

ಕೃಪೆ : ದ್ಯಾಟ್ಸ್ ಕನ್ನಡ

Tuesday 26 July 2011




ಇಂದು ಕಾರ್ಗಿಲ್ ಯುದ್ಧದ ವಿಜಯ ದಿವಸ. ಯುದ್ಧವಾಗಿ ಇಂದಿಗೆ ೧೨ ವರ್ಷಗಳೇ ಕಳೆದಿವೆ. ತನ್ನಿಮಿತ್ಯ ಈ ಲೇಖನ

ಕಾಶ್ಮೀರದ ಶ್ರೀನಗರದಿಂದ ೨೦೫ಕಿ.ಮೀ.ಗಳ ದೂರದಲ್ಲಿರುವ ಕಾರ್ಗಿಲ್ ಕಠಿಣವಾದ ನೀರ್ಗಲ್ಲುಗಳಿಂದ ಆವೃತವಾದ, ಪ್ರಪಂಚದ ಕೆಲವು ಅತ್ಯಂತ ಎತ್ತರದ ಪರ್ವತಗಳಿಂದ ಕೂಡಿದ ಲಡಾಖ್ ಶ್ರೇಣಿಗೆ ಸೇರಿದ ಪ್ರದೇಶ. ಶ್ರೀನಗರ ಮತ್ತು ಲೇಹ್ ಪ್ರದೇಶಕ್ಕೆ ಇರುವ ಏಕೈಕ ಭೂಮಾರ್ಗ. ಅತ್ಯಂತ ಕ್ಲಿಷ್ಟ ಮತ್ತು ದುರ್ಗಮವಾದ ಭೂ ಸರಹದ್ದು. ವರ್ಷದ ಮುಕ್ಕಾಲು ಅವಧಿಯಲ್ಲಿ, ೦೪೮ ದೀಗ್ರಿ ಸೆಲ್ಸಿಯಸ್ ತಾಪಮಾನವಿರುವ ಶೀತಲ ಮರಭೂಮಿ. ೧೬೦ಕಿ.ಮೀ.ಗಳ ಹಿಮಚ್ಛಾದಿತ ಪರ್ವತ ಹೊಂದಿರುವ ಊಹಾತೀತ ಸ್ಥಳ.

`ಕಾಶ್ಮೀರವನ್ನು ತನ್ನದಾಗಿಸಿಕೊಳ್ಳಬೇಖೂ. ಸಿಯಾಚಿನ್ ನೀರ್ಗಲ್ಲಿನ ಮೇಲೆ ಸಂಪೂರ್ಣ ಒಡೆತನ ಹೊಂದಬೇಕೆಂಬ ದುರಾಸೆಗೆ ಮತ್ತು ಅಂತಾರಾಷ್ಟ್ರೀಯ ಗಮನ ತನ್ನತ್ತ ಸೆಳೆದುಕೊಳ್ಳಲು ಪಾಕ್ ಈ ಪ್ರದೇಶಕ್ಕೆ ತನ್ನ ಸೇನೆ ನುಗ್ಗಿಸಿತ್ತು. ಈ ಆಕ್ರಮಣಕ್ಕೆ ಪಾಕಿಸ್ತಾನಕ್ಕೀ ಸೇನೆ ಕೊಟ್ಟ ಹೆಸರು `ಆಪರೇಷನ್ ಬದ್ರ್'.

ಭಾರತೀಯ ಭೂಸೇನೆ ಮತ್ತು ವಾಯುಸೇನಾ ಪಡೆಗಳು ಜಂಟಿಯಾಗಿ ಮೇ ಮತ್ತು ಜುಲೈ ೧೯೯೯ರಲ್ಲಿ ಜಯಿಸಿದ್ದು ಕಾರ್ಗಿಲ್ ಕದನ. ಈ ಕ್ರಿಯೆಗೆ ಕೊಟ್ಟ ನಾಮಧೇಯ `ಆಪರೇಶನ್ ವಿಜಯ್'. ಭಾರತೀಯ ಸೇನಾ ಇತಿಹಾಸದಲ್ಲೇ ಅತ್ಯಂತ ಮಹತ್ತರವಾದ ವಿಜಯವದು. ಸಮುದ್ರಮಟ್ಟದಿಂದ ಅತೀ ಎತ್ತರ ಪ್ರದೇಶದಲ್ಲಿ ನಡೆದ ಮೊದಲ ಯುದ್ಧವೂ ಹೌದು.
೬೦ದಿನಗಳ ಕಾಲ ರಾತ್ರಿ ಹಗಲೂ ಸತತ ಕಾದಾಟದ ನಂತರ ೫೭೨ ಭಾರತೀಯ ಯೋಧರು ದೇಶಕ್ಕಾಗಿ ಪ್ರಾಣ ತೆತ್ತಿದ್ದಕ್ಕೆ ೧೯೯೯ರ ಜುಲೈ ೨೬ರಂದು ವಿಜಯ ಸಿಕ್ಕಿತು. ಸಿಪಾಯಿಗಳ ಗೌರವಾರ್ಥವಾಗಿ ಅಂದಿನಿಂದ ಈ ದಿನವನ್ನು ದೇಶದಾದ್ಯಂತ `ಕಾರ್ಗಿಲ್ ವಿಜಯ ದಿವಸ' ಎಂದು ಆಚರಿಸಲಾಗುತ್ತದೆ.

ಕಾರ್ಗಿಲ್ ರಣಾಂಗಣದಲ್ಲಿ ಜೀವದ ಹಂಗು ತೊರೆದು ಹೋರಾಡಿ ಮಡಿದ ಹಲವಾರು ಯೋಧರ ಜೀವನಗಾಥೆಗಳು ಸಂಕ್ಷಿಪ್ತವಾಗಿ ಬಿಂಬಿಸುವ ಪ್ರಯತ್ನ ಇಲ್ಲಿದೆ.

ಜಸ್ವಿಂದರ್ ಸಿಂಗ್ ಭರವಸೆ:

"ನೀನೆನೂ ಹೆದರಬೇಕಾಗಿಲ್ಲ. ನಾನು ಕಾಶ್ಮೀರದಲ್ಲಿ ಮೂರು ವರ್ಷಗಳ ಕಾಲ ಉಗ್ರಗಾಮಿಗಳ ವಿರುದ್ಧ ಹೋರಾಡಿರುವೆ" - ಸೈನಿಕ ಸಮವಸ್ತ್ರದ ತೋಳು ಮಡಚುತ್ತ ಕಂಬನಿದುಂಬಿದ ತನ್ನ ೨೦ರ ಹರೆಯದ ಪತ್ನಿ ಗುರುದಯಾರ್ ಕೌರ್ಗೆ ಸಿಪಾಯಿ ಜಸ್ವಿಂದರ್ ಸಿಂಗ್ ಬೆಚ್ಚನೆಯ ಭರವಸೆ ಇತ್ತ. ಆತ ಪಾಕ್ ಪಡೆಗಳನ್ನು ಬಲಿ ತೆಗೆದುಕೊಳ್ಳಲು ಕಾರ್ಗಿಲ್ ಯುದ್ಧಭೂಮಿಗೆ ಹೊರಟಿದ್ದ.
ಕೌರ್ ಜಸ್ವಿಂದರ್ಸಿಂಗ್ನನ್ನು ಮದುವೆಯಾಗಿ ಇನ್ನೂ ನಾಲ್ಕು ತಿಂಗಳು ಕಳೆದಿತ್ತಷ್ಟೆ. ಕಂಗಳ ತುಂಬಾ, ಮನದ ತುಂಬಾ ಅದೇನೇನೋ. ದಾಂಪತ್ಯ ಜೀವನದ ಹೊಂಗನಸುಗಳನ್ನು ತುಂಬಿಕೊಂಡಿದ್ದಳು. ಯುದ್ಧ ಮುಗಿದು ಪತಿ ಮನೆಗೆ ಮರಳಿದರೆ ಸಾಕು, ತಾನು ಕಟ್ಟಿಕೊಂಡ ಒಂದಿಷ್ಟು ಕನಸುಗಳಾದರೂ ನನಸಾಗಬಹುದೆಂಬ ಲೆಕ್ಕಾಚಾರ ಹಾಕಿದ್ದಳು.

ಗುರುದಯಾರ್ ಕೌರ್ ತನ್ನ ಪತಿ ಜಸ್ವಿಂದರ್ ಸಿಂಗ್ನನ್ನು ಮದುವೆಯಲ್ಲಿ ನೋಡಿದ್ದೆಷ್ಟೋ ಅಷ್ಟೆ. ಅದೇ ಆಕೆಯ ದಾಂಪತ್ಯ ಬದುಕಿನ ಅಮೃತಘಳಿಗೆಗಳು. ಅನಂತರ ಆ ಅಮೃತ ಘಳಿಗೆಗಳು ಆಕೆಯ ಬಾಳಿನಲ್ಲಿ ಮತ್ತೆಂದೂ ಬರಲಿಲ್ಲ. ಜಸ್ವಿಂದರ್ ಸಿಂಗ್ ಪ್ಲೈವು ಡ್ ಪೆಟ್ಟಿಗೆಯೊಂದರಲ್ಲಿ ಹೆಣವಾಗಿ ಮನೆಯಂಗಳಕ್ಕೆ ಬಂದಿಳಿದಾಗ ಆಕೆ ಆ ಕ್ರೂರ ಸತ್ಯವನ್ನು ಎದುರಿಸಬೇಕಾಯಿತು.
ಜಸ್ವಿಂದರ್ ಸಿಂಗ್ ತಂದೆ ಜೋಗಿಂದರ್ ಸಿಂಗ್ ಪಂಜಾಬಿನ ಒಬ್ಬ ಆಂಧ್ರ ರೈತ. ಮೂರು ಎಕರೆ ಜಮೀನು ಹೊಂದಿರುವ ಅತನಿಗೆ ಮೂವರು ಗಂಡುಮಕ್ಕಳು. ಈ ಜಮೀನು ಮೂವರ ಮಕ್ಕಳ ಬದುಕಿಗೆ ಏನೇನೂ ಸಾಲದೆಂದು ನಿರ್ಧರಿಸಿದ ಕಿರ್ಯ ಜಸ್ವಿಂದರ್ ಸಿಂಗ್ ೧೭ನೇ ವಯಸ್ಸಿನಲ್ಲೇ ಮನೆಬಿಟ್ಟು ಹೊರಟ. ಅವನನ್ನು ಬರಸೆಳೆದು ಅಪ್ಪಿಕೊಂಡಿದ್ದು ಭಾರತೀಯ ಸೇನೆ. ಆತನ ಸಾಹಸದ ಬದುಕಿಗೆ ಆಸರೆ ನೀಡಿತು.
ಮೇ ೨೧ರಂದು ಜಸ್ವಿಂದರ್ ಸಿಂಗ್ ಸಾಹಸದ ಬದುಕಿನ ಕೊನೆಯ ಅಧ್ಯಾಯ. ಆಯಕಟ್ಟಿನ ಟೈಗರ್ಹಿಲ್ಸ್ ಶತ್ರುಗಳ ವಶದಲ್ಲಿತ್ತು. ಅದನ್ನು ಹೇಗಾದರೂ ವೈರಿಗಳಿಂದ ಬಿಡಿಸಿಕೊಳ್ಳಬೇಕಾಗಿತ್ತು. ಆದರೆ ಅದೇನು ಅಷ್ಟು ಸುಲಭವೇ? ದುರ್ಗಮ ಶಿಖರ. ಕಡಿದಾದ ಹಾದಿ. ಶಿಖರದೆತ್ತರದಲ್ಲಿ ಬಂಕರ್ಗಳಲ್ಲಿ ಮದ್ದುಗುಂಡು ತುಂಬಿಕೊಂಡು ಕಾದಿರುವ ವೈರಿಪಡೆ. ವೈರಿಪಡೆಯ ಈ ದುರ್ಗಮ ಅಡಗುದಾಣ ಅರಸಿ ಹೊರಟ ಸಿಪಾಯಿ ಜಸ್ವಿಂದರ್ ಸಿಂಗ್ ಕೊನೆಗೂ ಮೇಲಕ್ಕೆ ತಲುಪಿದ. ಟೈಗರ್ ಶಿಖರವೇರಿದ. ಅಷ್ಟರಲ್ಲಿ ಆತನ ಎರಡೂ ತೊಡೆಗಳಿಗೆ ಎಲ್ಲಿಂದಲೋ ಗುಂಡುಗಳು ಬಂದು ಬಡಿದವು. ತೊಡೆಗಳು ಛಿದ್ರಛಿದ್ರ. ಆದರೆ ಮನಸ್ಸು ಮಾತ್ರ ಇನ್ನೂ ಭದ್ರ. ಕೊನೆಯುಸಿರಿನವರೆಗೂ ಕೈಯಲ್ಲಿದ್ದ ಬಂದೂಕು ವೈರಿಪಡೆಯ ಮೇಲೆ ಬೆಂಕಿ ಕಾರುತ್ತಲೇ ಇತ್ತು.

ಗುರುದಯಾಲ್ ಕೌರ್ ಮನೆಯಲ್ಲಿ ಟಿವಿ ಮುಂದೆ ಕುಳಿತಿದ್ದಳು. ಕಾರ್ಗಿಲ್ ಕದನದ ಸುದ್ದಿಗಳನ್ನು ಕಾತರದಿಂದ ಆಲಿಸುತ್ತಿದ್ದಳು. ತನ್ನ ಪತಿ ಸಿಪಾಯಿ ಜಸ್ವಿಂದರ್ ಸಿಂಗ್ ಬಗ್ಗೆ ಏನಾದರೂ ಸುದ್ಧಿ, ಚಿತ್ರ ಬರುವದೋ ಎಂದು ಕಾಯುತ್ತಿದ್ದಳು. ಅವಳ ನಿರೀಕ್ಷೆ ಸುಳ್ಳಾಗಲಿಲ್ಲ. ಒಂದೆರಡು ದಿನದಲ್ಲೇ ಜಸ್ವಿಂದರ್ ಸಿಂಗ್ಮನೆಯಂಗಳಕ್ಕೆ ಬಂದಿಳಿದ. ಆದರೆ ಶವವಾಗಿ ಪೆಟ್ಟಿಗೆಯೊಂದರಲ್ಲಿ ಮಲಗಿ. ಪಂಜಾಬಿನ ಧೂಳುತುಂಬಿದ ಹಳ್ಳಿ ಮುನ್ನೆಯ ಆ ಸಣ್ಣ ಮನೆಯಂಗಳದಲ್ಲಿ ಕುಳಿತು ಆಗಸದತ್ತ ದೃಷ್ತಿ ನೆಟ್ಟಿರುವ ಕೌರ್ ಈಗ ಮ್ಲಾನವದನೆ.

ಜಸ್ವಿಂದರ್ ಸಿಂಗ್ ವೀರಮರಣ ಅಪ್ಪಿದ್ದಕ್ಕೆ ತಂದೆಗೆ ದುಃಖವಿಲ್ಲ. "ಶತ್ರುವಪಡೆಯನ್ನು ಹಿಮ್ಮೆಟ್ಟಿಸಲು ಯಾರಾದರೂ ಹೋರಾಡುತ್ತಾ ಸಾಯಲೇಬೇಕು." ಎಂದು ತಮ್ಮಷ್ಟಕ್ಕೆ ಹೇಳಿಕೊಳ್ಳುತ್ತಾರ್ಎ.

"ನಮ್ಮ ಬದುಕಿಗೆ ಇದೊಂದು ಬರಸಿಡಿಲಿನಂತೆ ಬಂದಪ್ಪಳಿಸಿದ ದುರಂತ. ಆದರಿದು ದೇಶಕ್ಕೆ ಉತ್ತಮ ಭವಿಷ್ಯ ತಂದುಕೊಡಬಹುದೇನೋ. ಅದೇ ನಮಗೆ ಈಗುಳಿದಿರುವ ಸಮಾಧಾನ." - ದಾಂಪತ್ಯದ ಸವಿಯನ್ನೇ ಉಣ್ಣದ ಕೌರ್ ಉಮ್ಮಳಿಸಿ ಬರುವ ದುಃಖವನ್ನು ತಡೆದೊತ್ತಿ ಹೇಳುತ್ತಾಳೆ.
ಹೌದು, ಜಸ್ವಿಂದರ್ ಸಿಂಗ್ನ ಸಾವು ವ್ಯರ್ಥವಾಗುವದಿಲ್ಲ.

ಕಾರ್ಗಿಲ್ ಕದನ : ಕೆಲವು ವಿವರಗಳು

ಕಾಲಮಿತಿ :
ಯುದ್ಧ ನಡೆದ ಒಟ್ಟು ಅವಧಿ : ೭೪ ದಿನಗಳು
ಯುದ್ಧಕ್ಷೇತ್ರದ ಒಟ್ಟು ಅವಧಿ : ೧೫೦ ಕಿ.ಮೀ.

ಬಳಸಿದ ಬಲಾಬಲ
ಭಾರತೀಯ ಸೇನೆ : ೨೦,೦೦೦
ಪಾಕಿಸ್ತಾನಿ ಸೇನೆ : ಅಘೋಷಿತ
ಅತಿಕ್ರಮಣಕಾರಿಗಳು : ೧೫೦೦

ಶಸ್ತ್ರಾಸ್ತ್ರ ಬಳಕೆ
ಆರ್ಟಿಲರಿ : ೩೦೦ (೧೦೦ ಬೊಫೋರ್ಸ್ ಬಂದೂಕುಗಳೂ ಸೇರಿದಂತೆ)
ಶೆಲ್‍ಗಳು (ಪ್ರತಿನಿತ್ಯ) : ೫,೦೦೦
ಟೋನೇಜ್ (ಪ್ರತಿನಿತ್ಯ) : ೧೫,೦೦೦

ವಾಯುಬಲ
ಸ್ಟ್ರೈಕ್ ಮಿಶನ್ಸ್ : ೫೫೦
ರೆಕನೈಸಾನ್ಸ್ : ೧೫೦
ಎಸ್ಕಾರ್ಟ್ ಮಿಶನ್ : ೫೦೦
ಚಾಪರ್ ಸಾರ್ಟೀಸ್ : ೨,೧೮೫

ಮಡಿದವರು
ಭಾರತಸೇನೆ : ೪೦೭
ಗಾಯಗೊಂಡವರು : ೫೮೪
ನಾಪತ್ತೆಯಾದವರು : ೬
ಪಾಕ್ ಸೇನೆ ಮಡಿದವರು : ೬೯೬

ಯುದ್ಧ ವೆಚ್ಚ
ದೈನಂದಿನ ಸರಾಸರಿ ವೆಚ್ಚ : ೧೫ ಕೋಟಿ ರೂ.
ಒಟ್ಟು ವೆಚ್ಚ : ೧,೧೦೦ ಕೋಟಿ ರೂ.


ಕಾರ್ಗಿಲ್ ಕದನದಲ್ಲಿ ಹುತಾತ್ಮರಾದ ಕನ್ನಡದ ಕೆಲವರು ಕಡುಗಲಿಗಳು

*ಭಾರತೀಯ ವಾಯುಪಡೆಯ ಪ್ಲೈಟ್ ಲೆಫ್ಟಿನೆಂಟ್ ಎಂ.ಸುಬ್ರಹ್ಮಣ್ಯಂ (ಬೆಳಗಾವಿ)

* ಮಡಿವಾಳಪ್ಪ ನಾಯ್ಕರ್ (ಆಸುಂಡಿ ಗ್ರಾಮ, ಸವದತ್ತಿ ತಾಲೂಕು, ಬೆಳಗಾವಿ)

* ಸಿಪಾಯಿ ಧೋಂಡಿಬಾ ದೇಸಾಯಿ (ವಡಗಾಂವ, ಖಾನಾಪುರ, ತಾಲೂಕು, ಬೆಳಗಾವಿ)

ಸಿದ್ಧನಗೌಡ ಬಸನಗೌಡ ಪಾಟೀಲ, ಸಿ.ಆರ್.ಪಿ.ಎಫ್. (ಕೆರೂರು ಗ್ರಾಮ, ಚಿಕ್ಕೋಡಿ ತಾಲೂಕು, ಬೆಳಗಾವಿ ಜಿಲ್ಲೆ)

* ಅಪ್ಪಾಸಾಹೇಬ ಪೀರಪ್ಪ ಧನವಾಡೆ, ಸಿ.ಆರ್.ಪಿ.ಎಫ್. (ಇಂಗಳಿ ಗ್ರಾಮ, ಚಿಕ್ಕೋಡಿ ತಾಲೂಕು, ಬೆಳಗಾವಿ)

* ನಾಯಕ ಶಿವಬಸಯ್ಯ ಕುಲಕರ್ಣಿ, ೨೦ನೆಯ ರಾಷ್ಟ್ರೀಯ ರೈಫಲ್ಸ್ (ಚೊಳಚಗುಡ್ಡ ಗ್ರಾಮ, ಬಾದಾಮಿ, ಬಾಗಲಕೋಟ ಜಿಲ್ಲೆ)

* ಸಿದ್ಧರಾಮಪ್ಪ (ರೇಕುಳಿ ಗ್ರಾಮ, ಬೀದರ್ ಜಿಲ್ಲೆ)

* ಲ್ಯಾನ್ಸ್ ಹವಿಲ್ದಾರ್ ಮಲ್ಲಯ್ಯ ಚನ್ನಬಸಯ್ಯ ಮೇಗಳಮಠ (ಅಳವಂಡಿ ಗ್ರಾಮ, ಕೊಪ್ಪಳ ತಾಲ್ಲೂಕು, ಕೊಪ್ಪಳ ಜಿಲ್ಲೆ)

* ಎಸ್.ಕೆ.ಮೇದಪ್ಪ, ಮರಾಠಾ ಲೈಟ್ ಇನ್‍ಫೆಂಟ್ರಿ (ಕಿರಂಗನದೂರು, ಸೋಮವಾರಪೇಟೆ ತಾಲೂಕು, ಕೊಡಗು ಜಿಲ್ಲೆ)

* ದಾವಲಸಾಬ್ ಅಲಿಸಾಬ್ ಕಂಬಾರ್, ಬಿ.ಎಸ್.ಎಫ್. (ಬಲವಟ್ ಗ್ರಾಮ, ಮುದ್ದೇಬಿಹಾಳ ತಾಲೂಕು, ಬಿಜಾಪುರ)

* ಸುಬೇದಾರ್ ಪೆಮ್ಮಂಡ ದೇವಯ್ಯ ಕಾವೇರಪ್ಪ (ವಿರಾಜಪೇಟೆ, ಕೊಡಗು ಜಿಲ್ಲೆ)

* ಲಾನ್ಸ್ ನಾಯಕ್ ಎಚ್.ವಿ.ವೆಂಕಟ್ (ಅಗ್ರಹಾರ ಗ್ರಾಮ, ಅರಕಲಗೂಡು ತಾಲೂಕು, ಹಾಸನ ಜಿಲ್ಲೆ)

* ಲಾನ್ಸ್ ನಾಯಕ್ ಯಶವಂತ ಕೋಲಕಾರ (ಮೇಕಲಮರಡಿ ಗ್ರಾಮ, ಬೈಲಹೊಂಗಲ ತಾಲೂಕು, ಬೆಳಗಾವಿ ಜಿಲ್ಲೆ)

* ದಿಲೀಪ ಪೀರಪ್ಪ ಪೋತ್ರಾಜ (ಗದ್ಯಾಳ ಗ್ರಾಮ, ಜಮಖಂಡಿ ತಾಲೂಕು, ಬಿಜಾಪುರ ಜಿಲ್ಲೆ)

* ಗೋವಿಂದ ಶೆಡೋಳೆ (ವರದಟ್ಟಿ ಗ್ರಾಮ, ಭಾಲ್ಕಿ ತಾಲೂಕು, ಬೀದರ ಜಿಲ್ಲೆ)

Monday 18 July 2011

ಮುಸ್ಲಿಂ ಸಂಖ್ಯಾಕ್ಷರ 786 ಹೇಗೆ ಬಂದಿತು?


PÀ£ÀßqÀ ¨sÁµÉ0iÀÄ CPÀëgÀUÀ¼À°è ºÉÃUÉ ªÀiÁvÁæUÀt CAzÀgÉ ®WÀÄ ªÀÄvÀÄÛ UÀÄgÀÄ JAzÀÄ JgÀqÀÄ EgÀÄvÀÛzÉ0iÉÆà «±ÀézÀ ±ÉæõÀ× ¨sÁµÉ0iÀįÉÆèAzÁzÀ CgÉéPï ¨sÁµÉUÀÆ CzÀgÀzÉà DzÀ ¤0iÀĪÀÄ«zÉ.
        786 F ¸ÀASÉå0iÀÄ GUÀªÀÄ ªÀÄĹèA d£ÁAUÀPÉÌ 0iÀiÁªÀ ¸ÀAzÉñÀ ¤ÃqÀÄvÀÛzÉ JA§ÄzÉà PÀÄvÀƺÀ®.
            PÀÄgï-D£ïzÀ 0iÀiÁªÀÅzÉà CzsÁå0iÀÄzÀ ªÉÆzÀ®Ä MAzÀÄ ±ÉÆèÃPÀªÀ£ÀÄß ¥Àp¹0iÉÄà CzsÁå0iÀĪÀ£ÀÄß ¥ÁgÁ0iÀÄt ªÀiÁqÀÄvÁÛgÉ. CgÉéPï ¨sÁµÉ §gÉ0iÀÄĪÀzÀÄ, NzÀĪÀzÀÄ §®¢AzÀ JqÀPÉÌ. ºÁUÁV `©¹ä¯Áè» gÀºï ªÀiÁ¤gÀæ»ÃªÀiï JA§ ±ÉÆèÃPÀPÉÌ E¸Áè«Ä£À°è C¥ÁgÀ ±ÉæõÀ×vÉ, UËgÀªÀ ¨sÀQÛ EzÉ. F ±ÉÆèÃPÀzÀ°ègÀĪÀ ¥Àæw0iÉÆAzÀÄ CPÀëgÀPÀÆÌ CzÀgÀzÉà DzÀ ªÀiÁvÉæUÀ½ªÉ. ºÁUÁV ±ÉÆèÃPÀzÀ ¥Àæw0iÉÆAzÀÄ CPÀëgÀzÀ°ègÀĪÀ ¥Àæw ªÀiÁvÉæ0iÀÄ£ÀÄß PÀÆr¹ §gÀĪÀ ¸ÀASÉå0iÉÄà 786. F ¸ÀASÉå ªÀÄĹèAjUÉ vÀÄA¨Á CzÀȵÀÖzÀ ¸ÀASÉå.

ಆಕಾಶವಾಣಿ ಎಂಬ ಪದ ಮೊದಲು ರೂಪುಗೊಂಡಿದ್ದು ಯಾವ ನಗರದಲ್ಲಿ?


1935gÀ°è ªÉÄʸÀÆj£À°è qÁ.JA.«.UÉÆÃ¥Á®¸Áé«Ä0iÀĪÀgÀÄ ªÉÄʸÀÆgÀÄ «±Àé«zÁå®0iÀÄzÀ ¥ÉÇæ¥sɸÀgï DVzÀÝgÀÄ. CªÀgÀÄ vÀªÀÄä ªÀģɬÄAzÀ¯Éà 300 ªÁåmï mÁæ£ïì«ÄÃlgï£ÀÄß ¥Àæ0iÉÆÃUÁxÀðªÁV §¼À¹ ªÁvÁð ¥Àæ¸ÁgÀ ªÀiÁrzÀgÀÄ. §½PÀ E£ÀÆß GvÀÛªÀÄ¥Àr¸À®Ä 250 ªÁåmï£À ªÀÄvÉÆÛAzÀÄ mÁæ£ïì«ÄÃlgï DªÀÄzÀÄ  ªÀiÁrPÉÆAqÀgÀÄ. CªÀgÀÄ vÀªÀÄä F ¥Àæ¸ÁgÀ PÉÃAzÀæªÀ£ÀÄß DPÁ±ÀªÁt JAzÀÄ PÀgÉzÀgÀÄ. CzÀÄ ªÀÄĤì¥Á°n ªÀÄvÀÄÛ SÁ¸ÀV0iÀĪÀgÀ DyðPÀ ¸ÀºÁ0iÀÄzÉÆA¢UÉ fêÀAvÀªÁVvÀÄÛ. C£ÀAvÀgÀ 1942gÀ°è gÁd ¸ÀPÁðgÀ CzÀ£ÀÄß vÀ£Àß ªÀ±ÀPÉÌ vÉUÉzÀÄPÉÆArvÀÄ.

Sunday 17 July 2011

Markopolo's story


MAzÀÄ ¨Áj ªÀiÁPÉÆðÃ¥ÉÇïÉÆà vÀ£Àß ¸ÀºÁ0iÀÄPÀgÉÆA¢UÉ ¸ÀªÀÄÄzÀæzÀ°è ¥Àæ0iÀiÁt ªÀiÁqÀÄwÛzÀÝ. CªÀ¤UÉ ZÀÄmÁÖ ¸ÉÃzÀĪÀ C¨sÁå¸À §®ªÁVvÀÄÛ. MAzÀÄ ¸Á0iÀÄAPÁ® zÉÆÃtÂ0iÀÄ°è PÀĽvÀÄ ºÀgÀlÄvÁÛ ZÀÄmÁÖ ºÀwÛ¹PÉƼÀî®Ä ºÉÆÃzÁUÀ PÉÊ eÁj ¨ÉAQ¥ÉÇlÖt ¤Ãj£À°è ©zÀÄÝ ºÉÆìÄvÀÄ. zÉÆÃtÂ0iÀÄ°è ªÀÄvÁÛgÀÄ ZÀÄmÁÖ ¸ÉÃzÀÄwÛgÀ°®è. 0iÀiÁgÀ §½0iÀÄÆ ¨ÉAQ ¥ÉÇlÖt«®è. CªÀ£À §½0iÀÄÆ ªÀÄvÉÆÛAzÀÄ ¥ÉÇlÖt«®è. EzÀjAzÀ CªÀ£À vÀ¼ÀªÀļÀ ºÉaÑvÀÄ. ªÉÄïÁV ZÉÊ£ï¸ÉÆäÃPÀgï. zÉÆÃtÂ0iÀÄ°è DUÀ ¸ËÖªïUÀ¼ÀÆ EgÀ°®è. ¨ÉÃPÁzÀ DºÁgÀªÀ£Éß®è ºÉÆgÀqÀĪÁUÀ¯Éà vÉUÉzÀÄPÉƼÀÄîwÛzÀÝgÀÄ. ºÉÃUÁzÀgÀÆ ªÀiÁPÉÆðÃ¥ÉÇïÉÆãÀ ZÀÄlÖPÉÌ ¨ÉÃPÁzÀ ¨ÉAQ MzÀV¸À®Ä J®ègÀÆ ¥Àæ0iÀÄvÀß ªÀiÁrzÀgÀÄ. PÀ®ÄèUÀ½AzÀ ¨ÉAQ ºÉÆwÛ¸ÉÆÃtªÉAzÀgÉ CªÀÅ E®è. zÀÆgÀzï¯Éè®Æè zÉÆÃtÂUÀ¼À ¸ÀĽ«®è. D gÁwæ ¥ÀÇwð ºÁUÉà vÉÆAzÀgÉ ¥ÀlÖgÀÄ. ¨É¼ÀUÁzÁUÀ D zÉÆÃtÂ0iÀÄ aPÀÌ GzÉÆåÃVUÉ CzÀÄãvÀªÁzÀ MAzÀÄ Lr0iÀiÁ ºÉƼɬÄvÀÄ. CzÉà PÉÃA¢æPÀgÀt.

              ªÀiÁPÉÆðÃ¥ÉÇïÉÆãÀ PÀ£ÀßqÀPÀªÀ£ÀÄß vÉUÉzÀÄPÉÆAqÀÄ ¸ÀÆ0iÀÄð£ÀvÀÛ »rzÀÄ ¨sÀÆvÀ PÀ£Àßr0iÀÄAvÉ D QgÀtUÀ¼À£ÀÄß ZÀÄlÖzÀ vÀÄ¢UÉ PÉÃA¢æPÀj¹zÀ, PÀëtzÀ¯Éèà ZÀÄlÖ ºÉÆUÉ0iÀiÁrvÀÄ.