Keep in touch...

ನಿಮ್ಮ ಅಭಿಪ್ರಾಯ ಹಂಚಿಕೊಳ್ಳಿ - ನನ್ನ ಇ-ಮೇಲ್ : gshattigoudar@gmail.com ಮೊಬೈಲ್: +9199454 79292 (only SMS / WhatsApp)

Friday 16 September 2016

ಅವರು ಬದುಕಿದ್ದರೆ ಇಂದಿಗೆ ನೂರು ವರ್ಷ ತುಂಬುತ್ತಿತ್ತು


                   "ಕೌಸಲ್ಯಾ ಸುಪ್ರಜಾ ರಾಮ ಪೂರ್ವಾ ಸಂಧ್ಯಾ ಪ್ರವರ್ತತೇ.. ಉತ್ತಿಷ್ಠ ನರಶಾರ್ದೂಲ ಕರ್ತವ್ಯಂ ದೈವಮಾಹ್ನಿಕಂ..." ಬೆಳ್ಳಂಬೆಳ್ಳಿಗೆ ಇಂಥದೊಂದು ಸುಪ್ರಭಾತ ಎಲ್ಲ ಹಿಂದೂಗಳ ಪ್ರತಿ ಮನೆಮನೆಗಳಲ್ಲಿಯೂ ಮೊಳಗುತ್ತಿರುತ್ತದೆ. ಬಹುಶಃ ಈ ಶ್ಲೋಕಕ್ಕೆ ಗಾನಮಾಧುರ್ಯ ತುಂಬಿ ಭಾರತದಾದ್ಯಂತ ಪ್ರಸರಿಸುವಂತೆ ಮಾಡಿದ ಆ ಮಹಾನ್ ಗಾಯಕಿ  ಶ್ರೀಮತಿ ಎಂ.ಎಸ್. ಸುಬ್ಬುಲಕ್ಷ್ಮಿ. ಸಂಗೀತ ಕ್ಷೇತ್ರದಲ್ಲಿ ಭಾರತ ರತ್ನ ಪಡೆದ ಮೊದಲ ಮಹಿಳೆ ಎಂ.ಎಸ್.ಎಸ್.

                1916ರ ಸೆಪ್ಟೆಂಬರ್ 16ರಂದು ಮಧುರೈನಲ್ಲಿ ಜನಿಸಿದ ಸುಬ್ಬುಲಕ್ಷ್ಮಿಯವರು ಸಂಗೀತದ ಮನೆತನದ ಹಿನ್ನೆಲೆಯಿಂದ ಬಂದವರು. ಕಾರ್ನಟಿಕ ಸಂಗೀತದಲ್ಲಿ ತಮ್ಮ ಸಂಗೀತಾಭ್ಯಾಸ ಆರಂಭಿಸಿದ ಅವರು ಬದುಕಿರುವಾಗಲೇ ದಂತಕಥೆಯಾದವರು. ಏಷ್ಯಾದ ನೊಬೆಲ್ ಎಂದೇ ಖ್ಯಾತವಾದ ‘ರಾಮನ್ ಮ್ಯಾಗ್ಸೆಸೆ’ ಪ್ರಶಸ್ತಿ ಪಡೆದ ಮೊದಲ ಸಂಗೀತ ವಿದುಷಿಯಾದ ಇವರು 2004ರ ಡಿಸೆಂಬರ್ 11 ರಂದು ತಮ್ಮ 88ನೇ ವಯಸ್ಸಿನಲ್ಲಿ ನಮ್ಮನ್ನೆಲ್ಲ ಅಗಲಿ ಬಾರದ ಲೋಕಕ್ಕೆ ತೆರಳಿದರು ಆದಾಗ್ಯೂ ಅವರು ಹಾಡಿದ ಸಾವಿರಾರು ಹಾಡುಗಳಿಂದ ಭಾರತೀಯರ ಹೃದಯ ನಿವಾಸದಲ್ಲಿ ಶಾಶ್ವತವಾಗಿ ನೆಲೆ ನಿಂತಿದ್ದಾರೆ. ಅವರು ಬದುಕಿದ್ದರೆ ಇಂದಿಗೆ 100 ವರ್ಷ ತುಂಬುತ್ತಿತ್ತು. ಸ್ವರ ಸಾಮ್ರಾಜ್ಞಿ ಎಂ.ಎಸ್. ಸುಬ್ಬುಲಕ್ಷ್ಮಿ ಅವರಿಗೆ ಜನ್ಮಶತಮಾನೋತ್ಸವದ ಹಾರ್ದಿಕ ಶುಭಾಶಯಗಳು.

No comments: