Keep in touch...

ನಿಮ್ಮ ಅಭಿಪ್ರಾಯ ಹಂಚಿಕೊಳ್ಳಿ - ನನ್ನ ಇ-ಮೇಲ್ : gshattigoudar@gmail.com ಮೊಬೈಲ್: +9199454 79292 (only SMS / WhatsApp)

Tuesday 29 May 2012

ಡಾ|| ಗುರುರಾಜ ಕರಜಗಿಯವರ ವ್ಯಕ್ತಿತ್ವ ಪರಿಚಯ

             ಮೊನ್ನೆ ಬಿಜಾಪುರದ ಎ.ಪಿ.ಎಂ.ಸಿ.ಯಲ್ಲಿ ಮರ್ಚಂಟ್ಸ್ ಅಸೋಶಿಯೇಷನ್ ಮತ್ತು ಭಾರತ ವಿಕಾಸ ಸಂಗಮ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ `ಉದ್ಯೋಗ ಮತ್ತು ಜೀವನದಲ್ಲಿ ಸಂತೋಷ' ಎಂಬ ವಿಷಯವಾಗಿ ಮಾತನಾಡಲು  ನಮ್ಮ ಡಾ||ಗುರುರಾಜ್ ಕರಜಗಿ ಅವರು ಬಂದಿದ್ದರು. ಆ ಸಂದರ್ಭದಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲರಿಗೂ ಡಾ|| ಗುರುರಾಜ ಕರಜಗಿ ಅವರ ವ್ಯಕ್ತಿತ್ವ ಪರಿಚಯ ಎಂಬ ಜೆರಾಕ್ಸ್ ಪ್ರತಿಯನ್ನು ನೀಡಿದರು. ಅವರ ಅಮೋಘ ವ್ಯಕ್ತಿತ್ವ ಪರಿಚಯವನ್ನು ನಿಮ್ಮೊಂದಿಗೆ ಹಂಚಿಕೊಳ್ಳಬೇಕೆನ್ನಿಸಿತು. ಇಗೋ ಇಲ್ಲಿದೆ ಅವರ ವ್ಯಕ್ತಿತ್ವ ಪರಿಚಯ...


                                    ವ್ಯಕ್ತಿತ್ವ ಪರಿಚಯ

                                                       ಡಾ|| ಗುರುರಾಜ ಕರಜಗಿ

ಆಸಕ್ತಿ : ಸೃಜನಶೀಲತೆ, ಸಂವಹನ ಕೌಶಲ, ಅಭಿಪ್ರೇರಣೆ, ವೃತ್ತಿ ಸಂಹಿತೆ, ಮಾನವೀಯ ಮೌಲ್ಯಗಳು ಮತ್ತು ತತ್ವಶಾಸ್ತ್ರ

ಶೈಕ್ಷಣಿಕ ಸಾಧನೆ :
* ಕರ್ನಾಟಕ ವಿಶ್ವವಿದ್ಯಾಲಯದಿಂದ ವಿಜ್ಞಾನ ಸ್ನಾತಕ ಪದವಿಯಲ್ಲಿ ತೃತೀಯ ರ್‍ಯಾಂಕ್ ಹಾಗೂ Analytical chemistryಯನ್ನು ಅಭ್ಯಸಿಸಿ ಸ್ನಾತಕೋತ್ತರ ಪದವಿಯಲ್ಲಿ ದ್ವಿತೀಯ ರ್‍ಯಾಂಕ್‍ನ ಸಾಧನೆ.

* Inorganic chemistryಯಲ್ಲಿ ಸಂಶೋಧನಾ ಪ್ರಬಂಧವನ್ನು ಎರಡೇ ವರ್ಷಗಳಲ್ಲಿ ಸಂಪೂರ್ಣಗೊಳಿಸಿ, ಕರ್ನಾಟಕ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪದವಿಯ ಗಳಿಕೆ.

* ೨೨ಕ್ಕೂ ಹೆಚ್ಚು ಸಂಶೋಧನಾ ಪ್ರಬಂಧಗಳನ್ನು ರಾಷ್ಟ್ರೀಯ-ಅಂತಾರಾಷ್ಟ್ರೀಯ ವಿಚಾರಸಂಕಿರಣಗಳಲ್ಲಿ ಮಂಡಿಸಿದ ಹೆಗ್ಗಳಿಕೆ


ವೃತ್ತಿ ಜೀವನದ ಯಾತ್ರೆ :

* ಬೆಂಗಳೂರು ವಿ.ವಿ.ಯ ಪ್ರತಿನಿಧಿಗಳ ಮಂಡಳಿ, ಆಡಳಿತ ಮಂಡಳೀ, ಶಿಕ್ಷಣ ಮಂಡಳಿ, ಕಾಲೇಜು ಅಭಿವೃದ್ಧಿ ಮಂಡಳಿ, ರಸಾಯನಶಾಸ್ತ್ರ ವಿಭಾಗದ ಪರೀಕ್ಷಾಂಗದ ಸದಸ್ಯರಾಗಿ, ಮುಖ್ಯಸ್ಥರಾಗಿ ಕಾರ್ಯ ನಿರ್ವಹಣೆ ಜೀವಮಾನದ ಸಭಾಸದರಾಗಿ Electrochemical society of Indiaಯಲ್ಲಿ ಕಾರ್ಯ ನಿರ್ವಹಣೆ.

* ಬೆಂಗಳೂರಿನ ವಿ.ವಿ.ಎಸ್. ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಪ್ರಾಚಾರ್ಯರಾಗಿ ಸತತ ೧೬ ವರ್ಷಗಳ ಕಾಲ ಸೇವೆ ಸಲ್ಲಿಕೆ.

* ಅನೇಕ ವರ್ಷಗಳ ಕಾಲ Bangalore University cricket selection committe ಯಲ್ಲಿ ಸಕ್ರಿಯ ಸದಸ್ಯರಾಗಿ ಜವಾಬ್ದಾರಿ ನಿರ್ವಹಣೆ

* ರಾಜಾದ್ಯಂತ ಉತ್ಕೃಷ್ಟ ಶಿಕ್ಷಣ ನೀಡಲು ಕಾರ್ಯಯೋಜನೆ ರೂಪಿಸಿರುವ PACER FOUNDATION - PACER (Professionals Action Committee for Educational Reforms) ಸಂಸ್ಥೆಯ ಸಭಾಧ್ಯಕ್ಷರಾಗಿ ಆಯ್ಕೆ. ಉನ್ನತ ಶಿಕ್ಷಣನೀತಿಗಳನ್ನು ರೂಪಿಸುವ ತಂಡದ ಸದಸ್ಯರಾಗಿ ಕರ್ನಾಟಕ ಸರ್ಕಾರದಿಂದ ನೇಮಕ.

* ಕರ್ನಾಟಕ ರಾಜ್ಯದ ಪ್ರಥಮದರ್ಜೆ ಕಾಲೇಜುಗಳ ಪ್ರಾಚಾರ್ಯರ ಒಕ್ಕೂಟದ ಪ್ರಧಾನ ಕಾರ್ಯದರ್ಶಿಯಾಗಿ ಮತ್ತು ರಾಜ್ಯದ ಉತ್ತಮ ಶಿಕ್ಷಕರನ್ನು ಆಯ್ಕೆಮಾಡುವ ಸಮಿತಿಯ ಸದಸ್ಯರಾಗಿಯೂ ಕಾರ್ಯ ನಿರ್ವಹಣೆ

* ಭಾರತದ ಶಾಲಾ ಕಾಲೇಜುಗಳಲ್ಲದೇ ಸಿಂಗಾಪುರ, ಬ್ಯಾಂಕಾಕ್, ದುಬೈ ಮತ್ತು ಯು.ಎಸ್.ಎ ದೇಶಗಳ ಶಾಲಾ ಕಾಲೇಜುಗಳಲ್ಲೂ ತರಬೇತಿ ಕಾರ್ಯಕ್ರಮಗಳ ನಿರ್ವಹಣೆ.

* `ಸೃಜನಶೀಲತೆ' ಬಗ್ಗೆ ಭಾರತದಲ್ಲಿ ಪಠ್ಯಕ್ರಮವನ್ನು ರಚಿಸಿದ ಮೊದಲಿಗರು. ಇದುವೇ ಯು.ಕೆ. ದೇಶದ ಸ್ನಾತಕೋತ್ತರ ಪದವಿಯ ಪಠ್ಯಕ್ರಮದ ಒಂದು ಭಾಗವಾಗಿದೆ.

* ಭಾರತದ ಅನೇಕ ಬಹುರಾಷ್ಟ್ರೀಯ ಕಂಪೆನಿಗಳ ಮತ್ತು ಸಾರ್ವಜನಿಕ ಸಂಸ್ಥೆಗಳ ನೌಕರರಿಗೆ ತರಬೇತುಗೊಳಿಸಿದ ಹಿರಿಮೆ.


ಪ್ರಕಾಶನಗಳು :
  `ಪ್ರಜಾವಾಣಿ' ದಿನಪತ್ರಿಕೆಯಲ್ಲಿ ನಿತ್ಯವೂ ಪ್ರಕಟಗೊಳ್ಳುವ `ಕರುಣಾಳು ಬಾ ಬೆಳಕೆ' ಅಂಕಣವು, ವೈಜ್ಞಾನಿಕ ತಳಹದಿಯಲ್ಲಿ ಮಾನವೀಯ ಮೌಲ್ಯಗಳನ್ನು ಬೆಳೆಸುವ ೯೦೦ಕ್ಕೂ ಹೆಚ್ಚಿನ ಕಥೆಗಳು ಜನರ ಮನೆ-ಮನ ತುಂಬಿವೆ. ಅವುಗಳಲ್ಲಿ ೩೦೦ ಕಥೆಗಳನ್ನು ಮೂರು ಪುಸ್ತಕಗಳಲ್ಲಿ ಮುದ್ರಿಸಿ ಲೋಕಾರ್ಪಣೆ ಮಾಡಿದ ಖ್ಯಾತಿ ಇವರದ್ದು. `ವಿವೇಕ ಸಂಪದ' ಆಧ್ಯಾತ್ಮ ಪತ್ರಿಕೆಯ ಪ್ರತಿಪ್ರಕಟಣೆಯಲ್ಲೂ ತಮ್ಮ ಲೇಖನಗಳ ಕೊಡುಗೆ ನೀಡಿದ್ದಾರೆ. `ಶ್ರೀ ಶಂಕರ' ಅಧ್ಯಾತ್ಯವಾಹಿನಿಯಲ್ಲಿ ದಾಸಸಾಹಿತ್ಯದ ಕುರಿತಾದ ಇವರ ಉಪನ್ಯಾಸಮಾಲೆ ೧೦೦ ಸಂಚಿಕೆಗಳನ್ನು ಪೂರೈಸಿವೆ. ಡಿ.ವಿ.ಜಿ.ಯವರ ಮಂಕುತಿಮ್ಮನ ಕಗ್ಗ, ಜೀವನ ಧರ್ಮಯೋಗ, ಬಾಳಿಗೊಂಡು ನಂಬಿಕೆ, ಜ್ಞಾಪಕ ಚಿತ್ರಶಾಲೆ ಹಾಗೂ ಭಗವದ್ಗೀತೆಯ ಕುರಿತಾದ ಉಪನ್ಯಾಸಗಳು ಸಿ.ಡಿ.ಗಳಲ್ಲಿ ಲಭ್ಯ.

No comments: