Keep in touch...

ನಿಮ್ಮ ಅಭಿಪ್ರಾಯ ಹಂಚಿಕೊಳ್ಳಿ - ನನ್ನ ಇ-ಮೇಲ್ : gshattigoudar@gmail.com ಮೊಬೈಲ್: +9199454 79292 (only SMS / WhatsApp)

Friday 5 June 2015

ಅಂಗವೈಕಲ್ಯ ಮೆಟ್ಟಿನಿಂತ ಸಾಧಕ ಮಂಜು ಗುಬ್ಬಿ

                 "ಕೈ-ಕಾಲು ಕಳೆದುಕೊಂಡವನು ಅಂಗವಿಕಲನಲ್ಲ; ಎಲ್ಲ ಇದ್ದು ಏನನ್ನೂ ಸಾಧಿಸದೇ ಇರುವ ವ್ಯಕ್ತಿಯೇ ನಿಜವಾದ ಅಂಗವಿಕಲ." ಎಂಬ ಮಹಾತ್ಮರೊಬ್ಬರ ಮಾತು ನನಗೀಗ ನೆನಪಾಗುತ್ತಿದೆ. ಕಾರಣವಿಷ್ಟೆ, ನಮ್ಮ ಸ್ನೇಹಿತರ ಬಳಗದವರಲ್ಲೊಬ್ಬರಾದ ಶ್ರೀ ಮಂಜು ಗುಬ್ಬಿ ಅವರು ನಿನ್ನೆ ಪಬ್ಲಿಕ್ ಟಿ.ವಿ.ಯ ‘ಪಬ್ಲಿಕ್ ಹಿರೋ’ ಆಗಿ ಹೊರಹೊಮ್ಮಿದ್ದಾರೆ. ಆ ಕುರಿತ ಚಿತ್ರೀಕರಣದ ದೃಶ್ಯ ಇಲ್ಲಿದೆ. ೫ ವರ್ಷದವರಿದ್ದಾಗಲೇ ಪೊಲಿಯೋದಿಂದ ಕಾಲಿನ ಸ್ವಾಧೀನ ಕಳೆದುಕೊಂಡ ಅವರು ಉಳಿದವರಿಗಿಂತ ತಾನೇನು ಕಮ್ಮಿ ಇಲ್ಲ ಎಂಬಂತೆ ಸಾಧಿಸಿ ಬದುಕುತ್ತಿದ್ದಾರೆ. ದೇಶದ ಭಾವಿ ಯೋಧರಿಗೆ ತರಬೇತಿ ನೀಡುವ ಕೇಂದ್ರವನ್ನು ಸ್ಥಾಪಿಸಿ ದೇಶಸೇವೆ ಮಾಡುತ್ತಿದ್ದಾರೆ. ಇದಕ್ಕೆ ಅವರ ಗೆಳೆಯರು ಕೂಡ ಬೆಂಬಲಿಸಿ ಸಹಕರಿಸುತ್ತಿದ್ದಾರೆ. ಪ್ರಸ್ತುತ ಇವರ ತರಬೇತಿಯಿಂದ ಹಲವಾರು ಜನ ದೇಶದ ಸೈನಿಕರಾಗಿ ಆಯ್ಕೆಯಾಗಿ ದೇಶಸೇವೆಯಲ್ಲಿ ನಿರತರಾಗಿರುವುದು ಗಮನಿಸಬೇಕಾದ ಸಂಗತಿ. ನನ್ನ ಬೆಂಗಳೂರಿನ ಸ್ನೇಹಿತರು ಕೂಡ ಮಂಜು ಅವರಿಗೆ ಅಭಿನಂದನೆ ಸಲ್ಲಿಸಿದ್ದಾರೆ. ದೇವರು ಅವರಿಗೆ ಆಯು-ಆರೋಗ್ಯ ನೀಡಿ ಮತ್ತಷ್ಟು ಸಾಧನೆ ಮಾಡುವಂತಾಗಲಿ ಎಂದು ಶುಭ ಹಾರೈಸುತ್ತೇನೆ. ಅಂದ ಹಾಗೆ ಅವರಿಗೆ ಅಭಿನಂದನೆ ತಿಳಿಸಬೇಕೆ? ಇದೋ ಅವರ ಮೊಬೈಲ್ ನಂಬರ್ :  7090969002


No comments: