Keep in touch...

ನಿಮ್ಮ ಅಭಿಪ್ರಾಯ ಹಂಚಿಕೊಳ್ಳಿ - ನನ್ನ ಇ-ಮೇಲ್ : gshattigoudar@gmail.com ಮೊಬೈಲ್: +9199454 79292 (only SMS / WhatsApp)

Friday 11 September 2015

ಕರ್ಪೂರಾರುತಿ ಬೆಳಗಿರಿ


ಕರ್ಪೂರಾರುತಿ ಬೆಳಗಿರಿ
ಕಾರುಣ್ಯ ಮೃಡಹರ ದೇವಗೆ
ನೀಲಕಂಠದ ನಿಗಮ ಗೋಚರ
ಬಾಲಚಂದ್ರ ಭರಣಗೆ
ಬಾಲೆಗೊಲಿದನು ಹಾಲ ಸವಿದನು
ಲೋಲ ಶ್ರೀಗುರು ರಾಯಗೆ
|| ಪಲ್ಲವಿ ||

ವಾರಿಜೋದ್ಭವ ಶಿರವ ಹರಿದನು
ಮಾರ ಹರ ದೇವಗೆ
ಘೋರ ದುರಿತವ ದೂರ ಮಾಡುವ
ಶೂರ ಷಣ್ಮುಖನಯ್ಯಗೆ
|| ಪಲ್ಲವಿ ||

ಶರಣು ಜನಕೆ ವರವನಿತ್ತನು
ಪರಮ ಪಾರ್ವತಿ ಅರಸಗೆ
ಧರೆಯೊಳಧಿಕ ಮೆರೆವ ಸೊನ್ನಲಾಪುರದ ಸಿದ್ಧರಾಮಗೆ
|| ಪಲ್ಲವಿ ||

No comments: