Keep in touch...

ನಿಮ್ಮ ಅಭಿಪ್ರಾಯ ಹಂಚಿಕೊಳ್ಳಿ - ನನ್ನ ಇ-ಮೇಲ್ : gshattigoudar@gmail.com ಮೊಬೈಲ್: +9199454 79292 (only SMS / WhatsApp)

Thursday 6 October 2011

ವೇದ ವ್ಯಾಖ್ಯಾನ ನಿಲ್ಲಿಸಿದ ಮತ್ತೂರ ಕೃಷ್ಣಮೂರ್ತಿ


ಭಾರತೀಯ ವೇದ, ಉಪನಿಷತ್ತು, ಮಹಾಕಾವ್ಯಗಳ ವ್ಯಾಖ್ಯಾನ ಮಾಡುತ್ತಾ ಜನರಲ್ಲಿ ಭಾರತೀಯ ಸಂಸ್ಕೃತಿಯ ಬಗ್ಗೆ ಅರಿವು ಮೂಡಿಸುತ್ತಾ ಪ್ರಜ್ವಲಿಸುತ್ತಿದ್ದ ಚೇತನ ಇಂದು ಮರೆಯಾಗಿದೆ ಎಂದು ತಿಳಿಸಲು ವಿಷಾದಿಸುತ್ತಿದ್ದೇನೆ.
ಪ್ರತಿದಿನ ಬೆಳಿಗ್ಗೆ ಉದಯ ವಾಹಿನಿಯಲ್ಲಿ ಇವರು ನಡೆಸಿ ಕೊಡುತ್ತಿದ್ದ ಮಹಾಕಾವ್ಯಗಳ ವ್ಯಾಖ್ಯಾನಗಳಿಂದಾಗಿ ನಾಡಿನೆಲ್ಲೆಡೆ ಜನಪ್ರಿಯರಾಗಿದ್ದರು.ಇವರ ಕುಮಾರವ್ಯಾಸ ಭಾರತ ವ್ಯಾಖ್ಯಾನಕ್ಕೆ 2009ರಲ್ಲಿ ಪದ್ಮಶ್ರೀ ಪ್ರಶಸ್ತಿ ದೊರಕಿತ್ತು. ಭಾರತ ವಿದ್ಯಾಭವನದ ಅಡಿಯಲ್ಲಿ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಶಾಲೆಗಳನ್ನು ಆರಂಭಿಸುವ ಮೂಲಕ ಮಕ್ಕಳಿಗೆ ಸುಸಂಕೃತ ಶಿಕ್ಷಣ ನೀಡುವುದೇ ನಮ್ಮ ಉದ್ದೇಶ ಎಂಬುದು ಅವರ ನಿಲುವಾಗಿತ್ತು.

ಅವರ ಆತ್ಮಕ್ಕೆ ಚಿರಶಾಂತಿ ಸಿಗಲಿ.

No comments: